TOP STORIES:

”ಸಜ್ಜಿಗೆ ಬಣಲೆಡ್ ಉಂಡು ವೈರಲ್ ಆದ ಸಂದೇಶ”, ಮಮತೆಯ ಮಾತೃ ಹೃದಯ…ಇಲ್ಲಿದೆ ಸ್ವಲ್ಪ ವಿವರಣೆ


ವಾಟ್ಸ್ ಪ್ ಕೃಪೆ

ಮೊಬೈಲ್ ನಲ್ಲಿ ಬಂದದ್ದನ್ನೆಲ್ಲಾ ಇನ್ನೊಬ್ಬರಿಗೆ ಹಂಚುವ ಮೊದಲು ನೂರು ಸಲ ಆಲೋಚಿಸ ಬೇಕಾದೀತೇ?
ಸಜ್ಜಿಗೆ ಬಣಲೆಡ್ ಉಂಡು ವೈರಲ್ ಆದ ಶಬ್ದ ಸಂದೇಶದ ಒಂದು ವಿಮರ್ಶೆ ಹೀಗಿದೆ.

ನಿಮ್ಮ ಕಣ್ಣಿನ ನೇರಕ್ಕೆ ಕಂಡದನ್ನು ಮಾತ್ರ ಸಮರ್ಥನೆ ಮಾಡುವುದು ಒಳಿತಲ್ಲ ಎಂಬುವುದು ನನ್ನ ಅಭಿಪ್ರಾಯ.
ಹೀಗಿದೆ ಆ ಬರಹ

ವೈರಲ್ ಆದ ಆಡಿಯೋದಲ್ಲಿ… ಮಗ ಕರೆ ಮಾಡಿ ಏನು ಹೇಳುತ್ತಿದ್ದಾನೆ ಎಂದು ಸರಿಯಾಗಿ ಕೇಳದಿದ್ದರು ಇನ್ನೊಂದು ಕಡೆಯಿಂದ ಮಮತೆಯ ಮಾತೃ ಹೃದಯ ತನ್ನ ಮಗು ಹಸಿವಿಗಾಗಿಯೇ ಕರೆ ಮಾಡಿರಬಹುದೇನೋ ಎಂದು ಊಹಿಸಿ ಬಾಣಲೆಯಲ್ಲಿ ಸಜ್ಜಿಗೆ ಇದೆ ತಿನ್ನು ಮಗನೇ ಎನ್ನುವ ಆಡಿಯೋ ಟ್ರೋಲ್ ಆಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಸ್ವಲ್ಪ ವಿವರಣೆ .

ಆ ಘಟನೆಯ ತಾಯಿಯನ್ನು ಹತ್ತಿರದಿಂದ ನೋಡಿದವನು ನಾನು…. ತನ್ನ ಗಂಡ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಸ್ವ-ಸಹಾಯ ಸಂಘದಿಂದ, ಪರಿಚಯಸ್ತರಿಂದ ಸಾಲ ಮಾಡಿ ಬದುಕಿಸಲು ಕೈ ಮೀರಿ ಪ್ರಯತ್ನ ಮಾಡಿದರೂ ಉಳಿಸಲು ಅಸಾಧ್ಯವಾಗಿ, ಮನೆಯ ಆಧಾರ ಸ್ತಂಭ ಕುಸಿದಾಗ ನನ್ನ ಮಕ್ಕಳ ಬೇಕು ಬೇಡಗಳನ್ನು ಪೂರೈಸಿ, ಎಲ್ಲರಂತೆ ತನ್ನ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸುವ ಕನಸು ಕಾಣುವ ತಾಯಿ ಆಕೆ.

ಪತಿಯ ಅನಾರೋಗ್ಯದ ಸಂದರ್ಭದಲ್ಲಿ ಮಾಡಿದ ಸಾಲವನ್ನು ತೀರಿಸಲು ರಾತ್ರಿ ಹಗಲು ಬೀಡಿ ಕಟ್ಟಿ ತನ್ನ ಇಬ್ಬರು ಸಣ್ಣ ಮಕ್ಕಳನ್ನು ಸಾಕುವ ಕಷ್ಟದ ಜೀವನ ನಡೆಸುತ್ತಿದ್ದಾರೆ.

ಇನ್ನೊಂದು ಕಡೆ ಕೋರೊನ, ಈ ಕೋರೊನದಿಂದಾಗಿ ಸ್ವಲ್ಪ ದಿನ ಬೀಡಿ ಉದ್ಯಮವು ನಿಂತಿತು., ಬೀಡಿಯ ಆದಾಯವು ನಿಂತಿತು.

ಮಕ್ಕಳಿಗೆ ಮೊಬೈಲ್ ನೀಡಬಾರದು ನಿಜ ಅದು ತಿಳಿದೂ ಆಕೆ ತನ್ನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗ ಬಾರದೆಂದು, ಮೊಬೈಲ್ ಬಳಕೆಯ ಮಾಹಿತಿ ಗೊತ್ತಿಲ್ಲದ ಆಕೆ ಮಗನಿಗೆ online class ಗಾಗಿ ಸಣ್ಣ Touch ಮೊಬೈಲ್ ನೀಡಿದಳು… ಆತ ಮೊಬೈಲ್ ಸಿಕ್ಕ ಖುಷಿಯಲ್ಲಿ online class ಹಾಗೂ ಗೇಮ್ ಆಡುತ್ತಿದ್ದ.. ಮತ್ತೊಂದು ವಿಷಯ ಏನೆಂದರೆ ಆ ಮೊಬೈಲ್ ನಲ್ಲಿ ಎಲ್ಲ ಕರೆಗಳು Record ಆಗುತಿತ್ತು ಅದು ಕೂಡ ಈ ಘಟನೆಯ ನಂತರವೇ ತಿಳಿದದ್ದು.

ಆ ತಾಯಿಯ ಮಗನೂ ಸಹ ಮೊಬೈಲ್ ಬಳಕೆಯ ಪೂರ್ಣ ಪ್ರಮಾಣದ ಮಾಹಿತಿ ಇಲ್ಲದವ.. ಜೋಕುಲಾಟಿಕೆ ಎಂಬಂತೆ ಮೊಬೈಲ್ ನಲ್ಲಿದ್ದ ಪದ್ಯ ಹಾಗೂ call record ನ್ನೂ ಸಹ ತನ್ನ whatsappನಲ್ಲಿ ಗೆಳೆಯರಿಗೆ ಕಳುಹಿಸಿದ್ದಾನೆ.. ಆದು ಒಬ್ಬರಿಂದ ಒಬ್ಬರಿಗೆ forward ಆಗುತ್ತಲೇ ಹೋಯಿತು.

ಆ ತಾಯಿಯ ಸ್ವರ ಬಲ್ಲವರು ಆಕೆಯನ್ನು ಕರೆ ಮಾಡಿ ವಿಚಾರಿಸುತ್ತಿರುವಾಗ ಆಕೆ “ಕೊರೊನಾ ಸುರುವಾದ್ ಮಗಕ್ ಸಾಲೆ ಸುರುವಾವಂದೆ, ಮೊಬೈಲ್ ಡ್ ಪಾಠ ಮಲ್ಪುವೆರ್ ಗೆ, ಮೊಬೈಲ್ ಕೊರ್ದು ಈತ್ ಮಾತ ಮಲ್ತ್ ಪಾಡಿಯೆ.. ನನ ಪೋನು ಮುಟ್ಪರೆ ಬುಡ್ಪುಜಿ…” ಎಂದು ತುಂಬಾ ನೊಂದುಕೊಳ್ಳುತ್ತಿದ್ದಾಳೆ.

ಇಲ್ಲಿ ತಪ್ಪು ಯಾರದು..?ಕೊರೊನದ್ದಾ? ಮಕ್ಕಳಿಗೆ online class ಪ್ರಾರಂಭ ಮಾಡಿದ ಸರಕ್ಕಾರದ್ದೋ? ಮಗನಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗ ಬಾರದೆಂದು ಮೊಬೈಲ್ ಕೊಟ್ಟ ತಾಯಿಯದ್ದೋ? auto call record ಆಗುತ್ತಿದ್ದ ಮೊಬೈಲಿದ್ದೋ? ಮೊಬೈಲ್ ಬಳಕೆ ಸರಿಯಾಗಿ ಗೊತ್ತಿಲ್ಲದೆ ಎಲ್ಲವನ್ನೂ ಕಳುಹಿಸಿದ ಮಗನದ್ದೊ? ಸ್ವೀಕರಿಸಿದವರು ಕೇಳಿ ಆನಂದಿಸಿ ಎಲ್ಲರೂ ಖುಷಿ ಪಡೆಯಲಿ ಎಂದು ಒಬ್ಬರಿಂದ ಒಬ್ಬರಿಗೆ forward ಈಗಲೂ ಮಾಡುತ್ತಿರುವವರದ್ದೊ? ಎಂಬುವುದನ್ನು ನೀವು ನಿರ್ಧರಿಸಿ.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »