TOP STORIES:

FOLLOW US

ಎ ಜರ್ನಿ ಫ್ರಮ್ ‘ಪಾರ್ವತಿ’ ಟು ‘ಅನ್ವಿತಾ’


ನಿರೂಪಣೆ ಎಂಬ ಮೊದಲ ಘಟ್ಟ ಹತ್ತಿ, ತಂಪಿಂಪಿನ ಕಂಪು ಹರಡಿಸಿ, ಔಟ್ ಆಫ್ ಸಿಲೇಬಸ್ ಅನ್ನೋ ನಟನೆ ಎಂಬ ಪ್ರಶ್ನೆಗೆ ಉತ್ತರಿಸಿ ,’ದಂಡ್’ ನ ಎರಡನೇ ಲೀಡ್ ಆಗಿ, ‘ಗಟ್ಟಿಮೇಳ’ದ ಮೊದಲನೇ ಮದುಮಗಳಾಗಿ, ಪಾರ್ವತಿಯಿಂದ ಅನ್ವಿತಾ ಎಂದು ಪುನರ್ ನಾಮಕರಿಸಿ, ಅಗ್ರಜನ ಮುದ್ದಿನ ತಂಗಿಯಾಗಿ, ನಮ್ಮ ನಿಮ್ಮೆಲ್ಲರ ಮನದಲ್ಲಿ ‘ಆಧ್ಯಾ’ಳ ಛಾಪನ್ನು ಮೂಡಿಸಿ ಮನೆಮಾತಾಗಿರುವವರು ಸಾಗರದ ಬೆಡಗಿ ‘ಅನ್ವಿತಾ ಸಾಗರ್’.

   (Copyrights owned by: billavaswarriors.com )

ಬಣ್ಣದ ಜಗತ್ತಿಗೆ ಕಾಲಿಟ್ಟ ನಂತರ ಪಾರ್ವತಿಯಿಂದ ಅನ್ವಿತಾ ಸಾಗರ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡ ಇವರು ,ಉದ್ಯಮಿ ಹೇಮಚಂದ್ರ ಮತ್ತು ಭಾರತಿ ದಂಪತಿಯ ಸುಪುತ್ರಿ, ನಟ ಅನೂಪ್ ಸಾಗರ್ ರವರ ಮುದ್ದಿನ ತಂಗಿ.ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು,ಬಿ.ಬಿ.ಎ ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮಂಗಳೂರಿನ ಎಸ್.ಡಿ.ಎಂ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.ಬಿ.ಬಿ.ಎ ಪದವಿ ಪಡೆದ ಮೇಲೆ ಇವರು ನಮ್ಮ ಟವಿ ಚಾನಲ್ ನಲ್ಲಿ ನಾಲ್ಕು ವರುಷಗಳ ಕಾಲ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು.

ರಂಜಿತ್ ಬಜ್ಪೆ ನಿರ್ದೇಶನದ ‘ದಂಡ್’ ಎಂಬ ತುಳು ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಪಾದಾರ್ಪಿಸಿದ ಇವರು ನಟನೆ ಹೊರತು ನೃತ್ಯ-ಗಾನಕಲೆ, ಪಾಕಕ್ರಿಯೆ ಮತ್ತು ಮಹಾಕಾವ್ಯಗಳನ್ನು ಓದುವ ಹವ್ಯಾಸವನ್ನು ಹೊಂದಿದ್ದಾರೆ.

   (Copyrights owned by: billavaswarriors.com )

‘ವೇದ’ ‘ಪ್ರಿಯ’ಪಾತ್ರಗಳಲ್ಲಿ ಮಿಂಚಿದ ಅನ್ವಿತಾ:

ಬಣ್ಣದ ಜಗತ್ತಿಗೆ ದಂಡ್ ಸಿನಿಮಾದ ಮೂಲಕ ಕಾಲಿಟ್ಟ ಇವರು ಮೊದಲ ಟೇಕ್ ನಲ್ಲೇ ನಿರ್ದೇಶಕ ರಂಜಿತ್ ಬಜ್ಪೆಯವರಿಂದ ಸಯ್ ಎಂದೆನಿಸಿಕೊಂಡಿದ್ದರು. ನಂತರ ಒಮ್ಮೆ ಹಚ್ಚಿದ ಬಣ್ಣವನ್ನು ಗುಂದಲು ಬಿಡದೆ ನಟಿಸಲು ಮುನ್ನಡೆದ ಇವರು ‘ಬಲೆ ಪುದರ್ ದೀಕ ಈ ಪ್ರೀತಿಗ್'(ಶಾನ್ವಿ),’ಪೆಟ್ಕಮ್ಮಿ'(ಪ್ರಿಯ) ಎಂಬ ತುಳು ಸಿನಿಮಾಗಳಲ್ಲಿ ಹಾಗೇ ‘ಬಣ್ಣ ಬಣ್ಣದ ಬದುಕು'(ಶಾಯಿದಾ), ‘ಜೀವನ ಯಜ್ಞ’, ‘ಮಾಯಾ ಕನ್ನಡಿ'(ಮಧು) ಎಂಬ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ತುಳುನಾಡಿನ ಹಳ್ಳಿ ಹುಡ್ಗಿಯ ಪಾತ್ರದಲ್ಲಿ ‘ತಂಬಿಲ'(ವೇದ) – ತುಳು ಸಿನಿಮಾದಲ್ಲಿ , ‘ವಿರಾಟ ಪರ್ವ'(ಖುಷಿ) ಎಂಬ ಕನ್ನಡ ಸಿನಿಮಾದಲ್ಲಿ ಪಾತ್ರವಹಿಸಿದ್ದಾರೆ. ಇವು ಮುಂಬರುವ ಚಿತ್ರಗಳು.ಹಾಗೇ ಪ್ರಸ್ತುತವಾಗಿ ‘ಗಟ್ಟಿಮೇಳ’ ಎಂಬ ಧಾರವಾಹಿಯಲ್ಲಿ ಆಧ್ಯಾಳ ಪಾತ್ರ ವಹಿಸಿ ಎಲ್ಲರ ಜನಮನ ಗೆದ್ದಿದ್ದಾರೆ.

ಅನ್ವಿತಾರ ಮನದ ಮಾತು:

‘ಬಿ.ಬಿ.ಎ ಮಗ್ಸಿದ್ ಮೇಲೆ ಕೇವಲ ನಿರೂಪಕಿಯಾಗಿ ಕೆಲ್ಸ ಮಾಡುತ್ತಿದ್ದೆ.ನಟನೆ ತನಗೆ ಔಟ್ ಆಫ್ ಸಿಲೇಬಸ್ ಕ್ವೆಶನ್ ತರ ಬಂದಿದ್ದು,ಅದರ ಬಗ್ಗೆ ಗಂಧ ಗಾಳಿನೂ ಗೊತ್ತಿರದ ತನಗೆ ಮೊದಲನೇ ಬಾರಿಯ ಆಡಿಷನ್ ನಲ್ಲಿ, ಫಸ್ಟ್ ಟೇಕ್ ನಲ್ಲೇ ಸಯ್ ಅನ್ಸಿದ್ದು ತುಂಬಾನೇ ಖುಷಿ ಕೊಟ್ಟಿದೆ. ತನ್ನ ಪ್ರತಿ ಕಾರ್ಯದಲ್ಲಿ ತನ್ನ ಹೆತ್ತವರ ಅದರಲ್ಲೂ ಅಜ್ಜ ಮತ್ತು ಅಣ್ಣ ಸದಾ ಬೆನ್ನೆಲುಬಾಗಿದ್ದರಿಂದ ಈ ಎಲ್ಲಾ ಸಾಧನೆಗಳು ಬೆಳಕಿಗೆ ಬಂದಿವೆ’ ಎನ್ನುತ್ತಾರೆ ಅನ್ವಿತಾ.

ಗಟ್ಟಿಮೇಳದ ಮೊದಲನೇ ಮದುಮಗಳಾಗಿ ಕಿರುತೆರೆಗೆ ಪಾದಾರ್ಪಿಸಿದ ಪಾರ್ವತಿ:

ನಾಲ್ಕು ವರ್ಷಗಳ ಕಾಲ ತುಳುಚಿತ್ರರಂಗದಲ್ಲಿ ಮಿಂಚಿದ ಅನ್ವಿತಾರಿಗೆ ಗಟ್ಟಿಮೇಳ ಎಂಬ ಧಾರವಾಹಿಯಲ್ಲಿ ನಟಿಸಲು ಸಿಕ್ಕಿದ ಅವಕಾಶವು, ತನ್ನ ಜೀವನದ ಟರ್ನಿಂಗ್ ಸಿಚುವೇಷನ್ ಎಂದು ಅಭಿವ್ಯಕ್ತಪಡಿಸುತ್ತಾರೆ. ಇದೀಗ ಅಗ್ರಜನ ಮುದ್ದಿನ ತಂಗಿಯಾಗಿ ,ಗರ್ಭಿಣಿ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಲ್ಲಿ ಜನರಿಂದ ತುಂಬಾನೇ ಒಳ್ಳೆ ಪ್ರತಿಕ್ರಿಯೆ ಬಂದಿದೆ ಎಂಬುದು ಅನ್ವಿತಾರ ಅಭಿಪ್ರಾಯ.

   (Copyrights owned by: billavaswarriors.com )

ಸಂದ ಗೌರವಗಳು:

ಚಿತ್ರರಂಗದಲ್ಲಿನ ಇವರ ಅಪೂರ್ವ ಸಾಧನೆಯನ್ನು ಗಮನಿಸಿ ಇವರಿಗೆ ಬಿಲ್ಲವ ಹಾಗೂ ಹಲವಾರು ಸಂಘಗಳ ವತಿಯಿಂದ ಸನ್ಮಾನಿಸಲಾಗಿದೆ.ಹಾಗೇ‌ ದಂಡ್ ಸಿನಿಮಾದ‌ ನಂತರ ‘ತುಳುಚಿತ್ರರಂಗದ ಪಟಾಕಿ’ ಅನ್ನೋ ಬಿರುದನ್ನು ಇವರು ಹೊಂದಿದ್ದಾರೆ.

ಮೊಗದಲ್ಲಿ ಸದಾ ಮುಗುಳ್ನಗೆಯನ್ನು ಚೆಲ್ಲುತ್ತಾ ,ಕಿವಿಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸುವ ನಿಮ್ಮ ಮಾತುಗಳು ಹೀಗೆ ಶಾಶ್ವತವಾಗಿದ್ದು ಹಾಗೇ ನಿಮ್ಮ ಕಲಾ ಜೀವನವು ಇನ್ನಷ್ಟು ಬಣ್ಣಗಳಿಂದ ತುಂಬಿ ರಂಗೇರಲಿ ಎಂದು ಆಶಯಿಸುತ್ತಾ ನಾರಾಯಣ ಗುರುಗಳ ಆಶೀರ್ವಾದ ಕೋಟಿಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಬಿಲ್ಲವ ವಾರಿಯರ್ಸ್‌ ಸಂಸ್ಥೆಯ ವತಿಯಿಂದ ಹಾರೈಸುತ್ತೇನೆ.

ಬರಹ : ಯಕ್ಷಿತಾ ಆರ್ ,ಮೂಡುಕೊಣಾಜೆ

   (Copyrights owned by: billavaswarriors.com )


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »