TOP STORIES:

ತುಳುನಾಡ ತಲೈವ- ಅರವಿಂದ್ ಬೋಳಾರ್


 

ಇತ್ತೀಚಿಗಿನ ಕೆಲ ವರ್ಷಗಳಿಂದ ತುಳುನಾಡಿನ ಸಿನೆಮಾ, ಸೀರಿಯಲ್, ಟಿವಿ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಅರವಿಂದ್ ಬೋಳಾರ್ ಅವರದ್ದೇ ಹವಾ. ಸೌಮ್ಯ ವೆಕ್ತಿತ್ವ, ಅಜಾತ ಶತ್ರು, ಯಾವುದೇ ಪಾತ್ರಗಳನ್ನು ಲೀಲಾಜಾಲವಾಗಿ ನಿಭಾಯಿಸುವ ಸಾಮರ್ಥ್ಯ, ಅದಲ್ಲದೇ ಸಮಾಜದಲ್ಲಿನ ಕೆಡುಕುಗಳ ವಿರುದ್ಧ ಕಪಟತನವಿಲ್ಲದೆ ಮುಕ್ತವಾಗಿ ಮಾತಾನಾಡುವ ಧೈರ್ಯ ಹೊಂದಿರುವ ಬೋಳಾರರು ಇದೀಗ ತುಳುನಾಡ ತಲೈವ ಎಂದೇ ಪರಿಗಣಿಸಲ್ಪಟ್ಟಿದ್ದಾರೆ. ಬೋಳಾರ್ ಅವರ ಮುಗ್ದ ಹಾಸ್ಯಕ್ಕೆ ಮಾರು ಹೋಗದವರು ಕನ್ನಡ ಕರಾವಳಿಯಲ್ಲಿ ಯಾರೂ ಇರಲಾರರು.


ಕರಾವಳಿಯಲ್ಲಿ ಇದೀಗ ಸಿನೇಮಾ ನಿರ್ದೇಶಕನೊಬ್ಬ ಸಿನೆಮಾ ಮಾಡಲು ಹೊರಟಿದ್ದಾನೆಂದರೆ ಆತ ಮಾಡುವ ಮೊದಲ ಕೆಲಸ ಅರವಿಂದ್ ಬೋಳಾರ್ ಅವರ ಅಶೀರ್ವಾದ ಬೇಡಿ ಅವರೊಂದಿಗೆ ಚಿತ್ರದ ಬಗ್ಗೆ ಚರ್ಚಿಸುವುದು. ಇಲ್ಲಿ ಸಿನೆಮಾದಲ್ಲಿ ಬೋಳಾರರು ಅಭಿನಯ ಮಾಡ್ತಾರೋ, ಇಲ್ಲವೋ ಎಂಬ ಪ್ರಶ್ನೆಗೆ ಎಡೆಯಿಲ್ಲ. ಬದಲಾಗಿ ಅವರ ನಗುಮುಖದ ಆಶೀರ್ವಾದವಿದ್ದರೆ ಯಾವುದೇ ಸಿನೇಮಾ ಇರಲಿ ಅದು ಜನರಿಗೆ ಹಚ್ಚಿಕೊಂಡು ಬಿಡುತ್ತದೆ ಎಂದು ನಿರ್ದೇಶಕರ, ನಿರ್ಮಾಪಕರ ನಂಬಿಕೆ.


ಕೋಸ್ಟಲ್ ವುಡ್ಡಿನಲ್ಲಿ ಅರವಿಂದ್ ಬೋಳಾರ್ ಇಂದು ಒಂದು ವಿಶೇಷ ಶಕ್ತಿ. ಪೋಸ್ಟರಿನಲ್ಲಿ ಅಥಾವಾ ಪ್ರಚಾರದ ವೇಳೆ ಬೋಳಾರ್ ಅವರ ಚಿತ್ರ ಕಂಡರೆ ಕರಾವಳಿಗರು ತಕ್ಷಣ ಸಿನೆಮಾ ನೋಡಲೇ ಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂದು ಅರವಿಂದ್ ಬೋಳಾರ್ ಕರಾವಳಿಯಲ್ಲಿ ಅತೀ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಕಲಾವಿದ.

ಅರಂವಿದ್ ಅವರ ಮುಖವನ್ನಿಟ್ಟುಕೊಂಡೇ ಪ್ರಚಾರ ಗಿಟ್ಟಿಸಿಕೊಳ್ಳುವ ಫೇಸ್ ಬುಕ್ಕ್ , ಟ್ರೋಲ್ ಪೇಜುಗಳು ಸಾಕಷ್ಟಿವೆ. ತುಳುನಾಡಿನಲ್ಲಿ ಇಂದು ಎಲ್ಲರನ್ನೂ ಆಕರ್ಷಿಸುವ, ನಗಿಸುವ ಮಾಂತ್ರಿಕ ಶಕ್ತಿ ಇದೆಯೆಂದರೆ ಅದು ಅರವಿಂದ್ ಬೋಳಾರ್ ಅವರಿಗೆ ಮಾತ್ರ. ಇತ್ತೀಚೆಗೆ ಬೋಳಾರ್ ಅವರು ನಡೆಸಿಕೊಟ್ಟ ಟಿವಿ ಕಾರ್ಯಕ್ರಮವೊಂದು ವಿವಾದಕ್ಕೊಳಗಾದಾಗ ಇಡೀ ತುಳು ನಾಡು ಅವರ ಬೆನ್ನ ಹಿಂದೆ ಅವರ ಬೆಂಬಲಕ್ಕೆ ನಿಂತಿತ್ತು. ಕುಹಕ ಮನಸ್ಸುಗಳು ಬೋಳಾರರಿಗೆ ದೊರಕಿದ ಈ ಬೆಂಬಲದಿಂದ ದಿಕ್ಕುತೋಚದಂತಾಗಿ ಚಡಪಡಿಸುವ ಸ್ಥಿತಿಯುಂಟಾಗಿತ್ತು. ಈ ಕಾರಣಕ್ಕಾಗಿಯೇ ಬೋಳಾರ್ ಅವರನ್ನು ತುಳುನಾಡ ಮಾಣಿಕ್ಯ ಅಥಾವ ತುಳುನಾಡ ತಲೈವ ಎಂಬ ಬಿರುದುಗಳನ್ನಿತ್ತು ಜನರು ಗೌರವಿಸುತ್ತಿರುವುದು.

ಬಡ ಬಿಲ್ಲವ ಕುಟುಂಬದಲ್ಲಿ ಜನಿಸಿ ಕೇವಲ ತನ್ನ ಪ್ರತಿಭೆಯಿಂದಲೇ ಹಂತ ಹಂತವಾಗಿ ಬೆಳೆದ ಅರವಿಂದ್ ಬೋಳಾರ್ ಇಂದು ಬಿಲ್ಲವ ಸಮಾಜದ ಹೆಮ್ಮೆಯ ಮುಕುಟ ಎಂದು ಕರೆಯಲ್ಪಡುತ್ತಾರೆ. ಶ್ರೀ ನಾರಯಣ ಗುರುಗಳ ತತ್ವಗಳನ್ನು ಚಾಚೂ ತಪ್ಪದೆ ಪಾಲಿಸುವ ಬೋಳಾರ್ ಬಿಲ್ಲವ ಕಾರಣಿಕ ಪುರುಷರಾದ ಕೋಟಿ-ಚೆನ್ನಯ್ಯರ ನೀತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು. ಕೇವಲ ಪ್ರಸಿದ್ಧಿ ಅಥಾವಾ ದುಡ್ಡಿಗಾಗಿ ತನ್ನ ಪ್ರತಿಭೆಯನ್ನು ಮಾರಟ ಮಾಡದೆ ಓರ್ವ ಜವಾಬ್ದಾರಿಯುತ ಕಲಾವಿದನಾಗಿ ಸಮಾಜದಲ್ಲಿನ ಕೆಡುಕುಗಳ ಬಗ್ಗೆ, ಕಪಟತನದ ಬಗ್ಗೆ ಧ್ವನಿ ಎತ್ತುವಲ್ಲಿ ಬೋಳಾರರು ಮೊದಲ ಸ್ಥಾನದಲ್ಲಿದ್ದಾರೆ. ನೇರ ನುಡಿಯ, ಸೌಮ್ಯ ಸ್ವಭಾವದ ಹಾಗೂ ಲಲಿತ ಜೀವನದ ರುವಾರಿಯಾದ ತಲೈವ ಅರವಿಂದ್ ಬೋಳಾರ್ ಅವರನ್ನು ಪಡೆದ ಈ ಕಾಲಘಟ್ಟದ ಜನತೆ ಧನ್ಯರು.

Special article by: billavaswarriors.com team.


Related Posts

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »