TOP STORIES:

ಏಕಾಂಗಿ ಜನಾರ್ದನ ಪೂಜಾರಿ ಇದ್ದುದು ಹೀಗೆ


ಏಕಾಂಗಿ ಜನಾರ್ದನ ಪೂಜಾರಿ ಇದ್ದುದು ಹೀಗೆ

ಸಾಮಾನ್ಯವಾಗಿ ಸಚಿವರಾದವರಿಗೆ ಸ್ಥಳೀಯವಾಗಿ ಸೆಕ್ರೇಟರಿ, ಆಪ್ತಸಹಾಯಕರು ಇರುತ್ತಾರೆ. ಪೊಲೀಸ್ ಭದ್ರತೆ ಇರುತ್ತದೆ. ಆದರೆ ಕೇಂದ್ರ ಸಚಿವರಾಗಿದ್ದ ಬಿ.ಜನಾರ್ದನ ಪೂಜಾರಿಯವರಿಗೆ ಈ ಯಾರು ಇರಲಿಲ್ಲ ಎಂದರೆ ಆಶ್ಚರ್ಯ. ಆದರೆ ಇದು ವಾಸ್ಯವ. ಅವರು ಕೇಂದ್ರ ಸಚಿವರಾಗಿ ಇದ್ದಷ್ಟು ಕಾಲವೂ ಸ್ಥಳೀಯವಾಗಿ ಇರಲಿಲ್ಲ ಎಂದರೆ ನಿಜಕ್ಕೂ ಕುತೂಲವೇ ಹೌದು.

ಜನಾರ್ದನ ಪೂಜಾರಿ ದೆಹಲಿಯಿಂದ ಬರುವಾಗ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲು ಜನಜಂಗುಳಿ ಇರುತ್ತಿತ್ತು, ಅವರು ದೆಹಲಿಗೆ ಹೋಗುವಾಗಲೂ ಅದೇ ಸ್ಥಿತಿ. ಹಾಗಾದರೆ ಇವರ ಕೆಲಸಗಳನ್ನು ಇಲ್ಲಿ ಯಾರು ಮಾಡುತ್ತಿದ್ದರು, ಅವರ ಪತ್ರಗಳನ್ನು ಯಾರು ಬರೆಯುತ್ತಿದ್ದರು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ.

ಸಾಲ ಮೇಳವಿರುವಾಗ ಜಿಲ್ಲಾ ಲೀಡ್ ಬ್ಯಾಂಕ್ ನವರು ಪತ್ರಿಕೆಗಳಿಗೆ ವಿಷಯ ತಿಳಿಸುತ್ತಿದ್ದರು. ಅವರು ಕೊಟ್ಟ ಸಮಯಕ್ಕೆ ಸರಿಯಾಗಿ ಹೋದರೆ ಹಿಂದೆ ಬರುವ ತನಕವೂ ಲೀಡ್ ಬ್ಯಾಂಕ್ ನವರ ಜವಾಬ್ದಾರಿ. ತಿನ್ನುವುದು, ಊಟ ಮಾಡುವುದು ಎಲ್ಲವೂ ಅವರದೇ ಹೊಣೆ.

ಸಾಲ ಮೇಳಕ್ಕೆ ಬರುವಾಗ ಪೂಜಾರಿ ಕೈಯಲ್ಲಿ ಒಂದು ಕಾಗದ ತರುತ್ತಿದ್ದರು. ಆದರೆ ಅದನ್ನು ಓದಿ ಹೇಳುವ ಕ್ರಮವಿರಲಿಲ್ಲ, ಏನಿದರೂ ಭಾಷಣದಲ್ಲಿ ಹೇಳುತ್ತಿದ್ದರು. ಪೂಜಾರಿಯವರು ಒಂದು ದಿನವೂ ಬರೆದು ತಂದ ಭಾಷಣವನ್ನು ಓದಿದ್ದನ್ನು ಕಾಣಲಿಲ್ಲ. ಎಲ್ಲವೂ ನೆನಪು ಶಕ್ತಿ. ಅಂಕಿ ಅಂಶವನ್ನು ಹೇಳುವಾಗ ಮಾತ್ರ ಅವರು ತಾವು ತಂದಿದ್ದ ಕಾಗದ ನೋಡುತ್ತಿದ್ದರು.

ಕೆಲವು ಸಲ ಕಾರ್ಯಕರ್ತರು ತಾವೂ ಹೇಳುತ್ತಿದ್ದ ಅಹವಾಲುಗಳನ್ನು ಕಿವಿಗೊಟ್ಟು ಕೇಳಿ ಅದನ್ನು ನೆನಪಿನಲ್ಲಿ ಇಟ್ಟುಕೊಂಡು ಮತ್ತೆ ದೆಹಲಿಯಿಂದ ಬರುವಾಗ ಕಾರ್ಯಕರ್ತರ ಕೈಗೆ ಲಿಖಿತವಾಗಿ ಏನನ್ನೂ ಕೊಡುತ್ತಿರಲಿಲ್ಲ. ಸರ್ಕಾರದಿಂದ ಆದೇಶವೇ ವ್ಯಕ್ತಿಗಳಿಗೆ ಬರುತಿತ್ತು.

ಈ ಕಾರ್ಯಕ್ರಮವನ್ನು ಪೂಜಾರಿ ಅವರು ಎಂದು ತಪ್ಪಿಸಲಿಲ್ಲ. ಅವರು ಮಂತ್ರಿಯಾಗಿದ್ದಾಗ ಬ್ಯಾಂಕ್ ಡೈರೆಕ್ಟರ್ ಗಳು ಅನೇಕ ಮಂದಿ. ಹಾಗೆಯೇ ಕೇಂದ್ರ ಸರ್ಕಾರದ ವಿವಿಧ ಸಮಿತಿಗಳಿಗೆ ಪೂಜಾರಿ ಅಭಿಮಾನಿಗಳಾಗುತ್ತಿದ್ದರು. ಆದರೆ ಇವರ ಹೆಸರನ್ನು ಪೂಜಾರಿಯವರು ಬರೆದಿಟ್ಟುಕೊಳ್ಳುತ್ತಿರಲಿಲ್ಲ ಅಥವಾ ನನೆಗೆ ನೆನಪಿರಲಿಲ್ಲ, ಇನ್ನೊಮ್ಮೆ ಬರೆದುಕೊಡು ಎನ್ನುತ್ತಿರಲಿಲ್ಲ. ಇದು ಪೂಜಾರಿಯವರ ಸ್ಟೈಲ್ ಆಗಿತ್ತು.

ಸಚಿವರಾದವರಿಗೆಂದೇ ಸ್ಥಳೀಯ ಕಚೇರಿಯೂ ಇರಲಿಲ್ಲ. ಅವರು ಬರುವುದೇ ಸರ್ಕೂಟ್ ಹೌಸ್ ಗೆ. ಅಲ್ಲಿಂದಲೇ ದೆಹಲಿಗೆ ಹೋಗುವುದು, ಬಂಟ್ವಾಳದ ಮನೆಗೆ ಬರುವುದು. ಕಾರ್ಯಕರ್ತರಿಗೂ ಬಂಟ್ವಾಳದ ಮನೆಗೆ ಹೋಗುವ ಅವಕಾಶವಿಲ್ಲ.

ಹಾಗೆ ನೋಡಿದರೆ ಸಚಿವರಾದರೆ ಖರ್ಚು ಬಹಳವಾಗುತ್ತದೆ. ಕನಿಷ್ಟ ಸ್ಥಳೀಯವಾಗಿಯೇ ಸಿಬ್ಬಂಧಿ, ಕಚೇರಿ ಈ ಎಲ್ಲವೂ ಸರ್ಕಾರದ ಖರ್ಚಿನಲ್ಲಿಯೇ ಹೋಗುತ್ತದೆ. ಹೀಗೆ ಆಗುವ ಲೆಕ್ಕಾಚಾರವೆಷ್ಟು ಇದೆಲ್ಲವೂ ಶೂನ್ಯ. ಆದರೂ ಪೂಜಾರಿಯವರು ದೇಶ ಸುತ್ತಾಡುತ್ತಿದ್ದರು ಆ ಖರ್ಚಿನವಿವರವೂ ಇರಲಿಲ್ಲ.

ಜನಾರ್ದನ ಪೂಜಾರಿಯವರು ಹಣಕಾಸು ಸಚಿವರಾಗಿದ್ದಾಗ ಅವರ ಕಾರಿನ ಬಾಗಿಲು ತೆಗೆಯಲು ನಾ ಮುಂದು ತಾ ಮುಂದು ಎಂದು ದುಂಬಾಲು ಬೀಳುತ್ತಿದ್ದರು. ಪೂಜಾರಿಯವರನ್ನು ಹತ್ತಿರದಿಂದ ನೋಡಿದವರೂ ಕೂಡಾ ಈ ಗುಣಗಳನ್ನು ಕಂಡು ಆಶ್ಚರ್ಯ ಪಡುತ್ತಿದ್ದರು. ಇದು ಪೂಜಾರಿಯವರಿಂದ ಮಾತ್ರ ಸಾಧ್ಯವೆಂದು ಸುಮ್ಮನಾಗುತ್ತಿದ್ದರು.

ಜನಾರ್ದನ ಪೂಜಾರಿಯವರು ಹೂವಿನ ಮಾಲೆ ಸ್ವೀಕರಿಸುತ್ತಿರಲಿಲ್ಲ, ಈಗಲೂ ಅವರು ಅದೇ ಕ್ರಮ. ಆದರೆ ಬೇರೆಯವರಿಗೆ ಮಾಲೆ ಹಾಕುವುದನ್ನು ಮಾತ್ರ ಮಾಡುತ್ತಿದ್ದಾರೆ. ಸ್ಪಾಟ್ ನಲ್ಲಿಯೇ ಹಣ ಸಂಗ್ರಹಮಾಡಿ ಅಶಕ್ತರಿಗೆ ಹಂಚುವುದು ಪೂಜಾರಿಯವರ ಯೂನೀಕ್. ಆ ಕ್ಷಣ ಬಂದಾಗ ಕೆಲವರು ದೂರ ಹೋಗುವುದು ಉಂಟು, ಆದರೆ ಪೂಜಾರಿಯವರು ಕಾಣಿಸದಿದ್ದವರ ಹೆಸರು ಕರೆದು ಹಣದ ಮೊತ್ತ ಹೇಳಿಸುತ್ತಿದ್ದರು, ಕ್ಷಣಕ್ಕೆ ಆ ವ್ಯಕ್ತಿಯ ಕಿಸೆಯಲ್ಲಿ ಇಲ್ಲದಿದ್ದರೂ ಸ್ಥಳದಲ್ಲೆಯೇ ಸಾಲ ಪಡೆದು ಹಣ ಕೊಡಿಸುತ್ತಿದ್ದರು.

ಒಬ್ಬ ಸಚಿವರಾಗಿದ್ದರೂ ಸಾಮಾನ್ಯ ವ್ಯಕ್ತಿಯಾಗಿದ್ದರು. ಆದರೆ ಮುಂಗೋಪಿ, ತಕ್ಷಣಕ್ಕೆ ಸಿಡುಕು ಅವರ ಗುಣ. ಇನ್ನೊಂದು ಸತ್ಯವೆಂದರೆ ಅವರ ಮಗ ತೀರಿಕೊಂಡ ಬಳಿಕ ಸಿಟ್ಟಿನ ಅಂಶ ಬಹಳಷ್ಟು ಕಡಿಮೆಯಾಗಿದೆ. ಅವರು ಮೊದಲಿನಂತೆ ಎಗರಾಡುವುದಿಲ್ಲ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಆದರೆ ಒಂದೊಂದು ಸಲ ಅವರು ಅದನ್ನೂ ಮೀರುತ್ತಾರೆ.
ಈಗ ಸಚಿವರಾದವರೂ, ಶಾಸಕರಾದವರು ತಮ್ಮ ಸಾಧನೆಗಳನ್ನು ಪುಸ್ತಕ ತರುವ ಪರಂಪರೆ ಬಂದಿದೆ. ಆದರೆ ಜನಾರ್ದನ ಪೂಜಾರಿ ಅವರು ಇಂಥ ಪುಸ್ತಕ ತರುತ್ತಿದ್ದರೆ ಬಹುಷ ಅವರ ‘ಸಾಲಮೇಳದ ಸಂಗ್ರಾಮ’ ಬಹಳ ಹಿಂದೆಯೇ ಬರುತ್ತಿತ್ತು ಅಲ್ಲವೇ.
ಆದರೂ ಬಿ.ಜನಾರ್ದನ ಪೂಜಾರಿ ನಾನು ವೈಯಕ್ತಿಕವಾಗಿ ನೋಡಿದ ಅಪರೂಪದ ರಾಜಕಾರಣಿ. ಬೇರೆಯವರು ಹೊಗಳುತ್ತಾರೋ ಇಲ್ಲವೋ ಎನ್ನುವುದನ್ನು ನಾನು ಚಿಂತಿಸುವುದಿಲ್ಲ.

ಚಿದಂಬರ ಬೈಕಂಪಾಡಿ


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »