TOP STORIES:

ತುಳು ಶಾಸನಗಳು | ತುಳುನಾಡಿನ ಚರಿತ್ರೆ ಮತ್ತು ಭಾಷೆಯ ಅಧ್ಯಯನದಲ್ಲಿ ಬಾಕಿ ಉಳಿದ ಅಧ್ಯಯನ ಮತ್ತು ನಿರ್ಲಕ್ಷಕ್ಕೆ ಒಳಪಟ್ಟಿದ್ದು ಇಲ್ಲಿಯ ತುಳು ಶಾಸನಗಳು.


ತುಳು ಶಾಸನಗಳು | ತುಳುನಾಡಿನ ಚರಿತ್ರೆ ಮತ್ತು ಭಾಷೆಯ ಅಧ್ಯಯನದಲ್ಲಿ ಬಾಕಿ ಉಳಿದ ಅಧ್ಯಯನ ಮತ್ತು ನಿರ್ಲಕ್ಷಕ್ಕೆ ಒಳಪಟ್ಟಿದ್ದು ಇಲ್ಲಿಯ ತುಳು ಶಾಸನಗಳು.


ತುಳುನಾಡು ಕಂಡಂತಹ ಇತಿಹಾಸಕಾರರಾದ Dr. P. Gururaj Bhat ಅವರು ಒಂದೆರಡು ತುಳು ಶಾಸನಗಳನ್ನು ಗುರುತಿಸಿದರೂ, ಓದಿ ಪ್ರಕಟನೆ ಮಾಡಿರಲಿಲ್ಲ. Dr. K.V Ramesh ಶಾಸನ ತಜ್ಞರು ಇವರು ಕಾಸರಗೋಡಿನ ಅನಂತಪುರ ಶಾಸನವನ್ನು ಓದಿ, ಪ್ರಕಟಿಸಿ ತುಳು ಭಾಷೆಯಲ್ಲಿಯೂ ಶಾಸನ ಇರುವುದನ್ನು ತೋರಿಸಿ ಕೊಟ್ಟರು. ಹಾಗೆಯೇ ಮಾಮೇಶ್ವರ, ವಿಟ್ಲದ ಶಾಸನವನ್ನು ಕೂಡ ಅವರು ಓದಿರುವರು. ಆನಂತರದಲ್ಲಿ ಧರ್ಮಸ್ಥಳದ Dr. S R Vighnaraja Bhat ಅವರು ಪಡುಮಲೆ, ಪರಕ್ಕಿಲ, ರೆಂಜಾಳ, ಇಲಂತಿಲ ಶಾಸನ ಸಂಶೋಧನೆಯನ್ನು ಮಾಡಿದರು.

ಶಂಕರ ಕುಂಜತ್ತೂರು ಅವರು ಕಿದೂರು ಶಾಸನ ವನ್ನು ಪತ್ತೆ ಹಚ್ಚುವ ಮೂಲಕ ತುಳು ಭಾಷೆಯಲ್ಲಿ ಶಾಸನಗಳು ಇನ್ನೂ ಸಿಗಬಹುದು ಎಂಬ ಭರವಸೆಯೊಂದಿಗೆ ಇನ್ನೊಂದಷ್ಟು ಶಾಸನಗಳು ಪತ್ತೆಯಾದವು. 2014 ರಿಂದ ಗುರುಗಳಾದ ಎಸ್ ಎ ಕೃಷ್ಣಯ್ಯ, Dr. ರಾಧಾಕೃಷ್ಣ ಬೆಳ್ಳೂರು ಮತ್ತು ನಾನು ತಂಡವಾಗಿಯೂ, ವಯಕ್ತಿಕ ವಾಗಿಯೂ ತುಳು ಶಾಸನಗಳನ್ನು ದಾಖಲೀಕರಣ ಆರಂಭಿಸಿದೆವು. ಇಂದಿಗೆ ಸುಮಾರು 27 ತುಳು ಭಾಷೆ ಶಾಸನಗಳು ಪತ್ತೆಯಾಗಿದ್ದು, ಇವುಗಳ ಕಾಲಮಾನ ಸುಮಾರು 11 ರಿಂದ 16 ನೆ ಶತಮಾನ.

ಎಲ್ಲಾ ಶಾಸನಗಳ ಛಾಯಾಚಿತ್ರವನ್ನು, ಶಾಸನಕ್ಕೆ ಸಂಬಂಧಪಟ್ಟ ಲಿಪಿಯನ್ನು ಈ ಗ್ರಂಥದಲ್ಲಿ ನೀಡಲಾಗಿದೆ. ಪ್ರಸಾರಾಂಗ, ಮಂಗಳೂರು ವಿಶ್ವ ವಿದ್ಯಾಲಯ ಈ ಪುಸ್ತಕವನ್ನು ಪ್ರಕಟ ಮಾಡಿದೆ, ಸುಂದರವಾದ ಮುಖಪುಟವನ್ನು ಆಕೃತಿ ಪ್ರಿಂಟರ್ಸ್ ನ ಕಲ್ಲೂರು ನಾಗೇಶ್ ಅವರು ಮಾಡಿದ್ದಾರೆ. ಸಿಂಧು ಮುದ್ರಣ ಮಂಗಳೂರು ಪುಸ್ತಕವನ್ನು ಅಚ್ಚುಕಟ್ಟಾಗಿ ಮುದ್ರಿಸಿದ್ದಾರೆ.
ಧನ್ಯವಾದಗಳು.

Inputs: Beauty of Tulunad


Related Posts

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »