TOP STORIES:

ನಾಡು ಕಂಡ ಧೀಮಂತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿ!! ಎಸ್ ಬಂಗಾರಪ್ಪ ಜನುಮ ದಿನದಂದು ಗೌರವ ಪೂರ್ವಕ ನಮನಗಳು


ಬಂಗಾರಪ್ಪಾಜಿಯವರ ಸ್ಮರಣೋತ್ಸವದ ಅಂಗವಾಗಿ ಈ ಲೇಖನ.

ಎಸ್, ಬಂಗಾರಪ್ಪ ಅಂದರೆ ಸಾರೆಕೊಪ್ಪ ಬಂಗಾರಪ್ಪ ಅಂತ ಅರ್ಥ. ಸಾರೆಕೊಪ್ಪ ಎಂಬುದು ಅಂಚೆ ವಿಳಾಸ.

ಇವರ ಹುಟ್ಟೂರು ಶಿವಮೊಗ್ಗ* ಜಿಲ್ಲೆಯ *ಸೊರಬ* ತಾಲೂಕಿನ *ಕುಬಟೂರು* ಎಂಭ ಕುಗ್ರಾಮ. ಇವರ ತಂದೆಯ ಹೆದರು *ಕಲ್ಲಪ್ಪ.* ಮತ್ತು ತಾಯಿಯ ಹೆಸರು *ಕಲ್ಲಮ್ಮ* ಎಂದು. ಇವರಿಗೆ ಈ ಹೆಸರು ಬರಲು ಕಾರಣ *ಕಾರವಾರ* ಜಿಲ್ಲೆಯ *ಶಿರ್ಶಿ* ತಾಲೂಕಿನ *ಕದಂಭರು* ಆಳಿದ *ಬನವಾಸಿಯ* ಹತ್ತಿರ ಕೇವಲ ಮೂರು ಕಿ.ಮೀ. ದಲ್ಲಿ *ಗುಡ್ನಾಪುರ* ಎಂಬ ಹಳ್ಳಿ ಇದೆ. ಈ ಹಳ್ಳಿಯ ಪಕ್ಕದಲ್ಲಿ *ದೊಡ್ಡದಾದ ಕೆರೆಯೊಂದಿದೆ* ಸದಾ ವರ್ಷವಿಡೀ ನೀರಿನಿಂದ ತುಂಬಿರುವ ಈ ಕೆರೆಯ ಮಧ್ಯಭಾಗದಲ್ಲಿ *ಬಂಗಾರೇಶ್ವರ ದೇವಾಲಯವಿದೆ.* ಅಲ್ಲಿ *ಶಿವನ* ಅವತಾರ *ಬಂಗಾರೇಶ್ವರ* ನೆಲೆಸಿದ್ದಾನೆ.

 

*ಕಲ್ಲಪ್ಪ* ಮತ್ತು *ಕಲ್ಲಮ್ಮ* ದಂಪತಿಗಳಿಗೆ ಬಹಳ ದಿನವಾದರೂ ಗಂಡು ಸಂತಾನವಾಗುವುದಿಲ್ಲ ಆಗ ಮನೆದೇವರು *ಹುಚ್ಚುರಾಯೇಶ್ವರ ಸ್ವಾಮಿ {ಆಂಜನೇಯ ಸ್ವಾಮಿ}* ನೆನೆಯುತ್ತಾ ಈ ಬಂಗಾರೇಶ್ವರ ದೇವರಿಗೆ ಹರಕೆ ಹೊತ್ತರಂತೆ ಗಂಡು ಮಗು ಜನಿಸಿದರೆ ನಿನ್ನ ಹೆಸರೇ ನಾಮಕರಣ ಮಾಡುತ್ತೇವೆ ಅಂತ.ಆ ನಂತರದಲ್ಲಿ ಕಲ್ಲಮ್ಮನವರು ನವಮಾಸ ತುಂಬಿ ಮಗುವಿಗೆ ಜನ್ಮ ನೀಡಿದಾಗ ಗಂಡಯ ಮಗು ಆಗಿತ್ತಂತೆ ಹರಕೆಯ ಪ್ರಕಾರ ಆ ಗಂಡು ಮಗುವಿಗೆ *ಬಂಗಾರೇಶ್ವರನ* ಆಶಿರ್ವಾದದಿಂದ ಜನಿಸಿದ್ದಕ್ಕೆ *ಬಂಗಾರಪ್ಪ* ಎಂದು ನಾಮಕರಣ ಮಾಡಿದರಂತೆ. ಇವರೇ ನಾಡುಕಂಡ ಧೀಮಂತ ವ್ಯಕ್ತಿ , ಬಡವರ ಬಂಧು *ಈಡಿಗ ಸಮುದಾಯದ ಆಶಾಕಿರಣ ಬಂಗಾರಪ್ಪನವರು.*

 

ಅದೇ ರೀತಿಯಾಗಿ *ಬಂಗಾರಪ್ಪನವರ* ಸಹೋದರಿಯರು *ದೊಡ್ಡ ಕೆರಿಯಮ್ಮ* ಮತ್ತು *ಸಣ್ಣ ಕೆರಿಯಮ್ಮ* ಎಂದು. *ಬಂಗಾರೇಶ್ವರ* ದೇವಾಲಯದ ಪಕ್ಕ ಇರುವ *ಗುಡ್ನಾಪುರ* ಎಂಬ ಕುಗ್ರಾಮದ ಪಕ್ಕ ಕೆರೆ ಇದೆಯಲ್ಲ, ಅಲ್ಲಿ *ಬಂಗಾರೇಶ್ವರ ಸ್ವಾಮಿಯ ಜೊತೆಗೆ ಶಕ್ತಿಸ್ವರೂಪಿಣಿ ಆದಿಶಕ್ತಿ ಅಮ್ಮನಾಗಿ ಕೆರೆಯಲ್ಲಿರುವುದರಿಂದ ಕೆರೆಯಮ್ಮಳಾಗಿ ದರ್ಶನ ಕೊಡುತ್ತಿದ್ದಾಳೆ.*

 

ಆದ್ದರಿಂದ *ಬಂಗಾರಪ್ಪನವರ* ತಂದೆ ತಾಯಿ ತಮ್ಮ ಹೆಣ್ಣಮಕ್ಕಳಿಗೆ *ದೊಡ್ಡ ಕೆರೆಯಮ್ಮ,,, ಸಣ್ಣ ಕೆರೆಯಮ್ಮ* ಎಂದು ನಾಮಕರಣ ಮಾಡಿದ್ದಾರೆ.

ಬಂಗಾರಪ್ಪನವರು ಈಡಿಗ ಜಾತಿಗೆ ಸೇರಿದವರು. ಈಡಿಗ ಜಾತಿಯ ಉಪಜಾತಿಯಾದ ದೀವರು ಸಮುದಾಯಕ್ಕೆ ಸೇರಿದವರು.ಇವರ ಧರ್ಮ ಪತ್ನಿಯ ಹೆಸರು *ಶಕುಂತಲ. ಇವರದು ಕಾರವಾರ ಜಿಲ್ಲೆಯ ಶಿರ್ಶಿ ತಾಲೂಕಿನ ಮಳಲಗಾಂವ್ಎಂಬ ಹಳ್ಳಿ.ಇವರದು ಸಹಿತ ಈಡಿಗ ಸಮುದಾಯದ ಉಪಜಾತಿ ನಾಯ್ಕ ಕುಟುಂಬದವರು.

 

ಬಂಗಾರಪ್ಪನವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಇವರ ಒಬ್ಬ ಪುತ್ರಿಯನ್ನು ಇದೇ ಸಮುದಾಯದ ಕನ್ನಡದ ಮುತ್ತು ಪದ್ಮಬೂಷಣ ಡಾ ! ರಾಜಕುಮಾರ ಅವರ ಪುತ್ರ ಶಿವರಾಜಕುಮಾರ ಮದುವೆಯಾಗಿದ್ದಾರೆ.

ಇನ್ನೋರ್ವ ಪುತ್ರಿ ಹೆಸರಾಂತ ದಿನಪತ್ರಿಕೆ ಪ್ರಜಾವಾಣಿಯ ಮಾಲಾಕರನ್ನು ಮಡದಿಯಾಗಿದ್ದಾರೆ.

ಬಂಗಾರಪ್ಪನವರು ತಮ್ಮ ರಾಜಕೀಯ ಅಕಾಂಕ್ಷೆಗೆ ಕಲಾವಿದರನ್ನು ಎಂದೂ ಬಳಸಿಕೊಳ್ಳಲಿಲ್ಲ. *ಡಾ ! ರಾಜ್* ಅವರನ್ನು ಒಂದು ದಿನವೂ ತಮ್ಮ ರಾಜಕೀಯ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಲಿಲ್ಲ.

ಮಿರಿ ಮಿರಿ ಮಿಂಚುವ ಶರ್ಟ್ ಬಿಳಿ ಪ್ಯಾಂಟ್ ಬಿಳಿ ಚಪ್ಪಲಿ ಅಥವಾ ಶೂ, ಕಣ್ಣಿಗೆ ಕೂಲಿಂಗ್ ಕನ್ನಡಕ, ಕೈಯಲ್ಲಿ ಕನ್ನಡಕ ಇಡುವ ಬಾಕ್ಸ್ ಇದು *ಬಂಗಾರಪ್ಪನವರ* ಸಾರ್ವಜನಿಕ ವಸ್ತ್ರ ಸಂಹಿತೆ. ವೇದಿಕೆ ಮೇಲಿರುವಾಗಲಂತೂ ದೂರದಲ್ಲಿ ನಿಂತು ನೋಡುವವರಿಗೆ ಗುರುತು ಹಿಡಿಯಲು *ಮಿಂಚು ಅಚ್ಚಕೆಂಪು, ತಿಳಿನೀಲಿ, ಅಚ್ಚನೀಲಿ,ಶರ್ಟ್ ದರಿಸುತ್ತಿದ್ದರು.

ಬಂಗಾರಪ್ಪನವರನ್ನು ಈ ದಿನ ಮನದಲ್ಲಿ ಸ್ಮರಿಸಿಕೊಳ್ಳುತ್ತಾ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಹಾರೈಸೋಣ.

ವಿಷಯ ಸಂಗ್ರಹ : ಆಂಜನೇಯ.ಟಿ.{ ಈಡಿಗ }

ಅಗಡಿ ಹಾವೇರಿ

9113604162


Related Posts

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ   ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ   ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್


Read More »

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »