TOP STORIES:

ಫ್ರೆಂಡ್ಸ್ ಬಲ್ಲಾಳ್ ಬಾಗ್ “ಬಿರುವೆರ್ ಕುಡ್ಲದ ” ಉದಯಣ್ಣ ಓರ್ವ ವ್ಯಕ್ತಿಯಲ್ಲ ಸಮಾಜದ ಶಕ್ತಿ..


ಒಂದೇ ಜಾತಿ ಒಂದೇ ಮತ ಒಂದೇ ದೇವರುಎಂಬ ನೀತಿ ಸಂದೇಶವನ್ನು ವಿಶ್ವಕ್ಕೆ ಸಾರಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶವನ್ನು ಪಾಲಿಸಿಕೊಂಡು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಕರುಣೆ ಮಮತೆಯ ದೀವಿಗೆಯಾಗಿ ಸಮಾಜಸೇವೆಯನ್ನೇ ತನ್ನ ಉಸಿರಾಗಿಸಿಕೊಂಡು ಪರರ ನೋವು ನಲಿವುಗಳಿಗೆ ಧ್ವನಿಯಾಗಿ ಕಷ್ಟ ಎಂದು ಕಂಬನಿ ಮಿಡಿಯುವ ಮನಗಳಿಗೆಅವರ ಕಣ್ಣೀರೋರೆಸಿ ಮನ  ಮನೆಯಲ್ಲಿ ನಂದಾದೀಪ ಬೆಳಗಿಸಿದವೇ ನಮ್ಮ ಪ್ರೀತಿಯ ಬಿರುವೆರ್ ಕುಡ್ಲ ಸಂಘಟನೆಯ ರೂವಾರಿಉದಯ ಪೂಜಾರಿ ಬಲ್ಲಾಳ್ ಬಾಗ್.

ಆಡಡೆಲೆ ಮಾಡುವವನು ರೂಢಿಯೊಳಗುತ್ತಮಎನ್ನುವ ಸರ್ವಜ್ಞನ ಸಾರದಂತೆ ಯಾವುದೇ ಸದ್ದುಗದ್ದಲವಿಲ್ಲದೆ ಸಮಾಜದಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟವರು. ಮಾತ್ರವಲ್ಲದೆ ಸಮಾಜ ಒದಗಿಸಿರೋ ಅವಕಾಶವನ್ನು ಸಮಾಜದ ಸೇವೆಗಾಗಿಮೀಸಲಾಗಿಟ್ಟವರು.

ಬಿರುವೆರ್ ಕುಡ್ಲ ಸ್ಥಾಪನೆಯಾಗಿ 7ವರ್ಷ ಕಳೆದಿಲ್ಲ ಆದರೆ ಕಡಿಮೆ ಅವಧಿಯಲ್ಲಿ ಮಹತ್ತರವಾದ ಸೇವೆಯ ಮುಖೇನ ಸುಮಾರು20 ಘಟಕಗಳನ್ನು ಸ್ಥಾಪಿಸಿ  ಕೋಟ್ಯಾತರ ರೂಪಾಯಿ ಮೊತ್ತದ  ಸಹಾಯಹಸ್ತವನ್ನು ಸಮಾಜದ ಬಡ ಜನರಿಗಾಗಿ ನೀಡಿರುವುದುಮಾತ್ರವಲ್ಲದೆ ಕೊರೊನಾ ಮಹಾಮಾರಿಯಿಂದ ಜನತೆ ತತ್ತರಿಸುತ್ತಿರುವ ಸಂಧರ್ಭದಲ್ಲಿ ಲಕ್ಷಾಂತರ ರೂಪಾಯಿ ಮೊತ್ತದ ಆಂಬುಲೆನ್ಸ್ನ್ನು ಜನರ ಸೇವೆಗಾಗಿ ನೀಡಿದ್ದು ಒಂದು ದಾಖಲೆಯೇ ಸರಿ. ಇಂತಹ ಸಮಾಜಮುಖಿ ಚಿಂತನೆಯ ಫ್ರೆಂಡ್ಸ್ ಬಲ್ಲಾಳ್ ಬಾಗ್ಬಿರುವೆರ್ ಕುಡ್ಲ ಸಂಘಟನೆಯ  ಕೀರ್ತಿ,  ಶ್ರೇಯಸ್ಸನ್ನು ಕಂಡು ಕೆಲವರಿಗೆ ಸಹಿಸಲಾಗಲಿಲ್ಲವೋ ಏನೋ, ಅದಕ್ಕಾಗಿಯೇ ಸಂಚುರೂಪಿಸಿ ಸಂಘಟನೆಯ ಹೆಸರಿಗೆ ಕಪ್ಪು ಚುಕ್ಕಿ ತರುವ ಪ್ರಯತ್ನ ಮಾಡುತ್ತಿರುವುದು ಅವರ ಕೀಳು ಮನಸ್ಥಿತಿಯನ್ನು ಎತ್ತಿತೋರಿಸುತ್ತದೆ.

ನಿಟ್ಟಿನಲ್ಲಿ ಶರಣ್ ಪಂಪ್ ವೆಲ್ ಅವರು ಬಿರುವೆರ್ ಕುಡ್ಲದ ಸಾಧನೆ  ಸೇವೆ ಕಣ್ಣಿಗೆ ಬಿದ್ದರೂ ಅರಗಿಸಿಕೊಳ್ಳಲಾಗಲ್ಲಿವೇನೋಅನಿಸುತ್ತಿದೆ. ಶರಣ್ ಅಣ್ಣ ನಿಮ್ಮ ಹಿಂದೂಪರ ಹೋರಾಟದ ಬಗ್ಗೆ ನಮಗೆ ತುಂಬಾ ಅಭಿಮಾನ ಹೆಮ್ಮೆ ಇತ್ತು.. ಗೌರವ ಇತ್ತು.. ಆದರೆಈಗ ನೀವು ಬಿರುವೆರ್ ಕುಡ್ಲ ಸಂಘಟನೆಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಪ್ರತಿಭಟಿಸುದನ್ನು ಕಂಡು ಅದೆಲ್ಲವನ್ನೂಕಳೆದಕೊಂಡಿರಿ..

ಒಂದು ಜಾತಿ ಧರ್ಮ, ಸಮುದಾಯವನ್ನು ಮೀರಿ ಬೆಳೆದು ನಿಂತು ಎಲ್ಲಾ ಸಮಾಜದ ಪ್ರೀತಿಗೆ ಪಾತ್ರರಾದ ಬಿರುವೆರ್ ಕುಡ್ಲಸಂಘಟನೆಯ ಬಗ್ಗೆ ಅನವಶ್ಯಕವಾಗಿ ಆರೋಪ ಮಾಡಿದ ಹಿನ್ನಲೆಯಲ್ಲಿ  ಅದರ ಹಿಂದಿರುವ ಕಾಣದ ಕೈಗಳ ಕೈವಾಡಖಂಡಿತವಾಗಿಯೂ ಒಂದಲ್ಲ ಒಂದು ದಿನ ಜನರ ಮುಂದೆ ಬರುತ್ತದೆ.

ಪಂಪ್ ವೆಲ್ ರವರೆ ಒಮ್ಮೆ ಯೋಚಿಸಿ ಶುಭ ಮಂಗಳ ಕಾರ್ಯದ ಸಮಯದಲ್ಲಿಉದಯಣ್ಣ ಸ್ಥಾನದಲ್ಲಿ ನೀವಿರುತ್ತಿದ್ದರೆಹೇಗಾಗುತ್ತಿತ್ತು!!!!!!!! ಎಂದು. ಕನಿಷ್ಠ ಮಾನವೀಯತೆಯನ್ನೂ ಮರೆತು ನೀವು ರೀತಿ ಮಾಡುತ್ತಿರುವುದು ಬಿರುವೆರ್ ಕುಡ್ಲಸಂಘಟನೆ ಮಾತ್ರವಲ್ಲ ಲಕ್ಷಾಂತರ ತುಳು ಕನ್ನಡಿಗ ಉದಯಣ್ಣನ ಅಭಿಮಾನಿ ಬಳಗಕ್ಕೆ ಅತೀವ ನೋವಾಗಿದೆ.

ಶರಣ್ ರವರೆ,…. ಹಣ ಅಧಿಕಾರ ಅಂತಸ್ತು ಯಾವುದೂ ಶಾಶ್ವತವಲ್ಲ ಆದರೇ ಎಲ್ಲಕ್ಕಿಂತ ಮಿಗಿಲಾದುದು ಮಾನವೀಯತೆ, ಮಾನವೀಯ ಮೌಲ್ಯಗಳುಅದನ್ನು ತುಳಿದು ನಡೆಯಬೇಡಿ….

ನಮ್ಮಂತಹ ನೂರಾರು ಜನರಿಗೆ ನಿಮ್ಮ ಮೇಲೆ ಗೌರವ ಅಭಿಮಾನ ವಿತ್ತು ಆದರೆ ಅರ್ಹತೆಯನ್ನು ನಿಮ್ಮ ಕೀಳುಮಟ್ಟದರಾಜಕಾರಣದಿಂದ ಮಣ್ಣುಪಾಲು ಮಾಡಿದಿರಿ.. ಎಲ್ಲದಕ್ಕೂ ಭಗವಂತ ಹಾಗೂ ತುಳುನಾಡಿನ ಸತ್ಯಗಳು ನಿಮಗೆ ಒಳ್ಳೆಯ ಬುದ್ದಿನೀಡಲಿ ಎಂದು ಆಶಿಸುತ್ತೇವೆ.

ಉದಯಣ್ಣ ಸತ್ಯಕ್ಕೆ ಜಯವಿದೆ.

ನಿಮ್ಮೊಂದಿಗೆ ನಾವಿದ್ದೇವೆ

ಪ್ರೀತಿ ಅಭಿಮಾನ ಗೌರವ ಅನವರತ….

ಜೈ ಬಿರುವೆರ್ ಕುಡ್ಲ ಜೈ ಉದಯಣ್ಣ..

✒️ಪ್ರಭಾಕರ ಬೆಳುವಾಯಿ

(ನಮನ ಫ್ರೆಂಡ್ಸ್ ಮುಂಬಯಿ)


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »