TOP STORIES:

FOLLOW US

ನಮ್ಮ ತುಳುನಾಡಿನ ಹಾಗೂ ಬಿಲ್ಲವ ಸಮಾಜದ ಬಹುಮುಖ ಪ್ರತಿಭೆ ಅನ್ವಿಷಾ ಪೂಜಾರಿ ವಾಮಂಜೂರು


ಕರಾವಳಿ ಭಾಗ ಪ್ರತಿಭೆಗಳ ತವರುರೂ ಎನಿಸಿಕೊಂಡಿರುವುದು ಎರಡು ಮಾತಿಲ್ಲ ಸಿನಿಮಾ, ಕ್ರಿಡೆ, ನೃತ್ಯ, ಸಿನಿಮಾ ಡ್ಯಾನ್ಸ್, ರಾಜಕೀಯ ಹಾಗೂ ದೇಶ ವಿದೇಶದಲ್ಲೂ ಕರಾವಳಿಗರ ಹೆಸರೆ ಕೇಳಿಬರುವುದು. ಹಾಗೆಯೆ ಕರ್ನಾಟಕದಾದ್ಯಂತ ಮನೆಮಾತಗಿದ್ದ “ಎಕ್ಸ್ ಪ್ರೆಶನ್ ಕ್ವೀನ್” ಅನ್ವಿಷಾ ಪೂಜಾರಿ ನಮ್ಮ ಬಿಲ್ಲವ ಸಮಾಜದ ಹೆಮ್ಮೆಯ ಪ್ರತಿಭೆ.ಕಠಿಣವಾದ ಪರಿಶ್ರಮ, ಶ್ರದ್ದೆಯಿಂದ ಮಾತ್ರ ಯಾವುದೆ ಒಂದು ಸಾಧನೆ ಮಾಡಲು ಸಾಧ್ಯ, ಹಾಗೂ ಪ್ರತಿಭೆಗೆ ಇರುವ ಮನೆಯ ವಾತವರಣವು ಅಗತ್ಯವಾಗಿರುತ್ತದೆ. ವಾಮಂಜೂರು ನಿವಾಸಿ ಅನಿಲ್ ಕುಮಾರ್ ಮತ್ತು ಅನುಷಾ ದಂಪತಿಗಳ ಪುತ್ರಿ. ಅನ್ವಿಷಾ ಪೂಜಾರಿ ವಾಮಂಜೂರ್ ಇವರಿಗೂ ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಮನೆಯವರ ಪ್ರೋತ್ಸಾಹದಿಂದ ಈ ಮಟ್ಟಕ್ಕೆ ಏರಿದ್ಡಾರೆ.

ನೃತ್ಯ, ಯಕ್ಷಗಾನ, ಭರತನಾಟ್ಯ, ಸಿನಿಮಾ ಡ್ಯಾನ್ಸ್, ಯೋಗ, ರಂಗೋಲಿ, ಕೀ ಭೊರ್ಡ್ ಅಭ್ಯಾಸ ಮಾಡಿ ಸುಮಾರು 200 ಕ್ಕೂ ಹೆಚ್ಚು ಶೋ ಹಾಗೂ ಸ್ಪರ್ದೆಗಳಿಗೆ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿದ್ದಾರೆ.‘ಉಡುಪಿ ಕಿಡ್ಸ್ ಟ್ಯಾಲೆಂಟ್, ದೈಜಿ ವರ್ಲ್ಡ್ ಮಾಧ್ಯಮ ನಡೆಸಿದ “ಜೂನಿಯರ್ ಮಸ್ತಿ ಸೀಸನ್ 2″ ರಿಯಾಲಿಟಿ ಶೋ ಗೆ ಆಯ್ಕೆ, ಮಂಗಳೂರಿನ ಫಾರಂ ಪಿಜ್ಜಾ ಮಾಲ್ ಏರ್ಪಡಿಸಿದ ‘ಮಾಡೆಲ್ಲಿಂಗ್ ಮ್ಯಾಕ್ಸ್ ಮಾಡೆಲ್ಲಿಂಗ್ ” ನಲ್ಲಿ ‘ಮ್ಯಾಕ್ಸ್ ಮಂಗಳೂರು ಸೂಪರ್ ಕಿಡ್ಸ್’ ಟ್ರೋಫಿಯನ್ನು ಹಾಗೂ ‘Mangalore Little Princess’ ಟ್ರೋಫಿ ಗಳಿಸಿದ್ದಾರೆ.

ಇವರು ಜ಼ಿ ಕನ್ನಡದ ಆಯೊಜಿಸಿದ್ದ ಡ್ಯಾನ್ಸ್ ಕರ್ನಾಟಕ ಹಾಗೂ ಡ್ರಾಮ ಜೂನಿಯರ್ ನಲ್ಲಿ ಭಾಗವಹಿಸಿ, ಕರ್ನಾಟಕದ ಮನೆ ಮಾತಾಗಿರುವ ಅನ್ವಿಷಾ, ಡ್ಯಾನ್ಸ್ ಕರ್ನಾಟಕದಲ್ಲಿ “ಎಕ್ಸ್ ಪ್ರೆಶನ್ ಕ್ವೀನ್” ಎಂದೇ ಖ್ಯಾತಿ ಪಡೆದ್ದಿದಾರೆ. ಡ್ಯಾನ್ಸ್ ಕರ್ನಾಟಕದಲ್ಲಿ ಖ್ಯಾತ ನೃತ್ಯ ಸಂಯೋಜಕರಾದ ಶಶಿ ಮಾಸ್ಟರ್ ಮತ್ತು ರಾಹುಲ್ ಇವರಿಂದ ತರಬೇತಿಯನ್ನು ಪಡೆದ್ದಿದ್ದಾರೆ.ಹಾಗೂ ತುಳು ಸಿನಿಮಾಗಳಾದ ಜಬರ್ದಾಸ್ತ್ ಶಂಕರ, ಪೆಪ್ಪೆರೆ ಪೆರೆರೆರೆ, ಚಿತ್ರರಂಗದ ಖ್ಯಾತ ನಟರಾದ ನವೀನ್ ಡಿ ಪಡಿಲ್ ಜೊತೆಗೆ ನಟಿಸುವ ಮೂಲಕ ತುಳು ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.

ಅನ್ವಿಷಾ ಮಂಗಳೂರಿನ ಶುಭೋದಯ ವಿದ್ಯಾಲಯ, ಮೂಡುಶೆಡ್ಡೆಯಲ್ಲಿ ೫ ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೇವಲ ತನ್ನ ಪ್ರತಿಭೆಯ ಜತೆಗೆ ವಿದ್ಯಾಭ್ಯಾಸದಲ್ಲೂ ಭೇಶ್ ಎನಿಸಿಕೊಂಡಿದ್ದಾರೆ.

ಇವರಿಗೆ ಕರ್ನಾಟಕ ಸರ್ಕಾರದ ”ಜಿಲ್ಲಾ ಅಸಾಧಾರಣ ಪ್ರತಿಭೆ”, ಕರ್ನಾಟಕ ಕಲಾಶ್ರಿ, ತುಳುನಾಡ ರಕ್ಷಣಾ ವೇದಿಕೆಯಿಂದ ತೌಳವ ಕುಮಾರಿ, ಜೆ ಸಿ ಮಡಾಂತ್ಯಾರ್ ಸಾಧನಶ್ರಿ ಸೇವ ಪುರಸ್ಕಾರ್, ಕರ್ನಾಟಕ ಪ್ರತಿಭ ರತ್ನ, ವೀರಕೇಸರಿ ಬೆಳ್ತಂಗಡಿ ವತಿಯಿಂದ ಕಲಾ ಸೇವಾರತ್ನ ಪುರಸ್ಕಾರ. ಮುಂತಾದ ಹಲವು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಅನ್ವಿಷಾ ಪೂಜಾರಿ ವಾಮಂಜೂರು ಹೀಗೆ ತನ್ನ ಸಾಧನೆಯನ್ನು ಮುಂದುವರಿಸುತ್ತಾ ದೇಶ ವಿದೇಶದಲ್ಲೂ ಹೆಸರು ಗಿಟ್ಟಿಸಿಕೊಳ್ಳಲಿ, ಹಾಗೂ ನಮ್ಮ ತುಳುನಾಡಿನ ಹಾಗು ಬಿಲ್ಲವ ಸಮಾಜದ ಹೆಮ್ಮೆಯಾಗಲಿ.

ಬರಹ: ಪುಷ್ಪರಾಜ್ ಪೂಜಾರಿ


Share:

More Posts

Category

Send Us A Message

Related Posts

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share       ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »