TOP STORIES:

ಏಕಾಂಗಿ ಜನಾರ್ದನ ಪೂಜಾರಿ ಇದ್ದುದು ಹೀಗೆ


ಏಕಾಂಗಿ ಜನಾರ್ದನ ಪೂಜಾರಿ ಇದ್ದುದು ಹೀಗೆ

ಸಾಮಾನ್ಯವಾಗಿ ಸಚಿವರಾದವರಿಗೆ ಸ್ಥಳೀಯವಾಗಿ ಸೆಕ್ರೇಟರಿ, ಆಪ್ತಸಹಾಯಕರು ಇರುತ್ತಾರೆ. ಪೊಲೀಸ್ ಭದ್ರತೆ ಇರುತ್ತದೆ. ಆದರೆ ಕೇಂದ್ರ ಸಚಿವರಾಗಿದ್ದ ಬಿ.ಜನಾರ್ದನ ಪೂಜಾರಿಯವರಿಗೆ ಈ ಯಾರು ಇರಲಿಲ್ಲ ಎಂದರೆ ಆಶ್ಚರ್ಯ. ಆದರೆ ಇದು ವಾಸ್ಯವ. ಅವರು ಕೇಂದ್ರ ಸಚಿವರಾಗಿ ಇದ್ದಷ್ಟು ಕಾಲವೂ ಸ್ಥಳೀಯವಾಗಿ ಇರಲಿಲ್ಲ ಎಂದರೆ ನಿಜಕ್ಕೂ ಕುತೂಲವೇ ಹೌದು.

ಜನಾರ್ದನ ಪೂಜಾರಿ ದೆಹಲಿಯಿಂದ ಬರುವಾಗ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲು ಜನಜಂಗುಳಿ ಇರುತ್ತಿತ್ತು, ಅವರು ದೆಹಲಿಗೆ ಹೋಗುವಾಗಲೂ ಅದೇ ಸ್ಥಿತಿ. ಹಾಗಾದರೆ ಇವರ ಕೆಲಸಗಳನ್ನು ಇಲ್ಲಿ ಯಾರು ಮಾಡುತ್ತಿದ್ದರು, ಅವರ ಪತ್ರಗಳನ್ನು ಯಾರು ಬರೆಯುತ್ತಿದ್ದರು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ.

ಸಾಲ ಮೇಳವಿರುವಾಗ ಜಿಲ್ಲಾ ಲೀಡ್ ಬ್ಯಾಂಕ್ ನವರು ಪತ್ರಿಕೆಗಳಿಗೆ ವಿಷಯ ತಿಳಿಸುತ್ತಿದ್ದರು. ಅವರು ಕೊಟ್ಟ ಸಮಯಕ್ಕೆ ಸರಿಯಾಗಿ ಹೋದರೆ ಹಿಂದೆ ಬರುವ ತನಕವೂ ಲೀಡ್ ಬ್ಯಾಂಕ್ ನವರ ಜವಾಬ್ದಾರಿ. ತಿನ್ನುವುದು, ಊಟ ಮಾಡುವುದು ಎಲ್ಲವೂ ಅವರದೇ ಹೊಣೆ.

ಸಾಲ ಮೇಳಕ್ಕೆ ಬರುವಾಗ ಪೂಜಾರಿ ಕೈಯಲ್ಲಿ ಒಂದು ಕಾಗದ ತರುತ್ತಿದ್ದರು. ಆದರೆ ಅದನ್ನು ಓದಿ ಹೇಳುವ ಕ್ರಮವಿರಲಿಲ್ಲ, ಏನಿದರೂ ಭಾಷಣದಲ್ಲಿ ಹೇಳುತ್ತಿದ್ದರು. ಪೂಜಾರಿಯವರು ಒಂದು ದಿನವೂ ಬರೆದು ತಂದ ಭಾಷಣವನ್ನು ಓದಿದ್ದನ್ನು ಕಾಣಲಿಲ್ಲ. ಎಲ್ಲವೂ ನೆನಪು ಶಕ್ತಿ. ಅಂಕಿ ಅಂಶವನ್ನು ಹೇಳುವಾಗ ಮಾತ್ರ ಅವರು ತಾವು ತಂದಿದ್ದ ಕಾಗದ ನೋಡುತ್ತಿದ್ದರು.

ಕೆಲವು ಸಲ ಕಾರ್ಯಕರ್ತರು ತಾವೂ ಹೇಳುತ್ತಿದ್ದ ಅಹವಾಲುಗಳನ್ನು ಕಿವಿಗೊಟ್ಟು ಕೇಳಿ ಅದನ್ನು ನೆನಪಿನಲ್ಲಿ ಇಟ್ಟುಕೊಂಡು ಮತ್ತೆ ದೆಹಲಿಯಿಂದ ಬರುವಾಗ ಕಾರ್ಯಕರ್ತರ ಕೈಗೆ ಲಿಖಿತವಾಗಿ ಏನನ್ನೂ ಕೊಡುತ್ತಿರಲಿಲ್ಲ. ಸರ್ಕಾರದಿಂದ ಆದೇಶವೇ ವ್ಯಕ್ತಿಗಳಿಗೆ ಬರುತಿತ್ತು.

ಈ ಕಾರ್ಯಕ್ರಮವನ್ನು ಪೂಜಾರಿ ಅವರು ಎಂದು ತಪ್ಪಿಸಲಿಲ್ಲ. ಅವರು ಮಂತ್ರಿಯಾಗಿದ್ದಾಗ ಬ್ಯಾಂಕ್ ಡೈರೆಕ್ಟರ್ ಗಳು ಅನೇಕ ಮಂದಿ. ಹಾಗೆಯೇ ಕೇಂದ್ರ ಸರ್ಕಾರದ ವಿವಿಧ ಸಮಿತಿಗಳಿಗೆ ಪೂಜಾರಿ ಅಭಿಮಾನಿಗಳಾಗುತ್ತಿದ್ದರು. ಆದರೆ ಇವರ ಹೆಸರನ್ನು ಪೂಜಾರಿಯವರು ಬರೆದಿಟ್ಟುಕೊಳ್ಳುತ್ತಿರಲಿಲ್ಲ ಅಥವಾ ನನೆಗೆ ನೆನಪಿರಲಿಲ್ಲ, ಇನ್ನೊಮ್ಮೆ ಬರೆದುಕೊಡು ಎನ್ನುತ್ತಿರಲಿಲ್ಲ. ಇದು ಪೂಜಾರಿಯವರ ಸ್ಟೈಲ್ ಆಗಿತ್ತು.

ಸಚಿವರಾದವರಿಗೆಂದೇ ಸ್ಥಳೀಯ ಕಚೇರಿಯೂ ಇರಲಿಲ್ಲ. ಅವರು ಬರುವುದೇ ಸರ್ಕೂಟ್ ಹೌಸ್ ಗೆ. ಅಲ್ಲಿಂದಲೇ ದೆಹಲಿಗೆ ಹೋಗುವುದು, ಬಂಟ್ವಾಳದ ಮನೆಗೆ ಬರುವುದು. ಕಾರ್ಯಕರ್ತರಿಗೂ ಬಂಟ್ವಾಳದ ಮನೆಗೆ ಹೋಗುವ ಅವಕಾಶವಿಲ್ಲ.

ಹಾಗೆ ನೋಡಿದರೆ ಸಚಿವರಾದರೆ ಖರ್ಚು ಬಹಳವಾಗುತ್ತದೆ. ಕನಿಷ್ಟ ಸ್ಥಳೀಯವಾಗಿಯೇ ಸಿಬ್ಬಂಧಿ, ಕಚೇರಿ ಈ ಎಲ್ಲವೂ ಸರ್ಕಾರದ ಖರ್ಚಿನಲ್ಲಿಯೇ ಹೋಗುತ್ತದೆ. ಹೀಗೆ ಆಗುವ ಲೆಕ್ಕಾಚಾರವೆಷ್ಟು ಇದೆಲ್ಲವೂ ಶೂನ್ಯ. ಆದರೂ ಪೂಜಾರಿಯವರು ದೇಶ ಸುತ್ತಾಡುತ್ತಿದ್ದರು ಆ ಖರ್ಚಿನವಿವರವೂ ಇರಲಿಲ್ಲ.

ಜನಾರ್ದನ ಪೂಜಾರಿಯವರು ಹಣಕಾಸು ಸಚಿವರಾಗಿದ್ದಾಗ ಅವರ ಕಾರಿನ ಬಾಗಿಲು ತೆಗೆಯಲು ನಾ ಮುಂದು ತಾ ಮುಂದು ಎಂದು ದುಂಬಾಲು ಬೀಳುತ್ತಿದ್ದರು. ಪೂಜಾರಿಯವರನ್ನು ಹತ್ತಿರದಿಂದ ನೋಡಿದವರೂ ಕೂಡಾ ಈ ಗುಣಗಳನ್ನು ಕಂಡು ಆಶ್ಚರ್ಯ ಪಡುತ್ತಿದ್ದರು. ಇದು ಪೂಜಾರಿಯವರಿಂದ ಮಾತ್ರ ಸಾಧ್ಯವೆಂದು ಸುಮ್ಮನಾಗುತ್ತಿದ್ದರು.

ಜನಾರ್ದನ ಪೂಜಾರಿಯವರು ಹೂವಿನ ಮಾಲೆ ಸ್ವೀಕರಿಸುತ್ತಿರಲಿಲ್ಲ, ಈಗಲೂ ಅವರು ಅದೇ ಕ್ರಮ. ಆದರೆ ಬೇರೆಯವರಿಗೆ ಮಾಲೆ ಹಾಕುವುದನ್ನು ಮಾತ್ರ ಮಾಡುತ್ತಿದ್ದಾರೆ. ಸ್ಪಾಟ್ ನಲ್ಲಿಯೇ ಹಣ ಸಂಗ್ರಹಮಾಡಿ ಅಶಕ್ತರಿಗೆ ಹಂಚುವುದು ಪೂಜಾರಿಯವರ ಯೂನೀಕ್. ಆ ಕ್ಷಣ ಬಂದಾಗ ಕೆಲವರು ದೂರ ಹೋಗುವುದು ಉಂಟು, ಆದರೆ ಪೂಜಾರಿಯವರು ಕಾಣಿಸದಿದ್ದವರ ಹೆಸರು ಕರೆದು ಹಣದ ಮೊತ್ತ ಹೇಳಿಸುತ್ತಿದ್ದರು, ಕ್ಷಣಕ್ಕೆ ಆ ವ್ಯಕ್ತಿಯ ಕಿಸೆಯಲ್ಲಿ ಇಲ್ಲದಿದ್ದರೂ ಸ್ಥಳದಲ್ಲೆಯೇ ಸಾಲ ಪಡೆದು ಹಣ ಕೊಡಿಸುತ್ತಿದ್ದರು.

ಒಬ್ಬ ಸಚಿವರಾಗಿದ್ದರೂ ಸಾಮಾನ್ಯ ವ್ಯಕ್ತಿಯಾಗಿದ್ದರು. ಆದರೆ ಮುಂಗೋಪಿ, ತಕ್ಷಣಕ್ಕೆ ಸಿಡುಕು ಅವರ ಗುಣ. ಇನ್ನೊಂದು ಸತ್ಯವೆಂದರೆ ಅವರ ಮಗ ತೀರಿಕೊಂಡ ಬಳಿಕ ಸಿಟ್ಟಿನ ಅಂಶ ಬಹಳಷ್ಟು ಕಡಿಮೆಯಾಗಿದೆ. ಅವರು ಮೊದಲಿನಂತೆ ಎಗರಾಡುವುದಿಲ್ಲ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಆದರೆ ಒಂದೊಂದು ಸಲ ಅವರು ಅದನ್ನೂ ಮೀರುತ್ತಾರೆ.
ಈಗ ಸಚಿವರಾದವರೂ, ಶಾಸಕರಾದವರು ತಮ್ಮ ಸಾಧನೆಗಳನ್ನು ಪುಸ್ತಕ ತರುವ ಪರಂಪರೆ ಬಂದಿದೆ. ಆದರೆ ಜನಾರ್ದನ ಪೂಜಾರಿ ಅವರು ಇಂಥ ಪುಸ್ತಕ ತರುತ್ತಿದ್ದರೆ ಬಹುಷ ಅವರ ‘ಸಾಲಮೇಳದ ಸಂಗ್ರಾಮ’ ಬಹಳ ಹಿಂದೆಯೇ ಬರುತ್ತಿತ್ತು ಅಲ್ಲವೇ.
ಆದರೂ ಬಿ.ಜನಾರ್ದನ ಪೂಜಾರಿ ನಾನು ವೈಯಕ್ತಿಕವಾಗಿ ನೋಡಿದ ಅಪರೂಪದ ರಾಜಕಾರಣಿ. ಬೇರೆಯವರು ಹೊಗಳುತ್ತಾರೋ ಇಲ್ಲವೋ ಎನ್ನುವುದನ್ನು ನಾನು ಚಿಂತಿಸುವುದಿಲ್ಲ.

ಚಿದಂಬರ ಬೈಕಂಪಾಡಿ


Related Posts

ಬಿಲ್ಲವರ ಉನ್ನತಿಯಲ್ಲಿ ನಾರಾಯಣ ಗುರುಗಳ ಪಾತ್ರ ಗುರುತರವಾದುದು ಡಾ.ಮುಕೇಶ್ ಕುಮಾರ್


Share        ಮುಂಬಯಿ ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು.


Read More »

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »