TOP STORIES:

FOLLOW US

ಪದ್ಮರಾಜ್ ಸರ್ ಬಗ್ಗೆ ನನಗೂ ಒಂದಿಷ್ಟು ಹೇಳಲೇಬೇಕು


ಪದ್ಮರಾಜ್ ಸರ್ ಬಗ್ಗೆ ನನಗೂ ಒಂದಿಷ್ಟು ಹೇಳಲೇಬೇಕು……

ಪದ್ಮರಾಜ್ ಸರ್ ರವರು ಕೇವಲ ವ್ಯಕ್ತಿಯಲ್ಲ, ಅವರೊಂದು ಶಕ್ತಿ.ಅವರ ಜೊತೆ ಮಾತನಾಡುವಾಗ ಆ ಶಕ್ತಿಯ ಪ್ರಭಾವ ನಮ್ಮ ಮೇಲೆ ಪ್ರವಹಿಸುತ್ತದೆ ಹಾಗೂ ವಿಶೇಷವಾದ ಭಕ್ತಿಭಾವ,ಗೌರವ ಮೂಡುತ್ತದೆ.ಅಷ್ಟೊಂದು ಆಕರ್ಷಣೀಯ ವ್ಯಕ್ತಿತ್ವ. ಅವರಾಡುವ ಮಾತುಗಳು ಕೇವಲ ಬಾಯಿಂದ ಹೊರಡುವುದಲ್ಲ,ಹ್ರದಯದಿಂದ ಮೂಡುವಂತಹದ್ದು.ಮಾತಿನಲ್ಲಿ ಎಲ್ಲಿಯೂ ಕಲ್ಮಷವಿಲ್ಲ.ನೇರ ನಡೆನುಡಿಯ,ಪ್ರೀತಿ ತುಂಬಿದ, ಸೌಜನ್ಯಯುತ ಮಾತುಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.ಯಾರ ಜೊತೆ ಮಾತನಾಡುವಾಗಲೂ ಮುಖದಲ್ಲಿ ಮೂಡುವ ಮಂದಹಾಸ ಮುಗುಳ್ನಗೆಯಲ್ಲಿ ಪ್ರಾಮಾಣಿಕತೆ, ಪ್ರೀತಿ ತುಂಬಿರುತ್ತದೆ.ನೊಂದವರು,ಶೋಷಿತರು ಯಾರೇ ಅವರನ್ನು ಸಂಪರ್ಕಿಸಲಿ,ಕೂಡಲೇ ಸ್ಪಂದಿಸುವ ಮಾನವೀಯ ಹ್ರದಯವಿದೆ.ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಯಾಗಿ,ಅವರ ತತ್ವಾದರ್ಶದಂತೆ ಸರ್ವಧರ್ಮೀಯರನ್ನು ಸಮಾನರಂತೆ ಕಾಣುವ ಹ್ರದಯ ವೈಶಾಲ್ಯತೆ. ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ದೊರಕಿಸಿ ಕೊಡುವ ಧೀಮಂತ ನಾಯಕ.*
_ಎಳೆಯ ಪ್ರಾಯದಲ್ಲೇ ಎಲ್ಲಾ ಸದ್ಗುಣಗಳನ್ನು ಮೈಗೂಡಿಸಿ, ನಾರಾಯಣ ಗುರುಗಳು ತಮ್ಮ ದಿವ್ಯಹಸ್ತದಿಂದ ಪ್ರತಿಷ್ಠಾಪಿಸಿದ ಕರ್ನಾಟಕ ರಾಜ್ಯದ ಏಕೈಕ ಕ್ಷೇತ್ರವಾದ ಕುದ್ರೋಳಿ ದೇವಾಲಯದಲ್ಲಿ ದೀರ್ಘಕಾಲದಿಂದ ಕೋಶಾಧಿಕಾರಿಯಾಗಿ ಆಡಳಿತ ಮಂಡಳಿಯೊಳಗಡೆ ಹಳೇ ಬೇರು,ಹೊಸ ಚಿಗುರು ಎಂಬಂತೆ ಎಲ್ಲಾ ಹಿರಿಯರ ಗೌರವಕ್ಕೆ ಪಾತ್ರರಾಗಿ,ಬಡವರ ಕಣ್ಮಣಿ – ನಡೆದಾಡುವ ದೇವರೆಂದೇ ಖ್ಯಾತರಾದ ಶ್ರೀ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಬೆಳಗಿದ ಬಿಲ್ಲವ ಸಮಾಜದ ಕಣ್ಮಣಿಯಾಗಿ,ಯುವಕರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾದ ಪದ್ಮರಾಜ್ ರವರಿಗೆ ನಿಜಕ್ಕೂ ಬಿಲ್ಲವ ಸಮಾಜವನ್ನು ಮುನ್ನಡೆಸುವ ಶಕ್ತಿ ಇದೆ.ಈಗಾಗಲೇ ಅದೆಷ್ಟೋ ಬಿಲ್ಲವ ಸಮಾಜದ ಸಂಘಟನೆಯೊಳಗೆ ಭಿನ್ನಮತ ತಲೆದೋರಿದಾಗ ಎಲ್ಲರೂ ಹುಡುಕಿಕೊಂಡು ಬರುವುದು ಪದ್ಮರಾಜ್ ರವರ ಬಳಿಗೆ. ಎರಡೂ ಕಡೆಯವರನ್ನು ಕುಳ್ಳಿರಿಸಿ,ತನ್ನ ಮಾತಿನ ಶಕ್ತಿಯಿಂದ ಐಕ್ಯತೆ ಸಾಧಿಸಿದ ಸಮನ್ವಯಕಾರ. ರಾಜಕೀಯದಲ್ಲಿ ಎಲ್ಲಿಯೂ ಗುರುತಿಸಿಕೊಳ್ಳದೆ,ಎಲ್ಲರ ಪ್ರೀತಿ ವಿಶ್ವಾಸಗಳಿಸಿದ ಪದ್ಮರಾಜ್ ರವರನ್ನು ಅಜಾತಶತ್ರು ಎಂದರೆ ತಪ್ಪಾಗಲಾರದು.ದೇಶದಲ್ಲೇ ಗಮನ ಸೆಳೆದಿರುವ ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತಾಧಿಗಳ ನೇರ ಸಂಪರ್ಕ ಹಾಗೂ ಅವರನ್ನು ಹೆಸರು ಕರೆದು ಪ್ರೀತಿಯಿಂದ ಮಾತನಾಡಿಸುವ ಗುಣದ ಮೂಲಕ ಅವರ ನೆನಪು ಶಕ್ತಿಯ ಅಗಾಧತೆಯನ್ನು ಎತ್ತಿ ತೋರಿಸುತ್ತದೆ._
*ಇಂತಹ ಅಪಾರ ಪಾಂಡಿತ್ಯ ಹೊಂದಿದ ಪದ್ಮರಾಜ್ ರವರು ಗೋಕರ್ಣಾ ದೇವರ ದಯೆಯಿಂದ,ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರೇರಣೆಯಿಂದ ಕೊರೋನಾ ಸಂಕಷ್ಟದ ಕಾಲದಲ್ಲೂ ಯಾವ ಕ್ಷೇತ್ರದಿಂದಲೂ ಸಾಧ್ಯವಾಗದ ಕೆಲಸವನ್ನು ಪದ್ಮರಾಜ್ ರವರು ಸ್ವತಃ ಮುಂದಡಿಯಿಟ್ಟು, ಅದೆಷ್ಟೋ ಮಾನವೀಯ ಹ್ರದಯಗಳನ್ನು ಒಟ್ಟು ಸೇರಿಸಿ, ಸುಮಾರು 350 ಕ್ವಿಂಟಾಲ್ ಅಕ್ಕಿಯನ್ನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಾವಿರಾರು ಕುಟುಂಬಗಳಿಗೆ ನೇರವಾಗಿ ಮನೆ ಬಾಗಿಲಿಗೆ ತಲುಪಿಸಿದ್ದು ನಿಜಕ್ಕೂ ಅತ್ಯದ್ಭುತವಾಗಿದೆ. ಕೋರೋನಾ ನೆಪದಲ್ಲಿ ದಸರಾ ಉತ್ಸವವನ್ನು ಮಾಡಲು ಜಿಲ್ಲಾಡಳಿತ ನಿರಾಕರಿಸಿದಾಗ, ಜನರ ಪರವಾಗಿ ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿ ಜಿಲ್ಲಾಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಹುಬ್ಬೇರಿಸುವಂತೆ ಮಾಡಿದ ನಿಜವಾದ ಜನನಾಯಕ.ಇವರ ಮುತುವರ್ಜಿಯಿಂದ ಹಾಗೂ ಜನಾರ್ದನ ಪೂಜಾರಿಯವರ ಮಾರ್ಗದರ್ಶನದಿಂದಲೇ ಈ ಬಾರಿ ನಮ್ಮ ದಸರಾ ನಮ್ಮ ಸುರಕ್ಷೆ ಎಂಬ ಘೋಷವಾಕ್ಯದೊಂದಿಗೆ ಯಶಸ್ವಿ ದಸರಾ ನಡೆದಿರುವುದನ್ನು ನಾವೆಂದೂ ಮರೆಯಬಾರದು.ದಸರಾ ಉತ್ಸವದಲ್ಲಿ ಹುಲಿವೇಷಕ್ಕೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದಾಗ ಹುಲಿ ವೇಷ ದಸರಾ ಹಬ್ಬದ ವಿಶೇಷತೆ,ಹಿಂದೂ ಧಾರ್ಮಿಕತೆಯ ಪ್ರತೀಕವೆಂದು ಸಾರಿ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿ ಹುಲಿವೇಷಕ್ಕೆ ಅವಕಾಶ ದೊರಕಿಸಿ ಕೊಟ್ಟ ನಿಜವಾದ ಧಾರ್ಮಿಕ ನಾಯಕರು. ಈ ಬಾರಿಯ ದಸರಾ ಉತ್ಸವವನ್ನು ಸವಾಲಾಗಿ ಸ್ವೀಕರಿಸಿ, ಸಂಘಸಂಸ್ಥೆಗಳನ್ನು ಹಾಗೂ ಹಿರಿಯ ಕಿರಿಯರೆನ್ನದೆ ಎಲ್ಲರನ್ನೂ ಪ್ರೀತಿಯಿಂದ ತನ್ನತ್ತ ಸೆಳೆದು,ಸ್ವಯಂಸ್ಪೂರ್ತಿಯಿಂದ ಸ್ವಯಂಸೇವಕರಾಗಿ ದುಡಿಯುವಂತೆ ಪ್ರೇರೇಪಿಸಿ, ಜಗದ್ವಿಖ್ಯಾತ ಮಂಗಳೂರು ದಸರಾವನ್ನು ಮತ್ತೊಮ್ಮೆ ಯಶಸ್ವಿಗೊಳಿಸಿ ವಿಶ್ವಭೂಪಟದಲ್ಲಿ ಅಜರಾಮರವಾಗಿ ಬೆಳಗುವಂತೆ ಮಾಡಿದ ಕಾರ್ಯದಲ್ಲಿ ಪದ್ಮರಾಜ್ ರವರು ನಿಜಕ್ಕೂ ಕೇಂದ್ರಬಿಂದು.*

ನಿತೀಶ್ ಪೂಜಾರಿ ಮರೋಳಿ
ಮಂಗಳೂರು


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »