TOP STORIES:

ದ್ವನಿ ಇಲ್ಲದವರ ದ್ವನಿ,ಯುವಕರ ಆದರ್ಶ ನಮ್ಮ ಹೆಮ್ಮೆಯ ಬಿರುವೆರ್ ಉದಯಣ್ಣ..


ದ್ವನಿ ಇಲ್ಲದವರ ದ್ವನಿ,ಯುವಕರ ಆದರ್ಶ ನಮ್ಮ  ಹೆಮ್ಮೆಯ ಬಿರುವೆರ್ ಉದಯಣ್ಣ..

ಬಡವರ ,ನೊಂದವರ ,ತುಳಿ ಕ್ಕೊಳಗಾದವರ ಪಾಲಿಗೆ ಪ್ರೀತಿಯ ಅಣ್ಣ..

ಕಿರಿಯರ ನಿರ್ಲಕ್ಷದಿಂದ ಅನಾಥರಾದ ಹಿರಿಯರಿಗೆ ಆಶ್ರಯ ಕೊಟ್ಟು ಸಲಹುವ ಪ್ರೀತಿಯ ಮಗ.

ಜೀವನದಲ್ಲಿ ಭವಿಷ್ಯದ ಬರವಸೆಗಳನ್ನೆಲ್ಲ ಕಳೆದುಕೊಂಡು ಕೈ ಚೆಲ್ಲಿ ಕುಳಿತ ಸಾವಿರಾರು ಯುವಕರಿಗೇ ಭರವಸೆ ಮೂಡಿಸುವಪ್ರೀತಿಯ ಗೆಳೆಯ.

ನಗು ಮೊಗದ ಸರದಾರಬಿರುವೇರ್ ಕುಡ್ಲದಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್ ಬಾಗ್…!

ಹೊಸ ತಲೆಮಾರಿನ ಪೀಳಿಗೆಗೆ ಇರುವ ತಾಕತ್ತು, ಸಾವಿನೊಂದಿಗೆ ಬೇಕಾದ್ರೂ ಕೈಕುಲುಕಿ ಬರಬಲ್ಲ ನಿರ್ಭೀತ ಮನಸ್ಥಿತಿಯ ಗಟ್ಟಿತನಇವರದ್ದು..!

ಜೀವನ ಮತ್ತು ಸಮಾಜ ಒದಗಿಸಿರೋ ಅವಕಾಶವನ್ನು ಬಡವರ ಕಣ್ಣೀರನ್ನು ಒರೆಸಲು ಬಳಸಿಕೊಂಡರು.!

ಹಠ ಮತ್ತು ದ್ವೇಷ ಸಾಧಿಸುವ ಗುಣವನ್ನು ನಾನು ಯಾವತ್ತೋ ಬಿಟ್ಟಿದ್ದೇನೆ.ಜೀವ ಬೇಕಾದ್ರೂ ಕೊಡುವಗೆಳೆಯರಿದ್ದಾರೆ.ಬೆಂಬಲಿಸುವ ಜನರಿದ್ದಾರೆ.ಮತ್ತೇನು ಬೇಕು ಹೇಳಿಅನ್ನುವ ಇವರು ಜನ ನಾಯಕನು ಹೌದು.ಜನ ಸೇವಕನು ಹೌದು!

ಉದಯ್ ಪೂಜಾರಿಯವರು ಕಟ್ಟಿ ಬೆಳೆಸಿದಬಿರುವೇರ್ ಕುಡ್ಲಇವತ್ತು ದೇಶ ವಿದೇಶಗಳಲ್ಲಿ ಜನಪ್ರಿಯಗೊಂಡು ಅಶಕ್ತರಿಗೆಸೇವೆಯ ನೆರಳನ್ನು ನೀಡುತ್ತಿದೆ.ಅದರಲ್ಲೂ ಮಂಗಳೂರು ಹುಲಿವೇಷದ ಸಂಘಟನೆಯ ಮೂಲಕ ಸಾವಿರಾರು ಕಾರ್ಯಕರ್ತರನ್ನುಒಗ್ಗೂಡಿಸಿ ಎರಡು ಕೋಟಿಗಿಂತಲೂ ಹೆಚ್ಚು ಮೊತ್ತದ ಸಹಾಯವನ್ನು ಸಮಾಜಕ್ಕೆ ನೀಡಿದ ಹೆಗ್ಗಳಿಕೆ ಇವರದ್ದು.

ಕಳೆದ ವರ್ಷ ಕೊರೋನ ಸಂದರ್ಭದಲ್ಲಿ ಇವರ ಸೇವೆ ಅನನ್ಯವಾದುದು.ಕರಾವಳಿಯ ಎಲ್ಲ ತಾಲೂಕುಗಳಲ್ಲಿ ಬಿರುವೆರ್ ಕುಡ್ಲದ ಶಾಖೆತೆರೆದು ಎಲ್ಲ ವರ್ಗದ ದುರ್ಬಲರ ಸೇವೆಗೆ ಚಾಲನೆ ಕೊಟ್ಟರು.ಸುಮಾರು 30 ಲಕ್ಷ ಫುಡ್ ಕಿಟ್ಸ್ ನ್ನೂ ಕೇವಲ ಮಂಗಳೂರು ನಗರದಲ್ಲೇಹಂಚಿದ್ದಾರೆ ಅಂದರೆ ಇವರ ಸೇವಾಗುಣದ ವಿಶಾಲತೆಯನ್ನು ನೀವು ಆಲೋಚಿಸಬಹುದು.

ಬಿಲ್ಲವರ ಬಗ್ಗೆ ಯಾರೂ ಏನೇ ಹೇಳಲಿ ಮೊದಲಾಗಿ ದ್ವನಿ ಎತ್ತುವ ಯುವಕ ಇವರು. ಹೆಸರಿಗಾಗಿ ಅಧ್ಯಕ್ಷ ಉಪಾಧ್ಯಕ್ಷ ಆಗುವಮುಂದಾಳುಗಳು ನನ್ನಲ್ಲಿ ತುಂಬಾ ಜನ ಇದ್ದಾರೆ.ಆದರೆ ಕೆಲಸ ಮಾಡುವ ಇಚ್ಛಾಶಕ್ತಿಯ ಕೊರತೆ ಅವರಲ್ಲಿ ಕಾಣುತ್ತದೆ.

ಕೋಟಿ ಚೆನ್ನಯರು ಎಂದೂ ಸುಮ್ಮ ಸುಮ್ಮನೆ ತಪ್ಪೆಸಗಿದವರಲ್ಲ.ಹಾಗಂತ ಅನ್ಯಾಯ ಕಂಡಾಗ ಕಣ್ಣಿದ್ದೂ ಕುರುಡರಂತೆಇದ್ದವರಲ್ಲ.ಅದೇ ಆದರ್ಶದಲ್ಲಿ ಉದಯ್ ಬದುಕುತ್ತಿದ್ದಾರೆ..

ಹಿರಿಯರು ಎನಿಸಿಕೊಂಡ ಸಮಾಜದ ಮುಖಂಡರು ಸ್ಥಾನಮಾನಗಳನ್ನು ಯುವಕರಿಗೆ ಒಪ್ಪಿಸಿ ಗೌರವಯುತವಾಗಿ ಹೊರನಡೆಯಲು ಇದು ಸಕಾಲ.ಇಲ್ಲವಾದರೆ ಕಾಲ ಕಳೆದಂತೆ ನೀವು ನೇಪಥ್ಯಕ್ಕೆ ಸರಿಯು ದಲ್ಲದೇ ಸಮಾಜಕ್ಕೆ ಸಾರತಿಯಾಗಬೇಕಾದ ಸಂಘಸಂಸ್ಥೆಗಳು ತಮ್ಮ ಪ್ರಾಧಾನ್ಯತೆಯನ್ನು ಕಳೆದು ಕೊಳ್ಳುದರಲ್ಲಿ ಸಂದೇಹ ವಿಲ್ಲ.”

ನಿಟ್ಟಿನಲ್ಲಿ ಬಿರುವೆರ್ ಉದಯ್ ಅಣ್ಣ ನಮಗೆಲ್ಲ ಆಶಾಕಿರಣ ಎನಿಸಿಕೊಂಡಿದ್ದಾರೆ.ಪ್ರತಿ ಒಳ್ಳೆಯ ಕೆಲಸಕ್ಕೆ ಬೆನ್ನು ತಟ್ಟುವ  ಮನಸ್ಸುಅವರದ್ದು. ಏನೇ ಸಹಾಯ ಬೇಕಾದ್ರೂ ನಾನಿದ್ದೇನೆ ನಿಮ್ಮ ಜೊತೆಗೆ ಅನ್ನುವ ಭರವಸೆ ಕೊಡುವ ಮನಸ್ಸಿರುವ ಉದಯ್ ಇನ್ನಷ್ಟುಬೆಳೆಯಲಿ ಮತ್ತಷ್ಟು ಬೆಳಗಲಿ

 

✍️ಉದಯ್ ಕುಂದಾಪುರ

            (ಮುಂಬೈ)


Related Posts

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »