TOP STORIES:

ಈ ಮನೆಮದ್ದುಗಳನ್ನು ಫಾಲೋ ಮಾಡಿ, ಬಿಳಿ ಗಡ್ಡ ಮತ್ತೆ ಕಪ್ಪಾಗುತ್ತದೆ ನೋಡಿ…


ವಯಸ್ಸಿನ್ನೂ ಸಣ್ಣದಿರುತ್ತದೆ, ಆದರೆ ಕೂದಲು ಬೆಳ್ಳಗಾಗುವುದರ ಜೊತೆಗೆ, ಗಡ್ಡಮೀಸೆಯಲ್ಲಿ ಕೂಡ ಬಿಳಿ ಕೂದಲು ಅಲ್ಲಲ್ಲಿಇಣುಕುತ್ತಿರುತ್ತದೆ! ಸಮಸ್ಯೆ ಇರುವವರಿಗೆ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು

ಕೆಲವರಿಗೆ ಮುಖದಲ್ಲಿ ಗಡ್ಡಮೀಸೆ ಇದ್ದರೆ, ನೋಡಲು ಚೆನ್ನಾಗಿ ಕಾಣುತ್ತಾರೆ. ಇನ್ನೂ ಕೆಲವರಿಗೆ ಗಡ್ಡ ಮೀಸೆ ಇಲ್ಲದಿದ್ದರೆ, ನೋಡಲುಜೆಂಟಲ್ ಮೆನ್ ರೀತಿಯಾಗಿ ಕಾಣುತ್ತಾರೆ. ಆದರೆ ಇತ್ತೀಚಿನ ಫ್ಯಾಷನ್ ತಕ್ಕ ಹಾಗೆ ಪುರುಷರು, ಒಮ್ಮೆ ಗಡ್ಡ ಮೀಸೆ ಬೆಳೆಸಿದರೆ, ಇನ್ನೊಮ್ಮೆ, ಕ್ಲೀನ್ ಶೇವ್ ಮಾಡಿ ಕೊಂಡು ಬಿಡುತ್ತಾರೆ. ಆದರೆ ಕೆಲವರಿಗೆ ಗಡ್ಡ ಮೀಸೆ ಬಿಡಲು ಇಷ್ಟವಿರುತ್ತದೆ, ಆದರೆ ಏನುಮಾಡುವುದು, ಅಲ್ಲಲ್ಲಿ ಇಣುಕುವ ಬಿಳಿ ಕೂದಲಿನ ಸಮಸ್ಯೆಗಳಿಂದಾಗಿ, ನೀಟ್ ಆಗಿ ಶೇವಿಂಗ್ ಮಾಡಿ ಬಿಡುವುದೇ ಲೇಸುಎಂದು ಭಾವಿಸುತ್ತಾರೆ.

ಇದಕ್ಕೆಲ್ಲಾ ಕಾರಣಗಳನ್ನು ನೋಡುವುದಾದರೆ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಕೆಟ್ಟ ಜೀವನ ಶೈಲಿಯ ಜೊತೆಗೆ ದೇಹದಲ್ಲಿಆದ ಕೆಲವೊಂದು ಹಾರ್ಮೋನುಗಳ ವ್ಯತ್ಯಾಸದಿಂದಾಗಿ ಸಣ್ಣ ವಯಸ್ಸಿನಲ್ಲಿಯೇ, ಪುರುಷರಲ್ಲಿ ಗಡ್ಡಮೀಸೆ ಬೆಳ್ಳಗಾಗುವ ಸಮಸ್ಯೆಎದುರಾಗುತ್ತದೆ. ಹಾಗಂತ ಇದನ್ನು ಮುಚ್ಚಿಡಲು ದಿನನಿತ್ಯ ಶೇವಿಂಗ್ ಮಾಡಲು ಆಗುತ್ತದೆಯಾ? ಇದು ಖಂಡಿತವಾಗಿಯೂ ಆಗುಹೋಗುವಂತಹ ಮಾತಲ್ಲ!

ಹಾಗಾದ್ರೆ ಇದಕ್ಕೆ ಪರಿಹಾರವೇ ಇಲ್ಲವೇ ಎನ್ನುವ ನಿಮ್ಮ ಪ್ರಶ್ನೆಯಾಗಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ ನೋಡಿಸ್ವಲ್ಪ ತಾಳ್ಮೆಯಿಂದಕೆಲವೊಂದು ಮನೆ ಮದ್ದುಗಳಿಂದ ಪ್ರತಿನಿತ್ಯ ಅನುಸರಿಸಿಕೊಂಡು ಹೋದರೆ, ಖಂಡಿತವಾಗಿಯೂ ಸಮಸ್ಯೆ ಯನ್ನು ಯಾವುದೇಅಡ್ಡಪರಿಣಾಮಗಳು ಇಲ್ಲದೆ ಶಾಶ್ವತವಾಗಿ ನಿವಾರಿಸಿಕೊಳ್ಳಬಹುದು.

      ಮೊದಲಿಗೆ ಒಂದೆರಡು ಟೇಬಲ್ ಚಮಚ ಆಗುವಷ್ಟು ಬಿಳಿ ಎಳ್ಳನ್ನುರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಹಾಕಿ.

  • ಇನ್ನು ಮರುದಿನ ನೆನೆಸಿಟ್ಟ ಬಿಳಿ ಎಳ್ಳನ್ನು ಮಿಕ್ಸರ್ ಜಾರ್‌ನಲ್ಲಿ, ನೆನೆಸಿಟ್ಟ ನೀರಿನ ಸಮೇತ ಹಾಕಿಕೊಂಡು, ಚೆನ್ನಾಗಿ ರುಬ್ಬಿಕೊಳ್ಳಿ. ಸ್ವಲ್ಪ ದಪ್ಪಗೆ ಪೇಸ್ಟ್ ರೀತಿಯಾಗಿ ಮಾಡಿಕೊಂಡರೆ ಒಳ್ಳೆಯದು.
  • ಇನ್ನು ನಿಮ್ಮ ಗಡ್ಡ ಇಲ್ಲಾಂದ್ರೆ ಮೀಸೆಯ ಯಾವ ಭಾಗದಲ್ಲಿ ಹೆಚ್ಚಾಗಿ ಬಿಳಿ ಕೂದಲಿನ ಸಮಸ್ಯೆ ಕಂಡುಬರತ್ತಿದೆಯೋಅಲ್ಲಿಗೆಲ್ಲಾ ಪೇಸ್ಟ್ ನ್ನು ದಪ್ಪಗೆ ಹಚ್ಚಿ.
  • ನಂತರ ಸುಮಾರು ಅರ್ಧ ಗಂಟೆಯವರೆಗೆ ಹಾಗೆಯೇ ಒಣಗಲು ಬಿಡಿ, ನಂತರ ನೀರಿನಿಂದ ತೊಳೆಯಿರಿ. ಉತ್ತಮಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಮನೆಮದ್ದನ್ನು ಟ್ರೈ ಮಾಡಿ ನೋಡಿ
  • ಬೇಗಾಗುವ ಸಾಮಾಗ್ರಿಗಳು
  • ಒಂದು ಕಪ್ ಆಗುವಷ್ಟು ಮೆಹಂದಿ ಎಲೆಗಳು
  • ಒಂದು ಟೇಬಲ್ ನಿಂಬೆ ರಸ
  • ಒಂದು ಟೇಬಲ್ ಟೇಬಲ್ ಚಮಚದಷ್ಟು ತೆಂಗಿನ ಎಣ್ಣೆ
  • ಒಂದು ಟೇಬಲ್ ಟೇಬಲ್ ಚಮಚದಷ್ಟು ವಿನೆಗರ್
  • ಒಂದು ಟೇಬಲ್ ಚಮಚದಷ್ಟು ಸೀಗೆಕಾಯಿ ಪುಡಿ

ತಯಾರು ಮಾಡಿ ಬಳಸುವ ವಿಧಾನ

  • ಮೊದಲಿಗೆ ನೀಡಿರುವ ಎಲ್ಲಾ ನೈಸರ್ಗಿಕ ಪದಾರ್ಥಗಳನ್ನು ಒಂದು ಬೌಲ್‌‌ನಲ್ಲಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ಮಾಡಿಕೊಳ್ಳಿ. ಆಮೇಲೆ ಇವುಗಳನ್ನು ಸಣ್ಣ ಮಿಕ್ಸಿ ಜಾರ್‌ಗೆ ಹಾಕಿ, ಚೆನ್ನಾಗಿ ರುಬ್ಬಿ ಕೊಂಡು ಪೇಸ್ಟ್ ರೀತಿಯಾಗಿ ಮಾಡಿಕೊಳ್ಳಿ. ಆಮೇಲೆ ಇದನ್ನು ಇನ್ನೊಂದು ಪಾತ್ರೆಗೆ ವರ್ಗಾಹಿಸಿ, ಸ್ವಲ್ಪ ಹೊತ್ತು ಹಾಗೆಯೇ ಬಿಡಿ.
  • ಇನ್ನು ಪೇಸ್ಟ್‌ನ್ನು ಗಡ್ಡ ಅಥವಾ ಮೀಸೆಯಲ್ಲಿ ಕಂಡುಬರುವ ಬಿಳಿ ಕೂದಲಿನ ಸಮಸ್ಯೆ ಇರುವ ಕಡೆಗೆಲ್ಲಾ ಹಚ್ಚಿ, ಸುಮಾರು ಅರ್ಧ ಗಂಟೆಗಳವರೆಗೆ ಹಾಗೆಯೇ ಬಿಡಿ. ಆಮೇಲೆ ತಣ್ಣೀರಿನಿಂದ ತೊಳೆಯಿರಿ, ಉತ್ತಮ ಫಲಿತಾಂಶಕ್ಕಾಗಿವಾರದಲ್ಲಿ ಎರಡು ಮೂರು ಬಾರಿಯಾದರೂ ಮನೆಮದ್ದನ್ನು ಟ್ರೈ ಮಾಡಿ ನೋಡಿ.

ತೆಂಗಿನ ಎಣ್ಣೆ ಮತ್ತು ನಿಂಬೆರಸ

  • ಒಂದು ಬೌಲ್‌ಗೆ ಶುದ್ಧ ಒಂದೆರಡು ಚಮಚ ತೆಂಗಿನ ಎಣ್ಣೆ ಹಾಗೂ ಒಂದು ಚಮಚ ನಿಂಬೆರಸವನ್ನು ಹಾಕಿ ಚೆನ್ನಾಗಿಮಿಕ್ಸ್ ಮಾಡಿಕೊಳ್ಳಿ.
  • ನಂತರ ಗಡ್ಡ ಅಥವಾ ಮೀಸೆಯ ಭಾಗದಲ್ಲಿ ಅಲ್ಲಲ್ಲಿ ಇಣುಕುತ್ತಿರುವ, ಬಿಳಿ ಕೂದಲಿಗೆ ಮಿಶ್ರಣವನ್ನು ಹಚ್ಚಿ. ಸುಮಾರು ಒಂದೆರಡು ಗಂಟೆಗಳವರೆಗೆ ಹಾಗೆಯೇ ಬಿಡಿ, ಆಮೇಲೆ, ಗಡ್ಡಮೀಸೆಯ ಕೂದಲನ್ನು ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಮೂರು ನಾಲ್ಕು ಬಾರಿ ಪ್ರಕ್ರಿಯೆಯನ್ನು ಮುಂದುವರೆಸಿ.

ಬ್ಲ್ಯಾಕ್ ಟೀ ಎಲೆಗಳು

  • ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ, ಚೆನ್ನಾಗಿ ಕುದಿಸಿಕೊಳ್ಳಿ. ಆಮೇಲೆ ಕುದಿ ಬಂದಿರುವ ನೀರಿಗೆ ಸ್ವಲ್ಪ ಬ್ಲ್ಯಾಕ್ಟೀ ಎಲೆಗಳನ್ನು ಹಾಕಿ, ಇನ್ನೊಮ್ಮೆ ಎರಡು ಮೂರು ನಿಮಿಷಗಳವರೆಗೆ ಕುದಿಸಿಕೊಳ್ಳಿ. ಆಮೇಲೆ ಗ್ಯಾಸ್ ಸ್ಟೌವ್ ಅಫ್ ಮಾಡಿ, ನೀರನ್ನು ತಣಿಯಲು ಬಿಡಿ.
  • ಒಮ್ಮೆ ನೀರು ತಣಿದ ಬಳಿಕ, ಬ್ಲ್ಯಾಕ್ ಟೀ ಎಲೆಗಳಿಂದ, ನೀರನ್ನು ಚೆನ್ನಾಗಿ ಹಿಂಡಿ ತೆಗೆಯಿರಿ, ಆಮೇಲೆ ನೀರನ್ನು ಗಡ್ಡದ ಬಿಳಿ ಕೂದಲುಗಳ ಮೇಲೆ ಹಚ್ಚಿ, ಸುಮಾರು ಒಂದೆರಡು ಗಂಟೆಗಳವರೆಗೆ ಹಾಗಯೇ ಬಿಡಿ. ಆಮೇಲೆತಣ್ಣನೆಯ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ.

Related Posts

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ   ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ   ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್


Read More »

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »