TOP STORIES:

FOLLOW US

ತುಳುನಾಡ ತಲೈವ- ಅರವಿಂದ್ ಬೋಳಾರ್


 

ಇತ್ತೀಚಿಗಿನ ಕೆಲ ವರ್ಷಗಳಿಂದ ತುಳುನಾಡಿನ ಸಿನೆಮಾ, ಸೀರಿಯಲ್, ಟಿವಿ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಅರವಿಂದ್ ಬೋಳಾರ್ ಅವರದ್ದೇ ಹವಾ. ಸೌಮ್ಯ ವೆಕ್ತಿತ್ವ, ಅಜಾತ ಶತ್ರು, ಯಾವುದೇ ಪಾತ್ರಗಳನ್ನು ಲೀಲಾಜಾಲವಾಗಿ ನಿಭಾಯಿಸುವ ಸಾಮರ್ಥ್ಯ, ಅದಲ್ಲದೇ ಸಮಾಜದಲ್ಲಿನ ಕೆಡುಕುಗಳ ವಿರುದ್ಧ ಕಪಟತನವಿಲ್ಲದೆ ಮುಕ್ತವಾಗಿ ಮಾತಾನಾಡುವ ಧೈರ್ಯ ಹೊಂದಿರುವ ಬೋಳಾರರು ಇದೀಗ ತುಳುನಾಡ ತಲೈವ ಎಂದೇ ಪರಿಗಣಿಸಲ್ಪಟ್ಟಿದ್ದಾರೆ. ಬೋಳಾರ್ ಅವರ ಮುಗ್ದ ಹಾಸ್ಯಕ್ಕೆ ಮಾರು ಹೋಗದವರು ಕನ್ನಡ ಕರಾವಳಿಯಲ್ಲಿ ಯಾರೂ ಇರಲಾರರು.


ಕರಾವಳಿಯಲ್ಲಿ ಇದೀಗ ಸಿನೇಮಾ ನಿರ್ದೇಶಕನೊಬ್ಬ ಸಿನೆಮಾ ಮಾಡಲು ಹೊರಟಿದ್ದಾನೆಂದರೆ ಆತ ಮಾಡುವ ಮೊದಲ ಕೆಲಸ ಅರವಿಂದ್ ಬೋಳಾರ್ ಅವರ ಅಶೀರ್ವಾದ ಬೇಡಿ ಅವರೊಂದಿಗೆ ಚಿತ್ರದ ಬಗ್ಗೆ ಚರ್ಚಿಸುವುದು. ಇಲ್ಲಿ ಸಿನೆಮಾದಲ್ಲಿ ಬೋಳಾರರು ಅಭಿನಯ ಮಾಡ್ತಾರೋ, ಇಲ್ಲವೋ ಎಂಬ ಪ್ರಶ್ನೆಗೆ ಎಡೆಯಿಲ್ಲ. ಬದಲಾಗಿ ಅವರ ನಗುಮುಖದ ಆಶೀರ್ವಾದವಿದ್ದರೆ ಯಾವುದೇ ಸಿನೇಮಾ ಇರಲಿ ಅದು ಜನರಿಗೆ ಹಚ್ಚಿಕೊಂಡು ಬಿಡುತ್ತದೆ ಎಂದು ನಿರ್ದೇಶಕರ, ನಿರ್ಮಾಪಕರ ನಂಬಿಕೆ.


ಕೋಸ್ಟಲ್ ವುಡ್ಡಿನಲ್ಲಿ ಅರವಿಂದ್ ಬೋಳಾರ್ ಇಂದು ಒಂದು ವಿಶೇಷ ಶಕ್ತಿ. ಪೋಸ್ಟರಿನಲ್ಲಿ ಅಥಾವಾ ಪ್ರಚಾರದ ವೇಳೆ ಬೋಳಾರ್ ಅವರ ಚಿತ್ರ ಕಂಡರೆ ಕರಾವಳಿಗರು ತಕ್ಷಣ ಸಿನೆಮಾ ನೋಡಲೇ ಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂದು ಅರವಿಂದ್ ಬೋಳಾರ್ ಕರಾವಳಿಯಲ್ಲಿ ಅತೀ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಕಲಾವಿದ.

ಅರಂವಿದ್ ಅವರ ಮುಖವನ್ನಿಟ್ಟುಕೊಂಡೇ ಪ್ರಚಾರ ಗಿಟ್ಟಿಸಿಕೊಳ್ಳುವ ಫೇಸ್ ಬುಕ್ಕ್ , ಟ್ರೋಲ್ ಪೇಜುಗಳು ಸಾಕಷ್ಟಿವೆ. ತುಳುನಾಡಿನಲ್ಲಿ ಇಂದು ಎಲ್ಲರನ್ನೂ ಆಕರ್ಷಿಸುವ, ನಗಿಸುವ ಮಾಂತ್ರಿಕ ಶಕ್ತಿ ಇದೆಯೆಂದರೆ ಅದು ಅರವಿಂದ್ ಬೋಳಾರ್ ಅವರಿಗೆ ಮಾತ್ರ. ಇತ್ತೀಚೆಗೆ ಬೋಳಾರ್ ಅವರು ನಡೆಸಿಕೊಟ್ಟ ಟಿವಿ ಕಾರ್ಯಕ್ರಮವೊಂದು ವಿವಾದಕ್ಕೊಳಗಾದಾಗ ಇಡೀ ತುಳು ನಾಡು ಅವರ ಬೆನ್ನ ಹಿಂದೆ ಅವರ ಬೆಂಬಲಕ್ಕೆ ನಿಂತಿತ್ತು. ಕುಹಕ ಮನಸ್ಸುಗಳು ಬೋಳಾರರಿಗೆ ದೊರಕಿದ ಈ ಬೆಂಬಲದಿಂದ ದಿಕ್ಕುತೋಚದಂತಾಗಿ ಚಡಪಡಿಸುವ ಸ್ಥಿತಿಯುಂಟಾಗಿತ್ತು. ಈ ಕಾರಣಕ್ಕಾಗಿಯೇ ಬೋಳಾರ್ ಅವರನ್ನು ತುಳುನಾಡ ಮಾಣಿಕ್ಯ ಅಥಾವ ತುಳುನಾಡ ತಲೈವ ಎಂಬ ಬಿರುದುಗಳನ್ನಿತ್ತು ಜನರು ಗೌರವಿಸುತ್ತಿರುವುದು.

ಬಡ ಬಿಲ್ಲವ ಕುಟುಂಬದಲ್ಲಿ ಜನಿಸಿ ಕೇವಲ ತನ್ನ ಪ್ರತಿಭೆಯಿಂದಲೇ ಹಂತ ಹಂತವಾಗಿ ಬೆಳೆದ ಅರವಿಂದ್ ಬೋಳಾರ್ ಇಂದು ಬಿಲ್ಲವ ಸಮಾಜದ ಹೆಮ್ಮೆಯ ಮುಕುಟ ಎಂದು ಕರೆಯಲ್ಪಡುತ್ತಾರೆ. ಶ್ರೀ ನಾರಯಣ ಗುರುಗಳ ತತ್ವಗಳನ್ನು ಚಾಚೂ ತಪ್ಪದೆ ಪಾಲಿಸುವ ಬೋಳಾರ್ ಬಿಲ್ಲವ ಕಾರಣಿಕ ಪುರುಷರಾದ ಕೋಟಿ-ಚೆನ್ನಯ್ಯರ ನೀತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು. ಕೇವಲ ಪ್ರಸಿದ್ಧಿ ಅಥಾವಾ ದುಡ್ಡಿಗಾಗಿ ತನ್ನ ಪ್ರತಿಭೆಯನ್ನು ಮಾರಟ ಮಾಡದೆ ಓರ್ವ ಜವಾಬ್ದಾರಿಯುತ ಕಲಾವಿದನಾಗಿ ಸಮಾಜದಲ್ಲಿನ ಕೆಡುಕುಗಳ ಬಗ್ಗೆ, ಕಪಟತನದ ಬಗ್ಗೆ ಧ್ವನಿ ಎತ್ತುವಲ್ಲಿ ಬೋಳಾರರು ಮೊದಲ ಸ್ಥಾನದಲ್ಲಿದ್ದಾರೆ. ನೇರ ನುಡಿಯ, ಸೌಮ್ಯ ಸ್ವಭಾವದ ಹಾಗೂ ಲಲಿತ ಜೀವನದ ರುವಾರಿಯಾದ ತಲೈವ ಅರವಿಂದ್ ಬೋಳಾರ್ ಅವರನ್ನು ಪಡೆದ ಈ ಕಾಲಘಟ್ಟದ ಜನತೆ ಧನ್ಯರು.

Special article by: billavaswarriors.com team.


Share:

More Posts

Category

Send Us A Message

Related Posts

ಬಹರೈನ್ ನಲ್ಲಿ ನಡೆದ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಅಧ್ಯಕ್ಷರಾಗಿ ರಾಜ್ ಕುಮಾರ್ ಆಯ್ಕೆ


Share       ಮುಂಬಯಿ, (ಆರ್‌ಬಿಐ) ಜ.೧೧ : ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಸಮಿತಿಯ ಪದಗ್ರಹನ ಹಾಗೂ ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಬಹರೈನ್ ನ ದಿ ಇಂಡಿಯಾನ್ ಕ್ಲಬ್ ಸಭಾಂಗಣದಲ್ಲಿ


Read More »

ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಬಿಡುಗಡೆ


Share       ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ  ಆಮಂತ್ರಣ ಬಿಡುಗಡೆ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಯುವವಾಹಿನಿ ಪದಗ್ರಹಣ ಕಾರ್ಯಕ್ರಮದಲ್ಲಿ ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್


Read More »

26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಪಾಲ್ಗೊಳ್ಳಲು ಕೇಂದ್ರ ಸರಕಾರದಿಂದ ಕೇಶವ ಕೋಟ್ಯಾನ್ ಅವರಿಗೆ ಆಹ್ವಾನ


Share       ಎಲ್ಲರ ಸಹಕಾರದಿಂದ ಸಾಧ್ಯವಾದ ಸಾಧನೆ. 80ನೇ ಬಡಗಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೊರೈಸುವ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡುವಲ್ಲಿ ಉಡುಪಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು, ನಮ್ಮಗ್ರಾಮ


Read More »

ಭರತನಾಟ್ಯದಲ್ಲಿ ವಿಧುಷಿ ಎಂಬ ಗೌರವ ಪಡೆದ ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು


Share       ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು  ನಿತ್ಯಾನಂದ ಮತ್ತು ತುಳಸಿಯವರ ಪುತ್ರಿ ಗುರು ವಿಧುಷಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಧರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಭರತಾಂಜಲಿ (ಆರ್) ಕೊಟ್ಟಾರದಲ್ಲಿ ಕಲಿಕೆ ಅದಿತಿ ಅವರು


Read More »

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”


Share       ಮುಂಬಯಿ:- ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ವಿಕಾಸ’ ಪುಸ್ತಕ ಬಹುಮಾನಕ್ಕೆ,


Read More »

ಒಮಾನ್ ಬಿಲ್ಲವಾಸ್ ಕೂಟದ ನೂತನ ಅಧ್ಯಕ್ಷರಾಗಿ ಶ್ರೀಯುತ ಉಮೇಶ್ ಬಂಟ್ವಾಳ್ ಆಯ್ಕೆ


Share       ಬಂಟ್ವಾಳದವರಾಗಿರುವ ಉಮೇಶ್ ಬಂಟ್ವಾಳ್ ಅವರು ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ.   ಮಸ್ಕತ್ ನ ಒಮಾನ್ ದೇಶದಲ್ಲಿ ಸುಮಾರು 36 ವರ್ಷದಿಂದ ಅಲ್ ರ‌‌ವಾಸ್ ಹೋಲ್ಡಿಂಗ್ ಬಿಸಿನೆಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ


Read More »