TOP STORIES:

FOLLOW US

ದುರ್ಬಲ‌ ವರ್ಗದ ಜನರ ಕಷ್ಟಕ್ಕೆ ಸದಾ ಹೆಗಲು ನೀಡಿ ಸಹಕಾರ ನೀಡುತ್ತಿರುವ ಸಂಸ್ಥೆ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್


ನಿರಂತರ ಸಮಾಜಮುಖಿ ಕಾರ್ಯಗಳೊಂದಿಗೆ ಸಮುದಾಯ ಹಾಗು ಸಮಾಜದಲ್ಲಿರುವ ದುರ್ಬಲ‌ ವರ್ಗದ ಜನರ ಕಷ್ಟಕ್ಕೆ ಸದಾ ಹೆಗಲು ನೀಡಿ ಸಹಕಾರ ನೀಡುತ್ತಿರುವ ಸಂಸ್ಥೆ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್. ಮೂರು ವರ್ಷದ ಪಯಣದಲ್ಲಿ ಹಲವಾರು‌ ಸೇವಾ ಕಾರ್ಯವನ್ನು ನೀಡಿರುವ ಸಂಸ್ಥೆ ಈ ಬಾರಿ ವಿಶಿಷ್ಟ ಸೇವಾ ಯೋಜನೆಯೊಂದನ್ನು ಪೂರ್ಣಗೊಳಿಸಿ ಸಮಾಜಕ್ಕರ್ಪಿಸಿದೆ.ಕಡೇಶಿವಾಲಯ ದ ನೆತ್ತರ ಜೇರಾ ಎಂಬಲ್ಲಿನ ನಿವಾಸಿ ಶೇಖರ ಪೂಜಾರಿ ಜೇರಾ , ಕೂಲಿ ಕೆಲಸ ಮಾಡಿಕೊಂಡು ದಿನ‌ಸಾಗಿಸುತ್ತಿದ್ದು, ಪತ್ನಿ ಹಾಗು ಎರಡು ಪುಟ್ಟ ಮಕ್ಕಳ ಸಂಸಾರದ ಭಾರ ಇವರ ಮೇಲಿತ್ತು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈ ಕುಟುಂಬಕ್ಕೆ ಸಣ್ಣದಾದರೂ ಸ್ವಂತ ಸೂರೊಂದು ಬೇಕೆಂಬ ಕನಸು ಹಲವಾರು ವರ್ಷಗಳಿಂದ‌ ಮನದಾಳದಲ್ಲಿತ್ತು. ಈ ನಿಟ್ಟಿನಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾದರೂ ತೀವ್ರ ಆರ್ಥಿಕ ಅಡಚಣೆಯಿಂದಾಗಿ ಮನೆ ನಿರ್ಮಾಣದ 20% ಕೆಲಸವನ್ನೂ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ವರ್ಷಗಳೇ ಉರುಳಿದರು ಕನಸು ಕೈಗೂಡದೇ ಕೈಚೆಲ್ಲಿ ಕುಳಿತಿತ್ತು ಈ ಬಡ ಕುಟುಂಬ.

ಈ ಸಂಧರ್ಭ ಈ ಕುಟುಂಬಕ್ಕೆ ಆಶಾ ಕಿರಣವಾಗಿ‌ ಕಂಡದ್ದು ಬಿರುವೆರ್ ಕಡೇಶಿವಾಲಯ. ಕನಸು‌ ಕೈಚೆಲ್ಲಿ ಕುಳಿತಿದ್ದ ಕುಟುಂಬಕ್ಕೆ‌ ಸಂಸ್ಥೆ ಸಹಕಾರ ಮಾಡಲು‌ ನಿರ್ಧರಿಸಿತು. 3 ವರ್ಷದ ಪಯಣದಲ್ಲಿ ನಾಲ್ಕನೇ ಮನೆ ನಿರ್ಮಾಣ ಯೋಜನೆಗೆ ಕೈ ಹಾಕಿತು.

ಸರ್ವ ಸದಸ್ಯರ ಸಹಕಾರದೊಂದಗೆ, ಲಾಕ್ ಡೌನ್ ಸಂಧರ್ಭದ ಸಮಯವನ್ನು ಸದುಪಯೋಗಿಸಿಕೊಂಡ ಸಂಸ್ಥೆ ಹಲವಾರು ಶ್ರಮದಾನಗಳನ್ನು ನಡೆಸಿ ಹಾಗೂ ಟ್ರಸ್ಟ್ ನ ಸದಸ್ಯರ ಮೂಲಕವೇ ಎಲ್ಲಾ ಕೆಲಸಗಳನ್ನು ಮಾಡಿಸಿ ಸುಸಜ್ಜಿತ ಮನೆಯನ್ನು ನಿರ್ಮಿಸಿಯೇ ಬಿಟ್ಟಿತು.

ಶ್ರಮದಾನಗಳನ್ನು ಹೊರತುಪಡುಸಿ ಸುಮಾರು 1.50 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ದಿ.23/08/2020 ರಂದು ಸರಳ ಸಮಾರಂಭವೊಂದನ್ನು ನಡೆಸಿ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಈ ಮನೆಯನ್ನು ಹಸ್ತಾಂತರಿಸಲಾಯಿತು.

ಈ ಸಂಧರ್ಭ ಶ್ರೀ ಕ್ಷೇತ್ರ ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಉಧ್ಯಮಿಗಳು ಆದ ಶ್ರೀ. ಯಶವಂತ ಪೂಜಾರಿ ದೇರಾಜೆಗುತ್ತು. ಯುವ ನಾಯಕ, ಯುವ ಉಧ್ಯಮಿ ಶ್ರೀ. ಯತಿನ್ ಕುಮಾರ್ ಕಲ್ಲಡ್ಕ, ಹಾಗು ಶ್ರೀ ಕ್ಷೇತ್ರ ಬಾಕಿಲ ಇಲ್ಲಿನ ಪ್ರಮುಖರಾದ ಶ್ರೀ.ವಸಂತ ಪೂಜಾರಿ ಬಾಕಿಲಗುತ್ತು ಇವರು ಪಾಲ್ಗೊಂಡಿದ್ದರು.ಈ ಸಂಧರ್ಭ ವೇದಿಕೆಯಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ಶ್ರೀ. ಸಂಜೀವ ಪೂಜಾರಿ ದಾಸಕೋಡಿ, ಅಧ್ಯಕ್ಷರಾದ ಶ್ರೀ. ಲೋಕನಾಥ ಪೂಜಾರಿ ತಿಮರಾಜೆ ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಯುವ ಬರಹಗಾರ ಶೈಲು ಬಿರ್ವ ಅಗತ್ತಾಡಿ, ನಿಶಿ ಪೂಜಾರಿ ಬಾಕಿಲ, ಯುವ ಉಧ್ಯಮಿ ಶ್ರೀ. ಚಿತ್ತರಂಜನ್ ಹೊಸಕಟ್ಟ, ಟ್ರಸ್ಟ್ ನ ಸಂಚಾಲಕರಾದ ಶ್ರೀ.ವಿದ್ಯಾಧರ ಪೂಜಾರಿ ಅಣ್ಣೆಂಗಳ, ಹಿರಿಯರಾದ ಶ್ರೀ. ಸಾಂತಪ್ಪ ಪೂಜಾರಿ ಪಚ್ಚಡಿಬೈಲು ಹಾಗು ಟ್ರಸ್ಟ್ ನ ಟ್ರಸ್ಟಿಗಳು, ಸದಸ್ಯರು, ಮಹಿಳಾ ಘಟಕ, ವಿದ್ಯಾರ್ಥಿ ಘಟಕದ ಸದಸ್ಯರು ಉಪಸ್ಥತರಿದ್ದರು.

ಈ ಯೋಜನೆಯ ಯಶಸ್ಸನಲ್ಲಿ ಕೈಜೋಡಿಸಿದ ಎಲ್ಲಾ ಬಂಧು ಮಿತ್ರರಿಗೂ ಟ್ರಸ್ಟ್ ನ ವತಿಯಿಂದ ಹೃದಯಾಂತರಾಳದ ಧನ್ಯವಾದಗಳು.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »