TOP STORIES:

FOLLOW US

‘ಮೈಕ್ರೋ ಆರ್ಟ್’ ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್…!!!


‘ಮೈಕ್ರೋ ಆರ್ಟ್’ ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್…!!!

ಒಬ್ಬ ವ್ಯಕ್ತಿ ಅನೇಕ ಸವಾಲುಗಳನ್ನ ಎದುರಿಸಿ ಮುನ್ನಡೆಯುತ್ತಿದ್ದಾನೆ ಎಂದಾದರೆ ಆತ ಸಾಧನೆಯ ಹಾದಿಯಲ್ಲಿ ಹೊರಟಿದ್ದಾನೆ ಎಂದರ್ಥ. ಅಂದಹಾಗೆ ಅಂತಹದೇ ಸಾಧನೆಯ ಹಾದಿಯಲ್ಲಿ ಶಿಖರವನ್ನೇರಿದ ಓರ್ವ ವ್ಯಕ್ತಿ ಇದೀಗ ಜನಪ್ರೀಯತೆಯನ್ನ ಪಡೆದಿದ್ದಾನೆ. ಹೌದು ನಾವು ಹೇಳ ಹೊರಟಿರುವುದು ಉಡುಪಿಯ ಕಾಡೂರು ಮೂಲದ ದಯಾನಂದ ಮತ್ತು ಸುನೀತಾ ದಂಪತಿಯ ಪುತ್ರ ಸಂಜಯ್ ಅವ್ರ ಬಗ್ಗೆ. ಸಂಜಯ್ ಓದಿರೋದು ಡಿಪ್ಲೋಮ ಇನ್ ಸಯನ್ಸ್. ಹುಟ್ಟಿನಿಂದಲೇ ಒಂದಲ್ಲ ಒಂದು ಕ್ಷೇತ್ರದಲ್ಲಿ ಏನಾದ್ರು ಒಂದು ಸಾಧನೆಯನ್ನ ಮಾಡಲೇಬೇಕು ಅನ್ನೋ ಛಲವನ್ನ ಹೊಂದಿದ್ದ ಸಂಜಯ್ ಗೆ ‘ಮೈಕ್ರೋ ಆರ್ಟ್’ ತನ್ನಲ್ಲಿನ ಕಲೆಯನ್ನ ಪ್ರದರ್ಶಿಸಿತು. ಜೊತೆಗೆ ಜೀವನದಲ್ಲಿ ಸಾಧನೆಯನ್ನ ಮಾಡುವ ಛಲವನ್ನ ತೋರಿಸಿಕೊಟ್ಟಿತು. ಯಸ್ ಮೈಕ್ರೋ ಆರ್ಟ್ ಅರ್ಥಾತ್ ಸೂಕ್ಷ್ಮ ಕಲಾ ಕ್ಷೇತ್ರ. ಇದೇನು ಅಷ್ಟು ಸುಲಭದ ಕಲೆಯಲ್ಲ. ಅದಕ್ಕೆ ಅದರದೇ ರೀತಿ ಸೂಕ್ಷ್ಮ ಮತ್ತು ಕಠಿಣ ಪರಿಶ್ರಮಬೇಕು. ಚೂರು ಎಡವಿದರೂ ಕಲಾಕೃತಿ ಹಾಗೂ ಮಾಡಿದ ಪರಿಶ್ರಮ ವ್ಯರ್ಥವಾಗಿಬಿಡುತ್ತೆ. ಅಷ್ಟು ಸೂಕ್ಷ್ಮ ಕಲೆ ಇದು.

ತಾತ ಕೊರಗಪ್ಪ ಮತ್ತು ಅಜ್ಜಿ ಸುಂದರಮ್ಮರ ಮೂಲಕ ಮೈಕ್ರೋ ಆರ್ಟ್ ಮಾಡಲು ಸ್ಫೂರ್ತಿ ಪಡೆದ ಇವರಿಗೆ ಆರಂಭದಲ್ಲಿ ಬೆಂಬಲಕ್ಕೆ ನಿಂತವರು ಕೇವಲ ಕುಟುಂಬದವರು ಅರ್ಥಾತ್ ಸಹೋದರರು ಮತ್ತು ಪಾಲಕರು ಹಾಗೂ ಕೆಲವು ಗೆಳೆಯರು ಮಾತ್ರ. ಹಾಗಾಗಿ ಸಂಜಯ್ ಇವತ್ತಿಗೂ ಅವರಿಗೆ ಅಭಾರಿಯಾಗಿ ನನ್ನ ಸಾಧನೆಯ ಪರಿಶ್ರಮಕ್ಕೆ ಹೆಜ್ಜೆ ಹಾಕಿದವರು ಎನ್ನುತ್ತಾರೆ.

ಅಂದಹಾಗೆ ಸಂಜಯ್ ಇದುವರೆಗೂ 2 ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, 1 ವರ್ಲ್ಡ್ ಕಿಂಗ್ಸ್, ಮತ್ತು 2 ಗಿನ್ನಿಸ್ ದಾಖಲೆ ಮಾಡಿದ್ದಾರೆ. ಇವರ ಸಾಧನೆ ಗುರುತಿಸಿ ಇದುವರೆಗೂ ರಾಜ್ಯ ಮತ್ತು ತಾಲೂಕು ಮಟ್ಟದಲ್ಲಿ ತಲಾ ಎರಡು, ಜಿಲ್ಲಾ ಮಟ್ಟದಲ್ಲಿ 1 ಸನ್ಮಾನ (ಸಂಘಟನೆಗಳ ಮೂಲಕ ), ಸ್ಥಳೀಯ ಆಡಳಿತ (ಗ್ರಾಮ ಪಂಚಾಯತ್ )ವತಿಯಿಂದ 5 ಸನ್ಮಾನ ಸೇರಿದಂತೆ 35ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನ ಪಡೆದಿದ್ದಾರೆ. ಜೊತೆಗೆ ಮಂಗಳೂರಿಯನ್.ಕಾಮ್ ಮತ್ತು ಡೈಜಿವರ್ಲ್ಡ್ ಚಾನೆಲ್ ನ ವೆಬ್ಸೈಟ್ ನಲ್ಲಿ ಇವರ ಸಾಧನೆ ಕುರಿತು ಲೇಖನ ಪ್ರಕಟವಾಗಿತ್ತು.

ಇಷ್ಟೇ ಅಲ್ಲ ಇವರು ಇದುವರೆಗೂ 25 ಮಣ್ಣಿನ ಕಲಾಕೃತಿ, 15-20 ಸೋಪ್ ಆರ್ಟ್, 100ಕ್ಕೂ ಹೆಚ್ಚು ಚಾಕ್ ಆರ್ಟ್, 25-30 ಪೆನ್ಸಿಲ್ ಆರ್ಟ್, 30 ಪೆನ್ಸಿಲ್ ಗಣೇಶ ಮೂರ್ತಿ ಮಾಡಿದ್ದಾರೆ. ಇವರೊಬ್ಬ ಬಹುಮುಖ ಪ್ರತಿಭೆ. ‘ಚಿನ್ಮಯ’ ಹೆಸರಿನ ಒಂದು ಕವನ ಸಂಕಲನವನ್ನು ಕೂಡಾ ಬರೆದಿದ್ದು ಹಲವಾರು ಪೇಂಟಿಂಗ್ಸ್ ಕೂಡಾ ಮಾಡಿದ್ದಾರೆ.

ಇನ್ನೇನು ಸಂಜಯ್ 2 ಗಿನ್ನಿಸ್ ದಾಖಲೆ ಬರೆದಿದ್ದಾರೆ ಅಂದ ಮಾತ್ರಕ್ಕೆ ಇವರ ಆರಂಭಿಕ ಜೀವನ ಹೂವಿನ ಹಾಸಿಗೆಯಾಗಿತ್ತು ಅಂತ ಭಾವಿಸಿದ್ದರೆ ಅದು ಮೂರ್ಖತನ. ಯಾಕಂದ್ರೆ ಅವರ ಬದುಕಿನುದ್ದಕ್ಕೂ ಕಷ್ಟಗಳನ್ನೇ ಅನುಭವಿಸಿ ಮೇಲೆ ಬಂದವರು. ಹಾಗಾಗಿ ಇಂತಹ ಕಲಾವಿದರಿಗೆ ಇನ್ನಷ್ಟು ಬೆಂಬಲ ದೊರೆಯಲಿ ಮತ್ತು ಅದರಿಂದ ಇನ್ನಷ್ಟು ಸಾಧನೆ ಮಾಡಲು ಶಕ್ತಿ ಸ್ಫೂರ್ತಿ ದೊರೆಯಲಿ ಎನ್ನುವ ಆಶಯ ನಮ್ಮದು.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »