TOP STORIES:

FOLLOW US

ಏಕಾಂಗಿ ಜನಾರ್ದನ ಪೂಜಾರಿ ಇದ್ದುದು ಹೀಗೆ


ಏಕಾಂಗಿ ಜನಾರ್ದನ ಪೂಜಾರಿ ಇದ್ದುದು ಹೀಗೆ

ಸಾಮಾನ್ಯವಾಗಿ ಸಚಿವರಾದವರಿಗೆ ಸ್ಥಳೀಯವಾಗಿ ಸೆಕ್ರೇಟರಿ, ಆಪ್ತಸಹಾಯಕರು ಇರುತ್ತಾರೆ. ಪೊಲೀಸ್ ಭದ್ರತೆ ಇರುತ್ತದೆ. ಆದರೆ ಕೇಂದ್ರ ಸಚಿವರಾಗಿದ್ದ ಬಿ.ಜನಾರ್ದನ ಪೂಜಾರಿಯವರಿಗೆ ಈ ಯಾರು ಇರಲಿಲ್ಲ ಎಂದರೆ ಆಶ್ಚರ್ಯ. ಆದರೆ ಇದು ವಾಸ್ಯವ. ಅವರು ಕೇಂದ್ರ ಸಚಿವರಾಗಿ ಇದ್ದಷ್ಟು ಕಾಲವೂ ಸ್ಥಳೀಯವಾಗಿ ಇರಲಿಲ್ಲ ಎಂದರೆ ನಿಜಕ್ಕೂ ಕುತೂಲವೇ ಹೌದು.

ಜನಾರ್ದನ ಪೂಜಾರಿ ದೆಹಲಿಯಿಂದ ಬರುವಾಗ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲು ಜನಜಂಗುಳಿ ಇರುತ್ತಿತ್ತು, ಅವರು ದೆಹಲಿಗೆ ಹೋಗುವಾಗಲೂ ಅದೇ ಸ್ಥಿತಿ. ಹಾಗಾದರೆ ಇವರ ಕೆಲಸಗಳನ್ನು ಇಲ್ಲಿ ಯಾರು ಮಾಡುತ್ತಿದ್ದರು, ಅವರ ಪತ್ರಗಳನ್ನು ಯಾರು ಬರೆಯುತ್ತಿದ್ದರು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ.

ಸಾಲ ಮೇಳವಿರುವಾಗ ಜಿಲ್ಲಾ ಲೀಡ್ ಬ್ಯಾಂಕ್ ನವರು ಪತ್ರಿಕೆಗಳಿಗೆ ವಿಷಯ ತಿಳಿಸುತ್ತಿದ್ದರು. ಅವರು ಕೊಟ್ಟ ಸಮಯಕ್ಕೆ ಸರಿಯಾಗಿ ಹೋದರೆ ಹಿಂದೆ ಬರುವ ತನಕವೂ ಲೀಡ್ ಬ್ಯಾಂಕ್ ನವರ ಜವಾಬ್ದಾರಿ. ತಿನ್ನುವುದು, ಊಟ ಮಾಡುವುದು ಎಲ್ಲವೂ ಅವರದೇ ಹೊಣೆ.

ಸಾಲ ಮೇಳಕ್ಕೆ ಬರುವಾಗ ಪೂಜಾರಿ ಕೈಯಲ್ಲಿ ಒಂದು ಕಾಗದ ತರುತ್ತಿದ್ದರು. ಆದರೆ ಅದನ್ನು ಓದಿ ಹೇಳುವ ಕ್ರಮವಿರಲಿಲ್ಲ, ಏನಿದರೂ ಭಾಷಣದಲ್ಲಿ ಹೇಳುತ್ತಿದ್ದರು. ಪೂಜಾರಿಯವರು ಒಂದು ದಿನವೂ ಬರೆದು ತಂದ ಭಾಷಣವನ್ನು ಓದಿದ್ದನ್ನು ಕಾಣಲಿಲ್ಲ. ಎಲ್ಲವೂ ನೆನಪು ಶಕ್ತಿ. ಅಂಕಿ ಅಂಶವನ್ನು ಹೇಳುವಾಗ ಮಾತ್ರ ಅವರು ತಾವು ತಂದಿದ್ದ ಕಾಗದ ನೋಡುತ್ತಿದ್ದರು.

ಕೆಲವು ಸಲ ಕಾರ್ಯಕರ್ತರು ತಾವೂ ಹೇಳುತ್ತಿದ್ದ ಅಹವಾಲುಗಳನ್ನು ಕಿವಿಗೊಟ್ಟು ಕೇಳಿ ಅದನ್ನು ನೆನಪಿನಲ್ಲಿ ಇಟ್ಟುಕೊಂಡು ಮತ್ತೆ ದೆಹಲಿಯಿಂದ ಬರುವಾಗ ಕಾರ್ಯಕರ್ತರ ಕೈಗೆ ಲಿಖಿತವಾಗಿ ಏನನ್ನೂ ಕೊಡುತ್ತಿರಲಿಲ್ಲ. ಸರ್ಕಾರದಿಂದ ಆದೇಶವೇ ವ್ಯಕ್ತಿಗಳಿಗೆ ಬರುತಿತ್ತು.

ಈ ಕಾರ್ಯಕ್ರಮವನ್ನು ಪೂಜಾರಿ ಅವರು ಎಂದು ತಪ್ಪಿಸಲಿಲ್ಲ. ಅವರು ಮಂತ್ರಿಯಾಗಿದ್ದಾಗ ಬ್ಯಾಂಕ್ ಡೈರೆಕ್ಟರ್ ಗಳು ಅನೇಕ ಮಂದಿ. ಹಾಗೆಯೇ ಕೇಂದ್ರ ಸರ್ಕಾರದ ವಿವಿಧ ಸಮಿತಿಗಳಿಗೆ ಪೂಜಾರಿ ಅಭಿಮಾನಿಗಳಾಗುತ್ತಿದ್ದರು. ಆದರೆ ಇವರ ಹೆಸರನ್ನು ಪೂಜಾರಿಯವರು ಬರೆದಿಟ್ಟುಕೊಳ್ಳುತ್ತಿರಲಿಲ್ಲ ಅಥವಾ ನನೆಗೆ ನೆನಪಿರಲಿಲ್ಲ, ಇನ್ನೊಮ್ಮೆ ಬರೆದುಕೊಡು ಎನ್ನುತ್ತಿರಲಿಲ್ಲ. ಇದು ಪೂಜಾರಿಯವರ ಸ್ಟೈಲ್ ಆಗಿತ್ತು.

ಸಚಿವರಾದವರಿಗೆಂದೇ ಸ್ಥಳೀಯ ಕಚೇರಿಯೂ ಇರಲಿಲ್ಲ. ಅವರು ಬರುವುದೇ ಸರ್ಕೂಟ್ ಹೌಸ್ ಗೆ. ಅಲ್ಲಿಂದಲೇ ದೆಹಲಿಗೆ ಹೋಗುವುದು, ಬಂಟ್ವಾಳದ ಮನೆಗೆ ಬರುವುದು. ಕಾರ್ಯಕರ್ತರಿಗೂ ಬಂಟ್ವಾಳದ ಮನೆಗೆ ಹೋಗುವ ಅವಕಾಶವಿಲ್ಲ.

ಹಾಗೆ ನೋಡಿದರೆ ಸಚಿವರಾದರೆ ಖರ್ಚು ಬಹಳವಾಗುತ್ತದೆ. ಕನಿಷ್ಟ ಸ್ಥಳೀಯವಾಗಿಯೇ ಸಿಬ್ಬಂಧಿ, ಕಚೇರಿ ಈ ಎಲ್ಲವೂ ಸರ್ಕಾರದ ಖರ್ಚಿನಲ್ಲಿಯೇ ಹೋಗುತ್ತದೆ. ಹೀಗೆ ಆಗುವ ಲೆಕ್ಕಾಚಾರವೆಷ್ಟು ಇದೆಲ್ಲವೂ ಶೂನ್ಯ. ಆದರೂ ಪೂಜಾರಿಯವರು ದೇಶ ಸುತ್ತಾಡುತ್ತಿದ್ದರು ಆ ಖರ್ಚಿನವಿವರವೂ ಇರಲಿಲ್ಲ.

ಜನಾರ್ದನ ಪೂಜಾರಿಯವರು ಹಣಕಾಸು ಸಚಿವರಾಗಿದ್ದಾಗ ಅವರ ಕಾರಿನ ಬಾಗಿಲು ತೆಗೆಯಲು ನಾ ಮುಂದು ತಾ ಮುಂದು ಎಂದು ದುಂಬಾಲು ಬೀಳುತ್ತಿದ್ದರು. ಪೂಜಾರಿಯವರನ್ನು ಹತ್ತಿರದಿಂದ ನೋಡಿದವರೂ ಕೂಡಾ ಈ ಗುಣಗಳನ್ನು ಕಂಡು ಆಶ್ಚರ್ಯ ಪಡುತ್ತಿದ್ದರು. ಇದು ಪೂಜಾರಿಯವರಿಂದ ಮಾತ್ರ ಸಾಧ್ಯವೆಂದು ಸುಮ್ಮನಾಗುತ್ತಿದ್ದರು.

ಜನಾರ್ದನ ಪೂಜಾರಿಯವರು ಹೂವಿನ ಮಾಲೆ ಸ್ವೀಕರಿಸುತ್ತಿರಲಿಲ್ಲ, ಈಗಲೂ ಅವರು ಅದೇ ಕ್ರಮ. ಆದರೆ ಬೇರೆಯವರಿಗೆ ಮಾಲೆ ಹಾಕುವುದನ್ನು ಮಾತ್ರ ಮಾಡುತ್ತಿದ್ದಾರೆ. ಸ್ಪಾಟ್ ನಲ್ಲಿಯೇ ಹಣ ಸಂಗ್ರಹಮಾಡಿ ಅಶಕ್ತರಿಗೆ ಹಂಚುವುದು ಪೂಜಾರಿಯವರ ಯೂನೀಕ್. ಆ ಕ್ಷಣ ಬಂದಾಗ ಕೆಲವರು ದೂರ ಹೋಗುವುದು ಉಂಟು, ಆದರೆ ಪೂಜಾರಿಯವರು ಕಾಣಿಸದಿದ್ದವರ ಹೆಸರು ಕರೆದು ಹಣದ ಮೊತ್ತ ಹೇಳಿಸುತ್ತಿದ್ದರು, ಕ್ಷಣಕ್ಕೆ ಆ ವ್ಯಕ್ತಿಯ ಕಿಸೆಯಲ್ಲಿ ಇಲ್ಲದಿದ್ದರೂ ಸ್ಥಳದಲ್ಲೆಯೇ ಸಾಲ ಪಡೆದು ಹಣ ಕೊಡಿಸುತ್ತಿದ್ದರು.

ಒಬ್ಬ ಸಚಿವರಾಗಿದ್ದರೂ ಸಾಮಾನ್ಯ ವ್ಯಕ್ತಿಯಾಗಿದ್ದರು. ಆದರೆ ಮುಂಗೋಪಿ, ತಕ್ಷಣಕ್ಕೆ ಸಿಡುಕು ಅವರ ಗುಣ. ಇನ್ನೊಂದು ಸತ್ಯವೆಂದರೆ ಅವರ ಮಗ ತೀರಿಕೊಂಡ ಬಳಿಕ ಸಿಟ್ಟಿನ ಅಂಶ ಬಹಳಷ್ಟು ಕಡಿಮೆಯಾಗಿದೆ. ಅವರು ಮೊದಲಿನಂತೆ ಎಗರಾಡುವುದಿಲ್ಲ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಆದರೆ ಒಂದೊಂದು ಸಲ ಅವರು ಅದನ್ನೂ ಮೀರುತ್ತಾರೆ.
ಈಗ ಸಚಿವರಾದವರೂ, ಶಾಸಕರಾದವರು ತಮ್ಮ ಸಾಧನೆಗಳನ್ನು ಪುಸ್ತಕ ತರುವ ಪರಂಪರೆ ಬಂದಿದೆ. ಆದರೆ ಜನಾರ್ದನ ಪೂಜಾರಿ ಅವರು ಇಂಥ ಪುಸ್ತಕ ತರುತ್ತಿದ್ದರೆ ಬಹುಷ ಅವರ ‘ಸಾಲಮೇಳದ ಸಂಗ್ರಾಮ’ ಬಹಳ ಹಿಂದೆಯೇ ಬರುತ್ತಿತ್ತು ಅಲ್ಲವೇ.
ಆದರೂ ಬಿ.ಜನಾರ್ದನ ಪೂಜಾರಿ ನಾನು ವೈಯಕ್ತಿಕವಾಗಿ ನೋಡಿದ ಅಪರೂಪದ ರಾಜಕಾರಣಿ. ಬೇರೆಯವರು ಹೊಗಳುತ್ತಾರೋ ಇಲ್ಲವೋ ಎನ್ನುವುದನ್ನು ನಾನು ಚಿಂತಿಸುವುದಿಲ್ಲ.

ಚಿದಂಬರ ಬೈಕಂಪಾಡಿ


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »