TOP STORIES:

FOLLOW US

ರೂಬಿಕ್ಸ್ ಕ್ಯೂಬ್ ಮಾಯಾಗಾರ – ಮಹೇಶ್ ಮಲ್ಪೆ


ರೂಬಿಕ್ಸ್ ಕ್ಯೂಬ್ ಮಾಯಾಗಾರಮಹೇಶ್ ಮಲ್ಪೆ

ತನ್ನೊಳಗೆ ಹುದುಗಿರುವ ಕಲೆಯನ್ನು ಗುರುತಿಸಿ, ದೊರೆತ ಅವಕಾಶಗಳನ್ನು, ವೇದಿಕೆಗಳನ್ನು ಉಪಯೋಗಿಸಿಕೊಂಡು ಸಾಧನೆಯಹಾದಿಯಲಿ ಮಿಂಚುತ್ತಿರುವ ಬಹುಮುಖ ಪ್ರತಿಭೆಯ ಯುವ ಕಲಾವಿದ ಮಹೇಶ್ ಮಲ್ಪೆ.

    ಉಡುಪಿ ಜಿಲ್ಲೆಯ ಮಲ್ಪೆಯವರಾದ ಇವರು ಶೇಖರ್ ಪೂಜಾರಿ ಹಾಗು ಶ್ರೀಮತಿ ಮೀನಾಕ್ಷಿ ದಂಪತಿಗಳ ಮಗ. ಪ್ರಸ್ತುತಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಡಿಪಾರ್ಟ್ಮೆಂಟ್ನಲ್ಲಿ ಮಾರ್ಕೆಟಿಂಗ್ಹಾಗು ಫೀಲ್ಡ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಆದಿ ಉಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆಯಲ್ಲಿ ಪಡೆದರು. ಶ್ಯಾಮಿಲಿ ಕಾಲೇಜಿನಲ್ಲಿ ಪದವಿ ಪೂರ್ವಶಿಕ್ಷಣ ಹಾಗು ಉಪೇಂದ್ರ ಪೈ ಮೆಮೊರಿಯಲ್  ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು.

ನಟನೆಯಲ್ಲಿ ಅಪಾರ ಆಸಕ್ತಿಯುಳ್ಳ ಇವರು ರಂಗಭೂಮಿ (ರಿ.) ಉಡುಪಿ ಕಿರ್ದಾರ್ ಥಿಯೆಟರ್ ಗ್ರೂಪ್, ವಿ ಆರ್ ಫ್ರೆಂಡ್ಸ್ ಸಾಸ್ತಾನತಂಡದ ಅನೇಕ ನಾಟಕಗಳಲ್ಲಿ ಭಾಗವಹಿಸಿದ್ದಾರೆ. ನಾಟಕ ನಿರ್ದೇಶಕರು ಆಗಿದ್ದು ನಾಟಕ ತರಬೇತಿಯನ್ನು ನೀಡುತ್ತಿದ್ದಾರೆ. ರಾಜ್ಯಹಾಗು ರಾಷ್ಟ್ರ ಮಟ್ಟದ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದಾರೆ. ಕವನ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ ಬಹುಮಾನ ಪಡೆದಿದ್ದಾರೆ.

ಎಲ್ಲದಕ್ಕೂ ಒಂದು ಆರಂಭ ಇದ್ದೇ ಇರುತ್ತದೆ ಎಂಬಂತೆ ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು  ಪೆನ್, ಪೆನ್ಸಿಲ್ಬಳಕೆಯಿಲ್ಲದೆ ಉಪ್ಪು ಮತ್ತು ಬಣ್ಣಗಳನ್ನು ಬಳಸಿ ಮಾಡಿದ ಭಾರತ ನಕ್ಷೆಗೆ ದೊರೆತ ಪ್ರೋತ್ಸಾಹ ಮುಂದೆ ಇವರು ಇನ್ನಿತರ ಬೇರೆ ಬೇರೆವಸ್ತುಗಳನ್ನು ಉಪಯೋಗಿಸಿಕೊಂಡು ಚಿತ್ರ ನಿರ್ಮಾಣ ಮಾಡುವ  ಯೋಜನೆಗೆ ದಾರಿಯಾಯಿತು ಎನ್ನುತ್ತಾರೆ. ಪದವಿ ಪೂರ್ವಶಿಕ್ಷಣದ ಅವಧಿಯಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸಲು ಮೊದಲು ಪ್ರಯತ್ನಿಸಲು ಆರಂಭಿಸಿದ್ದು ಈಗ ಕೇವಲ 35 ರಿಂದ 45 ಸೆಕೆಂಡ್ಗಳಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸುತ್ತಾರೆ. ಫೋಟೋ ಶಾಪ್ ಕೆಲಸ ಮಾಡುತ್ತಿರುವಾಗ ಫೋಟೋದಲ್ಲಿರುವ ಸಣ್ಣ ಸಣ್ಣ ಫಿಕ್ಸೆಲ್ಗಳನ್ನು ಗಮನಿಸಿದ ಇವರು ಫಿಕ್ಸೆಲ್  ಆರ್ಟ್ ನಲ್ಲಿ ವಿಶೇಷ ಆಸಕ್ತಿ ಬೆಳೆಸಿದರು. ಈಗ ಫಿಕ್ಸೆಲ್ ಕಾರ್ನರ್ ಸಂಸ್ಥೆಯರೂವಾರಿಯಾಗಿದ್ದಾರೆ. ತನ್ನ ಕಲ್ಪನೆಯೊಳಗಿನ ಚಿತ್ರಗಳಿಗೆ ರೂಬಿಕ್ಸ್ , ಪುಸ್ತಕ, ಗ್ರಾಫ್ ಶೀಟ್ ಹೀಗೆ ಇನ್ನಿತರ ವಸ್ತುಗಳನ್ನು ಬಳಸಿಚಿತ್ರಿಸಿ ಅದಕ್ಕೆ ಕಲಾತ್ಮಕವಾಗಿ ಜೀವ ನೀಡುವ ವಿಶೇಷ ಕಲೆ ಇವರದ್ದಾಗಿದೆ. ಕೋಟಿ ಚೆನ್ನಯ ಹಾಗು ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಪ್ರತಿರೂಪವನ್ನು  1,500 ರೂಬಿಕ್ಸ್ ಕ್ಯೂಬ್ ನಿಂದ ರಚಿಸಿ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ. ನೆಸ್ಟ್ಲೆ ಕಂಪೆನಿಆಯೋಜಿಸಿದ್ದ ರಾಷ್ಟ್ರಮಟ್ಟದ 2020 ಮಂಚ್ ಸ್ಟಾರ್ ಪ್ರತಿಭಾ ಪ್ರದರ್ಶನದಲ್ಲಿ 1,300 ರೂಬಿಕ್ಸ್ ಕ್ಯೂಬ್ ನಲ್ಲಿ ಕಲಾಕೃತಿಯೊಂದನ್ನುರಚಿಸಿದರು. ವಿಶಿಷ್ಟ ಸಾಧನೆಗೆ ಪ್ರಥಮ ಬಹುಮಾನದೊಂದಿಗೆ 5ಲಕ್ಷ ಬಹುಮಾನವನ್ನು ಗೆದ್ದಿರುವ ಹೆಗ್ಗಳಿಕೆ ಇವರದ್ದಾಗಿದೆ. ಮಾರ್ಚ್ 2021ರಂದು ನಡೆದ ರೆಡ್ ಎಫ್ ಎಮ್ ಹಾಗು ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ನಡೆಸಿದ ಟ್ಯಾಲೆಂಟ್ ಅನ್ ಲಾಕ್ಡ್ಆನ್ಲೈನ್ ಸ್ಪರ್ಧೆಯಲ್ಲಿ ಭಾರತದಾದ್ಯಂತ 56,000 ಸ್ಪರ್ಧಿಗಳು ಭಾಗವಹಿಸಿದ್ದು ಇದರಲ್ಲಿ ಮಹೇಶ್ 1,300 ಕ್ಕೂ ಹೆಚ್ಚು ರೂಬಿಕ್ಸ್ಕ್ಯೂಬ್ ನಲ್ಲಿ ಇರ್ಫಾನ್ ಖಾನ್ ರವರ ಭಾವಚಿತ್ರ ರಚಿಸಿ ಪ್ರಥಮ ಬಹುಮಾನವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ತನ್ನ ವಿಶೇಷ ಪ್ರತಿಭೆಯನ್ನು ಕೇವಲ ತನಗೆ ಮಾತ್ರ ಸೀಮಿತಗೊಳಿಸದೆ ಅನೇಕ ಸಂಸ್ಥೆಗಳಲ್ಲಿ, ಶಾಲೆಗಳಲ್ಲಿ ರೂಬಿಕ್ಸ್ ಕ್ಯೂಬ್ತರಬೇತಿಯನ್ನು, ಕಾರ್ಯಗಾರವನ್ನು ಮಾಡುತ್ತಿದ್ದಾರೆ. ಇಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸುವ ಜೊತೆಗೆ ಜೀವನ ಪಾಠವನ್ನುಹೇಳುವುದು ಇವರ ವಿಶೇಷತೆಯಾಗಿದೆ.

ನಟನೆ, ಫೋಟೋಗ್ರಫಿ, ಹಾಡುಗಾರಿಕೆ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದು, ತಮ್ಮ ರೂಬಿಕ್ಸ್ ಕ್ಯೂಬ್ ಮತ್ತು ಮೊಸೈಕ್ ಆರ್ಟ್ಎರಡು ಕಲೆಯನ್ನು ಸೇರಿಸಿ ಗಿನ್ನಿಸ್ ರೆಕಾರ್ಡ್ ಮಾಡುವ ಕನಸನ್ನು ಹೊಂದಿದ್ದಾರೆ. ಸತತ ಪರಿಶ್ರಮ, ಪ್ರಯತ್ನದೊಂದಿಗಿನ ಇವರ ಉತ್ಸಾಹಿ ಹೆಜ್ಜೆಗಳು ಯಶಸ್ಸನ್ನು ಪಡೆಯಲಿ.

✍️ನಳಿನಿ ಎಸ್ ಸುವರ್ಣ

ಆಳ್ವಾಸ್ ಕಾಲೇಜು ಮೂಡುಬಿದಿರೆ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »