TOP STORIES:

ನಮ್ಮ ಸಂಘಟನೆಗಳಲ್ಲಿ ನಮ್ಮವರಿಗಾಗಿ ದುಡಿಯುವ ಮನಸ್ಥಿತಿಯೊಂದಿಗೆ ನಮ್ಮಲ್ಲಿ ಪಕ್ಷಕ್ಕಿಂತ ಸಂಘ-ಸಂಸ್ಥೆಗಳ ಮೇಲೂ ಕಾಳಜಿಯಿರಲಿ…


ಬಿಲ್ಲವ ಸಮಾಜದಲ್ಲಿ ಯಾವುದೇ ವಿಷಯ ಪ್ರಸ್ತಾಪವಾದಾಗ ಪಕ್ಷ ಕೇಂದ್ರಿತವಾಗಿ ನೋಡುವ ಜಾಯಮಾನವಿದೆ. ಜಾತಿ ಆಧಾರಿತ ಬಿಲ್ಲವ ಸಂಘಗಳು ಇದಕ್ಕೆ ಹೊರತಾಗಿಲ್ಲ. ಇದು ನಮ್ಮ ದುರಂತ. ಬಹುಷ: ಬಿಲ್ಲವರಲ್ಲಿ ಇಂದು ಸಂಖ್ಯಾ ಬಲವಿದೆ ಎಂದು ಡಂಗುರ ಸಾರಿದರೂ ಬುದ್ಧಿ ಬಲ ಅರ್ಥಾತ್ ಯೋಚನೆ, ಯೋಜನೆಯಲ್ಲಿ ವಿಫಲರಾಗುತ್ತಿದ್ದಾರೆ.

ನಾರಾಯಣ ಗುರುಗಳ ಸಂದೇಶವಿದೆ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿ ಎಂದು. ಹೌದು, ವಿದ್ಯೆಯಿಂದ ನಾವು ಸ್ವತಂತ್ರರಾಗುವ ಬದಲು ನಮ್ಮ ಸ್ವಾತಂತ್ರ್ಯವನ್ನು ಪರರಿಗೆ ಧಾರೆ ಎರೆದು ಪರರ ತಂತ್ರಕ್ಕೆ ಬಲಿಯಾಗುತ್ತಿದ್ದೇವೆ. ಸಂಘಟನೆಗಳು ಬಲವ ತುಂಬುವ ಬದಲು ಹಲವು ಆಗುತ್ತಿದೆ. ಕೆಲವರ ಪ್ರಕಾರ ಸಂಘಟನೆಗಳು ಹೆಚ್ಚಾಗಬೇಕು ಅದರಿಂದ ಸಮಾಜಕ್ಕೆ ಪ್ರಯೋಜನವಿದೆ. ಹೆಚ್ಚಾಗಲಿ ಒಳ್ಳೆಯದು ಆದರೆ ನಮ್ಮ ಸಂಘಟನೆಗಳು ನಮ್ಮ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಔದ್ಯೋಗಿಕವಾಗಿ ಸಧೃಡವಾಗಿಸಲು ಸಹಕಾರಿಯಾಗಿರಬೇಕು. ಆ ಮೂಲಕ ಸಮಾಜದ ಹಿತಚಿಂತನೆಯ ಗುರಿ ಇರಬೇಕು.

ಜಾತಿಗಳು ಧರ್ಮದೊಳಗಿನ ಬಳ್ಳಿಗಳು. ಧರ್ಮ ನಮ್ಮೆಲ್ಲರಿಗೂ ಬೇಕು. ಆದರೆ ಅದು ಕೇವಲ ಬಿಲ್ಲವರಿಗಾಗಿ ಮಾತ್ರವೇ ಎಂಬ ಪ್ರಶ್ನೆಯನ್ನು ನಾವು ಮಾಡಬೇಕಾಗಿದೆ. ನಮ್ಮಲ್ಲಿ ಧರ್ಮಾಧಾರಿತ ಸಂಘಟನೆಯಲ್ಲಿ ಪ್ರಾಣತೆತ್ತವರಿದ್ದಾರೆ. ಅವರು ಯಾಕೆ ಹೋಗಬೇಕಿತ್ತು ಬೇರೆಯವರು ಇರಲಿಲ್ಲವೇ? ಇತ್ಯಾದಿ ಪ್ರಶ್ನೆಗಳು ಎಲ್ಲರೂ ಕೇಳುತ್ತೇವೆ. ಅದು ಸಾಮಾನ್ಯ. ಆದರೆ ಇದರ ಬಗ್ಗೆ ತಿಳುವಳಿಕೆ ಮೂಡಿಸುವುದು ಅನಿವಾರ್ಯ. ಆದರೆ ನಮ್ಮವ ಎಂಬ ಪ್ರಜ್ಞೆ ನಮ್ಮಲ್ಲಿರಲಿ. ಆ ಮೂಲಕ ಅಲ್ಲಿ ಪಕ್ಷ ನೋಡದೆ ಸಾಂತ್ವನ ಇಲ್ಲವೇ ಅದರ ವಿರುದ್ಧ ಬೇಕಾದ ಕ್ರಮದ ಬಗ್ಗೆ ನಮ್ಮ ಸಂಘಟನೆಗಳು ಮಾಡುತ್ತಿಲ್ಲ. ಎಲ್ಲೋ ಕೆಲವು ಬೆರಳೆಣಿಕೆಯ ಸಂಘಟನೆಗಳು ಅಥವಾ ಸ್ಥಳೀಯ ಬಿಲ್ಲವ ಸಂಘ ಧ್ವನಿ ಎತ್ತುತ್ತವೆ ನಂತರ ಅದಕ್ಕೆ ಸ್ಪಂದನೆಯೂ ಇಲ್ಲ. ಇದಕ್ಕೆ ಮೂಲ ಕಾರಣ ಸಂಘಟನೆಯ ಪ್ರಮುಖರು ಪಕ್ಷದಲ್ಲಿದ್ದಾಗ ಘಟನೆಯು ಕೆಲವೊಮ್ಮೆ ಜಾತಿಗಿಂತ ಪಕ್ಷದ ಮೇಲೆ ನಿಲ್ಲುತ್ತದೆ. ಜಾತಿಗಿಂತ ಪಕ್ಷದ ಚಿಂತನೆಯಿರುವ ವ್ಯಕ್ತಿಯು ಸಂಘಟನೆಯ ಚುಕ್ಕಾಣಿ ಹಿಡಿಯಲು ಅಸಮರ್ಥ ಅಥವಾ ಪಕ್ಷಾತೀತ ವ್ಯಕ್ತಿಗೆ ನಮ್ಮ ಸಂಘಟನೆಯ ಜವಾಬ್ದಾರಿ ವಹಿಸಬೇಕಾಗಿದೆ.

ಇತ್ತೀಚಿನ ಒಂದು ಘಟನೆಯನ್ನು ನೋಡುವುದಾದರೆ ಕಲಾವಿದ ಅರವಿಂದ್ ಬೋಳಾರ್ ಖಾಸಗಿ ವಾಹಿನಿಯಲ್ಲಿ ಜ್ಯೋತಿಷ್ಯ ಪಾತ್ರ ಮಾಡಿದಾಗ ಉಂಟಾದ ಸಮಸ್ಯೆಯ ಸಂದರ್ಭ ಖಾಸಗಿ ವಾಹಿನಿಯ ಬಗ್ಗೆ ಚಕಾರವೆತ್ತದೆ ಓರ್ವ ಕಲಾವಿದನಿಗಾದ ಅವಮಾನ ನಮಗೆ ಗೊತ್ತು. ಈ ಸಮಯದಲ್ಲಿ ನಮ್ಮವರಲ್ಲಿಯೇ ಧರ್ಮ, ಜಾತಿಯ ನಡುವಿನ ವಾದವಿವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿತ್ತು. ಆದರೆ ನಮ್ಮ ಜಾತಿಯ ಪ್ರಮುಖ ಸಂಘಟನೆಗಳೆನಿಸಿಕೊಂಡವರು ಮೌನವಾಗಿದ್ದರು. ಕಲಾವಿದನಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಲಿಲ್ಲ. ಕೆಲವರು ಮಾಡಿರಬಹುದು. ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದಕ್ಕೆ ಕಾರಣವೇ? ಅಥವಾ ಯಾರು ಮುಂದೆ ಹೋಗುತ್ತಾರೆ ನಂತರ ನಾವು ಹೋಗುವ ಎಂಬ ಸೋಗಲಾಡಿತನವೇ ಎಂಬಂತಾಗಿದೆ.
ಇತರ ಜಾತಿಗಳನ್ನು ಕೊಂಡಾಡುವ ನಾವು ಅವರಿಂದ ಸಾಕಷ್ಟು ಕಲಿಯಬೇಕಾಗಿದೆ. ಚುನಾವಣಾ ಸಂದರ್ಭ ಜಾತಿಯ ಪ್ರಮುಖರನ್ನು ಒಗ್ಗೂಡಿಸಿಕೊಂಡು ನಮ್ಮ ಜಾತಿಗೆ ಪ್ರಾತಿನಿಧ್ಯ ಕೊಡಬೇಕು ಎಂಬ ಬೇಡಿಕೆ, ಜಾತಿಗೆ ಬೇಕಾದ ಸವಲತ್ತು ಪಡೆಯಲು ರಾಜ್ಯದ ಮುಖ್ಯಮಂತ್ರಿಯೇನು, ಪ್ರಧಾನಮಂತ್ರಿಯನ್ನೂ ಭೇಟಿಯಾಗಲು ತಾಕತ್ತು ಅವರಲ್ಲಿ ಇರಬೇಕಾದರೆ, ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಾಬಲ್ಯವಿದ್ದು, ನಮ್ಮ ಜಾತಿಯ ಮತಗಳೇ ನಿರ್ಣಾಯಕವಾಗಿರುವಾಗ ನಮ್ಮಲ್ಲಿ ತಾಕತ್ತಿಲ್ಲವೇ? ನಮಗೆ ರಾಜಕೀಯ ನಾಯಕರು ಇದ್ದರು ಚುನಾವಣಾ ಸಂದರ್ಭ ನಾರಾಯಣಗುರು ಮಂದಿರದ ಭೇಟಿಯೇನು, ಜಾತಿಯ ಪ್ರಮುಖರ ಭೇಟಿ ಮಾಡುವುದೇನು? ಗೆದ್ದ ನಂತರ ಸರ್ವರೂ ಸಮಾನರು ಎಂಬ ಧೋರಣೆ ಅವರದ್ದು. ಇದು ನಮ್ಮವರಿಗೆ ರಾಜಕೀಯ ನಾಯಕರ ಬಗೆಗಿನ ತಾತ್ಸಾರಕ್ಕೂ ಕಾರಣವಾಗಿದೆ. ನಮ್ಮಲ್ಲಿ ಜಗಜ್ಜಾಹಿರಾಗುವಂತೆ ಜನ ಸೇರಿಸಿ ಅದು ಆಗ ಬೇಕು ಇದಾಗಬೇಕೆನ್ನುತ್ತೇವೆ. ಹೇಳುವುದು ಮಾತ್ರ ಅದರ ಹಿಂದೆ ಹೋಗಿ ಒತ್ತಡ ಹಾಕಲಾರೆವು. ಅದೇ ಇತರ ಜಾತಿಯವರು ಗುಪ್ತವಾಗಿ ಅವರ ನಾಯಕರು ಮಾತ್ರ ಮುಂದೆ ಹೋಗಿ ಸಮಾಜಕ್ಕಾಗಿ ಸರಕಾರಕ್ಕೆ ಒತ್ತಡ ಹಾಕಿ ಬೇಕಾದನ್ನು ಪಡೆಯುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಕಾರ್ಖಾನೆ, ಕಂಪನಿ, ಬ್ಯಾಂಕ್ ಇತ್ಯಾದಿಗಳಿದ್ದರೂ ಅಲ್ಲಿ ಸಿರಿವಂತರಿಗೆ ಮಣೆ. ಕೆಲವು ಜಾತಿ ಪ್ರಮುಖರು ಭಾಷಣಕ್ಕೆ ಜಾತಿ ಜಾತಿ ಎಂದು ಬೊಬ್ಬಿರಿದರು ಉದ್ಯೋಗಕ್ಕಾಗಿ ಹೋದಾಗ ಜಾತಿ ಕಾಣದು.

ಪಕ್ಷ, ಧರ್ಮಗಳಿಗೆ ಜೋತು ಬೀಳುವ ನಾವು ಜಾತಿಗಾಗಿರುವ ಸಂಘಟನೆಯನ್ನು ಸಮರ್ಥವಾಗಿ ಬಳಸುವ. ಇತರೆ ಜಾತಿಗಳು ಜಾತಿ ಮೊದಲು ಧರ್ಮ ನಂತರವೆಂದರೆ ನಾವುಗಳು ಧರ್ಮ ಮೊದಲು ಜಾತಿ ನಂತರ ಎನ್ನುತ್ತೇವೆ. ಇದಕ್ಕೆ ಕಾರಣ ಹುಡುಕಿದಾಗ ಜಾತಿ ಸಂಘಟನೆಗಳಿಂದಾದ ಪ್ರಮಾದ. ಯಾವಾಗ ಜಾತಿ ಸಂಘಟನೆಗಳು ಜಾತಿಗಾಗಿ ದುಡಿಯುವುದಿಲ್ಲವೋ ಆಗ ಯುವ ಮನಸ್ಸುಗಳು ತಮ್ಮನ್ನು ಸೆಳೆಯುವ ಧರ್ಮಾಧಾರಿತ ಸಂಘಟನೆಗಳ ಕಡೆಗೆ ಒಲವು ಹರಿಸುತ್ತಾರೆ. ಒಂದಷ್ಟು ಕಾರ್ಯಕ್ರಮಗಳನ್ನು ಮಾಡಿ, ಪ್ರಚಾರ ಬಯಸುವ ಬದಲು ಪ್ರೌಢ, ಕಾಲೇಜು ಹಂತದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶಿಕ್ಷಣ, ಉದ್ಯೋಗದ ಬಗ್ಗೆ ಸೂಕ್ತ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮಾಡಿದಾಗ ನಮ್ಮಲ್ಲಿಯೂ ಬದಲಾವಣೆಯ ಪರ್ವ ಕಾಣಬಹುದು.
ಜಾತಿ ಸಂಘಟನೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡು ಇತರ ಜಾತಿಯನ್ನು ಅಥವಾ ಪಕ್ಷವನ್ನು ಉದ್ಧರಿಸುವ ಬದಲು ನಮ್ಮವರನ್ನೇ ಉದ್ಧಾರ ಮಾಡುವ. ನಮಗಾಗಿ ದುಡಿಯುವ ಎಂಬ ಧ್ಯೇಯ ನಮ್ಮ ಸ್ಥಳೀಯ ಬಿಲ್ಲವ ಸಂಘಗಳಿಂದ ಹಿಡಿದು ಕೇಂದ್ರ, ರಾಷ್ಟ್ರೀಯ, ಅಖಿಲ ಭಾರತ, ಜಿಲ್ಲೆ, ರಾಜ್ಯ ಇತ್ಯಾದಿ ಹಣೆಪಟ್ಟಿ ಕಟ್ಟಿಕೊಂಡ ನಮ್ಮ ಸಂಘಟನೆಗಳಲ್ಲಿ ಇರಲಿ ಎಂಬುದು ನಮ್ಮೆಲ್ಲರ ಆಶಯ.

 

ಬರಹ: ದೀಪಕ್ ಕೆ ಬೀರ


Related Posts

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »