TOP STORIES:

FOLLOW US

ತನ್ನ ಇರುವಿಕೆ ತೋರಿದ ತುಳುನಾಡಿನ ದೈವಿಶಕ್ತಿ: ಉಗ್ರನನ್ನು ನಗರ ಪ್ರವೇಶಿಸಲು ಬಿಡದೇ ದಾರಿಯಲ್ಲೇ ಬಾಂಬ್ ಸ್ಪೋಟಿಸಿ ಜನರ ರಕ್ಷಿಸಿದ ಕಂಕನಾಡಿ ಗರಡಿಯ ಅವಳಿ ವೀರರು..!


ಮಂಗಳೂರು: ಕಳೆದ ಕೆಲವು ದಶಕಗಳಿಂದ ಕೋಮುದಳ್ಳೂರಿಯಲ್ಲಿ ಬೆಂದು ಹೋಗಿದ್ದ ಕರಾವಳಿಯ ವಾಣಿಜ್ಯ ನಗರಿ ಮಂಗಳೂರುಇತ್ತೀಚಿನ ವರ್ಷಗಳಲ್ಲಿ ಅದ್ಯಾಕೋ ಸ್ಥಬ್ಧವಾಗಿತ್ತು. ಸಂತೃಪ್ತಿಯ ಮಧ್ಯೆ ಶನಿವಾರ ಮಂಗಳೂರು ನಗರದ ಕಂಕನಾಡಿ ಪೊಲೀಸ್ಠಾಣೆ ಬಳಿ ಆಟೋ ಕುಕ್ಕರ್ ಬಾಂಬ್ ಸ್ಫೋಟ ಜನರನ್ನು ಮತ್ತೆ ಆತಂಕಕ್ಕೀಡು ಮಾಡಿದೆ. ಆದರೆ ಇದೆಲ್ಲದರ ನಡುವೆ ಘಟನೆಯಲ್ಲೂ ತುಳುನಾಡಿನ ಕಾರ್ಣಿಕ ಶಕ್ತಿಗಳು ಪವಾಡ ಮೆರೆದಿರುವುದು ಗೋಚರವಾಗುತ್ತಿದೆ.

ಶನಿವಾರ ಮಂಗಳೂರು ನಗರದ ಕಂಕನಾಡಿ ಕಪಿತಾನಿಯೋ ಶಾಲೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾ ಒಂದರಲ್ಲಿ ಸ್ಪೋಟ ಸಂಭವಿಸಿದ್ದುಘಟನೆಯಲ್ಲಿ ಚಾಲಕ ಸೇರಿದಂತೆ ಪ್ರಯಾಣಿಕನು ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣ ಅನೇಕ ಆಯಾಮಗಳನ್ನುಪಡೆದುಕೊಂಡರೂ ಕೊನೆಗೂ ಒಂದು ನಿರ್ದಿಷ್ಟ ಸ್ವರೂಪವನ್ನು ಪಡೆದುಕೊಂಡಿದೆ.

ಭಯೋತ್ಪಾದನೆ ಸಂಚು ರೂಪಿಸಿದ್ದ ಶಾರೀಕ್ ಕುಕ್ಕರ್‌ನಲ್ಲಿ ಅನೇಕ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಪ್ರೀ ಪ್ಲಾನ್ ಎಂಬಂತೆಯೋಜನೆ ಹಾಕಿಕೊಂಡಿದ್ದ.

ಈತ ಮೈಸೂರಿನಿಂದ ಬಸ್ಸಿನಲ್ಲಿ ಬಂದು ಪಡೀಲ್‌ನ ಹತ್ತಿರ ಇಳಿದು ಪುರುಷೋತ್ತಮ್ ಎಂಬವರ ರಿಕ್ಷಾದಲ್ಲಿ ಕೂತು ಪಂಪ್‌ವೆಲ್‌ಗೆಹೋಗಬೇಕು ಎಂದಿದ್ದಾನೆ.

ಆದರೆ ಚಾಲಕ ರಿಕ್ಷಾ ಚಲಾಯಿಸುತ್ತಾ ಸಾಗುತ್ತಿರುವಾಗಲೇ ಕಂಕನಾಡಿ ನಗರ ಪೊಲೀಸ್ ಠಾಣೆ  ಬಳಿ ಆತ ಹೊತ್ತೊಯ್ಯುತ್ತಿದ್ದ ಬ್ಯಾಗ್‌ನಲ್ಲಿದ್ದ ಕುಕ್ಕರ್ ಅಚಾನಕ್ ಆಗಿ ಸ್ಫೋಟಗೊಂಡಿದೆ. ಸ್ಫೋಟದ ಪರಿಣಾಮವಾಗಿ ಇಬ್ಬರೂ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

ಈತನ ಕೃತ್ಯದ ಬಗ್ಗೆ ಅನೇಕ ಪ್ರಶ್ನೆಗಳು, ಅನುಮಾನಗಳು, ಆತಂಕಗಳು ಸೃಷ್ಠಿಯಾಗುತ್ತಿದ್ದರೂ ಆತ ಸ್ಪೋಟಕ ತುಂಬಿದ್ದ ಕುಕ್ಕರನ್ನುತೆಗೆದುಕೊಂಡು ಜನರು ನಂಬಿಕೊಂಡು ಬಂದಿರುವ ತುಳುನಾಡ ಕಾರ್ಣಿಕ ಪುರುಷರ ದೈವಸ್ಥಾನವಾದ ಕೋಟಿ ಚೆನ್ನಯ್ಯ ಗರೋಡಿತನ್ನ ಗಡಿಯನ್ನೂ ದಾಟಲು ಬಿಡದೆ ಮುಂಚಿತವಾಗಿಯೇ ಅವಘಡ ನಡೆದಿರುವುದು ಎಲ್ಲೋ ಒಂದು ಕಡೆ ಜನ ಇದು ಮಣ್ಣಿನಪವಾಡ ಪುರುಷರ ಶಕ್ತಿಎಂದು ಮಾತಾಡಿಕೊಳ್ಳುತ್ತಿದ್ದಾರೆ.

ಘಟನೆಯ ಭೀಕರತೆ ಅದೆಷ್ಟಿತ್ತೋ ತಿಳಿದಿಲ್ಲ. ಆದರೆ ದುರಂತವನ್ನು ಇಷ್ಟರಲ್ಲಿಯೇ ಮುಗಿಸಿದ್ದು ಮಾತ್ರ ನಾವು ನಂಬಿಕೊಂಡುಬಂದಿರುವ ಜಾಗದ ಶಕ್ತಿಗಳು ಎನ್ನುತಾರೆ ಸ್ಥಳೀಯರು.ಇನ್ನು ದುರಾದೃಷ್ಟವಶಾತ್ ಅಂದುಪ್ರತಿದಿನದಂತೆ ಇದು ಕೂಡಾ ಬಾಡಿಗೆಎಂದುಕೊಂಡಿದ್ದ ಪ್ರಮಾಣಿಕ ಆಟೋ ಚಾಲಕಪುರುಷೋತ್ತಮ ಅವರಿಗೆ ಮಾತ್ರ ಕಾದಿತ್ತು ಆಶ್ಚರ್ಯ.

ತನ್ನ ರಿಕ್ಷಾದಲ್ಲಿ ಪ್ರಯಾಣಿಕನನ್ನು ಕರೆದುಕೊಂಡು ಚಲಾಯಿಸುತ್ತಿರುವಾಗಲೇ ದುರಂತ ನಡೆದಿದ್ದು ಅವರನ್ನಷ್ಟೇ ಅಲ್ಲದೆ ಅಲ್ಲಿದ್ದವರನ್ನುಒಂದು ಕ್ಷಣ ದಿಗ್ಭ್ರಮೆಗೊಳಿಸಿತ್ತು. ಕರಾವಳಿಯಲ್ಲಿ ಏನು ಆಗುತ್ತೆ ಅಂತ ಭಯ ಇತ್ತೋ ಅದು ಘಟಿಸಿತ್ತು.

ಆದರೆ ಕುಕ್ಕರ್ ಬಾಂಬ್ ಮಂಗಳೂರು ನಗರ ಪ್ರವೇಶಿಸಿ ಯಾವುದೋ ಜನ ನಿಬಿಡ ಪ್ರದೇಶ, ಶಾಲೆಗಳ ಪ್ರದೇಶಗಳಲ್ಲಿ ಶಾಕೀರಕೊಂಡಿ ಹೋಗಿ ಸ್ಪೋಟಿಸಿದ್ದರೆ ಅದರ ಪರಿಣಾಮ ಬಹುಷ ಯಾರು ಕೂಡ ಊಹಿಸಲಸಾಧ್ಯ.

ಅಂತಹ ಸಜೀವ ಸ್ಪೋಟಕಗಳಿಂದ ತುಂಬಿದ್ದ ಟೈಮರ್ ಫಿಕ್ಸ್ ಮಾಡಿದ್ದ ಕುಕ್ಕರ್ ಬಾಂಬ್ ಜೊತೆಯಲ್ಲಿ ಶಾಕಿರನನ್ನು ಕಾರಣಿಕದ ಗರಡಿಕ್ಷೇತ್ರದ ಅವಳಿ ವೀರರು ಆಚೆಗೆ ದಾಟಿ ಬರಲು ಬಿಡದೇ ಮೊದಲೇ ಸ್ಪೋಟಗೊಂಡಿದ್ದು ದೈವ ಸಂಕಲ್ಪವಾಗಿತ್ತು.

ಎರಡು ವರ್ಷಗಳ ಹಿಂದೆಯಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ಮುಂದಿನ ದಿನಗಳಲ್ಲಿ ಮಗಳ ಮದುವೆಯನ್ನು ಎದುರುನೋಡುತ್ತಿದ್ದ ಪುರುಷೋತ್ತಮರ ಸ್ಥಿತಿ ಅವರ ಕುಟುಂಬಸ್ಥರ ಮನಸ್ಸನ್ನು ತಲ್ಲಣಗೊಳಿಸಿದೆ.

ಸಂಸಾರಕ್ಕೆ ಆರ್ಥಿಕ ಬೆನ್ನೆಲುಬಾಗಿದ್ದ ಪುರುಷೋತ್ತಮರು ಇದೀಗ ಸ್ಪೋಟಗಳ ಗಾಯಗಳಿಂದ ಆಸ್ಪತ್ರೆಯ ಹಾಸಿಗೆ ಮೇಲೆಮಲಗಿದ್ದಾರೆ.

ಆಟೋ ಚಾಲಕ ಪುರುಷೋತ್ತಮ್ ಅವರು ವೃತ್ತಿಯಲ್ಲಿ ಚಾಲಕರಾಗಿದ್ದರೂ ಅಪಾರ ದೈವಭಕ್ತ. ಮಹಾಕಾಳಿ ಮತ್ತು ಕೊರಗಜ್ಜ ದೈವದಭಕ್ತ ಕೂಡಾ. ದೈವಕ್ಕೆ ಬೂಳ್ಯ ಕೊಡುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದಾರೆ.

ವಿಶೇಷ ದಿನಗಳು, ಸಂಕ್ರಾಂತಿ, ವಾರ್ಷಿಕ ದೇವರಾದನೆಯ ಸಂದರ್ಭದಲ್ಲಿ ದೈವದ ಚಾಕರಿಯನ್ನು ಮಾಡಿಕೊಂಡು ಬರುತ್ತಿದ್ದಾರೆ.

ದೈವಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆ ಪುರುಷೋತ್ತಮ್ ಜೀವ ಉಳಿಸಿದೆ. ಇವರು ದುರಂತದಲ್ಲಿ ಪಾರಾಗಲು ಉಜ್ಜೋಡಿಯ ಮಹಾಕಾಳಿಕೊರಗಜ್ಜ ದೈವಗಳೇ ಕಾರಣ ಅಂತಪತ್ನಿ ಚಿತ್ರಾಕ್ಷಿ ಕಣ್ಣೀರಿಟ್ಟಿದ್ದಾರೆ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »