TOP STORIES:

ಬಿಲ್ಲವರಿಂದಲೇ ಬಿಲ್ಲವರಿಗಾಗಿಯೇ ಬಿಲ್ಲವರಿಗೋಸ್ಕರವೇ ಸಿದ್ದವಾಗಿದೆ ಬಿಲ್ಲವಾಸ್ ವಾರಿಯರ್ಸ್..


ಬಿಲ್ಲವ ಸಮಾಜ ಬಂಧುಗಳೇ,

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬಿಲ್ಲವರು ಸಾಧನೆ ಮಾಡಿರದ ಕ್ಷೇತ್ರಗಳೇ ಇಲ್ಲ ಎಂದರೆ ತಪ್ಪಗಲಾರದು. ನಮ್ಮ ಸಮಾಜ ಬಂಧುಗಳ ಸಾಧನೆ, ಸಂಭ್ರಮಗಳು ಕೇವಲ ತುಳುನಾಡಷ್ಟೇ ಅಲ್ಲದೇ ಜಗತ್ತಿನ ಉದ್ದಗಲಕ್ಕೂ ಹಬ್ಬಿ ನಿಂತಿರುವಂಥದ್ದು. ಆದರೆ ಕೆಲ ಸಾಧಕರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದ ಕಾರಣ ಅಂಥವರನ್ನು ಗುರುತಿಸುವ ಜವಾಬ್ದಾರಿ ನಮ್ಮದು. ಸಾಧಕರ ಜೊತೆಗೆ ಸಂಕಷ್ಟದಲ್ಲಿರೋ ಸಮಾಜದ ಬಂಧುಗಳ ಬದುಕಿನ ಮೇಲೂ ಬೆಳಕು ಚೆಲ್ಲಬೇಕಾದ ಮತ್ತೊಂದು ಕಾರ್ಯವೂ ಅಗಬೇಕಿದೆ. ಕಷ್ಟದಲ್ಲಿರೋ ಬಿಲ್ಲವ ಬಂಧುಗಳಿಗೆ ನೆರವಿನ ಹಸ್ತ ಚಾಚುವ ಸಮಾಜಮುಖಿ ಉದ್ದೇಶವೂ ಇದೆ. ಅಂಥವರನ್ನು ಗುರುತಿಸಿ ಸಮಾಜದ ಮುಂದಿಟ್ಟರೆ ಅವರ ಬದುಕು ಹೊಸ ಬೆಳಕು ಕಾಣಬಹುದು ಅನ್ನೋ ನಂಬಿಕೆ ನಮ್ಮದು. ಹೀಗೆ ಬಿಲ್ಲವ ಸಮಾಜದ ಸಮಗ್ರ ವಸ್ತು-ವಿಚಾರಗಳ ಅನಾವರಣಕ್ಕೆ ನಾವು ಹೊಸ ವೇದಿಕೆಯೊಂದನ್ನು ಕಲ್ಪಿಸುತ್ತಿದ್ದೇವೆ. ..’ ಸದ್ಯದ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ನಮ್ಮವರನ್ನು ತಲುಪಲು ಮತ್ತು ನಮ್ಮವರ ಸಾಧನೆಯ ಜೊತೆಗೆ ಸಮಗ್ರ ಮಾಹಿತಿಗಳನ್ನು ಅನಾವರಣಗೊಳಿಸಲು ಬಿಲ್ಲವಾಸ್ ವಾರಿಯರ್ಸ್ ತಂಡ ನಿಮ್ಮೆದುರು ಬರುತ್ತಿದೆ. ಫೇಸ್ ಬುಕ್, ಇನ್ಸ್ಟಾಗ್ರಾಂ, ವೆಬ್ ಸೈಟ್ ಮೂಲಕ ನಮ್ಮ ಸಮಾಜ ಬಂಧುಗಳನ್ನು ತಲುಪುವ ಉದ್ದೇಶ ನಮ್ಮದು. ನಮ್ಮವರ ಸಾಧನೆ, ಅಭಿವೃದ್ಧಿ, ಸಂಕಷ್ಟ, ನೆರವು, ಗೆಲುವು, ಜವಾಬ್ದಾರಿ, ಪ್ರತಿಭೆ…ಹೀಗೆ ಎಲ್ಲವಕ್ಕೂ ಒಂದೇ ವೇದಿಕೆಯಾಗಲಿದೆ ‘ಬಿಲ್ಲವಾಸ್ ವಾರಿಯರ್ಸ್‌’ …ನಮ್ಮೊಳಗಿನ ಯಾವುದೇ ಕ್ಷೇತ್ರದ ವಾರಿಯರ್ಸ್‌ಗಳನ್ನೂ ಸಮಾಜದ ಮುಂದೆ ಪರಿಚಯಿಸುವ ಜೊತೆಗೆ ಅಧ್ಯಯನ, ಕಾರ್ಯ, ಕಲ್ಪನೆಗಳನ್ನು ಒಂದುಗೂಡಿಸಿ ಸಾಮಾಜಿಕ ತಾಣಗಳ ಮೂಲಕ ಸಮಾಜದ ಮುಂದಿಟ್ಟು ಫಲಿತಾಂಶ ಪಡೆಯುವ ಹಂಬಲ ನಮ್ಮದು..ಬಿಲ್ಲವ ಬಂಧುಗಳೇ ಕೈ ಜೋಡಿಸಿ, ನೀವೂ ಬರೆಯಿರಿ, ಮಾಹಿತಿ ಹಂಚಿಕೊಳ್ಳಿ…ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ,ಲೈಕ್ ಮಾಡಿ…

ಧನ್ಯವಾದಗಳು
ಟೀಂ ಬಿಲ್ಲವಾಸ್ ವಾರಿಯರ್ಸ್‌

ಫೇಸ್ ಬುಕ್, ಇನ್ಸ್ಟಾಗ್ರಾಂ, ವೆಬ್ ಸೈಟ್ ಲಿಂಕ್

Follow us on Instagram

Username: billavaswarriors
https://www.instagram.com/billavaswarriors

Follow Facebook Page:
https://m.facebook.com/billavawarriors/

www.billavasworriors.com


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »