TOP STORIES:

FOLLOW US

ಮೊಗೆದಷ್ಟು ಮುಗಿಯದ.. ಬಗೆದಷ್ಟು ಅಳಕ್ಕಿರುವ ಪರ್ಪಲೆಯ ರಹಸ್ಯ.


ಮೊಗೆದಷ್ಟು ಮುಗಿಯದ.. ಬಗೆದಷ್ಟು ಅಳಕ್ಕಿರುವ ಪರ್ಪಲೆಯ ರಹಸ್ಯ.


15ನೇ ಶತಮಾನದ ಒಂದು ಸಂಜೆ ಪಾಂಡ್ಯ ನಗರಿ ಕಾರ್ಕಳ ತನ್ನ ದಿನದ ವಹಿವಾಟನ್ನು ಮುಗಿಸಿ ಪಡುಗಡಲ ಸೆರಗಲ್ಲಿ ಮರೆಯಾಗುತ್ತಿದ್ದ ನೇಸರ ನನ್ನೇ ದಿಟ್ಟಿಸುತ್ತಿತ್ತು. ಅಷ್ಟರಲ್ಲೇ ಕೇಳಿಬಂತು ಎಲ್ಲೆಲ್ಲೂ ಹಾಹಾಕಾರ.. ಹೋ ಎಂದು ಬೆಚ್ಚಿ ಬೆದರಿ ಓಡುವ ಜನಮಂದೆಯ ಬೊಬ್ಬೆ ಗಲಾಟೆ. ನೋಡುವುದೇನು?
ಆಗಸದೆತ್ತರಕ್ಕೆ ಧೂಳೆಬ್ಬಿಸುತ್ತ ಹೂಂಕರಿಸುತ್ತಾ ಘೀಳಿಡುತ್ತಾ ಪರ್ವತ ಗಾತ್ರದ ಅರಸನ ಪಟ್ಟದ ಆನೆ ಇಡೀ ಪಟ್ಟಣವನ್ನೇ ಪುಡಿ ಗಟ್ಟುವ ಹುಮ್ಮಸ್ಸಿನಲ್ಲಿ ಮುನ್ನುಗ್ಗಿ ಬರುತ್ತಿತ್ತು. ಅರಮನೆಯ ಲಾಯದಲ್ಲಿ ಕಾಲಿಗೆ ಕಟ್ಟಿದ ಕಬ್ಬಿಣದ ಸಂಕೋಲೆಯನ್ನು ತುಂಡರಿಸಿಕೊಂಡು ಮದ ಏರಿದ ಆನೆ ಪೇಟೆಯ ಕಡೆಗೆ ನುಗ್ಗಿತ್ತು. ಒಂದಷ್ಟು ಕಟ್ಟಾಳುಗಳು ಆನೆಯನ್ನು ಕಟ್ಟಿ ಹಾಕುವ ಭರದಲ್ಲಿ ಮುನ್ನುಗ್ಗಿದರು. ಅವರಲ್ಲಿ ಕೆಲವರು ಸೊಂಡಿಲಿಗೆ ಸಿಕ್ಕಿ ಕಬ್ಬಿನ ಜಲ್ಲೆಯಂತೆ ನೆಲಕ್ಕೆ ಒಗೆಯಲ್ಪಟ್ಟರು. ಇನ್ನು ಕೆಲವರು ಆನೆಯ ಕಾಲಡಿಗೆ ಸಿಕ್ಕಿ ಕುಂಬಳಕಾಯಿಯಂತೆ ತಲೆ ಒಡೆಸಿಕೊಂಡರು. ಈ ರುದ್ರ ಭಯಾನಕ ದೃಶ್ಯ ಕಂಡ ನಗರದ ಜನರು ಆನೆಯನ್ನು ಹಿಡಿಯುವ ಯತ್ನವನ್ನು ಬಿಟ್ಟು ತಮ್ಮ ಮನೆ ಮಠ ಸ್ವತ್ತು ಸಾಮಗ್ರಿಗಳನ್ನು ಉಳಿಸುವ ಧಾವಂತಕ್ಕೆ ಬಿದ್ದರು. ತೆಂಗಿನ ಸೋಗೆಗಳನ್ನು ಸುಟ್ಟು ಆನೆಯನ್ನು ತಮ್ಮ ಬೀದಿಗೆ ಬರದಂತೆ ತಡೆದರು. ದೊಂದಿ ರಾಳಗಳನ್ನು ಹಿಡಿದು ಆನೆಯನ್ನು ಕಾಡಿಗಟ್ಟುವ ಪ್ರಯತ್ನದಲ್ಲಿ ತೊಡಗಿದರು. ಬೆಂಕಿ ಕಂಡು ಬೆದರಿದ ಆನೆ ಪರ್ಪಲೆಯ ತಪ್ಪಲಿಗೆ ಬಂತು. ಅಲ್ಲಿಂದ ಮುಂದೆ ಪರ್ಪಲೆ ಗುಡ್ಡೆ ಹತ್ತಿ ಕಾಣೆಯಾಯಿತು.
ಪಟ್ಟದ ಆನೆಗೆ ಮದ ಏರಿದ ಚಿಂತೆಯಲ್ಲಿ ಅರಸನಿದ್ದರೆ, ಮದ ಏರಿದ ಆನೆ ಪೇಟೆ ಬಿಟ್ಟು ಪರ್ಪಲೆಯ ಗುಡ್ಡ ಹತ್ತಿದ ನೆಮ್ಮದಿಯಲ್ಲಿ ಜನರು ನಿದ್ದೆ ಮಾಡಿದರು.
ಕಾಡಿನಲ್ಲಿ ಅಲೆದು ಮರಗಳ ಮೇಲೆ ಸಿಟ್ಟು ತೋರಿಸಿ ಸುಸ್ತಾದ ಆನೆ ಮರುದಿನ ಮದ ಇಳಿದು ಬಾಯರಿ ನೀರನ್ನು ಅರಸಿಕೊಂಡು ಮೆಲ್ಲನೆ ಪರ್ಪಲೆ ಗುಡ್ಡದ ಪೂರ್ವಕ್ಕೆ ಇಳಿದು ಆನೆಕೆರೆಯ ಕಡೆಗೆ ಹೆಜ್ಜೆ ಹಾಕಿತು. ನಗರದ ಜನರು ಮತ್ತೆ ಸೇರಿದರು. ಮಾವುತನಿಗೆ ಸುದ್ದಿ ಮುಟ್ಟಿಸಿದರು. ಆನೆ ಸಹಜ ಸ್ಥಿತಿಗೆ ಬಂದಿತ್ತು. ಮಾವುತನನ್ನು ಹಿಂಬಾಲಿಸುತ್ತ ಏನೂ ಆಗಿಲ್ಲವೆಂಬಂತೆ ಅರಮನೆಯ ಕಡೆಗೆ ಹೆಜ್ಜೆ ಹಾಕಿತು.
ಅರಮನೆಯ ಬಳಿ ಬಂದು ಗಜ ಲಾಯದ ಗೂಟದ ಸಂಕೋಲೆಯನ್ನು ಆನೆಯ ಕಾಲಿಗೆ ಕಟ್ಟಬೇಕು ಎಂದು ಮಾವುತ ಬಗ್ಗಿದಾಗ ನೋಡುವುದೇನು?
ಆನೆಯ ಕಾಲಿನಲ್ಲಿದ್ದ ಕಬ್ಬಿಣದ ತುಂಡು ಸರಪಳಿ ಬಂಗಾರವಾಗಿದೆ!
ಅಷ್ಟಕ್ಕೂ ಆನೆಯ ಕಾಲಿನಲ್ಲಿದ್ದ ಕಬ್ಬಿಣದ ಸರಪಳಿ ಬಂಗಾರ ವಾಗಿದ್ದು ಹೇಗೆ ?
ಕಬ್ಬಿಣವನ್ನು ಬಂಗಾರ ಮಾಡಿದ ಆ ರಸಬಾವಿ ಅಥವಾ ಸ್ಪರ್ಶಮಣಿ ಪರ್ಪಲೆ ಗುಡ್ಡದಲ್ಲಿ ಎಲ್ಲಿದೆ ?
ಆ ಇಡಿ ರಾತ್ರಿ ಆನೆ ಅಲೆದಾಡಿದ ಪ್ರದೇಶದಲ್ಲಿ ಕಾಲ ಕಬ್ಬಿಣದ ಸರಪಳಿಗೆ ಸ್ಪರ್ಶಿಸಿದ ಆ ಚಮತ್ಕಾರಿ ವಸ್ತು ಯಾವುದು?
ಇತಿಹಾಸದ ಅನೇಕ ಪುಟಗಳಲ್ಲಿ ಬಂದು ಹೋಗುವ ರಸವಿದ್ಯೆಯನ್ನು ಕರಗತ ಮಾಡಿಕೊಂಡ ಯೋಗಿಗಳು ಈ ಗುಡ್ಡದ ಮೇಲಿದ್ದರೇ?
5 ಶತಮಾನಗಳಿಂದ ಜನರ ಬಾಯಿಂದ ಬಾಯಿಗೆ ಹರಡಿ ಕೊಂಡು ಬಂದ ಈ ದಂತ ಕಥೆಯ ಹಿಂದಿನ ರೋಚಕ ಸತ್ಯವೇನು?
ಮೊನ್ನೆ ಅಷ್ಟಮಂಗಲ ಪ್ರಶ್ನೆ ಇರಿಸಿದ ಪಯ್ಯನ್ನೂರಿನ ನಾರಾಯಣ ಪೊದುವಾಲರು.. ಇದ್ ಭೂಮಿ ಸ್ವರ್ಣ ಮಯಿ…ಈ ಭೂಮಿಕ್ಕ್ ಸ್ವರ್ಣ ಸೃಷ್ಟಿಕ್ಕಿನ ಶಕ್ತಿ ಇಂಡ್ ಎಂದಾಗ ನಮ್ಮೆಲ್ಲರ ಮೈ ಮುಳ್ಳೆದ್ದಿದ್ದು ಇದೇ ಕಾರಣಕ್ಕೆ..
ಆವತ್ತಿನ ಅಷ್ಟಮಂಗಲ ಪ್ರಶ್ನೆಯಲ್ಲಿ ಇಂತಹ ಅನೇಕ ಮುಖ್ಯ ಬಿಂದುಗಳು ದೈವಜ್ಞರ ಗಮನಕ್ಕೆ ಬಂದರೂ ಅದನ್ನು ವಿಸ್ತರಿಸುವ ಕೆಲಸ ನಡೆದಿರಲಿಲ್ಲ
ಅರಸನ ಆನೆಯ ಸರಪಳಿ ಬಂಗಾರವಾದ ಕಥೆ ನನಗೆ ತಿಳಿದಿದ್ದು ಅಷ್ಟಮಂಗಲ ಪ್ರಶ್ನೆ ಮುಗಿದು ಒಂದು ವಾರದ ಬಳಿಕ. ಯಾರೋ ಒಬ್ಬರು ಹಿರಿಯ ಜೈನ ಇಂದ್ರರ ಮೂಲಕ
ಕಾಲದ ಚಿಪ್ಪಿನೊಳಗೆ ಭದ್ರವಾಗಿ ಕುಳಿತಿರುವ ಅನೇಕ ಸಂಗತಿಗಳು ಆ ಶಕ್ತಿಗಳ ಅಪೇಕ್ಷೆಗನುಗುಣವಾಗಿ ಮತ್ತೆ ಮುನ್ನೆಲೆಗೆ ಬರುತ್ತಿದೆ.
ಪರ್ಪಲೆಯ ಸತ್ಯ ಸಾನಿಧ್ಯ ನಿತ್ಯ ನಿರಂತರ ಬೆಳಗುತ್ತಿರಲಿ
ಜೈ ಮಹಾಕಾಲ್

credits: beauty of tulunadu


Share:

More Posts

Category

Send Us A Message

Related Posts

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share       ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »