TOP STORIES:

ಕುಪ್ಪೆಪದವಿನಲ್ಲಿ ಜನಮೆಚ್ಚಿದ ಸೇವಕ… ಜಗದೀಶ್ ಪೂಜಾರಿ ದುರ್ಗಕೋಡಿ


ಕುಪ್ಪೆಪದವಿನಲ್ಲಿ ಜನಮೆಚ್ಚಿದ ಸೇವಕ..

ವ್ಯಕ್ತಿ ಹಣ‌ ಅಂತಸ್ತಿನಿಂದ ಶ್ರೀಮಂತನಾದರೆ, ಇಲ್ಲೊಬ್ಬರು ತನ್ನ  ಗುಣ, ಪರೋಪಕಾರ ಹೃದಯ ಶ್ರೀಮಂತಿಕೆಯಿಂದ ಜನ‌ಮೆಚ್ಚಿದಸೇವಕನಾಗಿ ತನ್ನ ಊರು ಮಾತ್ರವಲ್ಲದೆ ಅನೇಕ ಕ್ಷೇತ್ರಗಳಲ್ಲಿ ತನ್ನ ಹೆಸರಿಗೆ ಗುರುತು‌ಗಳಿಸಿದ್ದಾರೆ. ಯಾರಪ್ಪ ವ್ಯಕ್ತಿ ಎಂದಾಗನಮಗೆ ತಕ್ಷಣವೇ ನೆನಪಿಗೆ ಬರುವುದು

ಕುಪ್ಪೆ ಪದವಿನ ಜಗ್ಗಣ್ಣ “..

ಜಗದೀಶ್ ಪೂಜಾರಿ ದುರ್ಗಕೋಡಿ ಇವರು ದಿ. ವಾಸು ಪೂಜಾರಿ ಹಾಗು ಮುತ್ತು‌ ಪೂಜಾರಿ ದಂಪತಿಗಳ ಪುತ್ರ, ತನ್ನ ಬಾಲ್ಯದಿಂದಲೇಜನಪರ‌ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವ ಇವರು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ‌ ಕೈಜೋಡಿಸಿದವರು. ಇನ್ನು ಧಾರ್ಮಿಕ‌ಕಾರ್ಯಗಳಲ್ಲೂ ಇವರು  ನಿರಂತರವಾಗಿ ಸೇವೆಯನ್ನು ನೀಡಿ ರಾಮಕೃಷ್ಣ ಭಜನ ಮಂಡಳಿ‌ ಕುಪ್ಪೆ ಪದವಿನ ಕಾರ್ಯದರ್ಶಿ ಯಾಗಿ  ಸೇವೆ ನೀಡಿದವರು. ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿ ತನ್ನ ಬಿಡುವಿನ‌ ಸಮಯದಲ್ಲಿ ಶಾಲ ವಾಹನವನ್ನು ಚಲಾಯಿಸುವಶ್ರಮಜೀವಿಯೂ ಹೌದು. ಅನೇಕ ಜನಪರ ಕಾರ್ಯಗಳಲ್ಲಿ‌ ಗುರುತಿಸಿ ಸತತ ಮೂರು ಬಾರಿ 15 ವರುಷಗಳಿಂದ ಜನರೇಆಯ್ಕೆಮಾಡಿರುವ ಸೋಲಿಲ್ಲದ ಸರದಾರರು ಹೌದು. ತಾನು ಪಂಚಾಯತ್ ಸದಸ್ಯನಾಗಿ ಜನರ ಪ್ರತಿಯೊಂದು ಕಷ್ಟ ಗಳಿಗೂಹೆಗಲನ್ನು‌ ನೀಡುತ್ತಾ ಮುನ್ನಡೆಯುವ ಜೊತೆಗೆ‌ ಪಂಚಾಯತ್ ಮೂಲಕ‌ ದೊರಕುವ ಎಲ್ಲಾ ಸೌಲಭ್ಯಗಳನ್ನು ಜನರು ಸಮಗ್ರರೀತಿಯಲ್ಲಿ ತಲುಪಿಸುವ ಹೆಮ್ಮೆಯ‌ ಜನಪ್ರತಿನಿಧಿ. ಇನ್ನು ಬಿಲ್ಲವ ಸಮಾಜದ ಯುವವಾಹಿನಿ ರಿ. ಇದರ ಕುಪ್ಪೆಪದವು ಘಟಕದಮಾಜಿ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿರುತ್ತಾರೆ. ಪ್ರಸ್ತುತ(ಜಗ್ಗಣ್ಣ ರಿಕ್ಷಾ ) ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತ ಯುವಾಹಿನಿ ಕೇಂದ್ರ ಸಮಿತಿ(ರಿ.)ಮಂಗಳೂರು ಇದರ ಸಂಘಟನಕಾರ್ಯದರ್ಶಿ

ತನಗೆ ಎಷ್ಟೇ ಅಧಿಕಾರ ಅವಕಾಶಗಳಿದ್ದರೂ ಇಂದಿಗೂ ರಿಕ್ಷಾ ಚಾಲಕನಾಗಿ ತನ್ನ‌ ಮನೆಯನ್ನು ನಿಭಾಯಿಸುವ ಶ್ರಮಜೀವಿ ಮುಂದಿನದಿನಗಳಲ್ಲಿ ಜನರ ಆಶಿರ್ವಾದ ದಿಂದ ಇನ್ನಷ್ಟು ಎತ್ತರಕ್ಕೆ ಬೆಳೆಯುವ ನಾಯಕನಾಗಲಿ ಎಂಬುವುದು ನಮ್ಮೆಲ್ಲರ ಆಶಯ

ಬಿಲ್ಲವಾಸ್ ಗುರುಪುರ ಕೈಕಂಬ


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »