TOP STORIES:

FOLLOW US

ಕುಂಚದಲ್ಲಿ ಚಿತ್ರದ ನಾವಿಕನಾಗಿ,ಅಭಿನಯದಲ್ಲಿ ವಿಭಿನ್ನನಾಗಿ ನಿಂತ ಬಂಟ್ವಾಳದ “ರವಿ ಸಾಲ್ಯಾನ್”


ಬದುಕು ಎಂದರೆ ಸಮುದ್ರದ ನಡುವೆ ದೋಣಿಯಲ್ಲಿ ಸಾಗಿದ ರೀತಿಯೇ,ಹಾಯಿಗೋಲು ನಮ್ಮ ಕೈಯಲ್ಲೇ ಇದ್ದರೂ,ಒಂದೊಂದು ಸಲ ಗಾಳಿ ಬಂದ ಕಡೆ ಸಾಗಲೇ ಬೇಕು.ಇಲ್ಲದಿದ್ದರೆ ಗಾಳಿಯೇ ತನ್ನತ್ತ ತಿರುಗಿಸಿ ನಮ್ಮ ಗುರಿಯನ್ನು ವಿಚಲಿತಗೊಳಿಸುತ್ತದೆ..!

ದಾರಿ ತಪ್ಪಿದರು ಗುರಿ ತಪ್ಪಲೇಬಾರದು ಅಲ್ಲವೇ..!!

ಕಲಾವಿದನೊಳಗೊಬ್ಬ ಕಲಾವಿದನನ್ನು ಮೇಳೈಸಿದ ಕಲಾವಿದ “ರವಿ ಸಾಲ್ಯಾನ್”.

ಆನಂದ ಪೂಜಾರಿ ಮತ್ತು ಕುಸುಮಾರವರ ಎರಡನೇಯ ಮಗನಾಗಿ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದಲ್ಲಿ ಜನಿಸಿದ ರವಿ,ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಪಾದೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಮಣಿನಾಲ್ಕೂರುವಿನಲ್ಲಿ ಪೂರ್ಣಗೊಳಿಸಿದರು.
ಎಲ್ಲರಿಗೂ ಶಾಪವಾಗಿ ಪರಿಣಮಿಸಿದ ಬಡತನ ಇವರನ್ನೂ ಕೂಡ ಬಿಡಲೇ ಇಲ್ಲ..! ಒಂದು ತುತ್ತು ಅನ್ನಕ್ಕಾಗಿ ಪರದಾಡಿದ ಉದಾಹರಣೆಯನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.

10ನೇಯ ತರಗತಿ ಮುಗಿದ ನಂತರ ಒಂದಿಷ್ಟೂ ಹಣಕ್ಕಾಗಿ ಬೆಂಗಳೂರಿಗೆ ಬಂದು ದುಡಿದ ದಿನ ಇವರ ಪಾಲಿನಲ್ಲಿ ಇತ್ತು..!!ತದನಂತರ ಊರಿಗೆ ಮರಳಿ ತಾಂತ್ರಿಕ ಶಿಕ್ಷಣವನ್ನು ಕೂಡ ಪಡೆದರು.

ಶಾಲಾ ದಿನಗಳಲ್ಲಿ ಇದ್ದ ಚಿತ್ರ ಕಲೆಯ ಬಗ್ಗೆ ವಿಶೇಷ ಆಸಕ್ತಿ,ಇಂದು ರವಿ ಸಾಲ್ಯಾನ್ ರವರನ್ನು ಹಲವಾರು ಪ್ರತಿಭೆಗಳ ಮಧ್ಯೆ ತನ್ನ ಇರುವಿಕೆಯನ್ನು ತೋರ್ಪಡಿಸುತ್ತಿದ್ದಾರೆ.

ತಾಂತ್ರಿಕ ಶಿಕ್ಷಣವನ್ನು ಪೂರೈಸಿದ ನಂತರ ಉದ್ಯೋಗಕ್ಕಾಗಿ ಮತ್ತೊಮ್ಮೆ ಬೆಂಗಳೂರಿನತ್ತ ಪಯಣಿಸಿ,ಪ್ರತಿಷ್ಠಿತ ಖಾಸಗಿ ಕಂಪನಿಯಾದ ಟೊಯೊಟಾದಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಏನಾದರೂ ಸಾಧನೆ ಮಾಡಲೇಬೇಕೆಂಬ ಅತೀವ ಬಯಕೆ,ಅದರ ಜೊತೆ ಸಾಗಿದ ಹಠ,ಅದನ್ನು ಪಡೆಯಲು ಹೊತ್ತು ತಂದ ಪರಿಶ್ರಮದ ಮೂಟೆ ಇಂದು ರವಿಯವರನ್ನು ಕಲಾವಿದನೊಳಗೊಬ್ಬ ಕಲಾವಿದನನ್ನು ಹುಟ್ಟು ಹಾಕಿದೆ ಎಂದರೆ ತಪ್ಪಾಗಲಾರದು..!

ಬೆಂಗಳೂರಿನಲ್ಲಿ ನಾಗರಾಜ್ ಕೋಟೆಯವರ ಮಾರ್ಗದರ್ಶನದಲ್ಲಿ “ಬಣ್ಣ” ಸಂಸ್ಥೆಯ ಜೊತೆಯಲ್ಲಿ ‘ಜೋಗಿಯ ರಾಣಿ’ ಎಂಬ ನಾಟಕದಲ್ಲಿ ಬಣ್ಣ ಹಚ್ಚಿ ತನ್ನ ಅಭಿನಯದ ಯಾತ್ರೆಗೆ ಪೂರ್ಣ ಕುಂಭ ಸ್ವಾಗತವನ್ನು ಕೋರಿದರು.

ಅಗ್ನಿ ಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ ನೇತೃತ್ವದಲ್ಲಿ “ಆಮಂತ್ರಣ”ವೆಂಬ ಕಿರು ಚಿತ್ರದಲ್ಲಿ ಮೊದಲನೆಯ ಬಾರಿಗೆ ಅಭಿನಯಿಸಿದರು.

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಗೀತಾಂಜಲಿ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಸಿಲ್ಲಿ ಲಲ್ಲಿ ಮತ್ತು ಶಾಂತಮ್ ಪಾಪಂ ಧಾರಾವಾಹಿಗಳಲ್ಲಿ ನಟಿಸಿದ ಹೆಗ್ಗಳಿಕೆ ರವಿ ಅವರದು.ಹಾಗೆಯೇ ಜೀ ಕನ್ನಡದಲ್ಲಿ ಪ್ರಸಾರವಾದ “ಬ್ರಹ್ಮ ಗಂಟು” ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ.
‘ಗರ್ನಲ್ ‘ ಎಂಬ ಕಿರು ಚಿತ್ರದಲ್ಲಿ ನಾಯಕನಾಗಿ ನಟಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದ ರವಿಯವರು,ಕಲರ್ಸ್ ಕನ್ನಡದಲ್ಲಿ “ಮಂಗಳ ಗೌರಿ ಮದುವೆ”ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದಲ್ಲಿ ಬಣ್ಣ ಹಚ್ಚಿದ ಹಿರಿಮೆ ಇವರದು.

ರಾಜು ಕನ್ನಡ ಮೀಡಿಯಂ ಚಲನಚಿತ್ರದಲ್ಲಿ ನಟನೆ ಹಾಗೂ ಬಿಡುಗಡೆಗೆ ಸಿದ್ಧವಾದ ಥಗ್ ಆಫ್ ರಾಮಗಢ ಎಂಬ ಚಿತ್ರದಲ್ಲೂ ಕೂಡ ಅಭಿನಯಿಸಿದ್ದಾರೆ.
“ತದನಂತರ” ಎಂಬ ರಾಜೇಶ್ ಧ್ರುವ ನಿರ್ದೇಶನದ ಚಿತ್ರದಲ್ಲಿ ಅಭಿನಯದ ಜೊತೆಗೆ ಹಾಗೆಯೇ ಮನುರವರ ನಿರ್ದೇಶನದ ಹೊಸ ಚಿತ್ರದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಸುಶಾಂತ್ ಶೆಟ್ಟಿ ನಿರ್ದೇಶನದ ಮಗದೊಂದು ಕಿರು ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

ಪ್ರವೃತ್ತಿಯಲ್ಲಿ ಚಿತ್ರ ಕಲಾವಿದ ಆಗಿರುವ ರವಿಯವರು ತನ್ನ ಕುಂಚದಲ್ಲಿ ಹಲವಾರು ಪೆನ್ಸಿಲ್ ಚಿತ್ರ ಮತ್ತು ವಾಟರ್ ಕಲರ್ ಪೈಂಟಿಂಗ್ ನ್ನು ಮಾಡಿ ಅನೇಕ ಗಣ್ಯರನ್ನು ಮೂಕ ವಿಸ್ಮಿತನನ್ನಾಗಿ ಮಾಡಿದ ಇವರು,ಕನ್ನಡ ಮೇರು ನಟರಾದ ಶಿವರಾಜ್ ಕುಮಾರ್,ಕೇಂದ್ರ ಸಚಿವ ಅನುರಾಗ್ ಠಾಕೂರ್,ಪುನೀತ್ ರಾಜ್ ಕುಮಾರ್,ವಿಜಯೇಂದ್ರ ಯಡಿಯೂರಪ್ಪ,ರಾಜೇಶ್ ನಾಯ್ಕ್,ಉಪೇಂದ್ರ ಮತ್ತು ಸಾಲು ಮರದ ತಿಮ್ಮಕ್ಕರವರ ಮರು ಚಿತ್ರವನ್ನು ಬಿಡಿಸಿ ಅವರಿಂದಲೂ ಸೈ ಎನಿಸಿಕೊಂಡಿದ್ದಾರೆ.ಈಗಾಗಲೇ ನೂರಕ್ಕಿಂತ ಹೆಚ್ಚಿನ ಚಿತ್ರವನ್ನು ಬಿಡಿಸಿ,ವಿಭಿನ್ನ ಕಲೆಯಿಂದ ಎಲ್ಲರಿಂದ ಪ್ರಶಂಸೆಗೆ ಒಳಗಾದ ರವಿಯವರು,ಬೆಂಗಳೂರಿನ ಕೆಂಗೇರಿಯಲ್ಲಿ “ಸಾಲ್ಯಾನ್ ಗ್ಯಾಲರಿ” ಎಂಬ ಟ್ಯಾಟೂ ಸಂಸ್ಥೆಯನ್ನು ಹೊಂದಿದ್ದಾರೆ.

ಬಣ್ಣದ ಜಗತ್ತಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ರವಿಯವರು,ತನ್ನ ಕುಂಚದಲ್ಲಿ ವಿಭಿನ್ನ ಶೈಲಿಯ ಮರು ಚಿತ್ರಗಳಿಗೆ ಜೀವ ತುಂಬಿ ಜೀವ ಇರುವಂತೆ ಬಿತ್ತಿಸಿದ ಕಲಾವಿದ ಇವರು.

ರವಿಯವರ ಅಣ್ಣ ಜಯಂತ್ ಸಾಲ್ಯಾನ್ ಕೂಡ ವಿಶಿಷ್ಠ ಶೈಲಿಯ ರಂಗೋಲಿ ಕಲಾವಿದರು ಹೌದು..!
ಸಾಧನೆಯ ಹಿಂದಿನ ಕಠಿಣ ದಾರಿಯೂ ಕೂಡ ಸಾಧೆನೆಯೇ ಅಲ್ಲವೇ..!?
ಇನ್ನಷ್ಟು ವೇದಿಕೆಗಳು ಮತ್ತು ಅವಕಾಶಗಳು ರವಿಯವರಿಗೆ ಸಾಗಿ ಬರಲಿ ಎಂಬುವುದೇ ನಮ್ಮ ಆಶಯ..

ಬರಹ : ವಿಜೇತ್ ಪೂಜಾರಿ ಶಿಬಾಜೆ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »