TOP STORIES:

FOLLOW US

ಏಕಾಂಗಿ ಜನಾರ್ದನ ಪೂಜಾರಿ ಇದ್ದುದು ಹೀಗೆ


ಏಕಾಂಗಿ ಜನಾರ್ದನ ಪೂಜಾರಿ ಇದ್ದುದು ಹೀಗೆ

ಸಾಮಾನ್ಯವಾಗಿ ಸಚಿವರಾದವರಿಗೆ ಸ್ಥಳೀಯವಾಗಿ ಸೆಕ್ರೇಟರಿ, ಆಪ್ತಸಹಾಯಕರು ಇರುತ್ತಾರೆ. ಪೊಲೀಸ್ ಭದ್ರತೆ ಇರುತ್ತದೆ. ಆದರೆ ಕೇಂದ್ರ ಸಚಿವರಾಗಿದ್ದ ಬಿ.ಜನಾರ್ದನ ಪೂಜಾರಿಯವರಿಗೆ ಈ ಯಾರು ಇರಲಿಲ್ಲ ಎಂದರೆ ಆಶ್ಚರ್ಯ. ಆದರೆ ಇದು ವಾಸ್ಯವ. ಅವರು ಕೇಂದ್ರ ಸಚಿವರಾಗಿ ಇದ್ದಷ್ಟು ಕಾಲವೂ ಸ್ಥಳೀಯವಾಗಿ ಇರಲಿಲ್ಲ ಎಂದರೆ ನಿಜಕ್ಕೂ ಕುತೂಲವೇ ಹೌದು.

ಜನಾರ್ದನ ಪೂಜಾರಿ ದೆಹಲಿಯಿಂದ ಬರುವಾಗ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲು ಜನಜಂಗುಳಿ ಇರುತ್ತಿತ್ತು, ಅವರು ದೆಹಲಿಗೆ ಹೋಗುವಾಗಲೂ ಅದೇ ಸ್ಥಿತಿ. ಹಾಗಾದರೆ ಇವರ ಕೆಲಸಗಳನ್ನು ಇಲ್ಲಿ ಯಾರು ಮಾಡುತ್ತಿದ್ದರು, ಅವರ ಪತ್ರಗಳನ್ನು ಯಾರು ಬರೆಯುತ್ತಿದ್ದರು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ.

ಸಾಲ ಮೇಳವಿರುವಾಗ ಜಿಲ್ಲಾ ಲೀಡ್ ಬ್ಯಾಂಕ್ ನವರು ಪತ್ರಿಕೆಗಳಿಗೆ ವಿಷಯ ತಿಳಿಸುತ್ತಿದ್ದರು. ಅವರು ಕೊಟ್ಟ ಸಮಯಕ್ಕೆ ಸರಿಯಾಗಿ ಹೋದರೆ ಹಿಂದೆ ಬರುವ ತನಕವೂ ಲೀಡ್ ಬ್ಯಾಂಕ್ ನವರ ಜವಾಬ್ದಾರಿ. ತಿನ್ನುವುದು, ಊಟ ಮಾಡುವುದು ಎಲ್ಲವೂ ಅವರದೇ ಹೊಣೆ.

ಸಾಲ ಮೇಳಕ್ಕೆ ಬರುವಾಗ ಪೂಜಾರಿ ಕೈಯಲ್ಲಿ ಒಂದು ಕಾಗದ ತರುತ್ತಿದ್ದರು. ಆದರೆ ಅದನ್ನು ಓದಿ ಹೇಳುವ ಕ್ರಮವಿರಲಿಲ್ಲ, ಏನಿದರೂ ಭಾಷಣದಲ್ಲಿ ಹೇಳುತ್ತಿದ್ದರು. ಪೂಜಾರಿಯವರು ಒಂದು ದಿನವೂ ಬರೆದು ತಂದ ಭಾಷಣವನ್ನು ಓದಿದ್ದನ್ನು ಕಾಣಲಿಲ್ಲ. ಎಲ್ಲವೂ ನೆನಪು ಶಕ್ತಿ. ಅಂಕಿ ಅಂಶವನ್ನು ಹೇಳುವಾಗ ಮಾತ್ರ ಅವರು ತಾವು ತಂದಿದ್ದ ಕಾಗದ ನೋಡುತ್ತಿದ್ದರು.

ಕೆಲವು ಸಲ ಕಾರ್ಯಕರ್ತರು ತಾವೂ ಹೇಳುತ್ತಿದ್ದ ಅಹವಾಲುಗಳನ್ನು ಕಿವಿಗೊಟ್ಟು ಕೇಳಿ ಅದನ್ನು ನೆನಪಿನಲ್ಲಿ ಇಟ್ಟುಕೊಂಡು ಮತ್ತೆ ದೆಹಲಿಯಿಂದ ಬರುವಾಗ ಕಾರ್ಯಕರ್ತರ ಕೈಗೆ ಲಿಖಿತವಾಗಿ ಏನನ್ನೂ ಕೊಡುತ್ತಿರಲಿಲ್ಲ. ಸರ್ಕಾರದಿಂದ ಆದೇಶವೇ ವ್ಯಕ್ತಿಗಳಿಗೆ ಬರುತಿತ್ತು.

ಈ ಕಾರ್ಯಕ್ರಮವನ್ನು ಪೂಜಾರಿ ಅವರು ಎಂದು ತಪ್ಪಿಸಲಿಲ್ಲ. ಅವರು ಮಂತ್ರಿಯಾಗಿದ್ದಾಗ ಬ್ಯಾಂಕ್ ಡೈರೆಕ್ಟರ್ ಗಳು ಅನೇಕ ಮಂದಿ. ಹಾಗೆಯೇ ಕೇಂದ್ರ ಸರ್ಕಾರದ ವಿವಿಧ ಸಮಿತಿಗಳಿಗೆ ಪೂಜಾರಿ ಅಭಿಮಾನಿಗಳಾಗುತ್ತಿದ್ದರು. ಆದರೆ ಇವರ ಹೆಸರನ್ನು ಪೂಜಾರಿಯವರು ಬರೆದಿಟ್ಟುಕೊಳ್ಳುತ್ತಿರಲಿಲ್ಲ ಅಥವಾ ನನೆಗೆ ನೆನಪಿರಲಿಲ್ಲ, ಇನ್ನೊಮ್ಮೆ ಬರೆದುಕೊಡು ಎನ್ನುತ್ತಿರಲಿಲ್ಲ. ಇದು ಪೂಜಾರಿಯವರ ಸ್ಟೈಲ್ ಆಗಿತ್ತು.

ಸಚಿವರಾದವರಿಗೆಂದೇ ಸ್ಥಳೀಯ ಕಚೇರಿಯೂ ಇರಲಿಲ್ಲ. ಅವರು ಬರುವುದೇ ಸರ್ಕೂಟ್ ಹೌಸ್ ಗೆ. ಅಲ್ಲಿಂದಲೇ ದೆಹಲಿಗೆ ಹೋಗುವುದು, ಬಂಟ್ವಾಳದ ಮನೆಗೆ ಬರುವುದು. ಕಾರ್ಯಕರ್ತರಿಗೂ ಬಂಟ್ವಾಳದ ಮನೆಗೆ ಹೋಗುವ ಅವಕಾಶವಿಲ್ಲ.

ಹಾಗೆ ನೋಡಿದರೆ ಸಚಿವರಾದರೆ ಖರ್ಚು ಬಹಳವಾಗುತ್ತದೆ. ಕನಿಷ್ಟ ಸ್ಥಳೀಯವಾಗಿಯೇ ಸಿಬ್ಬಂಧಿ, ಕಚೇರಿ ಈ ಎಲ್ಲವೂ ಸರ್ಕಾರದ ಖರ್ಚಿನಲ್ಲಿಯೇ ಹೋಗುತ್ತದೆ. ಹೀಗೆ ಆಗುವ ಲೆಕ್ಕಾಚಾರವೆಷ್ಟು ಇದೆಲ್ಲವೂ ಶೂನ್ಯ. ಆದರೂ ಪೂಜಾರಿಯವರು ದೇಶ ಸುತ್ತಾಡುತ್ತಿದ್ದರು ಆ ಖರ್ಚಿನವಿವರವೂ ಇರಲಿಲ್ಲ.

ಜನಾರ್ದನ ಪೂಜಾರಿಯವರು ಹಣಕಾಸು ಸಚಿವರಾಗಿದ್ದಾಗ ಅವರ ಕಾರಿನ ಬಾಗಿಲು ತೆಗೆಯಲು ನಾ ಮುಂದು ತಾ ಮುಂದು ಎಂದು ದುಂಬಾಲು ಬೀಳುತ್ತಿದ್ದರು. ಪೂಜಾರಿಯವರನ್ನು ಹತ್ತಿರದಿಂದ ನೋಡಿದವರೂ ಕೂಡಾ ಈ ಗುಣಗಳನ್ನು ಕಂಡು ಆಶ್ಚರ್ಯ ಪಡುತ್ತಿದ್ದರು. ಇದು ಪೂಜಾರಿಯವರಿಂದ ಮಾತ್ರ ಸಾಧ್ಯವೆಂದು ಸುಮ್ಮನಾಗುತ್ತಿದ್ದರು.

ಜನಾರ್ದನ ಪೂಜಾರಿಯವರು ಹೂವಿನ ಮಾಲೆ ಸ್ವೀಕರಿಸುತ್ತಿರಲಿಲ್ಲ, ಈಗಲೂ ಅವರು ಅದೇ ಕ್ರಮ. ಆದರೆ ಬೇರೆಯವರಿಗೆ ಮಾಲೆ ಹಾಕುವುದನ್ನು ಮಾತ್ರ ಮಾಡುತ್ತಿದ್ದಾರೆ. ಸ್ಪಾಟ್ ನಲ್ಲಿಯೇ ಹಣ ಸಂಗ್ರಹಮಾಡಿ ಅಶಕ್ತರಿಗೆ ಹಂಚುವುದು ಪೂಜಾರಿಯವರ ಯೂನೀಕ್. ಆ ಕ್ಷಣ ಬಂದಾಗ ಕೆಲವರು ದೂರ ಹೋಗುವುದು ಉಂಟು, ಆದರೆ ಪೂಜಾರಿಯವರು ಕಾಣಿಸದಿದ್ದವರ ಹೆಸರು ಕರೆದು ಹಣದ ಮೊತ್ತ ಹೇಳಿಸುತ್ತಿದ್ದರು, ಕ್ಷಣಕ್ಕೆ ಆ ವ್ಯಕ್ತಿಯ ಕಿಸೆಯಲ್ಲಿ ಇಲ್ಲದಿದ್ದರೂ ಸ್ಥಳದಲ್ಲೆಯೇ ಸಾಲ ಪಡೆದು ಹಣ ಕೊಡಿಸುತ್ತಿದ್ದರು.

ಒಬ್ಬ ಸಚಿವರಾಗಿದ್ದರೂ ಸಾಮಾನ್ಯ ವ್ಯಕ್ತಿಯಾಗಿದ್ದರು. ಆದರೆ ಮುಂಗೋಪಿ, ತಕ್ಷಣಕ್ಕೆ ಸಿಡುಕು ಅವರ ಗುಣ. ಇನ್ನೊಂದು ಸತ್ಯವೆಂದರೆ ಅವರ ಮಗ ತೀರಿಕೊಂಡ ಬಳಿಕ ಸಿಟ್ಟಿನ ಅಂಶ ಬಹಳಷ್ಟು ಕಡಿಮೆಯಾಗಿದೆ. ಅವರು ಮೊದಲಿನಂತೆ ಎಗರಾಡುವುದಿಲ್ಲ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಆದರೆ ಒಂದೊಂದು ಸಲ ಅವರು ಅದನ್ನೂ ಮೀರುತ್ತಾರೆ.
ಈಗ ಸಚಿವರಾದವರೂ, ಶಾಸಕರಾದವರು ತಮ್ಮ ಸಾಧನೆಗಳನ್ನು ಪುಸ್ತಕ ತರುವ ಪರಂಪರೆ ಬಂದಿದೆ. ಆದರೆ ಜನಾರ್ದನ ಪೂಜಾರಿ ಅವರು ಇಂಥ ಪುಸ್ತಕ ತರುತ್ತಿದ್ದರೆ ಬಹುಷ ಅವರ ‘ಸಾಲಮೇಳದ ಸಂಗ್ರಾಮ’ ಬಹಳ ಹಿಂದೆಯೇ ಬರುತ್ತಿತ್ತು ಅಲ್ಲವೇ.
ಆದರೂ ಬಿ.ಜನಾರ್ದನ ಪೂಜಾರಿ ನಾನು ವೈಯಕ್ತಿಕವಾಗಿ ನೋಡಿದ ಅಪರೂಪದ ರಾಜಕಾರಣಿ. ಬೇರೆಯವರು ಹೊಗಳುತ್ತಾರೋ ಇಲ್ಲವೋ ಎನ್ನುವುದನ್ನು ನಾನು ಚಿಂತಿಸುವುದಿಲ್ಲ.

ಚಿದಂಬರ ಬೈಕಂಪಾಡಿ


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »