TOP STORIES:

FOLLOW US

ಕಂಬಳ ಲೋಕದ ಕಿಂಗ್‌ ‘ತಾಟೆ’: ₹ 8 ಲಕ್ಷಕ್ಕೂ ಅಧಿಕ ದರಕ್ಕೆ ಮಾರಾಟವಾಗಿದ್ದ ಕೋಣದ ಸಾಧನೆ ಏನು..?


ಮಂಗಳೂರು, ನವೆಂಬರ್‌ 6: ಕರಾವಳಿಯಲ್ಲಿ ಕಂಬಳ ಕಲರವ ಆರಂಭವಾಗಿದೆ. ಋತುವಿನ ಆರಂಭದ ಎರಡೂಕಂಬಳಗಳು ಭರ್ಜರಿ ಯಶಸ್ಸುಗಳಿಸಿದೆ.

ಜೊತೆಗೆ ಕಂಬಳ ಕ್ಷೇತ್ರದ ಅತೀ ವೇಗದ ಓಟದ ಕೋಣ ಎಂಬ ಬಿರುದು ಪಡೆದತಾಟೆಎಂಬ ಕಂಬಳ ಕೋಣದ ಯಶಸ್ಸಿನನಾಗಲೋಟವೂ ಮುಂದುವರಿದಿದೆ. ಕಳೆದ ಎರಡು ಕಂಬಳದಲ್ಲೂ ಅಡ್ಡಹಲಗೆ ವಿಭಾಗದಲ್ಲಿತಾಟೆಕೋಣ ಪ್ರಥಮಸ್ಥಾನವನ್ನು ಪಡೆದಿದೆ.

ಕ್ರಿಕೆಟ್ ಲೋಕದ ದಿ ಬೆಸ್ಟ್ ಫಿನಿಷರ್ ಮಹೇಂದ್ರ ಸಿಂಗ್ ಧೋನಿಯಾದರೆ ಕಂಬಳ ಕ್ಷೇತ್ರದ ದಿ ಬೆಸ್ಟ್ ಫಿನೀಶರ್ ತಾಟೆಕೋಣ ಎನ್ನುವುದು ಕಂಬಳ ಕೂಟದ ಲಕ್ಷಾಂತರ ಮಂದಿ ಕಂಬಳ ಕೂಟದ ಅಭಿಮಾನಿಗಳ ಮಾತಾಗಿದೆ.


ಎಂಟೂ ಮುಕ್ಕಾಲು ಲಕ್ಷ ರೂಪಾಯಿಗೆ ಮಾರಾಟವಾಗಿದ್ದ ತಾಟೆ

ಕೊನೆಯ ಹತ್ತು ಮೀಟರ್ ದೂರದಲ್ಲಿ ಗಾಳಿಯನ್ನು ಸೀಳಿ ಮುನ್ನುಗ್ಗುವ ತಾಟೆ ಎಲ್ಲರ ಹುಬ್ಬೇರಿಸುವಂತೆ ವಿಜಯದ ಗುರಿತಲುಪುತ್ತದೆ. ಇದೇ ಮಾದರಿಯಲ್ಲಿ ನೂರಾರು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಕಂಬಳ ಕ್ಷೇತ್ರಕ್ಕೆ ಹಗ್ಗ ಕಿರಿಯವಿಭಾಗದಲ್ಲಿ ಕಾಲಿಟ್ಟ ತಾಟೆ ಬಳಿಕ ಹಿಂದೆ ತಿರುಗಿ ನೋಡಲೇ ಇಲ್ಲ. ಹಗ್ಗ ಕಿರಿಯ ವಿಭಾಗದಲ್ಲಿ ನೂರಾರು ಪದಕಗಳನ್ನುಸಂಪಾದಿಸಿದ ಬಳಿಕ ನೇಗಿಲು ಹಿರಿಯ ವಿಭಾಗಕ್ಕೆ ಕಾಲಿಟ್ಟಾಗ ಎಂಟೂ ಮುಕ್ಕಾಲು ಲಕ್ಷ ರೂಪಾಯಿಗೆ ಕಂಬಳದ ಪ್ರಸಿದ್ಧಕೋಣಗಳ ಯಜಮಾನ ಇರುವೈಲು ಪಾಣಿಲ ಬಾಡ ಪೂಜಾರಿಯವರ ಮಡಿಲು ಸೇರಿದೆ. ಇಷ್ಟು ದೊಡ್ಡ ಮೊತ್ತದಲ್ಲಿ ಕೋಣಮಾರಾಟವಾಗಿದ್ದು ಕಂಬಳ ಕ್ಷೇತ್ರದಲ್ಲೇ ಭಾರಿ ಸಂಚಲನ ಮೂಡಿಸಿತ್ತು.

ಕಂಬಳದಲ್ಲಿ ಬೊಟ್ಟಿಮಾರ್ ಮತ್ತು ತಾಟೆ ಕೋಣಗಳ ಜೋಡಿ ಮೋಡಿ

ಇರುವೈಲುಗೆ ಬಂದ ಬಳಿಕ ಬೊಟ್ಟಿಮಾರ್ ಮತ್ತು ತಾಟೆ ಕೋಣಗಳ ಜೋಡಿ ಕಂಬಳ ಪ್ರೇಮಿಗಳನ್ನು ಮೋಡಿ ಮಾಡಿದೆ. ಹಲವುವರ್ಷಗಳ ಕಾಲ ಕೋಣಗಳ ಜೋಡಿ ಕಂಬಳ ಕೂಟದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಾಚಿದೆ. 2019ರಲ್ಲಿ ಮಂಗಳೂರಿನಐಕಳದಲ್ಲಿ ನಡೆದ ಕಾಂತಾಭಾರೆ ಬೂಧಭಾರೆ ಜೋಡುಕರೆ ಕಂಬಳಕೂಟದಲ್ಲಿ ಕಂಬಳ ಇತಿಹಾಸದ ಅತೀ ವೇಗದ ಓಟ ಓಡಿದಖ್ಯಾತ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರ ಅಂದಿನ ಸಾಧನೆಗೆ ಕಾರಣ ಇದೇ ತಾಟೆ ಎನ್ನುವುದು ಕೂಡವಿಶೇಷವಾಗಿದೆ.

ತಾಟೆಯ ಓಟವನ್ನು ನೋಡಲೆಂದೇ ಕಂಬಳಕ್ಕೆ ಜನ ಸಾಗರ

ಕಂಬಳ ಕೂಟದಲ್ಲಿ ಎಲ್ಲರ ಕಣ್ಮನ ಸೆಳೆಯುವ ತಾಟೆ ಕೋಣ ಓಡುವ ರೀತಿಯೇ ಬಹಳ ವಿಶಿಷ್ಠವಾಗಿದೆ. ತಲೆ ಎತ್ತಿ ಓಡುವತಾಟೆ ವಿಜಯದ ಗುರಿಗೆ ಹಾರಿ ರೇಸ್‌ ಅನ್ನು ಅಂತಿಮ ಮಾಡುವುದೇ ವಿಶೇಷವಾಗಿದೆ. ಇಂದಿಗೂ ಜನ ಕಂಬಳಕ್ಕೆ ತಾಟೆಯಓಟವನ್ನು ನೋಡಲೆಂದೇ ಬರುವುದು. ಸದ್ಯ ನಾರಾವಿ ಯುವರಾಜ ಜೈನ್ ಅವರ ಯಜಮಾನಿಕೆಯ ತಂಡದಲ್ಲಿರುವ ತಾಟೆ, ಅಡ್ಡ ಹಲಗೆ ವಿಭಾಗದಲ್ಲಿ ಎರಡೂ ಕಂಬಳ ಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ ಯಜಮಾನನ ನಂಬಿಕೆ ಉಳಿಸಿದೆ.

ತಾಟೆ ಓಟ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಒಟ್ಟಿನಲ್ಲಿ ಕರಾವಳಿಯಲ್ಲಿ ಕಂಬಳ ರಂಗು ಹೆಚ್ಚಾಗಿದೆ. ಓಟಗಾರನ ಪ್ರಸಿದ್ಧಿಗೆ ಓಡುವ ಕೋಣದ ಪ್ರಸಿದ್ಧಿಯೇಜಗದಗಲವಾಗಿದ್ದು ಕಂಬಳದ ಮೇಲಿರುವ ಜನರ ಪ್ರೀತಿಗೆ ಸಾಕ್ಷಿಯಾಗಿದೆ. ತಾಟೆಯ ಓಟದ ವಿಡಿಯೋಗಳು ಸಾಮಾಜಿಕಜಾಲತಾಣದಲ್ಲಿ, ರೀಲ್ಸ್‌ ಮೂಲಕ ಜನಪ್ರಿಯತೆ ಪಡೆಯುತ್ತಿದೆ. ಚಿಗರೆಯ ಓಟದ ತಾಟೆಯನ್ನು ಅಭಿಮಾನಿಗಳು ಪ್ರೀತಿಯಿಂದಕಿಂಗ್ ತಾಟೆ ಎಂದು ಬಿರುದು ನೀಡಿ ಅಭಿಮಾನ ತೋರಿಸಿದ್ದಾರೆ.


Share:

More Posts

Category

Send Us A Message

Related Posts

ಬಂಟ್ವಾಳ: ಬಾಳೆಕಲ್ಲು ಗರಡಿಮನೆ ದೇವಕಿ ನಿಧನ


Share       ಬಂಟ್ವಾಳ: ಬಾಳೆಕಲ್ಲು ಗರಡಿಮನೆ ಶ್ರೀ ಕೊರಗಪ್ಪ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ದೇವಕಿ(85 ವ ) ಇವರು 21.10.2024 ನೇ ಸೋಮವಾರ ನಿಧನರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಎರಡು


Read More »

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »