TOP STORIES:

FOLLOW US

ನಾಡು ಕಂಡ ಧೀಮಂತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿ!! ಎಸ್ ಬಂಗಾರಪ್ಪ ಜನುಮ ದಿನದಂದು ಗೌರವ ಪೂರ್ವಕ ನಮನಗಳು


ಬಂಗಾರಪ್ಪಾಜಿಯವರ ಸ್ಮರಣೋತ್ಸವದ ಅಂಗವಾಗಿ ಈ ಲೇಖನ.

ಎಸ್, ಬಂಗಾರಪ್ಪ ಅಂದರೆ ಸಾರೆಕೊಪ್ಪ ಬಂಗಾರಪ್ಪ ಅಂತ ಅರ್ಥ. ಸಾರೆಕೊಪ್ಪ ಎಂಬುದು ಅಂಚೆ ವಿಳಾಸ.

ಇವರ ಹುಟ್ಟೂರು ಶಿವಮೊಗ್ಗ* ಜಿಲ್ಲೆಯ *ಸೊರಬ* ತಾಲೂಕಿನ *ಕುಬಟೂರು* ಎಂಭ ಕುಗ್ರಾಮ. ಇವರ ತಂದೆಯ ಹೆದರು *ಕಲ್ಲಪ್ಪ.* ಮತ್ತು ತಾಯಿಯ ಹೆಸರು *ಕಲ್ಲಮ್ಮ* ಎಂದು. ಇವರಿಗೆ ಈ ಹೆಸರು ಬರಲು ಕಾರಣ *ಕಾರವಾರ* ಜಿಲ್ಲೆಯ *ಶಿರ್ಶಿ* ತಾಲೂಕಿನ *ಕದಂಭರು* ಆಳಿದ *ಬನವಾಸಿಯ* ಹತ್ತಿರ ಕೇವಲ ಮೂರು ಕಿ.ಮೀ. ದಲ್ಲಿ *ಗುಡ್ನಾಪುರ* ಎಂಬ ಹಳ್ಳಿ ಇದೆ. ಈ ಹಳ್ಳಿಯ ಪಕ್ಕದಲ್ಲಿ *ದೊಡ್ಡದಾದ ಕೆರೆಯೊಂದಿದೆ* ಸದಾ ವರ್ಷವಿಡೀ ನೀರಿನಿಂದ ತುಂಬಿರುವ ಈ ಕೆರೆಯ ಮಧ್ಯಭಾಗದಲ್ಲಿ *ಬಂಗಾರೇಶ್ವರ ದೇವಾಲಯವಿದೆ.* ಅಲ್ಲಿ *ಶಿವನ* ಅವತಾರ *ಬಂಗಾರೇಶ್ವರ* ನೆಲೆಸಿದ್ದಾನೆ.

 

*ಕಲ್ಲಪ್ಪ* ಮತ್ತು *ಕಲ್ಲಮ್ಮ* ದಂಪತಿಗಳಿಗೆ ಬಹಳ ದಿನವಾದರೂ ಗಂಡು ಸಂತಾನವಾಗುವುದಿಲ್ಲ ಆಗ ಮನೆದೇವರು *ಹುಚ್ಚುರಾಯೇಶ್ವರ ಸ್ವಾಮಿ {ಆಂಜನೇಯ ಸ್ವಾಮಿ}* ನೆನೆಯುತ್ತಾ ಈ ಬಂಗಾರೇಶ್ವರ ದೇವರಿಗೆ ಹರಕೆ ಹೊತ್ತರಂತೆ ಗಂಡು ಮಗು ಜನಿಸಿದರೆ ನಿನ್ನ ಹೆಸರೇ ನಾಮಕರಣ ಮಾಡುತ್ತೇವೆ ಅಂತ.ಆ ನಂತರದಲ್ಲಿ ಕಲ್ಲಮ್ಮನವರು ನವಮಾಸ ತುಂಬಿ ಮಗುವಿಗೆ ಜನ್ಮ ನೀಡಿದಾಗ ಗಂಡಯ ಮಗು ಆಗಿತ್ತಂತೆ ಹರಕೆಯ ಪ್ರಕಾರ ಆ ಗಂಡು ಮಗುವಿಗೆ *ಬಂಗಾರೇಶ್ವರನ* ಆಶಿರ್ವಾದದಿಂದ ಜನಿಸಿದ್ದಕ್ಕೆ *ಬಂಗಾರಪ್ಪ* ಎಂದು ನಾಮಕರಣ ಮಾಡಿದರಂತೆ. ಇವರೇ ನಾಡುಕಂಡ ಧೀಮಂತ ವ್ಯಕ್ತಿ , ಬಡವರ ಬಂಧು *ಈಡಿಗ ಸಮುದಾಯದ ಆಶಾಕಿರಣ ಬಂಗಾರಪ್ಪನವರು.*

 

ಅದೇ ರೀತಿಯಾಗಿ *ಬಂಗಾರಪ್ಪನವರ* ಸಹೋದರಿಯರು *ದೊಡ್ಡ ಕೆರಿಯಮ್ಮ* ಮತ್ತು *ಸಣ್ಣ ಕೆರಿಯಮ್ಮ* ಎಂದು. *ಬಂಗಾರೇಶ್ವರ* ದೇವಾಲಯದ ಪಕ್ಕ ಇರುವ *ಗುಡ್ನಾಪುರ* ಎಂಬ ಕುಗ್ರಾಮದ ಪಕ್ಕ ಕೆರೆ ಇದೆಯಲ್ಲ, ಅಲ್ಲಿ *ಬಂಗಾರೇಶ್ವರ ಸ್ವಾಮಿಯ ಜೊತೆಗೆ ಶಕ್ತಿಸ್ವರೂಪಿಣಿ ಆದಿಶಕ್ತಿ ಅಮ್ಮನಾಗಿ ಕೆರೆಯಲ್ಲಿರುವುದರಿಂದ ಕೆರೆಯಮ್ಮಳಾಗಿ ದರ್ಶನ ಕೊಡುತ್ತಿದ್ದಾಳೆ.*

 

ಆದ್ದರಿಂದ *ಬಂಗಾರಪ್ಪನವರ* ತಂದೆ ತಾಯಿ ತಮ್ಮ ಹೆಣ್ಣಮಕ್ಕಳಿಗೆ *ದೊಡ್ಡ ಕೆರೆಯಮ್ಮ,,, ಸಣ್ಣ ಕೆರೆಯಮ್ಮ* ಎಂದು ನಾಮಕರಣ ಮಾಡಿದ್ದಾರೆ.

ಬಂಗಾರಪ್ಪನವರು ಈಡಿಗ ಜಾತಿಗೆ ಸೇರಿದವರು. ಈಡಿಗ ಜಾತಿಯ ಉಪಜಾತಿಯಾದ ದೀವರು ಸಮುದಾಯಕ್ಕೆ ಸೇರಿದವರು.ಇವರ ಧರ್ಮ ಪತ್ನಿಯ ಹೆಸರು *ಶಕುಂತಲ. ಇವರದು ಕಾರವಾರ ಜಿಲ್ಲೆಯ ಶಿರ್ಶಿ ತಾಲೂಕಿನ ಮಳಲಗಾಂವ್ಎಂಬ ಹಳ್ಳಿ.ಇವರದು ಸಹಿತ ಈಡಿಗ ಸಮುದಾಯದ ಉಪಜಾತಿ ನಾಯ್ಕ ಕುಟುಂಬದವರು.

 

ಬಂಗಾರಪ್ಪನವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಇವರ ಒಬ್ಬ ಪುತ್ರಿಯನ್ನು ಇದೇ ಸಮುದಾಯದ ಕನ್ನಡದ ಮುತ್ತು ಪದ್ಮಬೂಷಣ ಡಾ ! ರಾಜಕುಮಾರ ಅವರ ಪುತ್ರ ಶಿವರಾಜಕುಮಾರ ಮದುವೆಯಾಗಿದ್ದಾರೆ.

ಇನ್ನೋರ್ವ ಪುತ್ರಿ ಹೆಸರಾಂತ ದಿನಪತ್ರಿಕೆ ಪ್ರಜಾವಾಣಿಯ ಮಾಲಾಕರನ್ನು ಮಡದಿಯಾಗಿದ್ದಾರೆ.

ಬಂಗಾರಪ್ಪನವರು ತಮ್ಮ ರಾಜಕೀಯ ಅಕಾಂಕ್ಷೆಗೆ ಕಲಾವಿದರನ್ನು ಎಂದೂ ಬಳಸಿಕೊಳ್ಳಲಿಲ್ಲ. *ಡಾ ! ರಾಜ್* ಅವರನ್ನು ಒಂದು ದಿನವೂ ತಮ್ಮ ರಾಜಕೀಯ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಲಿಲ್ಲ.

ಮಿರಿ ಮಿರಿ ಮಿಂಚುವ ಶರ್ಟ್ ಬಿಳಿ ಪ್ಯಾಂಟ್ ಬಿಳಿ ಚಪ್ಪಲಿ ಅಥವಾ ಶೂ, ಕಣ್ಣಿಗೆ ಕೂಲಿಂಗ್ ಕನ್ನಡಕ, ಕೈಯಲ್ಲಿ ಕನ್ನಡಕ ಇಡುವ ಬಾಕ್ಸ್ ಇದು *ಬಂಗಾರಪ್ಪನವರ* ಸಾರ್ವಜನಿಕ ವಸ್ತ್ರ ಸಂಹಿತೆ. ವೇದಿಕೆ ಮೇಲಿರುವಾಗಲಂತೂ ದೂರದಲ್ಲಿ ನಿಂತು ನೋಡುವವರಿಗೆ ಗುರುತು ಹಿಡಿಯಲು *ಮಿಂಚು ಅಚ್ಚಕೆಂಪು, ತಿಳಿನೀಲಿ, ಅಚ್ಚನೀಲಿ,ಶರ್ಟ್ ದರಿಸುತ್ತಿದ್ದರು.

ಬಂಗಾರಪ್ಪನವರನ್ನು ಈ ದಿನ ಮನದಲ್ಲಿ ಸ್ಮರಿಸಿಕೊಳ್ಳುತ್ತಾ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಹಾರೈಸೋಣ.

ವಿಷಯ ಸಂಗ್ರಹ : ಆಂಜನೇಯ.ಟಿ.{ ಈಡಿಗ }

ಅಗಡಿ ಹಾವೇರಿ

9113604162


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »