TOP STORIES:

FOLLOW US

ನಾವು ಇವತ್ತು ಪರಿಚಯ ಮಾಡುವ ಯುವ ಪ್ರತಿಭೆ ಜಪ್ಪಿನ ಮೊಗರಿನ ಲಕ್ಷ್ಮೀಶ್ ಸುವರ್ಣ.


ನಾವು ಇವತ್ತು ಪರಿಚಯ ಮಾಡುವ ಯುವ ಪ್ರತಿಭೆ ಜಪ್ಪಿನ ಮೊಗರಿನ ತಿಮ್ಮಪ್ಪ ಪೂಜಾರಿ ಮತ್ತು ಶಶಿಕಲಾ ಟಿ ಸುವರ್ಣ ಇವರ ಮುದ್ದಿನ ಮಗ ಲಕ್ಷ್ಮೀಶ್ ಸುವರ್ಣ

ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು ಆದರೆ ಇವರಿಗೆ ಶಾಲಾ ದಿನಗಳಲ್ಲಿ ಯಾವುದೇ ರೀತಿಯ ಬೆಂಬಲ ಅಥವಾ ತಾವೇ ಮುಂದೆ ಹೋಗುವಷ್ಟು ಧೈರ್ಯ ಇರಲಿಲ್ಲ. ಹಾಡುಗಾರನಾಗಿ ಬೆಳೆಯಬೇಕು ಎಂಬ ಆಸೆಯೂ ನೆರವೇರಲಿಲ್ಲ . ಆದರೆ ನಿರೂಪಕನಾಗಿ ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು ಇವರ ಕಂಚಿನ ಕಂಠದ ಧ್ವನಿಯಿಂದ ಎಂಟು ವರ್ಷದಿಂದ ನಿರೂಪಣೆಯ ಹಾದಿಯಲ್ಲಿ ಮುಂದುವರಿದರು ಕರ್ನಾಟಕದ ಅನೇಕ ಕಡೆ ಮೈಸೂರ್, ಚಿಕ್ಕಮಂಗಳೂರು, ಶೃಂಗೇರಿ,ಕೊಪ್ಪ,ಉಡುಪಿ, ಮಂಗಳೂರು, ಜೈಪುರ್, ಬಾಳೆಹೊನ್ನೂರು, ಕಾಸರಗೋಡು, ಪುತ್ತೂರು, ಸುಳ್ಯ, ಮುಂಬೈಗಳಲ್ಲಿ ಕಾರ್ಯಕ್ರಮ ನೀಡಿ ತಮ್ಮ ವಾಕ್ ಚಾತುರ್ಯದಿಂದಲೇ ಜನ ಮನ ಗೆದ್ದಿದ್ದಾರೆ. ಓಮನ್ ಬಿಲ್ಲವಾಸ್ ಅವರು ಆಯೋಜಿಸಿದ ಬಲೇ ತೆಲಿಪಲೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತ್ತು ಆದರೆ ಕೋರೋನ ದ ಲಾಕ್ ಡೌನ್ ಕಾರಣ ಅವಕಾಶ ಕಳೆದುಕೊಂಡರು

ತನ್ನ ಪ್ರಾಥಮಿಕ ಶಿಕ್ಷಣವನ್ನು ಜೆಪ್ಪಿನಮೊಗರು ಗವರ್ನಮೆಂಟ್ ಸ್ಕೂಲ್ ಮತ್ತು ಪ್ರೌಢ ಶಿಕ್ಷಣವನ್ನು ಕ್ಯಾಸಿಯಾ ಹೈ ಸ್ಕೂಲ್ ನಲ್ಲಿ ಮಾಡಿ ಮುಗಿಸಿದರು.

ಜೀವನದಲ್ಲಿ ಏನಾದರೂ ಸಾಧಿಸಬೇಕು ತನ್ನನ್ನು ಎಲ್ಲರೂ ಗುರುತಿಸಬೇಕು ಎಂದು ಕೊಂಡಾಗ ಇವರ ಕೈ ಹಿಡಿದದ್ದು ಕಲಾ ಮಾತೆ ಇವರು ಕೇವಲ ನಿರೂಪಕರಾಗಿರದೆ ಅನೇಕ ತುಳು ಚಿತ್ರಗಳಲ್ಲಿ ನಟಿಸಿ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಇವರು ನಟಿಸಿದ ಸಿನಿಮಾ, (ತಂಬಿಲ, ಭೋಜರಾಜ್ ಎಮ್ ಬಿ ಬಿ ಎಸ್, ಭಟ್ಕಳ,)ಧಾರಾವಾಹಿ (ಅಜನೆ) ಮತ್ತು ಕಿರು ಚಿತ್ರ (ಪ್ಲಾನ್ –ಸಿ, ಆ ಒಂದು ಕೆರೆ) ಹೀಗೆ ತನ್ನಲ್ಲೂ ಒಬ್ಬ ಕಲಾವಿದ ಇದ್ದಾನೆ ಎಂದು ತೋರಿಸಿಕೊಟ್ಟಿದ್ದಾರೆ. ಜೀವನದಲ್ಲಿ ದೊಡ್ಡ ಕಲಾವಿದ ಆಗಬೇಕು, ಕನ್ನಡ ಚಿತ್ರಗಳಲ್ಲಿ ನಟಿಸಬೇಕೆಂಬ ಆಸೆ ಇದೆಯಂತೆ. ಹಾಗೆಯೇ ನಿರೂಪಣೆ ಯಲ್ಲಿಯೂ ಒಳ್ಳೆಯ ಹೆಸರು ಮಾಡಬೇಕು ಮತ್ತು ಹೊರ ದೇಶದಲ್ಲಿಯೂ ವಾಕ್ ಚಾತುರ್ಯ ತೋರಿಸಬೇಕು ಎನ್ನುವ ಕನಸು ನನಸಾಗಲಿ ಇವರ ಈ ಎಲ್ಲಾ ಆಸೆಗೆ ಮನೆಯವರು ಪ್ರೋತ್ಸಾಹ ಮತ್ತು ಮಡದಿ ಶ್ರೀಮತಿ ಶುಭ ಲಕ್ಷ್ಮಿ ಯವರ ಸಂಪೂರ್ಣ ಪ್ರೋತ್ಸಾಹ, ಬೆಂಬಲ ಇದೆ.

ಪ್ರಸ್ತುತ ಈಗ ಇವರು ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ನಾಮಫಲಕ ಕಲಾಗಾರರ ಸಂಘದ ಅಧ್ಯಕ್ಷರಾಗಿ ಬಿರ್ವೆರ್ ಕುಡ್ಲ ವಕ್ತಾರೆ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ತನ್ನ ಜೀವನಕ್ಕಾಗಿ ತನ್ನದೇ ಆದ ಸುವರ್ಣ ಗ್ರಾಫಿಕ್ಸ್ ಸ್ಟುಡಿಯೋ ನಡೆಸಿಕೊಂಡು ಹೋಗುತ್ತಿದ್ದಾರೆ.(ಕಾರ್, ಬೈಕ್ ಇದರ ಗ್ರಾಫಿಕ್ಸ್, ಸ್ಟಿಕರ್ ಕಟ್ಟಿಂಗ್, ನೇಮ್ ಪ್ಲೇಟ್ )

ತಾನು ಚಿತ್ರರಂಗದಲ್ಲಿ ಹೆಸರು ಮಾಡಬೇಕು ಎಂಬ ಇವರ ಕನಸು ಆದಷ್ಟು ಬೇಗ ಈಡೇರಲಿ.

ಕನ್ನಡ ತುಳು ಚಿತ್ರ ರಂಗದಲ್ಲಿ ಒಳ್ಳೆಯ ಅವಕಾಶ ಸಿಗಲಿ, ಕನ್ನಡದಲ್ಲಿ ಅಭಿನಯಿಸುವ ಆಸೆಯು ಬೇಗ ಫಲಿಸಲಿ, ಕಲಾಮಾತೆ ಮತ್ತು ತುಳುನಾಡಿನ ದೈವ ದೇವರುಗಳ ಅನುಗ್ರಹ ಸದಾ ಇರಲಿ ಒಳ್ಳೆಯದಾಗಲಿ ನಿಮಗೆ

 

ಬರಹ:✍ಪ್ರಶಾಂತ್ ಅಂಚನ್ ಮಸ್ಕತ್


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »