TOP STORIES:

ತುಳುನಾಡಿನ ಹೆಮ್ಮೆಯ ಪುತ್ರ,ಸೇವಾ ಮಾಣಿಕ್ಯ ನಿರಂಜನ್ ಕರ್ಕೇರ.


ಮಂಗಳೂರು ಬಜ್ಪೆಯ ಪೊರ್ಕೋಡಿ ದಿವಂಗತ ಶ್ರೀ ಲಕ್ಷ್ಮಣ ಮತ್ತು ಪದ್ಮಾವತಿ ದಂಪತಿಗಳ ಮುದ್ದಿನ ಎರಡನೇ ಮಗನಾಗಿಹುಟ್ಟಿದ ಇವರು ತನ್ನ ವಿದ್ಯಾಭ್ಯಾಸ ಹಿರಿಯ ಪ್ರಾಥಮಿಕ ಶಾಲೆ ಪೊರ್ಕೋಡಿ, ಕೆಂಜಾರು, ಪ್ರೌಢ ಶಿಕ್ಷಣವನ್ನು ಬಾಳ ಕಳವಾರಿನಲ್ಲಿಓದಿರುತ್ತಾರೆ.ನಂತರ ಶಿಕ್ಷಣವನ್ನು ಮೊಟಕುಗೊಳಿಸಿ ಕಷ್ಟದ ದಿವಸದಲ್ಲಿ ಜೀವನಕ್ಕಾಗಿ ಭವಾನಿ ಡೆಂಟಲ್ ಲ್ಯಾಬ್ ನಲ್ಲಿ ಕೆಲಸಕ್ಕೆಸೇರಿಕೊಂಡರು ಅದಾದ ನಂತರ ಮುಂಬೈಯಲ್ಲಿ ಎರಡು ವರ್ಷಗಳ ದುಡಿದರು ನಂತರ ಬೆಂಗಳೂರಿನಲ್ಲಿ ದುಡಿದರು. ಕೇವಲ ತನ್ನಸ್ವಾರ್ಥಕ್ಕಾಗಿ ಅಲ್ಲದೆ ಪರರ ಕಷ್ಟಗಳಿಗೆ ಸ್ಪಂದಿಸಿ ತನ್ನ ಕೈಲಾದಷ್ಟು ಯಾರಿಗೂ ತಿಳಿಯದ ರೀತಿಯಲ್ಲಿ ಸಹಾಯ ಮಾಡುತ್ತಾಬಂದಿರುವ ಇವರು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ತನ್ನ ಮುಖಪುಟದಲ್ಲಿ ಇವರು  ಯಾರಾದರೂ ಸಮಾಜ ಸೇವೆಯಲ್ಲಿ, ಕ್ರೀಡೆಯಲ್ಲಿ , ಹಾಡುಗಾರಿಕೆ, ಸಾಹಿತ್ಯ,  ಬರಹಗಾರರು ಇದ್ದರೆ  ಅವರಿಗೆ ಸ್ಪೂರ್ತಿ ತುಂಬಿ ಅಭಿನಂದನೆ ಸಲ್ಲಿಸುತ್ತಾರೆ ಪ್ರೋತ್ಸಾಹ ನೀಡುತ್ತಾರೆ.

ತನ್ನಿಂದ ಏನಾದರೂ  ಸಮಾಜಕ್ಕೆ ಕಿಂಚಿತ್ತೂ ಒಳ್ಳೆಯ ಕೆಲಸ ಮಾಡುವುದಕ್ಕಾಗಿ ರಕ್ತದಾನ,(9ಬಾರಿ ರಕ್ತದಾನ )ಅಂಗಾಂಗ ದಾನ, ಮಾಡುವುದಾಗಿ ಮತ್ತು ಇದರ ಬಗ್ಗೆ ಜನ ಜಾಗ್ರತಿ ಮೂಡಿಸಿದ್ದಾರೆ. ಮುಗ್ದ ಮನಸ್ಸಿನ ನಿರಂಜನ್ ಇವರಿಗೆ ಬೆನ್ನೆಲುಬಾಗಿ ನಿಂತವರುಅಣ್ಣ, ಅಮ್ಮ ಹಾಗೂ ಅವರ  ಧರ್ಮ ಪತ್ನಿ.  ಹೆಮ್ಮೆಯ ವಿಷಯವೆಂದರೆ ತುಳು ಭಾಷೆಯ  ಬಗ್ಗೆ ಎಲ್ಲಿಲ್ಲದ ಒಲವು. ಇವರುನಾಗಬ್ರಹ್ಮಸ್ಥಾನ ಇದರ ಅಧ್ಯಕ್ಷರು ಹಿಂದೂ ಯುವ ಸೇನೆ ಪೇಜಾವರ ಶಾಖೆ, ಸಂಘಟನಾ ಕಾರ್ಯದರ್ಶಿ, ಜೈ ತುಳುನಾಡ್ (ರಿ.) ಸದಸ್ಯರು , ಬಿರುವೆರ್ ಕುಡ್ಲ  ಬಜ್ಪೆ ಘಟಕದ  ( ರಿ.),ಸದಸ್ಯರು   ಯಕ್ಷ ಮಿತ್ರರು ಪೊರ್ಕೋಡಿ (ರಿ )ಸದಸ್ಯರು  ಕೇಸರಿ ಯುವ ಶಕ್ತಿಬೆಂಗಳೂರು (ರಿ ) ಸದಸ್ಯರು, ಯುವವಾಹಿನಿ ಬಜ್ಪೆ ಘಟಕ ಸದಸ್ಯರು ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.* *ಅನೇಕ ಕಡೆ ಸನ್ಮಾನವನ್ನು ಸ್ವೀಕರಿಸಿದ ಇವರಿಗೆ ಇನ್ನಷ್ಟು ಸನ್ಮಾನಗಳು ಇವರ ಮುಡಿಗೇರಲಿ .(ಕರ್ನಾಟಕ ತುಳು ಸಾಹಿತ್ಯಅಕಾಡಮಿ ಪುಗರ್ತೆದ ಓಲೆ,)ಮುಂದಿನ ಕನಸು  ಸಮಾಜಸೇವೆಯೇ ಮುಂದಿನ ಗುರಿ. ಇಷ್ಟು ಮಾತ್ರ ಅಲ್ಲದೆ ನಾಟಕದಲ್ಲಿಪಾತ್ರವನ್ನು ನಿರ್ವಹಿಸಿ ತನ್ನಲ್ಲು ಪ್ರತಿಭೆ ಇದೆ ಎಂದು ತೋರಿಸಿದ್ದಾರೆ.(ಬೈಲ ಕುರಲ್, ಪೊಣ್ಣು ಏರ್?, ದಾಯೆ ಪಾತೆರುಜಾ? ಗೊತಾವರೇ ಬಲ್ಲಿ, ಬಂಗಾರ್ ಬಾಬು ) ಇನ್ನೂ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಒಂದಷ್ಟು ವರ್ಷಗಳ ಕಾಲ ಆಟೋ, ಟ್ಯಾಕ್ಸಿಮಾಲಕರಾಗಿದ್ದರು. ಪ್ರಸ್ತುತ  ಮಂಗಳೂರು ಏರ್ಪೋರ್ಟ್  ಇಂಡಿಯನ್ ಆಯಿಲ್ ಸ್ಕೈ ಟ್ಯಾಂಕಿಂಗ್ ಪ್ರೈವೇಟ್ ಕಂಪನಿಯಲ್ಲಿ 7 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ತನ್ನ ಜೀವನವನ್ನು ಸಮಾಜ ಒಳಿತಿಗಾಗಿ ಮುಡಿಪಾಗಿರುವ ನಿರಂಜನ್ ಇವರಿಗೆದೇವರ ಅನುಗ್ರಹ ಸದಾ ಇರಲಿ, ಇನ್ನಷ್ಟು ಸೇವೆ ಮಾಡಲು ಅವಕಾಶ ಸಿಗಲಿ ಭಗವಂತ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿನಿಮ್ಮ ಕನಸು ನನಸಾಗಲಿ ಶುಭವಾಗಲಿ.

ಬರಹ :✍️ ಪ್ರಶಾಂತ್ ಅಂಚನ್ ಉಡುಪಿ (ಮಸ್ಕತ್ತ್)


Related Posts

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »