TOP STORIES:

FOLLOW US

ನಮನ ಫ್ರೆಂಡ್ಸ್ ಮುಂಬಯಿ ಸಂಸ್ಥಾಪಕ ಪ್ರಭಾಕರ ಬೆಳುವಾಯಿ


ಮುಂಬಯಿ ಯಾಂತ್ರಿಕ ಬದುಕಿನ ಮದ್ಯೆ ವೃತ್ತಿಪರ ಜೀವನದ ಬಿಡುವಿಲ್ಲದ ಕಾರ್ಯ ವೈಖರಿಯಲ್ಲಿ ಹವ್ಯಾಸ ಪ್ರವೃತ್ತಿಯೊಂದಿಗೆ ತಮ್ಮನ್ನು ತಾವು ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಗಣ್ಯ ಕನ್ನಡಿಗರ ಮದ್ಯೆ ಚಿರಪರಿಚಿತರಾಗಿರುವ ಉತ್ಸಾಹಿ ಯುವಕರ ಸಾಲಿನಲ್ಲಿ ಪ್ರಭಾಕರ ಬೆಳುವಾಯಿ ಓರ್ವರು ಮುಂಬಯಿ ಮಹಾನಗರ ಕಂಡ ನಿಷ್ಠಾವಂತ ಪ್ರಾಮಾಣಿಕ ಕಲಾ ಸಂಘಟಕ.


ನಮನ ಫ್ರೆಂಡ್ಸ್ ಮುಂಬಯಿ ಇದರ ಸಂಸ್ಥಾಪಕರಾಗಿ ಕಳೆದ 15ವರ್ಷಗಳಿಂದ ಸಂಸ್ಥೆಯನ್ನು ಮಾದರಿ ಹಾಗೂ ಸಮರ್ಥವಾಗಿ ಮುನ್ನಡೆಸುವುದರ ಜೊತೆಗೆ ಮುಂಬಯಿ ಸಾಹಿತ್ಯಿಕ ಸಾಂಸ್ಕ್ರತಿಕ ಧಾರ್ಮಿಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ನಿರಂತರ ಸಕ್ರೀಯವಾಗಿರಿಸಿಕೊಂಡಿರುವ ಓರ್ವ ಅಪ್ಪಟ ಭಾಷಾಭಿಮಾನಿ ಕಲಾಪ್ರೇಮಿ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಲಾಡಿ ಮನೆತನದ ದಿ. ಬಾಬು ಪೂಜಾರಿ ಮತ್ತು ಬೆಳುವಾಯಿ ಮಿತ್ತಬೆಟ್ಟು ಬರ್ಕೆ ಕೆಳಗಿನ ಮನೆ ಗೋಪಿ ಪೂಜಾರಿ ದಂಪತಿಯ ಪುತ್ರನಾಗಿ ಜನಿಸಿ ಕಳೆದ ಎರಡೂವರೆ ದಶಕಗಳ ಹಿಂದೆ ಭವಿಷ್ಯದ ಹಾದಿಗಾಗಿ ಮುಂಬಯಿ ಸೇರಿದರು. ಹೋಟೆಲ್ ವೃತ್ತಿಯೊಂದಿಗೆ ಬರವಣಿಗೆಯನ್ನು ಹವ್ಯಾಸವಾಗಿರಿಸಿಕೊಂಡು ವ್ಯಕ್ತಿ ಪರಿಚಯ ನಾಟಕ ವಿಶ್ಲೇಷಣೆ, ಕಥೆ, ಕವನ ಲೇಖನಗಳ ಮುಖೇನ ಪರಿಚಯಿಸಿಕೊಂಡಿರುವ ಇವರು ಕಳೆದ ಒಂದೂವರೆ ದಶಕಗಳ ಹಿಂದೆ ನಮನ ಫ್ರೆಂಡ್ಸ್ ಮುಂಬಯಿ ಎಂಬ ಮಿತ್ರ ಬಳಗವನ್ನು ಸ್ಥಾಪಿಸಿ ಆ ಮುಖೇನ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ ಶ್ರೇಯಸ್ಸು ಇವರದು.


ನಗರ ಹಾಗೂ ತವರೂರ ಹಲವಾರು ಕಲಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಹೊಸ ವೇದಿಕೆ ಕಲ್ಪಿಸುವುದರ ಜೊತೆಗೆ ಪ್ರತಿಭಾ ಪುರಸ್ಕಾರ ಮಾತ್ರವಲ್ಲದೆ ತೆರೆಮರೆಯಲ್ಲಿರುವ ನಗರದ ಹಿರಿಯ ಸಮಾಜ ಸೇವಕರು, ಕಲಾವಿದರು, ಧಾರ್ಮಿಕ ಮುಂದಾಳುಗಳು, ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸಿದ ಕೀರ್ತಿ ಇವರದು.
2018 ರಲ್ಲಿ ರುದ್ರ ಎಂಟರ್ಟೈನ್ಮೆಂಟ್ ಆಯೋಜಿಸಿದ ಮಿಸ್ಟರ್ ಆಂಡ್ ಮಿಸ್ ಕರಾವಳಿ- 2018 ಸೌಂದರ್ಯ ಸ್ಪರ್ಧೆ, 2019ರಲ್ಲಿ ಪುಣೆಯಲ್ಲಿ ಸೂರ್ಯ ಪೂಜಾರಿ ಕಾರ್ಕಳ ನೇತೃತ್ವದ ನಮ ತುಳುವೆರ್ ಆಯೋಜನೆಯ ಮಿಸ್ಟರ್ ಆಂಡ್ ಮಿಸ್ ಫೇಸ್ ಆಫ್ ತುಳುನಾಡು ಸೌಂದರ್ಯ ಸ್ಪರ್ಧೆಯ ಬಹುಪಾಲಿನ ಯಶಸ್ಸಿಗೆ ಅವಿರತವಾಗಿ ಶ್ರಮಿಸಿದ ಕೀರ್ತಿ ಇವರದು. ನಗರದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ಇವರ ಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.


ಅಶ್ವಿನಿ ಪ್ರಕಾಶನ ಗದಗ ಆಯೋಜಿಸಿದ ಅಖಿಲ ಕರ್ನಾಟಕ ಸ್ವರಚಿತ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಬಹುಮಾನ ಪಡೆದುದು ಮಾತ್ರವಲ್ಲದೆ,
ಇವರ ಸಾಮಾಜಿಕ ಹಾಗೂ ಸಾಂಸ್ಕ್ರತಿಕ ಕಳಕಳಿಯನ್ನು ಗುರುತಿಸಿ “ಸ್ತುಪ್ತ ಪ್ರತಿಭೆಗಳ ಪ್ರಕಟಕ ”
“ಪ್ರತಿಭಾ ವಲ್ಲಭ”
ಸೇರಿದಂತೆ ರಂಗ್ ಮಂಚ್ ಕಾಮ್ಗಾರ್ ಸಂಸ್ಥೆ (ರಿ )ಆಶ್ರಯದಲ್ಲಿ ಜರಗಿದ ಅನಘಾ ಇವೆಂಟ್ ಮತ್ತು ಡಿ. ಎಸ್. ಎಂಟರ್ಟೈನ್ಮೆಂಟ್ ಆಯೋಜಿಸಿದ ಹಿಂದಿ ಮರಾಠಿ ಸಿನಿಮಾ ತಂತ್ರಜ್ಞರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ “ಬ್ಯಾಕ್ ಸ್ಟೇಜ್ ಹೀರೋ -2018”
ಪ್ರಶಸ್ತಿಯನ್ನಿತ್ತು ಗೌರವಿಸಿದ್ದು ಇವರ ತೆರೆಮರೆಯ ಸಾಧನೆಗೆ ಸಂದ ಗೌರವವೇ ಆಗಿದೆ. 2019 ರಲ್ಲಿ ನಾಮಾಂಕಿತ ಇಂಗ್ಲಿಷ್ ದೈನಿಕ “ಮುಂಬಯಿ ಮಿರರ್” ಪತ್ರಿಕೆಯಲ್ಲಿ ಪ್ರಭಾಕರ ಬೆಳುವಾಯಿ ಇವರ ಸಾಧನೆಯ ಬಗ್ಗೆ ಮೆಚ್ಚುಗೆಯ ಲೇಖನ ಪ್ರಕಟಗೊಂಡಿರುವುದು ತುಳು ಕನ್ನಡಿಗರಿಗೆಲ್ಲರಿಗೂ ಹೆಮ್ಮೆಯ ವಿಷಯ.
ಈ ನಿಟ್ಟಿನಲ್ಲಿ ಬಿಡುವಿಲ್ಲದ ವೃತ್ತಿಯೊಂದಿಗೆ ಸದಾ ಸಮಾಜಮುಖಿ ಹಾಗೂ ಕಲಾ ಸೇವೆ ಮಾಡುತ್ತಿರುವ ಪ್ರಭಾಕರ ಬೆಳುವಾಯಿ ಈ ನಮನ ಫ್ರೆಂಡ್ಸ್ ಮುಂಬಯಿ ಇದರ 15ನೇ ವಾರ್ಷಿಕೋತ್ಸವ ಸಂಭ್ರಮ “ನಮನೋತ್ಸವ -2020” ಕಾರ್ಯಕ್ರಮವನ್ನು ರಾಷ್ಟ್ರ ಪ್ರೇಮ, ಮಾತೃಪ್ರೇಮ, ಕಲಾ ಪ್ರೇಮ ಎಂಬ ಪರಿಕಲ್ಪನೆ ಯಡಿ ವಿಶಿಷ್ಟ ರೀತಿಯಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವು ಅಭೂತಪೂರ್ವವಾಗಿ ಮೂಡಿಬಂದು ವೀಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ.


ಈ ಕಾರ್ಯಕ್ರಮದಲ್ಲಿ ಭಾರತದ ವೀರ ಯೋಧ ಮಾಜಿ ಕಮಾಂಡರ್ ಶ್ಯಾಮರಾಜ್ ಇ. ವಿ. ಇವರಿಗೆ “ಯೋಧ ನಮನ” ಪ್ರಶಸ್ತಿ ಸೇರಿದಂತೆ ನಗರದ ವಿವಿಧ ಕ್ಷೇತ್ರದ 7 ಗಣ್ಯರಿಗೆ ಪ್ರಶಸ್ತಿ ಮಾತ್ರವಲ್ಲದೆ 7ಯುವ ಪ್ರತಿಭೆಗಳಿಗೆ “ನಮನ ಸಿರಿ ಯುವ ಪುರಸ್ಕಾರ -2020” ಪ್ರಶಸ್ತಿಯನ್ನಿತ್ತು ಗೌರವಿಸಿ ಸನ್ಮಾನಿಸಿದ ಕೀರ್ತಿಗೆ ಭಾಜಾನರಾಗಿದ್ದಾರೆ.

“ನಮನ ಫ್ರೆಂಡ್ಸ್ ಮುಂಬಯಿ” ಮಿತ್ರ ಬಳಗದಲ್ಲಿ ಯಾವುದೇ ಪದವಿ ಕಾರ್ಯಕಾರಿ ಸಮಿತಿ ಇಲ್ಲದಿದ್ದರೂ ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು ಅದರ ಎಲ್ಲಾ ನಿರ್ವಹಣೆ ಯನ್ನು ಪ್ರಭಾಕರ ಬೆಳುವಾಯಿ ಇವರು ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿರುತ್ತಾರೆ. ಸ್ವಾಭಿಮಾನ, ಸ್ವಪ್ರಯತ್ನ, ನಿಸ್ವಾರ್ಥ ಮನದ ನಂಬಿಕೆ ನಮ್ಮೊಳಗಿದ್ದರೆ ಯಶಸ್ಸು ಖಂಡಿತಾ ನಮ್ಮ ಮಡಿಲಿನೊಳಗಿರುತ್ತದೆ ಎನ್ನುವ ಪ್ರಭಾಕರ ಬೆಳುವಾಯಿ ಸಾಮಾಜಿಕ, ಸಾಂಸ್ಕೃತಿಕ ಸೇವೆ ಮಾಡಲು ಹಣ ಆಸ್ತಿ ಸಂಪತ್ತು ಬೇಕಾಗಿಲ್ಲ ಪರರ ಬಗ್ಗೆ ಕಾಳಜಿ, ಮತ್ತು ನಿಸ್ವಾರ್ಥ ನಿರ್ಮಲ ಮನ ಇದ್ದರೆ ಸಾಕು ಅನ್ನುತ್ತಾರೆ. ವೃತ್ತಿಯೊಂದಿಗೆ ಸಮಾಜಮುಖಿ ಪ್ರವೃತ್ತಿಯೊಂದಿಗೆ ತನ್ನದೇ ಆದ ಛಾಪಿನೊಂದಿಗೆ ಮಿಂಚುತ್ತಿರುವ ಇವರ ಬಾಳು ಹಸನಾಗಿ ಸಾಗಲಿ ಸಾಮಾಜಿಕ, ಸಾಹಿತ್ಯಿಕ ಹಾಗೂ ಕಲಾಕ್ಷೇತ್ರದಲ್ಲಿ ಇವರ ಸೇವೆಯು ಇನ್ನಷ್ಟು ಸಿದ್ಧಿ ಪ್ರಸಿದ್ದಿಯೊಂದಿಗೆ ಮಿನುಗಲಿ ಎಂಬ ಆಶಯ ನಮ್ಮದು.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »