TOP STORIES:

ಹೀಗೆ ಮಾಡಿ, ಒಂದು ತಿಂಗಳು ಬರುವ ಗ್ಯಾಸ್ ಎರಡು ತಿಂಗಳು ಬರುತ್ತೆ!


ಅಡುಗೆ ಅನಿಲದ ಬೆಲೆಯು ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಇದು ಜನಸಾಮಾನ್ಯರ ಮೇಲೆ ತೀವ್ರ ಹೊಡೆತ ಹಾಕಿದೆ. ಹೀಗಾಗಿ ಅಡುಗೆ ಗ್ಯಾಸ್ ಬಳಕೆ ಮಾಡುವ ಜನರು ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಸಂದರ್ಭ ಆದಷ್ಟು ಗ್ಯಾಸ್ ಉಳಿತಾಯ ಮಾಡಲು ಪ್ರಯತ್ನಿಸಬೇಕು.

ಗ್ಯಾಸ್ ನ್ನು ಉಳಿತಾಯ ಮಾಡಿದರೆ ಅದರಿಂದ ಹಣದ ಉಳಿತಾಯವು ಆಗುವುದು. ಹಾಗಾದರೆ ಗ್ಯಾಸ್ ಉಳಿಸುವುದು ಅಷ್ಟು ಸುಲಭವೇ ಎನ್ನುವ ಪ್ರಶ್ನೆಯು ಬರಬಹುದು. ಗ್ಯಾಸ್ ಉಳಿಸಲು ಏನು ಮಾಡಬೇಕು ಎಂದು ನೀವು ತಿಳಿಯಿರಿ.

​ಬರ್ನರ್ ಶುಚಿಯಾಗಿರಬೇಕು

ಗ್ಯಾಸ್ ನ್ನು ಉಳಿತಾಯ ಮಾಡಲು ನಿಯಮಿತವಾಗಿ ಬರ್ನರ್ ನ್ನು ಶುಚಿ ಮಾಡುತ್ತಲಿರಬೇಕು. ಬೆಂಕಿಯ ಬಣ್ಣವನ್ನು ಗಮನಿಸಿ ಮತ್ತು ಅದು ನೀಲಿ ಇದ್ದರೆ ಆಗ ಸರಿಯಾಗಿದೆ ಎಂದು ಹೇಳಬಹುದು.
ಆದರೆ ಕೆಂಪು, ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿದ್ದರೆ, ಆಗ ಅದು ಸರಿಯಾಗಿ ಉರಿಯುತ್ತಿಲ್ಲ ಎಂದರ್ಥ.ಬರ್ನರ್ ನ್ನು ನಿಯಮಿತವಾಗಿ ಶುಚಿ ಮಾಡುತ್ತಲಿದ್ದರೆ, ಅದರಿಂದ ಬೆಂಕಿಯ ಬಣ್ಣವು ನೀಲಿ ಆಗಿರುವುದು. ಇದರಿಂದ ಗ್ಯಾಸ್ ನಷ್ಟವಾಗುವುದು ತಪ್ಪುವುದು.

​ಪಾತ್ರೆಗಳನ್ನು ಒರೆಸಿ

ಕೆಲವರು ಕುಕ್ಕರ್, ಪಾತ್ರೆ ಇತ್ಯಾದಿಗಳನ್ನು ತೊಳೆದು ನೇರವಾಗಿ ಗ್ಯಾಸ್ ಮೇಲೆ ಇಟ್ಟುಬಿಡುವರು. ಆಧರೆ ಇದರಿಂದ ಗ್ಯಾಸ್ ವೆಚ್ಚವಾಗುವುದು.
ಇದಕ್ಕಾಗಿ ಪಾತ್ರೆಯನ್ನು ತೊಳೆದ ಬಳಿಕ ಸ್ವಲ್ಪ ಒರೆಸಿಕೊಳ್ಳಿ. ಇದರಿಂದ ಪಾತ್ರೆ ಬೇಗ ಬಿಸಿ ಆಗುವುದು ಹಾಗೂ ಗ್ಯಾಸ್ ವೆಚ್ಚವಾಗುವುದು ತಪ್ಪುವುದು.
ಮೊದಲೇ ತಯಾರಿಸಿಡಿ

ಅಡುಗೆ ಮಾಡಲು ಬೇಕಾಗಿರುವಂತಹ ಸಾಮಗ್ರಿಗಳನ್ನು ನೀವು ಮೊದಲೇ ತಯಾರು ಮಾಡಿಟ್ಟುಕೊಂಡು ಇದರ ಬಳಿಕ ಗ್ಯಾಸ್ ಉರಿಸಿ. ಗ್ಯಾಸ್ ಉರಿಸಿದ ಬಳಿಕ ತರಕಾರಿ ಕತ್ತರಿಸುವುದು ಸರಿಯಲ್ಲ. ಬೇಕಾಗುವಂತಹ ಸಾಮಗ್ರಿಗಳನ್ನು ಪಕ್ಕದಲ್ಲೇ ಇಟ್ಟುಕೊಂಡು ಅಡುಗೆ ಮಾಡಿ.

​ಪಾತ್ರೆಯ ಮುಚ್ಚಳ ಹಾಕಿಡಿ

ನೀವು ಯಾವುದೇ ಆಡುಗೆ ಮಾಡುತ್ತಲಿದ್ದರೂ ಆಗ ಪಾತ್ರೆಯ ಮುಚ್ಚಳ ಹಾಕಿಟ್ಟರೆ ಅದರಿಂದ ಬೇಗ ಬೇಯುವುದು ಹಾಗೂ ಅದರಿಂದ ಗ್ಯಾಸ್ ಕೂಡ ಉಳಿತಾಯ ಆಗುವುದು. ಪಾತ್ರೆಯ ಮುಚ್ಚಳವನ್ನು ಮುಚ್ಚಿಟ್ಟರೆ ಅದರಿಂದ ಹಬೆಯು ನಿರ್ಮಾಣವಾಗಿ ಆಹಾರ ಬೇಗ ಬೇಯುವುದು.

ಧಾನ್ಯ ಮತ್ತು ಅಕ್ಕಿ ನೆನೆಸಿಡಿ

ಕೆಲವೊಂದು ಧಾನ್ಯಗಳು ಬೇಯಲು ತುಂಬಾ ಸಮಯ ಬೇಕಾಗುವುದು. ಹೀಗಾಗಿ ಧಾನ್ಯಗಳು ಮತ್ತು ಅಕ್ಕಿಯನ್ನು ಕೆಲವು ಗಂಟೆಗಳ ಕಾಲ ನೆನೆಯಲು ಹಾಕಿ. ಇದರಿಂದ ಬೇಗನೆ ಬೇಯಲು ನೆರವಾಗುವುದು ಹಾಗೂ ಗ್ಯಾಸ್ ಉಳಿತಾಯವಾಗುವುದು.

​ಕೆಲವು ನಿಮಿಷ ಬಳಿಕ ಗ್ಯಾಸ್ ಕಡಿಮೆ ಮಾಡಿ

ಒಮ್ಮೆ ಪಾತ್ರೆಯು ಬಿಸಿಯಾದ ಬಳಿಕ ಗ್ಯಾಸ್ ಬೆಂಕಿ ಕಡಿಮೆ ಮಾಡಿ. ಆಹಾರ ಕುದಿಯಲು ಆರಂಭಿಸಿದ ವೇಳೆ ತುಂಬಾ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ತರಕಾರಿಗಳಲ್ಲಿ ಪೋಷಕಾಂಶಗಳು ಹಾಗೆ ಉಳಿಯುವುದು ಹಾಗೂ ಗ್ಯಾಸ್ ಬಳಕೆ ಕಡಿಮೆ ಆಗುವುದು.

​ಕುಕ್ಕರ್ ಬಳಸಿ

ಪ್ರೆಶರ್ ಕುಕ್ಕರ್ ನಲ್ಲಿ ಅಡುಗೆ ಬೇಗ ಆಗುವುದು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಗ್ಯಾಸ್ ಖರ್ಚು ಕಡಿಮೆ ಮಾಡಲು ಕುಕ್ಕರ್ ನ್ನು ಬಳಸಿ. ಇದು ಸಮಯ ಹಾಗೂ ಗ್ಯಾಸ್ ಎರಡನ್ನು ಉಳಿತಾಯ ಮಾಡುವುದು.

ಅಗಲವಾದ ಪಾತ್ರೆ ಬಳಸಿ

ಕೆಲವರು ತುಂಬಾ ಸಣ್ಣ ಪಾತ್ರೆಗಳನ್ನು ಗ್ಯಾಸ್ ನಲ್ಲಿ ಇಡುವರು. ಇದರಿಂದ ಗ್ಯಾಸ್ ಹೊರಭಾಗಕ್ಕೆ ಬರುವುದು. ಗ್ಯಾಸ್ ನಲ್ಲಿ ಅಗಲವಾದ ಪಾತ್ರೆಗಳನ್ನು ಇಡಬೇಕು. ಇದರಿಂದ ಗ್ಯಾಸ್ ಹೊರಗೆ ಬರುವುದು ತಪ್ಪುವುದು ಹಾಗೂ ಗ್ಯಾಸ್ ನ ಉಳಿತಾಯ ಕೂಡ ಆಗುವುದು.

​ಲೀಕ್ ಇದೆಯಾ ಎಂದು ನೋಡಿ

ಬರ್ನರ್, ಪೈಪ್ ಮತ್ತು ರೆಗ್ಯೂಲೇಟರ್ ನಲ್ಲಿ ಗ್ಯಾಸ್ ಲೀಕ್ ಆಗುತ್ತಿದೆಯಾ ಎಂದು ನೋಡಿ. ಮೂಗಿನ ಮೂಲಕ ಸೋರಿಕೆ ಪತ್ತೆ ಮಾಡಬಹುದು. ಯಾವುದೇ ಲೀಕ್ ಇದ್ದರೆ ಆಗ ನೀವು ಬೇಗನೆ ಇದನ್ನು ಪತ್ತೆ ಮಾಡಿ.
ಗ್ಯಾಸ್ ನ ವಾಸನೆ ಬರುತ್ತಲಿದ್ದರೆ, ಆಗ ಲೀಕ್ ಇದೆ ಎಂದು ಅರ್ಥ ಮಾಡಿಕೊಳ್ಳಿ. ಕೆಲವೊಂದು ಸಲ ಇದು ಅಪಾಯಕಾರಿ ಕೂಡ ಆಗಬಹುದು. ಹೀಗಾಗಿ ಪದೇ ಪದೇ ಇದನ್ನು ಗಮನಿಸುತ್ತಿರಬೇಕು.
ಸೂಕ್ತ ಸರಬರಾಜುದಾರರಿಂದ ಪಡೆಯಿರಿ: ನೀವು ಸೂಕ್ತ ಸರಬರಾಜುದಾರರಿಂದ ಗ್ಯಾಸ್ ಖರೀದಿ ಮಾಡಿ. ಅನಧಿಕೃತ ಗ್ಯಾಸ್ ಬಳಕೆ ಮಾಡಬೇಡಿ. ಇದರ ತೂಕವನ್ನು ಸರಿಯಾಗಿ ಗಮನಿಸಿ ಪಡೆಯಿರಿ.

​ಕೊನೆ ಮಾತು

ನಿಮಗೆ ಈಗ ಗ್ಯಾಸ್ ಉಳಿತಾಯದ ಬಗ್ಗೆ ತಿಳಿದಿದೆ. ಇನ್ನು ನೀವು ಇದನ್ನು ಪಾಲಿಸಿಕೊಂಡು ಹೋಗಿ ನಿಮಗಾಗಿ ಹಾಗೂ ಕುಟುಂಬಕ್ಕಾಗಿ ಗ್ಯಾಸ್ ಉಳಿತಾಯ ಮಾಡಿ.
ಗ್ಯಾಸ್ ಉಳಿತಾಯವು ಪ್ರತಿನಿತ್ಯವೂ ಏನೂ ಬದಲಾವಣೆ ಉಂಟು ಮಾಡದು, ಆದರೆ ಇದು ತಿಂಗಳಲ್ಲಿ ಹಣ ಉಳಿತಾಯ ಮಾಡುವುದು. ಸಣ್ಣ ಸಣ್ಣ ಪ್ರಮಾಣದಲ್ಲಿನ ಉಳಿತಾಯವು ದೊಡ್ಡದಾಗುವುದು.


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »