TOP STORIES:

FOLLOW US

ವಿಷ ಕಾರುವವರಿಗೆ “ವಿಷಯ”ಯುಕ್ತ ಕಾರ್ಕೋಟಕ ವಿಷದಿಂದ ಅರ್ಪಣೆ…


ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಕೂಗು ಇವತ್ತು ನಿನ್ನೆಯದ್ದಲ್ಲ, ಸಮಾರು ವರುಷದಿಂದ ಕೇಳಿ ಬಂದ ಕೂಗು ಇದಾಗಿದೆ.


ಈ ಕೂಗಿಗೆ ನಾನು ಧ್ವನಿಯಾಗಿದ್ದೆ, ಆ ಧ್ವನಿ ಮೆಲ್ಲಗೆ ಗಡಸು ಧ್ವನಿಯಾಗುತ್ತ ಬೆಳೆದಿತ್ತು..!!
ಕರಾವಳಿಗರ ಒಕ್ಕೊರಲ ಅಭಿಪ್ರಾಯಕ್ಕೆ ಒಂದು ರೀತಿಯ ಬಲವು ನಿಧಾನವಾಗಿ ಬಲ ಸೇರುತ್ತಿತ್ತು.!
ಆದರೆ ಅದರ ಬಲವನ್ನು ಕುಗ್ಗಿಸುವ ಸಣ್ಣ ಧ್ವನಿಯು ಕೂಡ ಮೆಲ್ಲಗೆ ಏಳುತ್ತಿದೆ ಎಂಬುದನ್ನು ಹೇಳಲು ಭಯ ಪಡಬೇಕಾಗಿಲ್ಲ.


ಇತ್ತೀಚೆಗೆ ಮಾನ್ಯ ಸ್ವಾಮೀಜಿಗಳಿಂದ ಒಂದು ಹೇಳಿಕೆಯ ಮಾತು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿತ್ತು.! ಕೋಟಿ-ಚೆನ್ನಯರ ಹೆಸರಿಗೆ ಬದಲಾಗಿ ಇನ್ನೊಂದು ಹೆಸರನ್ನು ಸೂಚಿಸಿದ್ದರು.! ಒಂದು ವಿಚಿತ್ರ ಅನಿಸಿದ್ದು ಆ ಹೆಸರಿಗೆ ಖಂಡಿತ ನಮ್ಮ ವಿರೋಧವಿಲ್ಲ, ಆದರೆ ಇಷ್ಟು ದಿನ ಇಲ್ಲದ ಆ ಹೆಸರು ಬಲು ಬೇಗನೆ ಬಂದ ಕಾರಣ ಗೊತ್ತಾಗಬೇಕಿತ್ತು ಅಷ್ಟೇ!! ಶ್ರೀ ಗಳೇ ಕೋಟಿ ಚೆನ್ನಯರು ಹಿಂದುಗಳು ಅಲ್ಲವೇ, ಅಲ್ಲದಿದ್ದರೆ ನೇರವಾಗಿ ಹೇಳಿಬಿಡಿ! ಅಥವಾ ಕೋಟಿ ಚೆನ್ನಯರ ಹೆಸರಿಗೆ ಇರುವ ಬಲದ ಶಕ್ತಿಯನ್ನು ಒಡೆಯುವ ಕಾರ್ಯಕ್ಕೆ ಕೈ ಹಾಕಿದಿರ, ಅಥವಾ ಇನ್ಯಾವುದೇ ಕುತಂತ್ರ ಶಕ್ತಿಗಳ ಒತ್ತಾಸೆಗೆ ಬಲಿಯಾದಿರಿ ಎಂಬುದು ನೀವೇ ಹೇಳಬೇಕಾಗಿದೆ..! ಕೋಟಿ ಚೆನ್ನಯರು ಮಾಡಿದ ಸಾಮಾಜಿಕ ಕಾರ್ಯದ ಬಗ್ಗೆ ಒಮ್ಮೆ ಗಮನ ಹರಿಸಿ ಬನ್ನಿ ಗುರುಗಳೇ..! ಇದನ್ನು ಗೌರವಯುತವಾಗಿಯೇ ಹೇಳುತ್ತಿದ್ದೇನೆ.

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರನ್ನು ಇಡಬಾರದೆಂದು ಹೇಳುವವರಲ್ಲಿ ಒಂದು ಸಣ್ಣ ಮನವಿ, ನೀವು ನೇರವಾಗಿ ಹೇಳಿಬಿಡಿ ಬೆಂಬಲವಿಲ್ಲ ಎಂದು, ಅದರ ಜೊತೆಗೆ ಕಾರಣವನ್ನು ತಿಳಿಸಿಬಿಡಿ ಅಷ್ಟೇ.

ಕೋಟಿ-ಚೆನ್ನಯರ ಹೆಸರನ್ನು ವಿರೋಧಿಸುವ ಅಥವಾ ಅವಮಾನಿಸುವ ವ್ಯಕ್ತಿಗಳು ಯಾರೇ ಇರಲಿ, ಯಾವುದೇ ಸಂಘಟನೆಯಿರಲಿ ಅಥವಾ ರಾಜಕೀಯ ಪಕ್ಷವೇ ಇರಲಿ ಅದು ನಿಮ್ಮ ಸಮಾಧಿಗೆ ನೀವೇ ತೋಡಿದ ಹೊಂಡದಂತೆ!

ರಾಜಕೀಯ ಪಕ್ಷಗಳ ಸ್ಥಿರತೆ ಅಸ್ಥಿರತೆಯ ಕಡೆಗೆ ಸಾಗುತ್ತದೆ ಅದು ಮಾತ್ರ ಸಣ್ಣಗೆ ನೆನಪಿರಲಿ.
ಮತ್ತೊಂದು ಬೇಸರದ ವಿಷಯವೆಂದರೆ ಯಾವುದೇ ಹಿಂದು ಸಂಘಟನೆಗಳು ಇದರ ಪರವಾದ ಮಾತುಗಳನ್ನೇ ಆಡಿಲ್ಲ, ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಕೂಗಿಗೆ ಬಲವಾದ ಧ್ವನಿ ಆಗಲೇ ಇಲ್ಲ ಎಂಬುದು ನನ್ನಂತಹ ನೂರಾರು ಹಿಂದು ಕಾರ್ಯಕರ್ತರ ಮನದಾಳದ ಪ್ರಶ್ನೆಯಾಗಿಯೇ ಉಳಿದಿದೆ. ಹಿಂದು ಸಂಸ್ಕೃತಿಗೆ ಬೆಂಬಲವಾಗಿ ನಿಲ್ಲುವ ಬಾ.ಜ.ಪ ದಿಂದಲೂ ಇದಕ್ಕೆ ಸೂಕ್ತವಾದ ಬೆಂಬಲವೂ ಕೂಡ ವ್ಯಕ್ತವಾಗಿಲ್ಲ ಇದು ಕೂಡ ನನ್ನಂತಹ ಕಾರ್ಯಕರ್ತರಿಗೆ ಮೂಡಿದ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಮಿಥುನ್ ರೈ ಯವರು ಕೆಲ ದಿನಗಳ ಹಿಂದೆ ನಡೆಸಿದ ಪರ ಹೋರಾಟದ ದಾರಿ ಪಕ್ಷಾತೀತವಾಗಿ ಎಲ್ಲರೂ ಒಪ್ಪುವಂತದ್ದೇ, ಆದರೆ ಇದು ರಾಜಕೀಯದ ಆಸೆಗಾಗಿ ಸಾಗಬಾರದಷ್ಟೇ..!

ಎಲ್ಲಾ ಗ್ರಾಮಗಳಲ್ಲೂ ಬಲಿಷ್ಟವಾಗಿರುವ ನಮ್ಮ ಬಿಲ್ಲವ ಸಂಘಟನೆಯ ಮುಖಂಡರೆಲ್ಲೀ..??
ಕಳೆದ ಎರಡು ಮೂರು ವಾರಗಳಿಂದ ಕಾರ್ಯ ಚಟುವಟಿಕೆಗಳು ಮಾತ್ರ ಕಣ್ಣಿಗೆ ಗೋಚರಿಸುತ್ತಿದೆ, ಅದಕ್ಕಿಂತ ಮೊದಲಿನ ಪರ ಕಾರ್ಯಗಳೇ ಇಲ್ಲಾ..!
ಕರಾವಳಿಯ ಎಂ.ಪಿ ಮತ್ತು ಎಂ.ಎಲ್.ಎಗಳು ಇದರ ಪರವಾದ ಒಂದು ಮಾತನ್ನು ಆಡುತ್ತಿಲ್ಲ..!? ಕಾರಣ ಏನೆಂದು ತಿಳಿಸುವಿರಾ..!?

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಮರು ನಾಮಕರಣ ಆಗಬೇಕೆಂಬ ಕೂಗು ಜಾತಿ, ಪಕ್ಷ ಮತ್ತು ಧರ್ಮಕ್ಕಿಂತ ಮೀರಿದ ಕೂಗು..! ನೆನಪಿರಲಿ ಇದು ಈಡೇರದಿದ್ದರೆ ಕರಾವಳಿಯ ರಾಜಕೀಯ ಚಿತ್ರಣವೇ ಬದಲಾದೀತು ಜೋಕೆ..!!

– ವಿಜೇತ್ ಪೂಜಾರಿ ಶಿಬಾಜೆ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »