TOP STORIES:

FOLLOW US

ನಮ್ಮ ತುಳುನಾಡಿನ ಹಾಗೂ ಬಿಲ್ಲವ ಸಮಾಜದ ಬಹುಮುಖ ಪ್ರತಿಭೆ ಅನ್ವಿಷಾ ಪೂಜಾರಿ ವಾಮಂಜೂರು


ಕರಾವಳಿ ಭಾಗ ಪ್ರತಿಭೆಗಳ ತವರುರೂ ಎನಿಸಿಕೊಂಡಿರುವುದು ಎರಡು ಮಾತಿಲ್ಲ ಸಿನಿಮಾ, ಕ್ರಿಡೆ, ನೃತ್ಯ, ಸಿನಿಮಾ ಡ್ಯಾನ್ಸ್, ರಾಜಕೀಯ ಹಾಗೂ ದೇಶ ವಿದೇಶದಲ್ಲೂ ಕರಾವಳಿಗರ ಹೆಸರೆ ಕೇಳಿಬರುವುದು. ಹಾಗೆಯೆ ಕರ್ನಾಟಕದಾದ್ಯಂತ ಮನೆಮಾತಗಿದ್ದ “ಎಕ್ಸ್ ಪ್ರೆಶನ್ ಕ್ವೀನ್” ಅನ್ವಿಷಾ ಪೂಜಾರಿ ನಮ್ಮ ಬಿಲ್ಲವ ಸಮಾಜದ ಹೆಮ್ಮೆಯ ಪ್ರತಿಭೆ.ಕಠಿಣವಾದ ಪರಿಶ್ರಮ, ಶ್ರದ್ದೆಯಿಂದ ಮಾತ್ರ ಯಾವುದೆ ಒಂದು ಸಾಧನೆ ಮಾಡಲು ಸಾಧ್ಯ, ಹಾಗೂ ಪ್ರತಿಭೆಗೆ ಇರುವ ಮನೆಯ ವಾತವರಣವು ಅಗತ್ಯವಾಗಿರುತ್ತದೆ. ವಾಮಂಜೂರು ನಿವಾಸಿ ಅನಿಲ್ ಕುಮಾರ್ ಮತ್ತು ಅನುಷಾ ದಂಪತಿಗಳ ಪುತ್ರಿ. ಅನ್ವಿಷಾ ಪೂಜಾರಿ ವಾಮಂಜೂರ್ ಇವರಿಗೂ ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಮನೆಯವರ ಪ್ರೋತ್ಸಾಹದಿಂದ ಈ ಮಟ್ಟಕ್ಕೆ ಏರಿದ್ಡಾರೆ.

ನೃತ್ಯ, ಯಕ್ಷಗಾನ, ಭರತನಾಟ್ಯ, ಸಿನಿಮಾ ಡ್ಯಾನ್ಸ್, ಯೋಗ, ರಂಗೋಲಿ, ಕೀ ಭೊರ್ಡ್ ಅಭ್ಯಾಸ ಮಾಡಿ ಸುಮಾರು 200 ಕ್ಕೂ ಹೆಚ್ಚು ಶೋ ಹಾಗೂ ಸ್ಪರ್ದೆಗಳಿಗೆ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿದ್ದಾರೆ.‘ಉಡುಪಿ ಕಿಡ್ಸ್ ಟ್ಯಾಲೆಂಟ್, ದೈಜಿ ವರ್ಲ್ಡ್ ಮಾಧ್ಯಮ ನಡೆಸಿದ “ಜೂನಿಯರ್ ಮಸ್ತಿ ಸೀಸನ್ 2″ ರಿಯಾಲಿಟಿ ಶೋ ಗೆ ಆಯ್ಕೆ, ಮಂಗಳೂರಿನ ಫಾರಂ ಪಿಜ್ಜಾ ಮಾಲ್ ಏರ್ಪಡಿಸಿದ ‘ಮಾಡೆಲ್ಲಿಂಗ್ ಮ್ಯಾಕ್ಸ್ ಮಾಡೆಲ್ಲಿಂಗ್ ” ನಲ್ಲಿ ‘ಮ್ಯಾಕ್ಸ್ ಮಂಗಳೂರು ಸೂಪರ್ ಕಿಡ್ಸ್’ ಟ್ರೋಫಿಯನ್ನು ಹಾಗೂ ‘Mangalore Little Princess’ ಟ್ರೋಫಿ ಗಳಿಸಿದ್ದಾರೆ.

ಇವರು ಜ಼ಿ ಕನ್ನಡದ ಆಯೊಜಿಸಿದ್ದ ಡ್ಯಾನ್ಸ್ ಕರ್ನಾಟಕ ಹಾಗೂ ಡ್ರಾಮ ಜೂನಿಯರ್ ನಲ್ಲಿ ಭಾಗವಹಿಸಿ, ಕರ್ನಾಟಕದ ಮನೆ ಮಾತಾಗಿರುವ ಅನ್ವಿಷಾ, ಡ್ಯಾನ್ಸ್ ಕರ್ನಾಟಕದಲ್ಲಿ “ಎಕ್ಸ್ ಪ್ರೆಶನ್ ಕ್ವೀನ್” ಎಂದೇ ಖ್ಯಾತಿ ಪಡೆದ್ದಿದಾರೆ. ಡ್ಯಾನ್ಸ್ ಕರ್ನಾಟಕದಲ್ಲಿ ಖ್ಯಾತ ನೃತ್ಯ ಸಂಯೋಜಕರಾದ ಶಶಿ ಮಾಸ್ಟರ್ ಮತ್ತು ರಾಹುಲ್ ಇವರಿಂದ ತರಬೇತಿಯನ್ನು ಪಡೆದ್ದಿದ್ದಾರೆ.ಹಾಗೂ ತುಳು ಸಿನಿಮಾಗಳಾದ ಜಬರ್ದಾಸ್ತ್ ಶಂಕರ, ಪೆಪ್ಪೆರೆ ಪೆರೆರೆರೆ, ಚಿತ್ರರಂಗದ ಖ್ಯಾತ ನಟರಾದ ನವೀನ್ ಡಿ ಪಡಿಲ್ ಜೊತೆಗೆ ನಟಿಸುವ ಮೂಲಕ ತುಳು ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.

ಅನ್ವಿಷಾ ಮಂಗಳೂರಿನ ಶುಭೋದಯ ವಿದ್ಯಾಲಯ, ಮೂಡುಶೆಡ್ಡೆಯಲ್ಲಿ ೫ ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೇವಲ ತನ್ನ ಪ್ರತಿಭೆಯ ಜತೆಗೆ ವಿದ್ಯಾಭ್ಯಾಸದಲ್ಲೂ ಭೇಶ್ ಎನಿಸಿಕೊಂಡಿದ್ದಾರೆ.

ಇವರಿಗೆ ಕರ್ನಾಟಕ ಸರ್ಕಾರದ ”ಜಿಲ್ಲಾ ಅಸಾಧಾರಣ ಪ್ರತಿಭೆ”, ಕರ್ನಾಟಕ ಕಲಾಶ್ರಿ, ತುಳುನಾಡ ರಕ್ಷಣಾ ವೇದಿಕೆಯಿಂದ ತೌಳವ ಕುಮಾರಿ, ಜೆ ಸಿ ಮಡಾಂತ್ಯಾರ್ ಸಾಧನಶ್ರಿ ಸೇವ ಪುರಸ್ಕಾರ್, ಕರ್ನಾಟಕ ಪ್ರತಿಭ ರತ್ನ, ವೀರಕೇಸರಿ ಬೆಳ್ತಂಗಡಿ ವತಿಯಿಂದ ಕಲಾ ಸೇವಾರತ್ನ ಪುರಸ್ಕಾರ. ಮುಂತಾದ ಹಲವು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಅನ್ವಿಷಾ ಪೂಜಾರಿ ವಾಮಂಜೂರು ಹೀಗೆ ತನ್ನ ಸಾಧನೆಯನ್ನು ಮುಂದುವರಿಸುತ್ತಾ ದೇಶ ವಿದೇಶದಲ್ಲೂ ಹೆಸರು ಗಿಟ್ಟಿಸಿಕೊಳ್ಳಲಿ, ಹಾಗೂ ನಮ್ಮ ತುಳುನಾಡಿನ ಹಾಗು ಬಿಲ್ಲವ ಸಮಾಜದ ಹೆಮ್ಮೆಯಾಗಲಿ.

ಬರಹ: ಪುಷ್ಪರಾಜ್ ಪೂಜಾರಿ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »