TOP STORIES:

FOLLOW US

ಗಂಡಸರಿಗೆ ಕೂದಲು ಉದುರಲು ಪ್ರಾರಂಭ ಮಾಡಿದರೆ ಏನು ಅರ್ಥ?


ಮಾನಸಿಕ ಒತ್ತಡ ಹೆಚ್ಚಾದರೆ, ತಲೆ ಕೂದಲು ಹೆಚ್ಚು ಉದುರುತ್ತದೆ. ಇದಕ್ಕೆ ಒತ್ತಡ ನಿವಾರಣಾ ತಂತ್ರಗಳು ಪರಿಹಾರ ಅಷ್ಟೇ.

ಮಾನಸಿಕ ಒತ್ತಡದಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಪರೋಕ್ಷವಾಗಿ ಪ್ರಾರಂಭವಾಗುತ್ತವೆ. ಇದರಿಂದ ಇದ್ದಕ್ಕಿದ್ದಂತೆ ಮನುಷ್ಯನಿಗೆ ಬಿಪಿ, ಸಕ್ಕರೆ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ.

ಕೆಲವರಿಗೆ 30 ವರ್ಷಕ್ಕೆ ಬರುವ ಸಮಯದಲ್ಲಿ ತಲೆಕೂದಲು ಅರ್ಧಕ್ಕೆ ಅರ್ಧ ಉದುರಿ ಹೋಗಿರುತ್ತದೆ. ಇದಕ್ಕೆ ಈಗಿನ ಜೀವನ ಶೈಲಿ ಮತ್ತು ದುಡಿಮೆಯ ಒತ್ತಡ ಜೊತೆಗೆ ಸಂಸಾರದ ತಾಪತ್ರಯಗಳು ಕಾರಣ ಎಂದು ಹೇಳಬಹುದು.

ನಗರ ಪ್ರದೇಶದಲ್ಲಿ ವಾಸ ಮಾಡುವ ಜನರು ಮಾನಸಿಕ ಒತ್ತಡ ನಿವಾರಣೆಗೆ ಕೆಲವೊಂದು ತರಗತಿಗಳನ್ನು ಅಟೆಂಡ್ ಮಾಡುತ್ತಾರೆ. ಇದರ ಜೊತೆಗೆ ಈ ಲೇಖನದಲ್ಲಿ ತಿಳಿಸಿರುವ ಹಾಗೆ ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸಿದರೆ ಮಾನಸಿಕ ಒತ್ತಡ ಸಮಸ್ಯೆ ನಿಮ್ಮಿಂದ ಶಾಶ್ವತವಾಗಿ ದೂರ ಆಗುತ್ತದೆ ಮತ್ತು ಸಮೃದ್ಧವಾದ ತಲೆ ಕೂದಲಿನ ಬೆಳವಣಿಗೆ ನಿಮ್ಮದಾಗುತ್ತದೆ.

ಮಧುಮೇಹ ಸಮಸ್ಯೆಯಿಂದ ಗಂಡಸರಿಗೆ ನೆತ್ತಿಯ ಕೂದಲು ಉದುರಬಹುದು

1. ಪುರುಷರು ವಯಸ್ಕರಾಗಿ ಜೀವನ ನಡೆಸಿದ ಕೆಲವು ದಿನಗಳಲ್ಲಿ ಹಣೆಯ ಮೇಲ್ಭಾಗದಲ್ಲಿ ಹಾಗೂ ನೆತ್ತಿಯ ಮಧ್ಯಭಾಗದಲ್ಲಿ ನಿಧಾನವಾಗಿ ತಲೆಕೂದಲು ಮಾಯವಾಗಲು ಪ್ರಾರಂಭವಾಗುತ್ತದೆ.

2. ಇದನ್ನು ವೈದ್ಯಕೀಯ ಭಾಷೆಯಲ್ಲಿ ಆಂಡ್ರೂಜನಿಕ್ ಅಲೋಪೆಸಿಯಾ ಎಂದು ಕರೆಯುತ್ತಾರೆ. ಪುರುಷರಲ್ಲಿ ಬಹಳ ಸಾಮಾನ್ಯವಾಗಿ ಈ ಸಮಸ್ಯೆ ಇರುತ್ತದೆ. ಬಹುತೇಕ ಶೇಕಡ 50% ಪುರುಷರಲ್ಲಿ 50 ವರ್ಷ ದಾಟಿದ ನಂತರದಲ್ಲಿ ಮೇಲೆ ಹೇಳಿದ ಹಾಗೆ ತಲೆ ಕೂದಲು ಮಾಯವಾಗುತ್ತಾ ಬರುತ್ತದೆ.

3. ಕೆಲವರಿಗೆ ಒಂದೇ ಕಡೆ ಕೂದಲು ಹೆಚ್ಚು ಉದುರಿದರೆ ಇನ್ನು ಕೆಲವರಿಗೆ M ಆಕಾರದಲ್ಲಿ ತಲೆ ಕೂದಲು ಉದುರುತ್ತದೆ. ಇದಕ್ಕೂ ಮೀರಿದಂತೆ ಮಧ್ಯವಯಸ್ಸಿನಲ್ಲಿ ಮತ್ತು ವಯಸ್ಸಾದ ನಂತರ ತಲೆ ಕೂದಲು ಹೆಚ್ಚು ಉದುರುವುದು ಸಾಮಾನ್ಯ.

ಅನುವಂಶಿಯತೆ ಕೂಡ ಕಾರಣ ಇರಬಹುದು!

ಆದರೆ ಯಾವುದೇ ವಯಸ್ಸಿನಲ್ಲಿ ಕೂಡ ತಲೆಕೂದಲು ಉದುರುವಿಕೆ ಇರುತ್ತದೆ. ಅನುವಂಶಿಯತೆ ಕೂಡ ಇದಕ್ಕೆ ಒಂದು ಕಾರಣ ಆಗಿರಬಹುದು.

ಕುಟುಂಬದಲ್ಲಿ ಈ ಹಿಂದೆ ಯಾರಿಗಾದರೂ ತಲೆ ಕೂದಲು ಹೆಚ್ಚು ಉದುರಿ ಹೋಗಿದ್ದರೆ ಅದು, ನಿಮಗೂ ಹಾಗೂ ನಿಮ್ಮ ಮಕ್ಕಳಿಗೂ ಸಹ ಕಾಣಬಹುದು.

ನಿಮ್ಮ ತಾಯಿಯ ಕಡೆಯ ಸಂಬಂಧದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ ನಿಮಗೆ ಇಂತಹ ತಲೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಏಕೆಂದರೆ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಅಪಾರ ಪ್ರಮಾಣದಲ್ಲಿ ಇರುವುದು ಇದಕ್ಕೆ ಕಾರಣ.

ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಎದುರಾಗುವ ಮಾನಸಿಕ ಖಿನ್ನತೆ ಮತ್ತು ಆತಂಕ ಕೂಡ ಒಂದು ಕಾರಣ ಎಂದು ಹೇಳಬಹುದು. ಏಕೆಂದರೆ ಮಾನಸಿಕವಾಗಿ ಹೆಚ್ಚು ದುಗುಡ ಮನೆ ಮಾಡಿದರೆ, ದೇಹದಲ್ಲಿ ಲೈಂಗಿಕ ಹಾರ್ಮೋನುಗಳ ಮಟ್ಟ ಮತ್ತು ಉತ್ಪತ್ತಿ ಹೆಚ್ಚಾಗುತ್ತದೆ.

ಹಾಗಾಗಿ ಮೊದಲು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಮಾನಸಿಕ ಒತ್ತಡ ಹೆಚ್ಚಾದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಕೂಡ ಏರುಪೇರಾಗುತ್ತದೆ. ಇದರಿಂದಲೂ ಸಹ ತಲೆಕೂದಲು ಉದುರಿ ಹೋಗುವ ಸಾಧ್ಯತೆ ಇರುತ್ತದೆ.

ಈ ಲೇಖನದಲ್ಲಿ ನಿಮ್ಮ ತಲೆ ಕೂದಲು ಉದುರುವಿಕೆಯನ್ನು ಹೆಚ್ಚು ಮಾಡುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಕೆಲವು ವಿಧಾನಗಳನ್ನು ತಿಳಿಸಿ ಕೊಡಲಾಗಿದೆ.

ವೈದ್ಯಕೀಯ ಲೋಕ ಸಹ ಇದನ್ನು ಒಪ್ಪಿಕೊಂಡಿದೆ. ಈ ವ್ಯಾಯಾಮವನ್ನು ಮಾಡುವುದು ಅತ್ಯಂತ ಸುಲಭ. ನೀವು ಸಹ ಅತಿಯಾದ ಮಾನಸಿಕ ಒತ್ತಡ ಎದುರಾದ ಸಂದರ್ಭದಲ್ಲಿ ಹೀಗೊಮ್ಮೆ ಟ್ರೈ ಮಾಡಿ.

ಮೊದಲು ನೆಲದ ಮೇಲೆ ಕಣ್ಣುಮುಚ್ಚಿಕೊಂಡು ನೇರವಾಗಿ ಕುಳಿತುಕೊಳ್ಳಿ

* ಈಗ ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಿ. ದೀರ್ಘವಾಗಿ ಉಸಿರನ್ನು ಒಳಗೆ ತೆಗೆದು ಕೊಳ್ಳುವುದರಿಂದ ನಿಮ್ಮ ಹೊಟ್ಟೆಯ ಭಾಗದಿಂದ ನಿಮ್ಮ ತಲೆಯವರೆಗೆ ಉಸಿರಿನ ಚಲನೆಯನ್ನು ಅನುಭವಿಸಿ.

* ಉಸಿರನ್ನು ಹೊರಬಿಡುವ ಮೂಲಕ ಮತ್ತೊಮ್ಮೆ ಇದೇ ಪದ್ಧತಿಯನ್ನು ಅನುಸರಿಸಿ. ಒಂದು ವೇಳೆ ನಿಮಗೆ ಮಾನಸಿಕ ಒತ್ತಡ ಕಂಡುಬಂದ ಸಮಯದಲ್ಲಿ ಪ್ರತಿ ಬಾರಿ ಐದು ನಿಮಿಷ ಈ ರೀತಿ ಮಾಡಿ. ಇದರಿಂದ ನಿಮಗೆ ಹೆಚ್ಚು ವಿಶ್ರಾಂತಿ ಮತ್ತು ಮನಸ್ಸಿಗೆ ಶಾಂತಿ ಜೊತೆಗೆ ನಿಮ್ಮ ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ.

50 ವರ್ಷ ಮೇಲ್ಪಟ್ಟವರಿಗೆ ಧ್ಯಾನದ ಟಿಪ್ಸ್

ಧ್ಯಾನ ಮಾಡುವುದು ಮಾನಸಿಕ ಒತ್ತಡವನ್ನು ಕಡಿಮೆಮಾಡಿಕೊಳ್ಳುವುದರ ಸಲುವಾಗಿ. ನೇರವಾಗಿ ಕುಳಿತುಕೊಂಡು ಕಣ್ಣುಮುಚ್ಚಿ ಯಾವುದಾದರೂ ಒಂದು ವಿಚಾರದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವುದು ಧ್ಯಾನದ ಒಂದು ವಿಧಾನ.

ನಿಮಗೆ ಬೇಕಾದರೆ ಓಂ ಎಂಬ ಮಂತ್ರವನ್ನು ಪಠಿಸಬಹುದು. ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಮತ್ತು ಹೊರಗೆ ಬಿಡುತ್ತಾ ಮಂತ್ರವನ್ನು ಪಠಿಸಿ ಧ್ಯಾನವನ್ನು ಮಾಡಬಹುದು.


Share:

More Posts

Category

Send Us A Message

Related Posts

ಶ್ರೀ ಸತೀಶ್ ಕುಮಾರ್ ಬಜಾಲ್ ರಿಗೆ “ ಬಿಲ್ಲವ ಸಂಜೀವಿನಿ “ ಬಿರುದು ಗೌರವ ಪ್ರಧಾನ – ಬಿಲ್ಲವ ಸಂಘ ಪುಣೆ


Share       ವರ್ಲ್ಡ್ ಬಿಲ್ಲವಾಸ್ ಪ್ರೀಮಿಯರ್ ಲೀಗ್ 2025 ನ ಅದ್ಭುತ ಕಾರ್ಯಕ್ರಮದಲ್ಲಿ ಸೌಧಿ ಬಿಲ್ಲವಾಸ್ ದಮ್ಮಾಮ್ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ರಿಗೆ ಬಿಲ್ಲವ ಸಂಘ ಪುಣೆ ಯು ಅತಿಥಿ


Read More »

ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ


Share       ಮಂಗಳೂರು: ಸಾಧಕರ ಜೊತೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೇಮಕದ ಬಗ್ಗೆ ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಯುಗಾದಿ ಮಹೋತ್ಸವ, ವಿಷು


Read More »

ಪೊಲೀಸ್ ಸಬ್ ಇನ್ಸಸ್ಪೆಕ್ಟರ್ ಪ್ರದೀಪ್ ಪೂಜಾರಿಯವರಿಗೆ ಮುಖ್ಯಮಂತ್ರಿ ಚಿನ್ನದ ಪದಕ


Share       ಕೆಯ್ಯೂರು: ಕೆಯ್ಯೂರು ಗ್ರಾಮದ ಪಿ.ಎಸ್.ಐ ಪ್ರದೀಪ್ ಪೂಜಾರಿ 2023ನೇ ವರ್ಷದ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಮೂರನೇ ಬೆಟಾಲಿಯನ್ ಫೆರೆಡ್ ಗ್ರೌಂಡ್ ಕೆಎಸ್ಆರ್ಪಿ  ಕೊರಮಂಗಲ ಬೆಂಗಳೂರಿನಲ್ಲಿ ಎ.2ರಂದು ಪ್ರಶಸ್ತಿ ಪ್ರಧಾನ ನಡೆಯಲಿದೆ ಪ್ರದೀಪ್ ಪೂಜಾರಿ


Read More »

ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ರಾಜೇಂದ್ರ ಚಿಲಿಂಬಿ ಆಯ್ಕೆ


Share       ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿರುವ  ಸೇವೆಯನ್ನು ಪರಿಗಣಿಸಿ ಈ ಆಯ್ಕೆ ನಡೆದಿರುತ್ತದೆ. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ  ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಧ್ಯಮ ವಕ್ತಾರ, ಮಂಗಳೂರು ಚಿಲಿಂಬಿ ಸ್ವಾಮಿ


Read More »

ಜವಾಹರ್ ಬಾಲ್ ಮಂಚ್ ಇದರ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಸಂಯೋಜಕರಾಗಿ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಆಯ್ಕೆ


Share       ಬಂಟ್ವಾಳ : ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಇದರ ಸಂಸ್ಥಾಪಕರು, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ,


Read More »

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »