TOP STORIES:

FOLLOW US

ಕುಪ್ಪೆಪದವಿನಲ್ಲಿ ಜನಮೆಚ್ಚಿದ ಸೇವಕ… ಜಗದೀಶ್ ಪೂಜಾರಿ ದುರ್ಗಕೋಡಿ


ಕುಪ್ಪೆಪದವಿನಲ್ಲಿ ಜನಮೆಚ್ಚಿದ ಸೇವಕ..

ವ್ಯಕ್ತಿ ಹಣ‌ ಅಂತಸ್ತಿನಿಂದ ಶ್ರೀಮಂತನಾದರೆ, ಇಲ್ಲೊಬ್ಬರು ತನ್ನ  ಗುಣ, ಪರೋಪಕಾರ ಹೃದಯ ಶ್ರೀಮಂತಿಕೆಯಿಂದ ಜನ‌ಮೆಚ್ಚಿದಸೇವಕನಾಗಿ ತನ್ನ ಊರು ಮಾತ್ರವಲ್ಲದೆ ಅನೇಕ ಕ್ಷೇತ್ರಗಳಲ್ಲಿ ತನ್ನ ಹೆಸರಿಗೆ ಗುರುತು‌ಗಳಿಸಿದ್ದಾರೆ. ಯಾರಪ್ಪ ವ್ಯಕ್ತಿ ಎಂದಾಗನಮಗೆ ತಕ್ಷಣವೇ ನೆನಪಿಗೆ ಬರುವುದು

ಕುಪ್ಪೆ ಪದವಿನ ಜಗ್ಗಣ್ಣ “..

ಜಗದೀಶ್ ಪೂಜಾರಿ ದುರ್ಗಕೋಡಿ ಇವರು ದಿ. ವಾಸು ಪೂಜಾರಿ ಹಾಗು ಮುತ್ತು‌ ಪೂಜಾರಿ ದಂಪತಿಗಳ ಪುತ್ರ, ತನ್ನ ಬಾಲ್ಯದಿಂದಲೇಜನಪರ‌ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವ ಇವರು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ‌ ಕೈಜೋಡಿಸಿದವರು. ಇನ್ನು ಧಾರ್ಮಿಕ‌ಕಾರ್ಯಗಳಲ್ಲೂ ಇವರು  ನಿರಂತರವಾಗಿ ಸೇವೆಯನ್ನು ನೀಡಿ ರಾಮಕೃಷ್ಣ ಭಜನ ಮಂಡಳಿ‌ ಕುಪ್ಪೆ ಪದವಿನ ಕಾರ್ಯದರ್ಶಿ ಯಾಗಿ  ಸೇವೆ ನೀಡಿದವರು. ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿ ತನ್ನ ಬಿಡುವಿನ‌ ಸಮಯದಲ್ಲಿ ಶಾಲ ವಾಹನವನ್ನು ಚಲಾಯಿಸುವಶ್ರಮಜೀವಿಯೂ ಹೌದು. ಅನೇಕ ಜನಪರ ಕಾರ್ಯಗಳಲ್ಲಿ‌ ಗುರುತಿಸಿ ಸತತ ಮೂರು ಬಾರಿ 15 ವರುಷಗಳಿಂದ ಜನರೇಆಯ್ಕೆಮಾಡಿರುವ ಸೋಲಿಲ್ಲದ ಸರದಾರರು ಹೌದು. ತಾನು ಪಂಚಾಯತ್ ಸದಸ್ಯನಾಗಿ ಜನರ ಪ್ರತಿಯೊಂದು ಕಷ್ಟ ಗಳಿಗೂಹೆಗಲನ್ನು‌ ನೀಡುತ್ತಾ ಮುನ್ನಡೆಯುವ ಜೊತೆಗೆ‌ ಪಂಚಾಯತ್ ಮೂಲಕ‌ ದೊರಕುವ ಎಲ್ಲಾ ಸೌಲಭ್ಯಗಳನ್ನು ಜನರು ಸಮಗ್ರರೀತಿಯಲ್ಲಿ ತಲುಪಿಸುವ ಹೆಮ್ಮೆಯ‌ ಜನಪ್ರತಿನಿಧಿ. ಇನ್ನು ಬಿಲ್ಲವ ಸಮಾಜದ ಯುವವಾಹಿನಿ ರಿ. ಇದರ ಕುಪ್ಪೆಪದವು ಘಟಕದಮಾಜಿ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿರುತ್ತಾರೆ. ಪ್ರಸ್ತುತ(ಜಗ್ಗಣ್ಣ ರಿಕ್ಷಾ ) ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತ ಯುವಾಹಿನಿ ಕೇಂದ್ರ ಸಮಿತಿ(ರಿ.)ಮಂಗಳೂರು ಇದರ ಸಂಘಟನಕಾರ್ಯದರ್ಶಿ

ತನಗೆ ಎಷ್ಟೇ ಅಧಿಕಾರ ಅವಕಾಶಗಳಿದ್ದರೂ ಇಂದಿಗೂ ರಿಕ್ಷಾ ಚಾಲಕನಾಗಿ ತನ್ನ‌ ಮನೆಯನ್ನು ನಿಭಾಯಿಸುವ ಶ್ರಮಜೀವಿ ಮುಂದಿನದಿನಗಳಲ್ಲಿ ಜನರ ಆಶಿರ್ವಾದ ದಿಂದ ಇನ್ನಷ್ಟು ಎತ್ತರಕ್ಕೆ ಬೆಳೆಯುವ ನಾಯಕನಾಗಲಿ ಎಂಬುವುದು ನಮ್ಮೆಲ್ಲರ ಆಶಯ

ಬಿಲ್ಲವಾಸ್ ಗುರುಪುರ ಕೈಕಂಬ


Share:

More Posts

Category

Send Us A Message

Related Posts

ಶ್ರೀ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಕೂಟದ ವತಿಯಿಂದ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ಶ್ರೀ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಕೂಟದ ವತಿಯಿಂದ 14-02-2025 ರಂದು ಅಧ್ಯಕ್ಷರಾದ ಹರೀಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಹರೈನ್ ನಲ್ಲಿ ಬಿಡುಗಡೆ


Read More »

ಸರ್ಕಾರಿ ಆಸ್ಪತ್ರೆಗಳಲ್ಲಿದೆ ಗುಣಮಟ್ಟದ ಚಿಕಿತ್ಸೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಶ್ಲಾಘನೆ


Share       ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲೂ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವುದಕ್ಕೆ ವೆನ್ಲಾಕ್ ಆಸ್ಪತ್ರೆ ಉತ್ತಮ ನಿದರ್ಶನ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ತಾತ್ಸಾರ ಬೇಡ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.


Read More »

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »