TOP STORIES:

ಮೊಗೆದಷ್ಟು ಮುಗಿಯದ.. ಬಗೆದಷ್ಟು ಅಳಕ್ಕಿರುವ ಪರ್ಪಲೆಯ ರಹಸ್ಯ.


ಮೊಗೆದಷ್ಟು ಮುಗಿಯದ.. ಬಗೆದಷ್ಟು ಅಳಕ್ಕಿರುವ ಪರ್ಪಲೆಯ ರಹಸ್ಯ.


15ನೇ ಶತಮಾನದ ಒಂದು ಸಂಜೆ ಪಾಂಡ್ಯ ನಗರಿ ಕಾರ್ಕಳ ತನ್ನ ದಿನದ ವಹಿವಾಟನ್ನು ಮುಗಿಸಿ ಪಡುಗಡಲ ಸೆರಗಲ್ಲಿ ಮರೆಯಾಗುತ್ತಿದ್ದ ನೇಸರ ನನ್ನೇ ದಿಟ್ಟಿಸುತ್ತಿತ್ತು. ಅಷ್ಟರಲ್ಲೇ ಕೇಳಿಬಂತು ಎಲ್ಲೆಲ್ಲೂ ಹಾಹಾಕಾರ.. ಹೋ ಎಂದು ಬೆಚ್ಚಿ ಬೆದರಿ ಓಡುವ ಜನಮಂದೆಯ ಬೊಬ್ಬೆ ಗಲಾಟೆ. ನೋಡುವುದೇನು?
ಆಗಸದೆತ್ತರಕ್ಕೆ ಧೂಳೆಬ್ಬಿಸುತ್ತ ಹೂಂಕರಿಸುತ್ತಾ ಘೀಳಿಡುತ್ತಾ ಪರ್ವತ ಗಾತ್ರದ ಅರಸನ ಪಟ್ಟದ ಆನೆ ಇಡೀ ಪಟ್ಟಣವನ್ನೇ ಪುಡಿ ಗಟ್ಟುವ ಹುಮ್ಮಸ್ಸಿನಲ್ಲಿ ಮುನ್ನುಗ್ಗಿ ಬರುತ್ತಿತ್ತು. ಅರಮನೆಯ ಲಾಯದಲ್ಲಿ ಕಾಲಿಗೆ ಕಟ್ಟಿದ ಕಬ್ಬಿಣದ ಸಂಕೋಲೆಯನ್ನು ತುಂಡರಿಸಿಕೊಂಡು ಮದ ಏರಿದ ಆನೆ ಪೇಟೆಯ ಕಡೆಗೆ ನುಗ್ಗಿತ್ತು. ಒಂದಷ್ಟು ಕಟ್ಟಾಳುಗಳು ಆನೆಯನ್ನು ಕಟ್ಟಿ ಹಾಕುವ ಭರದಲ್ಲಿ ಮುನ್ನುಗ್ಗಿದರು. ಅವರಲ್ಲಿ ಕೆಲವರು ಸೊಂಡಿಲಿಗೆ ಸಿಕ್ಕಿ ಕಬ್ಬಿನ ಜಲ್ಲೆಯಂತೆ ನೆಲಕ್ಕೆ ಒಗೆಯಲ್ಪಟ್ಟರು. ಇನ್ನು ಕೆಲವರು ಆನೆಯ ಕಾಲಡಿಗೆ ಸಿಕ್ಕಿ ಕುಂಬಳಕಾಯಿಯಂತೆ ತಲೆ ಒಡೆಸಿಕೊಂಡರು. ಈ ರುದ್ರ ಭಯಾನಕ ದೃಶ್ಯ ಕಂಡ ನಗರದ ಜನರು ಆನೆಯನ್ನು ಹಿಡಿಯುವ ಯತ್ನವನ್ನು ಬಿಟ್ಟು ತಮ್ಮ ಮನೆ ಮಠ ಸ್ವತ್ತು ಸಾಮಗ್ರಿಗಳನ್ನು ಉಳಿಸುವ ಧಾವಂತಕ್ಕೆ ಬಿದ್ದರು. ತೆಂಗಿನ ಸೋಗೆಗಳನ್ನು ಸುಟ್ಟು ಆನೆಯನ್ನು ತಮ್ಮ ಬೀದಿಗೆ ಬರದಂತೆ ತಡೆದರು. ದೊಂದಿ ರಾಳಗಳನ್ನು ಹಿಡಿದು ಆನೆಯನ್ನು ಕಾಡಿಗಟ್ಟುವ ಪ್ರಯತ್ನದಲ್ಲಿ ತೊಡಗಿದರು. ಬೆಂಕಿ ಕಂಡು ಬೆದರಿದ ಆನೆ ಪರ್ಪಲೆಯ ತಪ್ಪಲಿಗೆ ಬಂತು. ಅಲ್ಲಿಂದ ಮುಂದೆ ಪರ್ಪಲೆ ಗುಡ್ಡೆ ಹತ್ತಿ ಕಾಣೆಯಾಯಿತು.
ಪಟ್ಟದ ಆನೆಗೆ ಮದ ಏರಿದ ಚಿಂತೆಯಲ್ಲಿ ಅರಸನಿದ್ದರೆ, ಮದ ಏರಿದ ಆನೆ ಪೇಟೆ ಬಿಟ್ಟು ಪರ್ಪಲೆಯ ಗುಡ್ಡ ಹತ್ತಿದ ನೆಮ್ಮದಿಯಲ್ಲಿ ಜನರು ನಿದ್ದೆ ಮಾಡಿದರು.
ಕಾಡಿನಲ್ಲಿ ಅಲೆದು ಮರಗಳ ಮೇಲೆ ಸಿಟ್ಟು ತೋರಿಸಿ ಸುಸ್ತಾದ ಆನೆ ಮರುದಿನ ಮದ ಇಳಿದು ಬಾಯರಿ ನೀರನ್ನು ಅರಸಿಕೊಂಡು ಮೆಲ್ಲನೆ ಪರ್ಪಲೆ ಗುಡ್ಡದ ಪೂರ್ವಕ್ಕೆ ಇಳಿದು ಆನೆಕೆರೆಯ ಕಡೆಗೆ ಹೆಜ್ಜೆ ಹಾಕಿತು. ನಗರದ ಜನರು ಮತ್ತೆ ಸೇರಿದರು. ಮಾವುತನಿಗೆ ಸುದ್ದಿ ಮುಟ್ಟಿಸಿದರು. ಆನೆ ಸಹಜ ಸ್ಥಿತಿಗೆ ಬಂದಿತ್ತು. ಮಾವುತನನ್ನು ಹಿಂಬಾಲಿಸುತ್ತ ಏನೂ ಆಗಿಲ್ಲವೆಂಬಂತೆ ಅರಮನೆಯ ಕಡೆಗೆ ಹೆಜ್ಜೆ ಹಾಕಿತು.
ಅರಮನೆಯ ಬಳಿ ಬಂದು ಗಜ ಲಾಯದ ಗೂಟದ ಸಂಕೋಲೆಯನ್ನು ಆನೆಯ ಕಾಲಿಗೆ ಕಟ್ಟಬೇಕು ಎಂದು ಮಾವುತ ಬಗ್ಗಿದಾಗ ನೋಡುವುದೇನು?
ಆನೆಯ ಕಾಲಿನಲ್ಲಿದ್ದ ಕಬ್ಬಿಣದ ತುಂಡು ಸರಪಳಿ ಬಂಗಾರವಾಗಿದೆ!
ಅಷ್ಟಕ್ಕೂ ಆನೆಯ ಕಾಲಿನಲ್ಲಿದ್ದ ಕಬ್ಬಿಣದ ಸರಪಳಿ ಬಂಗಾರ ವಾಗಿದ್ದು ಹೇಗೆ ?
ಕಬ್ಬಿಣವನ್ನು ಬಂಗಾರ ಮಾಡಿದ ಆ ರಸಬಾವಿ ಅಥವಾ ಸ್ಪರ್ಶಮಣಿ ಪರ್ಪಲೆ ಗುಡ್ಡದಲ್ಲಿ ಎಲ್ಲಿದೆ ?
ಆ ಇಡಿ ರಾತ್ರಿ ಆನೆ ಅಲೆದಾಡಿದ ಪ್ರದೇಶದಲ್ಲಿ ಕಾಲ ಕಬ್ಬಿಣದ ಸರಪಳಿಗೆ ಸ್ಪರ್ಶಿಸಿದ ಆ ಚಮತ್ಕಾರಿ ವಸ್ತು ಯಾವುದು?
ಇತಿಹಾಸದ ಅನೇಕ ಪುಟಗಳಲ್ಲಿ ಬಂದು ಹೋಗುವ ರಸವಿದ್ಯೆಯನ್ನು ಕರಗತ ಮಾಡಿಕೊಂಡ ಯೋಗಿಗಳು ಈ ಗುಡ್ಡದ ಮೇಲಿದ್ದರೇ?
5 ಶತಮಾನಗಳಿಂದ ಜನರ ಬಾಯಿಂದ ಬಾಯಿಗೆ ಹರಡಿ ಕೊಂಡು ಬಂದ ಈ ದಂತ ಕಥೆಯ ಹಿಂದಿನ ರೋಚಕ ಸತ್ಯವೇನು?
ಮೊನ್ನೆ ಅಷ್ಟಮಂಗಲ ಪ್ರಶ್ನೆ ಇರಿಸಿದ ಪಯ್ಯನ್ನೂರಿನ ನಾರಾಯಣ ಪೊದುವಾಲರು.. ಇದ್ ಭೂಮಿ ಸ್ವರ್ಣ ಮಯಿ…ಈ ಭೂಮಿಕ್ಕ್ ಸ್ವರ್ಣ ಸೃಷ್ಟಿಕ್ಕಿನ ಶಕ್ತಿ ಇಂಡ್ ಎಂದಾಗ ನಮ್ಮೆಲ್ಲರ ಮೈ ಮುಳ್ಳೆದ್ದಿದ್ದು ಇದೇ ಕಾರಣಕ್ಕೆ..
ಆವತ್ತಿನ ಅಷ್ಟಮಂಗಲ ಪ್ರಶ್ನೆಯಲ್ಲಿ ಇಂತಹ ಅನೇಕ ಮುಖ್ಯ ಬಿಂದುಗಳು ದೈವಜ್ಞರ ಗಮನಕ್ಕೆ ಬಂದರೂ ಅದನ್ನು ವಿಸ್ತರಿಸುವ ಕೆಲಸ ನಡೆದಿರಲಿಲ್ಲ
ಅರಸನ ಆನೆಯ ಸರಪಳಿ ಬಂಗಾರವಾದ ಕಥೆ ನನಗೆ ತಿಳಿದಿದ್ದು ಅಷ್ಟಮಂಗಲ ಪ್ರಶ್ನೆ ಮುಗಿದು ಒಂದು ವಾರದ ಬಳಿಕ. ಯಾರೋ ಒಬ್ಬರು ಹಿರಿಯ ಜೈನ ಇಂದ್ರರ ಮೂಲಕ
ಕಾಲದ ಚಿಪ್ಪಿನೊಳಗೆ ಭದ್ರವಾಗಿ ಕುಳಿತಿರುವ ಅನೇಕ ಸಂಗತಿಗಳು ಆ ಶಕ್ತಿಗಳ ಅಪೇಕ್ಷೆಗನುಗುಣವಾಗಿ ಮತ್ತೆ ಮುನ್ನೆಲೆಗೆ ಬರುತ್ತಿದೆ.
ಪರ್ಪಲೆಯ ಸತ್ಯ ಸಾನಿಧ್ಯ ನಿತ್ಯ ನಿರಂತರ ಬೆಳಗುತ್ತಿರಲಿ
ಜೈ ಮಹಾಕಾಲ್

credits: beauty of tulunadu


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »