TOP STORIES:

FOLLOW US

” ಹಿಂದು ಮತ್ತು ಕ್ರೈಸ್ತರ ಸಾಮರಸ್ಯದ ಸಂಕೇತ ಶ್ರಿ ಮಂಗ್ಲಿಮಾರ್ ಅಣ್ಣಪ್ಪಪಂಜುರ್ಲಿ ದೈವಸ್ಥಾನ “


ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಮಂಗ್ಲಿಮಾರ್ ಶ್ರಿ ಅಣ್ಣಪ್ಪಪಂಜುರ್ಲಿ ದೈವಸ್ತಾನ ಹಿಂದು ಮತ್ತೂ ಕ್ರೈಸ್ತರ ನಡುವಿನ ಸಾಮರಸ್ಯದ ಕೊಂಡಿ ಯಾಗಿದೆ. ಹೌದು ಅಮ್ಟಾಡಿ ಗ್ರಾಮದ ಗ್ರಾಮ ದೈವ ಅಣ್ಣಪ್ಪ ಪಂಜುರ್ಲಿಯ ಗುಡಿ (ಸಾನ) ಕಟ್ಟಿಸಿದವರು ಅಗತ್ತಿಮಾರು ಸಾಲ್ವದೊರ್ ಕಾಮತ್ (ಸಾಲು ಕಂಬತ್ತಿ)ಮೂಲತಃ ಕ್ರೈಸ್ತಧರ್ಮದವರಾದ ಇವರು ಅಣ್ಣಪ್ಪ ಪಂಜುರ್ಲಿ ದೈವದ ಪರಮಭಕ್ತರು,ಇವರು ಆ ಕಾಲದಲ್ಲಿ ಆಗರ್ಭ ಶ್ರಿಮಂತರಗಿದ್ದರು, ವರ್ಷದಲ್ಲಿ 12 ಪೂಜೆಗಳನ್ನು ಇಗರ್ಜಿಯಲ್ಲಿ ಸಲ್ಲಿಸಿದರೆ ಅದಕ್ಕೂ ಮಿಗಿಲಾಗಿ 13 ನೇಮಗಳನ್ನು ಅಣ್ಣಪ್ಪನಿಗೆ ನೀಡುತಿದ್ದರು. ಇವರಿಗೆ ತುಳುನಾಡಿನ ಸತ್ಯ ದೈವವಾದ ಅಣ್ಣಪ್ಪ ಪಂಜುರ್ಲಿಯ ಮೇಲೆ ಈ ರೀತಿಯಾದ ನಂಬಿಕೆ, ಭಕ್ತಿ ಬರಲು ಒಂದು ಕಾರಣವಿದೆ.


ಬಹಳ ವರ್ಷಗಳ ಹಿಂದೆ ಇದೆ ಸಾಲು ಕಂಬತ್ತಿ ತನ್ನ ಗೆಳೆಯರೊಂದಿಗೆ ನಲ್ಕೆಮಾರ್ ಗೆ ಬಂದು ಸಾರಾಯಿ ಸೇವಿಸಿ,ಅಮಲೆರಿಸಿಕೊಂಡು ದೈವಸ್ತಾನದ ಕಡೆ ಬರುವುದು ವಾಡಿಕೆಯಾಗಿತ್ತು, ಅಪ್ಪಟ ಕ್ರೈಸ್ತನಾಗಿದ್ದ ಇವನಿಗೆ ಸ್ವಲ್ಪ ಸ್ವಧರ್ಮದ ಮೇಲೆ ಪ್ರೀತಿ, ಊರಿನಲ್ಲಿ ಶ್ರಿಮಂತನೆಂಬ ಅಹಂಕಾರ ಹಾಗೂ ಮದಿರೆಯ ಅಮಲಿನಲ್ಲಿ ದೈವಸ್ತಾನವನ್ನು ಅದರ ಸುತ್ತಮುತ್ತಲಿನ ಪ್ರದೇಶವನ್ನು ಅಶೌಚಗೊಳಿಸುತಿದ್ದನು, ಇದರಿಂದ ಬೇಸರಗೊಂಡ ಗ್ರಾಮಸ್ತರು ವರ್ಷದ ನೇಮದ ಸಮಯದಲ್ಲಿ ನೇರವಾಗಿ ಅಣ್ಣಪ್ಪನ ಬಳಿ ದೂರು ಕೊಟ್ಟರು ಅದಕ್ಕೆ ದೈವವು “ನಾನು ನಿಮಗೊಂದು ಉಪಾಯ ಹೇಳುತ್ತೇನೆ ಮುಂದಿನ ಅಮಾವಾಸ್ಯೆಯ ದಿನ ರಾತ್ರಿ ನೀವೆಲ್ಲರೂ ಒಟ್ಟು ಸೇರಿ ದೈವಸ್ತಾನ ಪ್ರಾಂಗಣದ ತುಂಬಾ ನೆಲ್ಲಿಕಾಯಿಯನ್ನು ಹರಡಿಬಿಡಿ ಮುಂದಿನದ್ದು ನಾನು ನೋಡಿಕೊಳ್ಳುತ್ತೆನೆ “ಎಂದು ಅಭಯದ ನುಡಿಯನ್ನು ಕೊಟ್ಟಿತು.

@beautyoftulunad
ಹಾಗೆ ಗ್ರಾಮಸ್ತರು ದೈವ ಹೇಳಿದಂತೆಯೆ ನಡೆದುಕೊಂಡರು, ಆ ಅಮಾವಾಸ್ಯೆಯ ದಿನ ಸಾಲು ಕಂಬತ್ತಿ ಸಾರಾಯಿಯ ನಶೆಯಲ್ಲಿ ದೈವಸ್ತಾನದ ಪ್ರಾಂಗಣಕ್ಕೆ ಬಂದಾಗ ಚೆಲ್ಲಿದ್ದ ನೆಲ್ಲಿಕಾಯಿಯ ಅರಿವಿಲ್ಲದೆ ಅದರ ಮೇಲೆ ಕಾಲಿಟ್ಟು ಜಾರಿ ಬಿಳುತ್ತಾನೆ, ಅವನು ನೆಲಕ್ಕೆ ಬಿಳುತಿದ್ದಂತೆಯೆ ಅಣ್ಣಪ್ಪ ಪಂಜುರ್ಲಿಯು ಆತನ ಕೊರಳನ್ನು ಅಮುಕಿ ಹಿಡಿಯುತ್ತದೆ ಇದನ್ನು ನೋಡಿದ ಆತನ ಹಿಂಬಾಲಕರು ಹೆದರಿ ಓಡಿ ಹೋಗುತ್ತಾರೆ, ಆಗ ಸಾಲು ಕಂಬತ್ತಿಯು “ಯಾರು ನೀನು ಎಂದು ಕೇಳುತ್ತಾನೆ, ನನಗೆ ಏನೂ ಮಾಡಬೇಡ, ನನ್ನನ್ನೂ ಬಿಟ್ಟುಬಿಡು ಎಂದು ಕೇಳಿಕೊಳ್ಳು ತ್ತಾನೆ ಆಗ ದೈವವು “ನಾನು ಅಣ್ಣಪ್ಪ ದೈವ, ನೀನು ನನ್ನ ಸನ್ನಿಧಾನವನ್ನು ಹಾಳುಮಾಡುತಿದ್ದಿ ಎಂದು ಕೋಪದಿಂದ ನುಡಿಯಿತು ಆಗ ಭಯಗೊಂಡ ಸಾಲು ಕಂಬತ್ತಿ “ನನ್ನನ್ನೂ ಬಿಟ್ಟುಬಿಡು, ನಿನಗೆ ಏನು ಬೇಕೆಂದು ಕೇಳು ನಾನು ಕೊಡುತ್ತೇನೆ, ನನ್ನ ಜೀವನ ಪರಿಯಂತ ನಿನ್ನ ಆರಾಧನೆಯನ್ನು ಮಾಡಿಕೊಂಡು ಬರುತ್ತೇನೆ, ನನ್ನನ್ನು ನಂಬು” ಎಂದು ಕೇಳಿಕೊಂಡ ನಂತರ ಆತನನ್ನು ಬಿಟ್ಟು ಮಾಯವಾಗಿ ಹೋಯಿತು.

@beautyoftulunad
ನಂತರ ಸಾಲು ಕಂಬತ್ತಿಯು ಚರ್ಚಿನ ಸ್ತಳದಲ್ಲಿ ಅಣ್ಣಪ್ಪನಿಗೆ ಗುಡಿಯನ್ನು ಕಟ್ಟಿ, ವರ್ಷಂಪ್ರತಿ ಅದ್ದೂರಿಯಿಂದ ನೇಮೊತ್ಸವವನ್ನು ಮಾಡಿ ಅಣ್ಣಪ್ಪನನ್ನು ಭಕ್ತಿಪೂರ್ವಕವಾಗಿ
ಆರಾಧಿಸಿಕೊಂಡು ಬಂದ, ಇದ್ದಕ್ಕೆಯೆ “ಭಯವೆ ಭಕ್ತಿಯ ಮೂಲವೆಂದು ಹಿರಿಯರು ಹೇಳಿರಬೇಕು. ಈ ವಿಷಯವು ಮೊಡಂಕಾಪು ಇಗರ್ಜಿಯವರಿಗೆ ತಲುಪಿತು, ಆದರೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದರು, ಒಂದು ದಿನ ವಂದನಿಯ ಧರ್ಮ ಗುರುಗಳಾದ ಬಲ್ತಾಜಾರ್ ಅರಾನ್ಹಾ ಅವರು ಸಾಲು ಕಂಬತ್ತಿಯನ್ನು ಕರೆದು ದೇವರ ಸಮ್ಮುಖದಲ್ಲಿ ತಪ್ಪಿತಸ್ಥ, ಧರ್ಮ ಬಾಹಿರ ಕೆಲಸ ಮಾಡಿದವನು ಎಂದು ಹೇಳಿ ಒಂದು ಮಾತನ್ನು ಹೇಳಿದರು “ನೀನು ಸತ್ತರೆ ನರಕಕ್ಕೆ ಹೋಗುತ್ತಿ, ನಿನಗೆ ಸ್ವರ್ಗ ಸಿಗುವುದಿಲ್ಲ ಎಂದು ಹೇಳುತ್ತಾರೆ ಆಗ ಸಾಲು ಕಂಬತಿ ನಾನು ದೈವವನ್ನು ನಂಬುತ್ತೆನೆ, ಏಸುಸ್ವಾಮಿಯನ್ನು ನಂಬುತ್ತೆನೆ ನನ್ನ ಭಕ್ತಿ ಅಚಲ ಹಾಗಾಗಿ ನಾನು ಸತ್ತರೆ ಖಂಡಿತವಾಗಿ ಸ್ವರ್ಗಕ್ಕೆಹೋಗುತ್ತೇನೆ, ಇದರ ಗುರುತಾಗಿ ನಾನು ಸತ್ತದಿನ ಇಗರ್ಜಿಯ ಮುಖ್ಯದ್ವಾರದಲ್ಲಿ ನನ್ನ ಕೈಯ ಪಡಿಯಚ್ಚು ಮೂಡುತ್ತದೆ ಎಂದು ಹೇಳಿ ಹೋಗುತ್ತಾರೆ. @beautyoftulunad

“ಹಾಗೆಯೆ ಸಾಲು ಕಂಬತ್ತಿ ಸತ್ತ ದಿನ ಆತನ ಕೈಯ ಪಡಿಯಚ್ಚು ಮುಖ್ಯದ್ವಾರದಲ್ಲಿ ಇದ್ದದನ್ನು ಕಂಡ ಗುರುಗಳು ಅಚ್ಛರಿಗೊಂಡು ಸಾಲುಕಂಬತ್ತಿಗಾಗಿ ವಿಶೇಷ ಪೂಜೆ ಮಾಡಿದರು ಕೆಲವು ವರ್ಷಗಳ ಹಿಂದೆ ಆತನ ಕೈಯ ಗುರುತು ಮುಖ್ಯದ್ವಾರದಲ್ಲಿ ಕಾಣಸಿಗುತ್ತಿತ್ತು, ಇಗರ್ಜಿಯ ಪುನರ್ ನವೀಕರಣದ ನಂತರ ಈ ದ್ವಾರವನ್ನು ತೆರವುಗೊಳಿಸಿದ್ದಾರೆ. ಹಾಗಾಗಿ ಸಾಲು ಕಂಬತ್ತಿಯನ್ನು ಈಗಲೂ ದೈವ ವಲಸರಿ ನೇಮದ ಸಂಧರ್ಬ “ಸಾಲ್ ಕಂಬತ್ತಿ ಮಲ್ತಿನ ಕಟ್ಟ್ ಯನ್ನ “ಎಂದು ಆತನ ಭಕ್ತಿಯನ್ನು ಸ್ಮರಿಸುತ್ತದೆ. ಆಧಾರ ಗ್ರಂಥ: ” ಮಂಗ್ಲಿಮಾರ್ ಶ್ರಿ ಅಣ್ಣಪ್ಪ ಸ್ವಾಮಿ, ಜುಮಾದಿ ಬಂಟ ಪರಿವಾರ ದೈವಗಳು ನಡೆದು ಬಂದ ದಾರಿ ” ಬರಹ : ಫನಿಷ್ ಅಮ್ಟಾಡಿ

inputs: beauty of tulunad


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »