TOP STORIES:

FOLLOW US

ಬಿಲ್ಲವ ಭವನ ಮುಂಬಯಿಯಲ್ಲಿ ದಿವಂಗತ ಜಯ. ಸಿ ಸುವರ್ಣರ ಮೂರ್ತಿ (ಪ್ರತಿಮೆ) ಪ್ರತಿಷ್ಠಾಪನೆ ಬಗ್ಗೆ ಬಿರುವೆರ್ ಕುಡ್ಲ ಸಂಘಟನೆ ಖಂಡನೆ.


ಜೈ ಗುರುದೇವ

ಒಂದೇ ಜಾತಿ.. ಒಂದೇ ಧರ್ಮ.. ಒಂದೇ ದೇವರು..

ಎನ್ನುವ ನೀತಿ ಸಂದೇಶವನ್ನು ಜಗತ್ತಿಗೆ ಸಾರಿದ ಜಗದ್ಗುರು ಶ್ರೀ ನಾರಾಯಣ ಗುರುಗಳ ಚರಣ ಸ್ಪರ್ಶಿಸುತ್ತಾ

ಬಿಲ್ಲವ ಭವನ ಮುಂಬಯಿಯಲ್ಲಿ ದಿವಂಗತ ಜಯ. ಸಿ ಸುವರ್ಣರ ಮೂರ್ತಿ (ಪ್ರತಿಮೆ) ಪ್ರತಿಷ್ಠಾಪನೆ ಬಗ್ಗೆ ಬಿರುವೆರ್ ಕುಡ್ಲಸಂಘಟನೆ ಖಂಡನೆ.

ಬಿಲ್ಲವರ ಎಸೋಸಿಯೇಷನ್ ಮುಂಬಯಿ ಬಿಲ್ಲವ ಭವನದಲ್ಲಿ ಬಿಲ್ಲವ ಜನನಾಯಕ ದಿ. ಜಯ ಸುವರ್ಣರ ಪ್ರತಿಮೆಯನ್ನುಪ್ರತಿಷ್ಠಾಪನೆ ಮಾಡುವ ಬಗ್ಗೆ ಅವರ ಅನುಯಾಯಿಗಳ ಒಂದು ವರ್ಗ ಪಟ್ಟು ಹಿಡಿದು ಬಿಲ್ಲವರ ಎಸೋಸಿಯೇಷಷನ್ ಮುಂಬಯಿಸಂಸ್ಥೆಗೆ ಒತ್ತಾಯಿಸುತ್ತಿದೆ ಎಂಬ ವಿಷಯ ಸಾಮಾಜಿಕ ಜಾಲತಾಣದ ಮುಖೇನ ನಮ್ಮ ಸಂಘಟನೆಯ ಗಮನಕ್ಕೆ ಬಂದಿದೆ. ಇದನ್ನುಖಂಡಿಸಿ ಎಚ್ಚರಿಕೆಯ ಸೂಚನೆಯನ್ನು ಮೂಲಕ ನೀಡುತ್ತಿದ್ದೇವೆ.

ಬಿಲ್ಲವರ ಎಸೋಸಿಯೇಷನ್ ಮುಂಬಯಿ ಸಂಸ್ಥೆಯ ಹುಟ್ಟು ಬೆಳವಣಿಗೆಗೆ ನೂರಾರು ಜನನಾಯಕರ ನಿಸ್ವಾರ್ಥ ಸೇವೆ ಕೊಡುಗೆತ್ಯಾಗ ಅಪಾರ ಅವಿಸ್ಮರಣೀಯ ಎಂಬುದು ಅರಿವಿರಲಿ.

ದಿ. ಜಯ ಸಿ. ಸುವರ್ಣರು ನಮ್ಮ ಸಮಾಜದ ಧೀಮಂತ ನಾಯಕ ಮಾತ್ರವಲ್ಲದೆ ಬಿಲ್ಲವ ಸಮಾಜಕ್ಕೆ ಅವರ ಸೇವೆ ತ್ಯಾಗ ಕೊಡುಗೆಅಪಾರ.. ದೆಸೆಯಲ್ಲಿ ನಮಗೆಲ್ಲರಿಗೂ ಅಪಾರ ಹೆಮ್ಮೆ ಅಭಿಮಾನ ಗೌರವವಿದೆ.

ಆದರೇ

ಬಿಲ್ಲವ ಭವನ ಯಾರೊಬ್ಬರ ಖಾಸಗಿ ಆಸ್ತಿ.. ಸ್ವತ್ತು.. ಸಂಪತ್ತು ಅಲ್ಲವೇ ಅಲ್ಲ. ಅದು ಸರ್ವ ಬಿಲ್ಲವ ಸಮಾಜ ಬಾಂಧವರ ಸಂಪತ್ತುಆಸ್ತಿ..

ವ್ಯಕ್ತಿ ಪೂಜೆ.. ಮೂರ್ತಿ ಪೂಜೆಯಿಂದ ಸದಾ ದೂರ ಸರಿದು ಸರ್ವ ಸಮಾಜದ ಏಳಿಗೆಗೆ ಹೋರಾಡಿ ಜಗದ್ಗುರುವಾಗಿ ಕೀರ್ತಿಶೇಷರಾದ ಶ್ರೀ ನಾರಾಯಣ ಗುರುಗಳೇ ತಮ್ಮ ಮೂರ್ತಿಯನ್ನಿಟ್ಟು ಪೂಜಿಸಿ ಅಂದಿಲ್ಲ. ಆದರೂ ನಾವಿಂದು ಸಮಾಜದ ಸರ್ವಜನರ ಒಮ್ಮತದಿಂದ ಅವರ ಮೂರ್ತಿಯನ್ನಿಟ್ಟು ಎಲ್ಲೆಡೆ  ಅವರನ್ನು ಪೂಜಿಸಿ ಆರಾಧಿಸಿಕೊಂಡು ಗೌರವಿಸುತ್ತಾ  ಬಂದಿರುತ್ತೇವೆಅದು ಬಿಟ್ಟು ಅವರ ಪ್ರತಿಮೆಯ ಸಮ್ಮುಖದಲ್ಲಿ ಸಾಮಾನ್ಯ ಜನನಾಯಕನೊಬ್ಬನ ಪ್ರತಿಮೆ ಪ್ರತಿಷ್ಠಾಪಿಸಿ  ಪೂಜಿಸುವುದು ಎಷ್ಟುಸರಿ?????

ನಿಮಗೆ ಜಯ ಸುವರ್ಣರ ನಾಯಕತ್ವ ವ್ಯಕ್ತಿತ್ವ ಸ್ಫೂರ್ತಿ ಪ್ರೇರಣೆ ನೀಡಿದ್ದರೆ ನೀವೂ ಅವರ ಪ್ರತಿಮೆಯನ್ನು ನಿಮ್ಮ ಮನೆಯಲ್ಲಿಟ್ಟುಪೂಜಿಸಿ ಆರಾಧಿಸಿ..ಇದರಿಂದ ಯಾರಿಗೂ ಯಾವುದೇ ಅಭ್ಯಂತರವಿಲ್ಲ. ಆದರೇ ಸಮಾಜ ಭಾಂಧವರ ಬಿಲ್ಲವ ಭವನದಲ್ಲಿ ಖಂಡಿತಾಅಲ್ಲಾ.

ಪ್ರಸ್ತುತ ಬಡತನದಿ ಬಳಲುವ ಸೂರಿಲ್ಲದೆ ಒಂದು ಹೊತ್ತಿನ ತುತ್ತಿಗೂ ತತ್ತರಿಸಿ ಕಣ್ಣೀರಿಡುವ ಸಾವಿರಾರು ಬಡ ಪರಿವಾರಕುಟುಂಬಗಳು ನಮ್ಮ ಬಿಲ್ಲವ ಸಮಾಜದಲ್ಲಿದ್ದಾರೆ….

ಅವರ ನೋವಿಗೆ ಕಷ್ಟಕ್ಕೆ ಸ್ಪಂದಿಸಿ ಜನಸೇವೆ ಮಾಡಿ.. ಅದು ಬಿಟ್ಟು ಮೂರ್ತಿ ಪ್ರತಿಮೆ ಎಂದು ಕಿಚ್ಚಾಡಬೇಡಿ..

ಜಯ ಸುವರ್ಣರ ಸೇವೆ ಸಮಾಜ ಗುರುತಿಸಿದರೆ ಒಮ್ಮತದ ನಿರ್ಧಾರದಿಂದ ಅವರ ಪ್ರತಿಮೆ ಪ್ರತಿಷ್ಠಾಪನೆ ಎಲ್ಲಿಯೂ ಆಗಬಹುದು.

ಅದು ಬಿಟ್ಟು ಹಣ ಅಂತಸ್ತಿನ ಪ್ರಭಾವದಿಂದ ತಮ್ಮ ಮನೋ ಇಚ್ಚಿತದಂತೆ ಬಿಲ್ಲವ ಸಮಾಜದ ಆಸ್ತಿ ಸಮುದಾಯಭವನದಲ್ಲಿಯಲ್ಲಿಯಂತೂ ಆಗಲು ನಮ್ಮ ಸಂಘಟನೆ ಖಂಡಿಸಿ ವಿರೋಧಿಸುತ್ತಿದೆ.

ನಮ್ಮ ಸಂಘಟನೆಗೆ ಯಾರೊಂದಿಗೂ ವೈಯುಕ್ತಿಕ ದ್ವೇಷವಿಲ್ಲ..

ಜಯ ಸುವರ್ಣರಂತಹ ನೂರಾರು ನಾಯಕರು ಬೆಳೆದು ಬರಲಿಬೆಳೆದು ನಿಲ್ಲಲು ಯುವ ನಾಯಕರಿಗೆ ಅವಕಾಶ ಮಾಡಿ ಕೊಡಿಅದು ಬಿಟ್ಟು ಅವರನ್ನೇ ಮಹಾತ್ಮರನ್ನಾಗಿ ಪೂಜಿಸುವುದನ್ನು ಈಗಲಾದರೂ ಬಿಟ್ಟು ಬಿಡಿ.

ನಿಟ್ಟಿನಲ್ಲಿ ಬಿಲ್ಲವ ಭವನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಖಂಡಿಸುವಲ್ಲಿ ಬಿರುವೆರ್ ಕುಡ್ಲ ಸಂಘಟನೆಯೊಂದಿಗೆ ತವರೂರ ಇನ್ನೂಕೆಲವು ಸಮಾಜಪರ ಇನ್ನೂ ಹಲವು ಸಂಘ ಸಂಸ್ಥೆ ಸಂಘಟನೆಯು ನಮ್ಮೊಂದಿಗಿದ್ದು ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ

ಯಾವುದೇ ಪ್ರತಿಭಟನೆ ಹೋರಾಟಕ್ಕೂ ಸಿದ್ದರಿದ್ದೇವೆ ಎಂಬ ಸಾಂಕೇತಿಕ ಎಚ್ಚರಿಕೆಯ ಸೂಚನೆಯನ್ನು ಪ್ರತಿಮೆ ಪ್ರತಿಷ್ಠಾಪನೆಯಬೇಡಿಕೆಯಿತ್ತ ಚೇಲಾಗಳಿಗೆ ನೀಡುತ್ತಿದ್ದೇವೆ.

ಯಾವುದೇ ಆತುರದ ನಿರ್ಧಾರ ನಿರ್ಣಯ ಕೈಗೊಂಡು ಮುಂದೆ ಆಗುವ ಅನಾಹುತ ಮುಜುಗರಕ್ಕೆತಾವು ಒಳಗಾಗದಿರಿನೆನಪಿಡಿ.

ವ್ಯಕ್ತಿ ಪೂಜೆ.. ಮೂರ್ತಿ ಪೂಜೆಯನ್ನು ಬದಿಗಿರಿಸಿ ಸಮಾಜದ ಕಣ್ಣೀರೋರೆಸುವ ಕಾರ್ಯಕ್ಕೆ ಪಣ ತೊಡೋಣ..

ಬಿಲ್ಲವ ಭವನದಲ್ಲಿ ಜಗದ್ಗುರು ಶ್ರೀ ನಾರಾಯಣ ಗುರುಗಳ ಪ್ರತಿಮೆ ಒಂದೇ ಸಾಕು. ಅನ್ಯತಾ ಯಾವ ಜನನಾಯಕನ ಪ್ರತಿಮೆಪ್ರತಿಷ್ಠಾಪನೆಯ ಅಗತ್ಯವೇ ಇಲ್ಲ

ಜೈ ಗುರುದೇವ.. ಜೈ ಬಿಲ್ಲವ

ಸದಾ ನಿಮ್ಮೊಂದಿಗೆ,

ಉದಯ ಪೂಜಾರಿ ಬಳ್ಳಾಲ್ ಬಾಗ್

(ಬಿರುವೆರ್ ಕುಡ್ಲ )

ಜೈ ಬಿರುವೆರ್ ಕುಡ್ಲ


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »