TOP STORIES:

FOLLOW US

ಗೆಜ್ಜೆ ಗಿರಿ ಕ್ಷೇತ್ರದ ಸೇವಾ ಕಾರ್ಯಕರ್ತ ಪ್ರವೀಣ್ ನೆಟ್ಟರ್ ಅವರ ಅಂತಿಮ ನಮನ ಕಾರ್ಯದಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಪಾಲ್ಗೊಂಡ ಬಗ್ಗೆ.


ಶ್ರೀ ಕ್ಷೇತ್ರಗೆಜ್ಜೆ ಗಿರಿಯ ಸೇವಕರಾಗಿ ಕ್ಷೇತ್ರದಲ್ಲಿ ಜರಗಿದ ಅಭೂತಪೂರ್ವ, ದಾಖಲೆಯ ಭಕ್ತರು ಸಂದರ್ಶಿಸಿದ್ದ ಬ್ರಹ್ಮಕಲಶೋತ್ಸವದಲ್ಲಿತನ್ನನ್ನು ತಾನು ಸಮರ್ಪಿಸಿಕೊಂಡು   ಜವಾಬ್ದಾರಿಯುತ ಕೆಲಸಗಳನ್ನು  ಅತ್ಯುತ್ತಮವಾಗಿ ತೊಡಗಿಸಿಕೊಂಡು ಸಮಾಜಮುಖಿಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನಮ್ಮೆಲ್ಲರ ಆತ್ಮೀಯ ವಿ ಪ್ರವೀಣ್ ನೆಟ್ಟರ್ ರವರ ಅಗಲುವಿಕೆಯನ್ನು ನಾವು ಅರಗಿಸಿಕೊಳ್ಳಲುಸಾಧ್ಯವಿಲ್ಲ ಇಂತಹ ವ್ಯಕ್ತಿಯನ್ನು ಕಳೆದುಕೊಂಡ ನೋವು ನಮ್ಮ ಬಿಲ್ಲವ ಸಮುದಾಯದ ಯಾವೊಬ್ಬ ವ್ಯಕ್ತಿಯು ಮರೆಯಲಾಸಾಧ್ಯರಾಕ್ಷಸೀಯ ಪ್ರವೃತ್ತಿಯ ದುಷ್ಕೃತ್ಯಗಳಿಗೆ ಯಬಲಿಯಾದ ಪ್ರವೀಣ್ ನೆಟ್ಟಾರುರವರ ಅಂತಿಮ ಯಾತ್ರೆಯಲ್ಲಿ ಶ್ರೀ ಕ್ಷೇತ್ರದ  ಆಡಳಿತಸಮಿತಿಯ ಪದಾಧಿಕಾರಿಗಳು ಪ್ರಾರಂಭದಿಂದ ಕೊನೆಯವರೆಗೂ ಸಮಾಜದ ಒಂದು ಅಮೂಲ್ಯ ಮುತ್ತನ್ನು ಕಳೆದುಕೊಂಡನೋವಿನಿಂದಲೇ ಅಂತಿಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮುದಾಯದ ವಿಧಿ ವಿಧಾನದಂತೆ ದಿವಂಗತ ಪ್ರವೀಣ್ ನೆಟ್ವರ್ ಅವರಅಂತ್ಯಕ್ರಿಯೆಯನ್ನು ನೆರವೇರಿಸಿವಲ್ಲಿ ಕ್ಷೇತ್ರದ ಗೌರವಾಧ್ಯಕ್ಷರಾದ ಜಯಂತ್ ನಡುಬೈಲ್ ಸ್ಥಳದಲ್ಲೇ ಇದ್ದು ಸೂಕ್ತ ವಾದಮಾರ್ಗದರ್ಶನ ನೀಡುತಿದ್ದರು‌. ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಸೇರಿದ್ದ ಐದು ಸಾವಿರ ಕ್ಕಿಂತಲೂ ಅಧಿಕ ಪ್ರವೀಣ್ಅವರ ಆಪ್ತರು, ಸಂಘಪರಿವಾರ, ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು ಕಾರ್ಯಕರ್ತರು, ಕುಟುಂಬಬಳಗ,ಅವರ ಮಿತ್ರ ವೃಂದ ಎಲ್ಲರಿಗೂ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲು ಉಲ್ಲಾಸ್ ಹರಸಾಹಸ ಪಡುತಿದ್ದರು‌. ನಂತರ ಅವರ ಕುಟುಂಬಕ್ಕೂ ಆರ್ಥಿಕವಾಗಿ ಸಹಕಾರವಾಗಬೇಕು, ದುರ್ದೈವ ದಿಂದ ಕುಟುಂಬದ ದುಡಿಯುವ ಕೈಗಳೆ ಇಂದುಮರೆಯಾಗಿದೆ ಎಂದು ಪ್ರವೀಣ್ ನೆಟ್ಟಾರರವರ ಧರ್ಮ ಪತ್ನಿ ನೂತನ ಪ್ರವೀಣ್  ಯವರ ಖಾತೆಯನ್ನು ಸಾಮಾಜಿಕ ಜಾಲತಾಣದಲ್ಲಿಸಹಕಾರ ಕೋರಿ  ಹರಿಬಿಟ್ಟರು ಇದರ ಪರಿಣಾಮ ಒಂದು ಉತ್ತಮ ಮೊತ್ತ  ಸಂಗ್ರಹವಾಗಿ, ದಿವಂಗತರ ಕುಟುಂಬದ ಮುಂದಿನಜೀವನದ ನಿರ್ವಹಣೆಗೆ ಸರ್ಕಾರದ ಸಹಾಯ ಹಸ್ತವನ್ನು ಚಾಚುವ ಮಾನವೀಯ ದೃಷ್ಟಿಯಿಂದ  ಸಂದರ್ಭದಲ್ಲಿಯೋಚಿಸಿರುವುದು ಒಂದು ಉತ್ತಮ ಕೆಲಸವಾಗಿದೆ ಅಷ್ಟೇ ಅಲ್ಲದೆ ಉಸ್ತುವಾರಿ ಸಚಿವರಲ್ಲಿ ಶಾಸಕರುಗಳಲ್ಲಿ ಕುಟುಂಬಕ್ಕೆ ಹೆಚ್ಚಿನರೀತಿಯ ಸಹಕಾರವನ್ನು ಸರಕಾರದಿಂದ ನೀಡಬೇಕೆಂದು ಸಮಾಜದ ಪರವಾಗಿ ವಿನಂತಿಸಿ ಸರ್ವರ ಪ್ರೀತಿ ಚೋರ ಇಹಲೋಕತ್ಯಜಿಸಿದ ಪ್ರವೀಣ್ ಮನೆಗೆ ಮುಖ್ಯಮಂತ್ರಿಗಳು ಮತ್ತು ಗ್ರಹ ಸಚಿವರು ಭೇಟಿ ನೀಡಿ ಧೈರ್ಯ ತುಂಬ ಕೆಲಸವನ್ನು ಮಾಡಬೇಕೆಂದುಬೆಳ್ತಂಗಡಿ ಶಾಸಕರಲ್ಲಿ ಕೇಳಿಕೊಂಡರು ಜಯಂತ್ ನಡುಬೈಲ್. ಇದೆಲ್ಲವೂ ಒಬ್ಬ ಸಮಾಜದ ವ್ಯಕ್ತಿಯು ಅತ್ಯಂತ ಕಷ್ಟ ಸಂದರ್ಭದಲ್ಲಿನಮ್ಮ ಸಮಾಜದ ಶಕ್ತಿಪೀಠ ವಾದ ಶ್ರೀ ಕ್ಷೇತ್ರದ ಪದಾಧಿಕಾರಿಗಳ ಒಟ್ಟು ಸಮಾಜದ ಕಾಳಜಿಯ ಚಿಂತನೆಯ ಪ್ರತಿಫಲವಾಗಿ ಮುಖ್ಯಮಂತ್ರಿ, ಗೃಹಮಂತ್ರಿ, ರಾಷ್ಟ್ರ, ರಾಜ್ಯ, ಕೇರಳ ಬಿಜೆಪಿ ನಾಯಕರು, ಮೂರು ಸಚಿವರು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಮಾಜಿ ಶಾಸಕರು ಬೇರೆ ಜಿಲ್ಲೆಗಳಿಂದ ಈಡಿಗ ಸಮುದಾಯದ ಶಾಸಕರು ಜಿಲ್ಲೆಯ ಹೆಚ್ಚಿನ ಜನ ಪ್ರತಿನಿಧಿಗಳು  ಎಲ್ಲರಿಗೂ ಅಂತ್ಯಕ್ರಿಯೆ  ಮತ್ತು ದುಃಖತ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.ಸಮಾಜದ  ಮೆಚ್ಚಿಗೆಯಕಾರ್ಯ.ಕ್ಷೇತ್ರದ ಅಧ್ಯಕ್ಷರಾದ ಶ್ರೀ ಪಿತಾಂಬರ ಹೇರಾಜೆ, ಪದಾಧಿಕಾರಿಗಳಾದ ರವಿ ಪೂಜಾರಿ ಚಿಲಿಂಬಿ, ಮೋಹನ್ ದಾಸ್,ದೀಪಕ್ಕೋಟ್ಯಾನ್, ಕ್ಷೇತ್ರದ ಟ್ರಸ್ಟಿಗಳು ಮತ್ತು ಸಿಬ್ಬಂದಿ ವರ್ಗ ಬಿಲ್ಲವ ಸಮಾಜದ ಗಣ್ಯರು ಮೃತ ಪ್ರವೀಣ್ ಅವರ ಅಂತಿಮ ದರ್ಶನಪಡೆದು ಕಂಬನಿ ಮಿಡಿದರು. ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಯುವಕರು ಉತ್ತಮ ರೀತಿಯಲ್ಲಿ ಸಜ್ಜನ ಜೀವನವನ್ನುನಡೆಸಲು ಉತ್ತಮ ರೀತಿಯ ಸಲಹೆ, ಮಾರ್ಗದರ್ಶನವನ್ನ ಹಂತ ಹಂತವಾಗಿ ಸಮಾಜದ ಯುವಕರಿಗೆ ತಲುಪಿಸಿ ನಮ್ಮ ಸಮಾಜಕ್ಕೆಶ್ರೀ ಕ್ಷೇತ್ರದಿಂದ ಒಂದು ಉತ್ತಮ ಮಾರ್ಗದರ್ಶನವನ್ನು ನೀಡಬೇಕು ಇದೇ ರೀತಿ ಅನೇಕ ಸಂದರ್ಭಗಳಲ್ಲಿ ಅಸಹಾಯಕಪರಿಸ್ಥಿತಿಯಲ್ಲಿರುವ ಎಲ್ಲರಿಗೂ ಸಹಾಯ ಮಾಡುವ ಶಕ್ತಿಯನ್ನು ಯೋಚನೆಯನ್ನು ಶ್ರೀ ಕ್ಷೇತ್ರದ ಶಕ್ತಿಗಳು ಕರುಣಿಸಲಿ ಎಂದು ಕ್ಷೇತ್ರದಭಕ್ತರ ಕೋರಿಕೆ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »