TOP STORIES:

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ ಅಲ್ಲ ಎಂಬರ್ಥದಲ್ಲೇ ಪರಿಗಣಿತವಾಗಿತ್ತು. ಒಂದೇ ಆ ವ್ಯಕ್ತಿಯಲ್ಲಿ ಅಥವಾ ಗೈದ ವಿಧಿವಿಧಾನಗಳಲ್ಲಿ ಏನಾದರೂ ಲೋಪದೋಷಗಳಾದಾಗ ಮಾತ್ರ ಹೀಗಾಗುವುದಿತ್ತು.‌ ಹೆಚ್ಚಿನ ಸಂದರ್ಭಗಳಲ್ಲಿ ಆ ವ್ಯಕ್ತಿಯ ಭಾವೋದ್ವೇಗವೇ‌ ಇದಕ್ಕೆ ಕಾರಣ.‌ ಆದರೆ, ಮೂರು ನಾಲ್ಕು ವರ್ಷಗಳಲ್ಲಿ ಊರಿನ ಐದಾರು ಕಡೆಯ ಊದುವಿನ ಸಂದರ್ಭದಲ್ಲಿ ಹುಲಿಯಾವೇಶ. ಕೆಲವೆಡೆ ಒಂದೇ ಊದುವಿನಲ್ಲಿ ಐದಾರು ಮಂದಿಗೆ ಏಕಕಾಲಕ್ಕೆ ಆವೇಶ. ಅದನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಬಿಟ್ಟರೆ ಲೈಕೋ ಲೈಕು, ಶೇರೋ ಶೇರು, ಮೆಚ್ಚುಗೆಯ ಕಮೆಂಟೋ ಕಮೆಂಟು… ಸ್ಟೇಟಸಿಗ್ಗೇರಿಸಿ ಈ ಬಾರಿಯ ಸಾರ್ಥಕ್ಯ ಎಂಬಂತೆ ಬಿಂಬಿಸುವವರಿದ್ದಾರೆ. ಕೆಲವರಂತೂ ‘ಓಂ ಶ್ರೀ ವ್ಯಾಘ್ರವೇ ನಮಃ…..!!!! ಓಂ ಶ್ರೀ ದುರ್ಗೆಯೇ ನಮಃ’…!!!! ಜೈ ವ್ಯಾಘ್ರ ವಾಹಿನಿ….!!!

ಹುಲಿ ಆವೇಶಗೊಳ್ಳುವವನು ‘ಬೆಸ್ಟ್ ಟೈಗರ್ ಆರ್ಟಿಸ್ಟ್’ ಎಂಬ ಹೆಗ್ಗಳಿಕೆಯ ಹವಣಿಕೆಯಲ್ಲಿರುವಂತೆ ತೋರುತ್ತದೆ. ಹುಲಿ ಆವೇಶ ಆಗುವುದು ಊದು ಕಾರ್ಯಕ್ರಮದ ಸ್ಪೆಷಲ್ ಆಕರ್ಷಣೆ ಎಂಬಂತಾಗಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಹೀಗಾಗಲು ಆ ವ್ಯಕ್ತಿಯೊಡನೆ ಆಯೋಜಿತ ತಂಡವು ಒಳಒಪ್ಪಂದವೇನಾದರೂ ಮಾಡಿಕೊಂಡಿರುವಂತೆಯೂ ಕಂಡದ್ದಿದೆ.

 

ಅಷ್ಟಕ್ಕೂ ಈ ಆವೇಶಧಾರಿಗಳ ಮೈಯಲ್ಲಿ ಬರುವುದಾದರೂ ಏನು? ‘ಹುಲಿ’ ಎಂಬ ಒಕ್ಕೊರಲ ಉತ್ತರ ಕೊಡುವುದಾದರೆ ಆ ಹುಲಿ ಯಾವುದು?‌ಏಕೆ ಕರೆಯದೆ ಬರುತ್ತದೆ? ಅದರ ಅಪೇಕ್ಷೆ ಏನು ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕು. ವೇಷದ ಹುಲಿಯನ್ನು ಒಂದು ‘ದೈವಿಕ ಶಕ್ತಿ’, ದುರ್ಗೆಯ ವಾಹನ ಎಂಬ ಅರ್ಥದಲ್ಲಿ ಪರಿಗಣಿಸಿದರೂ ಅದರ ವೇಷವನ್ನಷ್ಟೇ ತೊಡಬಹುದಲ್ಲದೆ ಶಕ್ತಿಧಾರಣೆ ತೀರಾ ಅಪ್ರಸ್ತುತ. ವರ್ಷಕೊಮ್ಮೆ ವೇಷ ತೊಡುವವನ ಮೇಲೆ ಹಾಗೆಲ್ಲ ಒಂದು ಉಗ್ರಶಕ್ತಿ ಆವೇಶಗೊಳ್ಳುತ್ತದೆಯೇ? ಹಳೆಯ ದಿನಗಳಂತೆ ಒಂದು ಶಿಸ್ತುಬದ್ಧ ವ್ರತಾಚರಣೆಯ ಉಪಾದಿಯಲ್ಲಿ ಕಟ್ಟುನಿಟ್ಟಿನ ಶುದ್ಧಾಚಾರ ಪಾಲಿಸಿ ಹುಲಿವೇಷ ಧರಿಸುವ ಕ್ರಮ ಈಗ ಇಲ್ಲ. ಹೀಗಿರುವಾಗ ಆವೇಶಕ್ಕೆ ಮಾನದಂಡವೇನಾದರೂ ಬೇಕಲ್ಲವೇ?

ವೇಷಧಾರಣೆಯ ಸಂದರ್ಭದಲ್ಲಿ ಆವೇಶಗೊಳ್ಳುವುದು ಎಲ್ಲೋ ದೈವಾರಾಧನೆಯ ಅರದಲ ಸಂದರ್ಭದ ವಸಯವನ್ನು ನೆನಪಿಸುವಂತಿದೆ. ಅಲ್ಲಿರುವ

ಎಲ್ಲರ ನಡುವೆ ತನ್ನತ್ತ ನೆರೆದವರ ವಿಶೇಷ ಚಿತ್ತ ಸೆಳೆಯುವ ತಂತ್ರವಾಗಿಯೂ ಬಳಕೆಯಾಗುವ ಸಾಧ್ಯತೆಯಿದೆ. ಬಹುಜನ ನಿರೀಕ್ಷೆಗಳಿರುವ ಆಯಾ ಸಮೂಹ ಅಥವಾ ಸಂದರ್ಭಗಳ ಪ್ರೇರಣೆಯೂ ಆಗಿರಬಹುದು.

ಊದು ಮುಹೂರ್ತದಲ್ಲಿ ನೆರೆದವರ ಮನೋರಂಜನೆಗಾಗಿ ವಿಶೇಷ ಆಹ್ವಾನಿತರಾಗಿ ಎಲ್ಲರೊಂದಿಗೆ ಊದು (ಧೂಪ) ಹಾಕಿ ಬೆಸ್ಟ್ ಪರ್ಫೋಮೆನ್ಸ್ ಕೊಟ್ಟು ಒಂದು ಕಡೆಯ ಪೇಮೆಂಟ್ ಪಡೆದುಕೊಂಡು ತಕ್ಷಣ ಇನ್ನೊಂದು ಕಡೆಯ ಊದಿನ ಕುಣಿತಕ್ಕೆ ನಿಲ್ಲುವ ರೆಡಿಮೆಡ್ ಡ್ಯಾನ್ಸರ್ಸ್‌ಗಳಂತೆ ಈ ಆವೇಶಧಾರಿಗಳನ್ನೂ ಪ್ರತಿ ಊದು ಕಾರ್ಯಕ್ರಮದ ಗಾಂಭೀರ್ಯ, ನೈಜತೆ, ಉಗ್ರತೆ ಹೆಚ್ಚಿಸುವ ಸಲುವಾಗಿ ಹಣಕೊಟ್ಟು ಅಲ್ಲಲ್ಲಿಗೆ ಕರೆಸುವ ಪರಿಪಾಟಲು ಪ್ರಾರಂಭವಾಗಬಹುದು.

ಇರುವುದನ್ನೇ ಚೆಂದಕ್ಕೆ ಮುಂದುವರಿಸಿಕೊಂಡು ಹೋದರೆ ಸಾಲದೇ? ಮನೋರಂಜನಾ ಪ್ರಧಾನ ಕಲೆಯನ್ನು ಏಕೆ ಹೆಚ್ಚೆಚ್ಚು ಧಾರ್ಮಿಕಗೊಳಿಸಬೇಕು ? ಯಕ್ಷಗಾನದ ಚೌಕಿಯಂತೆ ಊದುಮಂಟಪದಲ್ಲೂ ಕಾಣಿಕೆಡಬ್ಬಿ ಇಟ್ಟು ಪೂಜೆ, ಬಗೆಬಗೆಯ ಆರತಿಗಳು, ತೀರ್ಥ ವಿತರಣೆ, ಪ್ರಸಾದ ವಿನಿಯೋಗಗಳು ಪ್ರಾರಂಭವಾಗುವ ದಿನಗಳು ದೂರವಿಲ್ಲ. ದೈವಕಟ್ಟುವವರೇ ತೊಡುವ ಬಹುಪಾಲು ದೈವಾಲಂಕಾರದ ಪರಿಕರಗಳಿರುವ ಆಟಿ ಕಳೆಂಜ, ಸೋಣದ ಜೋಗಿಗಳೇ ಆವೇಶಗೊಂಡ ಉದಾಹರಣೆಗಳಿಲ್ಲ. ಏಕೆಂದರೆ ಅವು ಆವೇಶದ ಶಕ್ತಿಗಳಲ್ಲ. ಹಾಗಿರುವಾಗ ಈ ಹುಲಿ?

 

ವೇಷಧಾರಣೆಯ ಪೂರ್ವದಲ್ಲಿ ಸಂದರ್ಭಪ್ರೇರಿತ ಆಕರ್ಷಣೆ ಅಥವಾ ಆವೇಶಕ್ಕೆ ಒಳಗಾಗುವುದು ಸಹಜತೆ ಅಲ್ಲ. ನೈಜತೆಯೆಂದೂ ತಿಳಿದುಕೊಳ್ಳಬಾರದು. ಅದೊಂದು ಒಂದು ಬಗೆಯ ನ್ಯೂನತೆ ಎನ್ನುವುದೇ ಸರಿ. ಹಿರಿಯರು ಹೇಳುವಂತೆ, ಅದು ತಪ್ಪುಕಾಣಿಕೆ ಹಾಕುವಷ್ಟು ಪ್ರಮಾದ. ಒಪ್ಪತಕ್ಕದ್ದಲ್ಲದ ವಿದ್ಯಮಾನ. ಇಂತಹ ವ್ಯಕ್ತಿದೋಷ, ಕಾರ್ಯಕ್ರಮದ ವಿಧಿದೋಷಗಳನ್ನು ಕಡಿಮೆ ಮಾಡುವುದೇ ಉದ್ದೇಶವಾಗಬೇಕೇ ಹೊರತು, ಆವೇಶಧಾರಿಗಳ ಸಂಖ್ಯೆ ಹೆಚ್ಚಿಸುವುದಲ್ಲ. ಈಗಾಗಲೇ ಇಂತಹ ವೀಡಿಯೊಗಳನ್ನು ನೋಡಿ ಅನ್ಯರು ಬಿದ್ದೆದ್ದು ನಕ್ಕದ್ದಾಯಿತು. ಇನ್ನು ಕೆಲವೇ ವರ್ಷಗಳಲ್ಲಿ ಆವೇಶಗೊಂಡವನು ಮುಂದುವರಿದು ದೈವದಂತೆ ಕೈಯಲ್ಲಿ ಜಂಡೆ, ಧೂಪದ ತಟ್ಟೆ, ಹುಲಿಮಂಡೆ, ಹೂವುಗಳನ್ನು ಹಿಡಿದುಕೊಂಡು ವಿವಿಧ ಬಗೆಯ ಕುಣಿತ, ಅಭಿನಯ ಮಾಡುವ ಹೊಸತನವನ್ನೂ ತೋರಿಸಿಯಾನು.

 

ಅಂಗಣಬಿಟ್ಟ ಬಿಟ್ಟ ದೈವಾರಾಧನೆಯು ಈಗಾಗಲೇ ಬೀದಿಬೀದಿಗಳಲ್ಲಿ ಪ್ರದರ್ಶನದ ಸರಕುಗಳಾಗಿ ನವಶಿಕ್ಷಿತರ ಅವಿಶ್ವಾಸಕ್ಕೆ ಕಾರಣವಾಗುತ್ತಿದೆ. ಅವನ್ನು ಇರುವೆಡೆಯಲ್ಲೇ ಇರುವ ಹಾಗೆ ಕಟ್ಟಿಡುವ ನಿಷ್ಠೆ ನಮಗಿಲ್ಲ. ನಾವು ದಿನೇದಿನೇ ಹೊಸದೊಂದು ಟ್ರೆಂಡನ್ನು ಪರಿಚಯಿಸುವ ಹವಣಿಕೆಯಲ್ಲಿದ್ದೇವೆ. ಇನ್ನು ಊದುಮಂಟಪದಲ್ಲೂ ಆವೇಶಗಳೇ ತುಂಬಿಹೋದರೆ ಈಗಿನ ಮಕ್ಕಳೆಲ್ಲರೂ ದೈವ ಮತ್ತು ವೇಷಗಳೆರಡೂ ಒಂದೇ ಎಂದಂದುಕೊಳ್ಳುತ್ತಾರೆ ಅಷ್ಟೆ. ಈ ವಿದ್ಯಮಾನವನ್ನು ಅವರು ಕಾಪುವಿನ ಐತಿಹಾಸಿಕ ಪಿಲಿಕೋಲಕ್ಕೋ, ಕೇರಳದ ಪಿಲಿಭೂತಕ್ಕೋ ಹೋಲಿಸಿ ನೋಡುವಂತಾದರೂ ಆಶ್ಚರ್ಯವಿಲ್ಲ. ಅನುಭವಿಗಳಿಗಾದರೆ ಏನೋ ಅನ್ನಬಹುದು… ಆದರೆ ವರ್ಷವಿಡೀ ಬೇಕಾಬಿಟ್ಟಿಯಾಗಿ ಊರುತಿರುಗಿಕೊಂಡಿರುವ ಆಸಾಮಿಗೂ, ಮಕ್ಕಳಿಗೂ, ಮೊದಲ ಬಾರಿ ವೇಷ ಹಾಕುವವನಿಗೂ ಆವೇಶವಾಗುವುದು ಕೆಲವೊಮ್ಮೆ ನಗು ತರಿಸುತ್ತದೆ.‌

ಅಷ್ಟು ದುರ್ಬಲ ಮನಸ್ಸಿನವರು ಉಗ್ರಕಲ್ಪನೆಯ ಹುಲಿಯಂತಹ ವೇಷ ತೊಡಲು ಸೂಕ್ತರಲ್ಲ ಬಿಡಿ.

ಪಿಲಿಯಾವೇಶ ಒಂದು ವಿಲಕ್ಷಣ ಬೆಳವಣಿಗೆಯೇ ಹೊರತು ವೇಷದ ಶುಭಪ್ರದ ಸಂಪ್ರದಾಯವಲ್ಲ.

ಬರೆಹ – ಡಾ ಅರುಣ್ ಉಳ್ಳಾಲ್


Related Posts

ಬಿಲ್ಲವರ ಉನ್ನತಿಯಲ್ಲಿ ನಾರಾಯಣ ಗುರುಗಳ ಪಾತ್ರ ಗುರುತರವಾದುದು ಡಾ.ಮುಕೇಶ್ ಕುಮಾರ್


Share        ಮುಂಬಯಿ ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು.


Read More »

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »