TOP STORIES:

FOLLOW US

ಸಾಧನೆಯ ಹಾದಿಯಲ್ಲಿ ಎಲ್ಲರ ಮನಗೆದ್ದಿರುವ ತುಳುನಾಡಿನ ಹೆಮ್ಮೆಯ ಮಗ ದೇವಿಕಿರಣ್ ಗಣೇಶಪುರ.


ಉಸಿರು ಇರೋ ತನಕ ನಾವು ಪ್ರಪಂಚ ನೋಡ ಬಹುದು, ಉಸಿರು ನಿಂತ ನಂತರ ಜನ ನಮ್ಮನು ನೋಡಬೇಕಾದರೆ ನಾವು ಮಾಡುವ ಸಾಧನೆ ಹಾಗೆ ಇರಬೇಕು.

ಇಲ್ಲೊಬ್ಬರು ಸಕಲ ಕಲಾ ವಲ್ಲಭ ಸಾಧನೆಯ ಪಣ ತೊಟ್ಟು ಹಂತ ಹಂತವಾಗಿ ಸಾಧನೆಯ ಹಾದಿಯಲ್ಲಿ ಎಲ್ಲರ ಮನಗೆದ್ದಿರುವ ತುಳುನಾಡಿನ ಹೆಮ್ಮೆಯ ಮಗ ದೇವಿಕಿರಣ್ ಗಣೇಶಪುರ.

ಕಾಟಿಪಳ್ಳದ ಚಂದ್ರಹಾಸ್ ಕುಕ್ಯಾನ್ ಮತ್ತು ರತ್ನ ಕೋಟ್ಯಾನ್ ದಂಪತಿಗಳ ಮಗ.

ಇವರು ಎಸ್ ಎಸ್ ಎಲ್ ಸಿ ಮಾಡಿರುವ ಇವರಿಗೆ ಎಸ್ಟಿಡಿ ಡ್ರೀಮ್ ಕಲಾವಿದ ಆಗುವ ಬಹು ದೊಡ್ಡ ಕನಸಿದೆ.

ಇವರು ತನ್ನ ಪ್ರಾಥಮಿಕ ವಿದ್ಯಾಬ್ಯಾಸ ವನ್ನು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು

ಸಂಗೀತ, ಚಿತ್ರಕಲೆ, ಮರುಳಾಕೃತಿ, ನಿರೂಪಣೆ, ನಟನೆ ಎಲ್ಲಾದರಲ್ಲಿಯೂ ಆಸಕ್ತಿ ಹೊಂದಿರುವ ಇವರಿಗೆ ಇವರ ಗುರುಗಳಾದ ಪದ್ಮನಾಭ ಸುರತ್ಕಲ್, ಬೆನ್ನೆಲುಬಾಗಿ ನಿಂತವರು. ಸಂಪೂರ್ಣ ಸಹಕಾರ ನೀಡಿದವರು ಪ್ರಮೀಳಾ ದೀಪಕ್ ಪೆರ್ಮುದೆ, ಸತೀಶ್ ಮುಂಡ್ಕೂರು ಮುಂಬೈ,ಹಾಗೆಯೇ ತಂದೆ ತಾಯಿಯ,ಮಡದಿ,ಮಕ್ಕಳ ಸಂಪೂರ್ಣ ಪ್ರೋತ್ಸಾಹ ಬೆಂಬಲವಿದೆ.

ಇವರ ಕೈಯಿಂದ ಅನೇಕ ಗಣ್ಯ ವ್ಯೆಕ್ತಿಗಳ ಪ್ರತಿರೂಪಗಳು ಅದ್ಭುತವಾಗಿ ಮೂಡಿ ಬಂದಿದೆ ” ಮರಳಾಕೃತಿಯಲ್ಲಿ ಸತತ ನಾಲ್ಕು ಬಾರಿ ಪ್ರಶಸ್ತಿ ತನ್ನ ಮುಡಿಗೆರಿಸಿ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು.

ಕಾರ್ಕಳ ಜೈನ ಸ್ವಾಮೀಜಿ, ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶ ಪುರ, ಕರವಳಿ ಫ್ರೆಂಡ್ಸ್ ಕ್ಲಬ್,ಕರ್ನಾಟಕ ಸೇವಾ ವೃಂದ ಸುರತ್ಕಲ್, ಮಣಿಪಾಲದ ಕಾರ್ಯಕ್ರಮದಲ್ಲಿ, ವಿನಾಯಕ ಮಂದಿರ ಕಾಟಿಪಳ್ಳ, ಕುಳಾಯಿ ನಾರಾಯಣ ಗುರು ಸಮಾಜ ಸೇವಾ ಸಂಘ, ರಾಮಾಂಜನೇಯ ವ್ಯಾಯಾಮ ಶಾಲೆ ಕಾಟಿಪಳ್ಳ, ಕುವೈಟ್, ಮುಂಬೈ, ಪಡುಬಿದ್ರೆ, ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ, ಹಿಂದೂ ಧಾರ್ಮಿಕ ಸೇವಾ ಸಮಿತಿ ಗಣೇಶ ಪುರ,ಕೊಟ್ಟಾರ ಕುಕ್ಯಾನ್ ಕುಟುಂಬ, ತ್ರಿಶೂಲ್ ಡ್ಯಾನ್ಸ್ ಕಾಟಿಪಳ್ಳ, ಮುಂಬೈ ಗರಡಿ, ಮಂಗಲಪೇಟೆ, ಕುದ್ರೋಳಿ ದಸರಾ,ಗಣೇಶ ಪುರ ಆದರ್ಶ ಯುವಕ ಮಂಡಲ ಕೈಕಂಬ ಮತ್ತು ಕುಡು ಅರಿ ಸಿನಿಮಾ. ಅನೇಕ ಕಡೆ ಇವರ ಪ್ರತಿಭೆಗೆ ಸನ್ಮಾನಗಳು ಆಗಿದೆ.

ಇವರ ಈ ಪ್ರತಿಭೆ ಅನೇಕ ಪ್ರಶಸ್ತಿ ಪುರಸ್ಕಾರ ದೊರತಿವೆ, ಕಡು ಅರಿ ಮತ್ತು ಕುರು ಕುರು ಎಂಬ ಎರಡು ಆಲ್ಬಮ್ ಸಾಂಗ್ ಹಾಡಿ ಜನ ಮನ ಗೆದ್ದು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಕೇವಲ ಹಾಡು ಚಿತ್ರ ಕಲೆ ಮಾತ್ರ ಅಲ್ಲದೆ ನಟನೆಯಲ್ಲಿಯೂ ತನ್ನ ಪ್ರತಿಭೇನ ತೋರಿಸಿದ್ದಾರೆ,ಇವರು ಆ ಒಂದು ಕೆರೆ ಎಂಬ ತುಳು ಕಿರು ಚಿತ್ರ  ಸಂಪೂರ್ಣ ನಾಯಕನಾಗಿ ನಟಿಸಿ ಸೈ ಎಣಿಸಿಕೊಂಡಿದ್ದಾರೆ, ಸಾವಿರಾರು ವೇದಿಕೆ ಹಾಡಿ ದ ಕೀರ್ತಿ ಇವರದು 2000 ಕ್ಕೂ ಹೆಚ್ಚು ರಸಮಂಜರಿ ಕಾರ್ಯಕ್ರಮ, 60 ಕ್ಕೂ ಹೆಚ್ಚು ಕಲಾ ಕುಂಚದಿಂದ ಜನರ ಮನವನ್ನು ಮಂತ್ರ ಮುಗ್ದವಾಗಿಸಿದ ಮಾಂತ್ರಿಕ.

ಇವರು ಹಾಡಿರುವ ಕುಡು ಅರಿ ಹಾಡಿಗೆ ಉತ್ತಮ ಗಾಯಕ ಎಂಬ ಪ್ರಶಸ್ತಿ ಇವರಿಗೆ ದೊರಕಿದೆ. ಹೊರದೇಶಗಳಲ್ಲಿ ತನ್ನ ಗಾಯನ ಹಾಗೂ ಚಿತ್ರ ಕಲೆಯನ್ನು ಪ್ರದರ್ಶಿಸಿ ತುಳುನಾಡಿನ ಹೆಮ್ಮೆಯ ಮಗ ಎಣಿ ಸಿಕೊಂದ್ದಾರೆ.

ಇವರು ಹಾಡಿರುವ ಕೊರಗಜ್ಜ ತುಳು ಭಕ್ತಿ ಗೀತೆ “ಭಕ್ತಿದ ಅಸರ್ “ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.

ಇಷ್ಟೇ ಅಲ್ಲದೆ ವಾಹನಗಳಿಗೆ ಸ್ಟಿಕರ್ ಕಟ್ಟಿಗ್ ಬ್ಯಾನರ್ ಬರೆಯುದು ಇವರ ವೃತ್ತಿ ಆಗಿದೆ .

ಇಂತಹ ಒಬ್ಬ ಅದ್ಭುತ ಪ್ರತಿಭೆಯ ಬಗ್ಗೆ ಎಷ್ಟು ಬರೆದರು ಅದು ಮುಗಿಯದ ಅದ್ಯಾಯ , ಎಸ್ ಪಿ ಬಾಲಸುಬ್ರಮಣ್ಯ ಮತ್ತು ಎಸ್ ಜಾನಕಿ ಯವರಿಂದಲೇ ಭೇಷ್ ಎಣಿಸಿಕೊಂಡ ದೇವಿ ಕಿರಣ್ ಇವರ ಕಲಾ ಬದುಕಿಗೆ ಸರಸ್ವತಿ ದೇವಿಯ ಅನುಗ್ರಹ ಸದಾ ಇರಲಿ ಇವರ ಕನಸು ನನಸಾಗಲಿ ಎಂದು ಹಾರೈಸುವ.

✍️ ಪ್ರಶಾಂತ್ ಅಂಚನ್ ಮಸ್ಕತ್ತ್

 


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »