TOP STORIES:

ಅಶಕ್ತ ಕುಟುಂಬಕ್ಕೆ ಬಿರುವೆರ್ ಕುಡ್ಲದಿಂದ ರೂ: 50 ಸಾವಿರ ಆರ್ಥಿಕ ನೆರವು ಹಸ್ತಾಂತರ


ಕುದ್ರೋಳಿ:- ಫ್ರೆಂಡ್ಸ್ ಬಳ್ಳಾಲ್‍ಬಾಗ್ ಬಿರುವೆರ್ ಕುಡ್ಲ ಇದರ ವತಿಯಿಂದ ಕುಪ್ಪೆ ಪದವಿನ ಜಗದೀಶ್ ಜಯಶ್ರೀ ಅವರ ಪುತ್ರ ಎರಡುವರ್ಷದ ಶಮಿತ್ ಚಿಕಿತ್ಸೆಗಾಗಿ 50 ಸಾವಿರ ಆರ್ಥಿಕ ನೆರವನ್ನು ಬುಧವಾರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದವಠಾರದಲ್ಲಿ ಹಸ್ತಾಂತರಿಸಲಾಯಿತು.

ಕ್ಷೇತ್ರದ ಮೊಕ್ತೇಸರ ಸಾಯೀರಾಮ್ ಅವರು ನೆರವಿನ ಚೆಕ್ ಹಸ್ತಾಂತರಿಸಿ, ಬಿರುವೆರ್ ಕುಡ್ಲ  ಸಮಾಜಮುಖೀ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿರುವೆರ್ ಕುಡ್ಲ ವಕ್ತಾರ ದಿನೇಶ್ ರಾಯಿ ಅವರು ಬಿರುವೆರ್ ಕುಡ್ಲದ ಕುರಿತಾಗಿ ಮಾಹಿತಿ ನೀಡಿ,

ಬಿರುವೆರ್ ಕುಡ್ಲದ  ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಳ್ಳಾಲ್‍ಬಾಗ್ ನೇತೃತ್ವದಲ್ಲಿ ಅವರ ಸದಸ್ಯರ,ಸ್ನೇಹಿತರ,ದಾನಿಗಳಕೊಡುಗೆಯಿದೆ.

ನಮ್ಮ ಸಂಘಟನೆಯು ಶಾರದಾ ಹುಲಿ ವೇಷ ಕುಣಿತ, ಕುದ್ರೋಳಿ ಕ್ಷೇತ್ರದ ದಸರದಲ್ಲಿ ಭಾಗವಹಿಸುತ್ತಾ ಬಂದಿದೆ. ಹುಲಿ ವೇಷದಲ್ಲಿಬಂದ ಹಣವನ್ನು ಸೇವಾ ರೂಪದಲ್ಲಿ ಖರ್ಚು ಮಾಡುತ್ತಿದ್ದೆವು. ಕಳೆದ 8 ವರ್ಷದಿಂದ ಸಂಸ್ಥೆಯು ಬಡ ವರ್ಗದ ಸೇವೆಗಾಗಿ  5 ಕೋಟಿರೂ.ನಷ್ಟು ನೆರವಿಗೆ ವಿನಿಯೋಗಿಸಿದ್ದೇವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದಲ್ಲಿ ಎಲ್ಲಾ ಜಾತಿ ಧರ್ಮದ ಕುಟುಂಬಕ್ಕೆನೆರವು ನೀಡಲಾಗಿದೆ.ಬೇರೆ ಬೇರೆ ಘಟಕಗಳು ತಮ್ಮ ಕರ್ತವ್ಯ ನಿರತವಾಗಿದೆ. ಕೊರೊನಾ ಸಂದರ್ಭದಲ್ಲಿ ನೀಡಿದ ಉಚಿತವಾಗಿ  ಸೇವೆನೀಡುವ ಆಂಬುಲೆನ್ಸ್  ನಿರ್ವಹಣೆ ಮಾಡುತ್ತಿದ್ದೇವೆ.ಹೀಗೆ ನಮ್ಮಿಂದಾದ ಸೇವೆ ಸಮಾಜಕ್ಕೆ ನಿರಂತರವಾಗಿ ಮಾಡುತ್ತಾ  ಬಂದಿದ್ದೇವೆಎಂದರು.

ನೆರವು ಪಡೆದ ಕುಟುಂಬದ ಸದಸ್ಯರಾದ ಸಂಜಿತ್ ಅಚಾರ್ಯ ಮನವಿ ಮಾಡಿ,

ಪ್ರತೀ ತಿಂಗಳು 50 ಸಾವಿರ ವೆಚ್ಚ  ಬರುತ್ತಿದ್ದು,ಬಡ ಕುಟುಂಬಕ್ಕೆ ಭರಿಸಲು ಕಷ್ಟವಾಗುತ್ತಿದೆ.

ಬಿರುವೆರ್ ಕುಡ್ಲದ ನೆರವಿಗೆ ಕೃತಜ್ಞತೆ ವ್ಯಕ್ತ ಪಡಿಸುತ್ತೇವೆ.

ಇತರರೂ ಮುಂದೆ ಬಂದು ಸಹಾಯ ಮಾಡಿದರೆ ನಮಗೆ ಮಗುವಿನ ರಕ್ಷಣೆಗೆ ಸಹಾಯವಾಗುತ್ತದೆ‌ ಎಂದು ಮನವಿ ಮಾಡಿದರು.

ಪ್ರಮುಖರಾದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್, ವಸಂತ ಪೂಜಾರಿ, ವೆಂಕಟೇಶ್ ಭಂಡಾರಿ,ರಾಧಕೃಷ್ಣಮುಂಬಾಯಿ ಅಧ್ಯಕ್ಷ  ರಾಕೇಶ್ ಪೂಜಾರಿ ಬಳ್ಳಾಲ್‍ಬಾಗ್,ವಿನು ಶೆಟ್ಟಿ  ತಲಪಾಡಿ,ಲತೀಶ್ ಪೂಜಾರಿ,ಕಿಶೋರ್ ಬಾಬು,ರಾಕೇಶ್ಚಿಲಿಂಬಿ,ಲೋಹಿತ್ ಗಟ್ಟಿ,ರಾಮ್‍ಪ್ರಸಾದ್ ಎಕ್ಕೂರ್,ಗಣೇಶ್ ಚಿಲಿಂಬಿ,ವಾಝಿ ಫೆರ್ನಾಂಡಿಸ್,ಪ್ರಾಣೇಶ್ ಬಂಗೇರ,ವಿಘ್ನೇಶ್  ಮತ್ತಿತರರು ಉಪಸ್ಥಿತರಿದ್ದರು.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »