TOP STORIES:

FOLLOW US

“ನಿತಿನ್ “ರವರ ಕನಸಿನ ದಾರಿಗೆ “ಚರಿತ್ರೆ”ಯ ಹೊಂಬೆಳಕು..! ಚರಿತ್ರೆಯ ಬೆನ್ನೇರಿದ ಹಳ್ಳಿಹೈದನ_ಯಶೋಗಾಥೆ… ನಿತಿನ್ ಪೂಜಾರಿ


ಕಷ್ಟಗಳು ಬಂದಿವೆ ಎಂದು ಕಂಡ ಕನಸನ್ನು ಬಿಡಬಾರದು. ಇವತ್ತಿನ ದಿನ ಕಷ್ಟಕರವಾಗಿರಬಹುದು.
ನಾಳೆ ಅದಕ್ಕಿಂತ ಕೆಟ್ಟದಾಗಿರಬಹುದು.ಆದರೆ ಮುಂದೊಂದು ದಿನ ಎಲ್ಲವೂ ಸುಖಮಯವಾಗಿರುತ್ತೆ.”
ಪುಟ್ಟ ಹಕ್ಕಿಯೊಂದು ಕಂಡಿದ್ದು ಹಾರುವ ಕನಸಲ್ಲ.ತನ್ನ ಧ್ವನಿಯಲ್ಲೇ ಆಕಾಶದೆತ್ತರಕ್ಕೂ ರುಜುಮಾಡಬೇಕೆಂದು.

ಊಟಕ್ಕೂ ಹಣವಿಲ್ಲದೆ, ಹಸಿವಿನಿಂದ ಸಿಲಿಕಾನ್ ಸಿಟಿಯ ಬಸ್ಸ್ಟ್ಯಾಂಡ್ ಒಂದರಲ್ಲಿ ಕೂರುತ್ತಾನನ್ನಿಂದ ಏನೂ ಸಾಧ್ಯವಿಲ್ಲಎಂದುಕಣ್ಣೀರು ಸುರಿಸಿದ್ದಲ್ಲ. ಹೊಸಹೆಜ್ಜೆಗಳ ಸವೆಯಲು ದಾರಿ ಸೃಷ್ಟಿಸಿದ್ದು.

ಅದೆಷ್ಟು ಬಾರಿ ತನ್ನಿಷ್ಟದ ನಿರೂಪಣೆಗಾಗಿ ವೇದಿಕೆಗಾಗಿ ಪರದಾಡಿ ಎಲ್ಲರಿಂದಲೂ ತಿರಸ್ಕಾರಗೊಂಡರೂ ಕುಗ್ಗಿದ್ದಲ್ಲ.

ಅದೇ ಧ್ವನಿಗಾಗಿ ತಾನೇಚರಿತ್ರೆಎಂಬ ಅಸ್ತ್ರವನ್ನು ಜ್ಞಾನದ ಬತ್ತಳಿಕೆಯಲ್ಲಿ ಇರಿಸಿ, ಅನುದಿನ  ಪ್ರಯತ್ನವೆಂಬ ದೀಪದಿಂದಆರಾಧಿಸಿ ಸತತ ಮೂರು ವರ್ಷಗಳ ನಿರಂತರ ತಪಸ್ಸಿನ ಫಲವಾಗಿಚರಿತ್ರೆಎಂಬ ಯುಟ್ಯೂಬ್ ಚಾನೆಲ್ ಮೂಲಕ ತನ್ನಧ್ವನಿಯಿಂದಲೇ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದವರುನಿತಿನ್ ಪೂಜಾರಿ ಶಿರ್ಲಾಲ್ಇವರು.

ಶ್ರೀ ಮನೋಹರ್ ಪೂಜಾರಿ ಮತ್ತು ಪ್ರಭಾವತಿ ಇವರ ಪುತ್ರರಾಗಿ ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನ ಶಿರ್ಲಾಲ್ ನಲ್ಲಿ ಜನಿಸಿದಇವರು  ಬಾಲ್ಯದಿಂದಲೂ ಪ್ರತಿಭಾನ್ವಿತರು.

ನಾಟಕ, ಭಾಷಣ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಎತ್ತಿದ ಕೈ.

ತನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಅಂಡಾರ್ ಹಾಗೂ ಶಿರ್ಲಾಲ್ ನಲ್ಲಿ  ಮುಗಿಸಿ, ಪದವಿಪೂರ್ವ ಶಿಕ್ಷಣವನ್ನು ಕಾರ್ಕಳದಬೋರ್ಡ್ ಹೈಸ್ಕೂಲ್ನಲ್ಲಿ ಮತ್ತು ಬಿ. ಎಸ್. ಸಿ ಪದವಿಯನ್ನು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇಲ್ಲಿ ಮುಗಿಸಿದರು.

ತನ್ನಿಷ್ಟದಪತ್ರಿಕೋದ್ಯಮವನ್ನು ಕಲಿಯಬೇಕು ಎಂಬ ಕನಸಿದ್ದರು ತಾನೇ ರಜಾದಿನಗಳಲ್ಲಿ ಹಗಲಿರುಳು ಗಾರೆಕೆಲಸ ಮಾಡಿಸಂಪಾದಿಸಿದ  ಹಣದಿಂದ ಕಾಲೇಜಿನ ಶುಲ್ಕ ತೀರಿಸಲು ಸಾಧ್ಯವಾಗದೆ ಬಿ. ಎಸ್. ಸಿ ಗೆ ಸೇರಿದರೂಗುರಿಯೊಂದೇನಿರೂಪಕನಾಗುವುದು.”

ಅಂದಿನಿಂದಲೇ ವಿಭಿನ್ನ ಶೈಲಿಯಲ್ಲಿ ತನ್ನದೇ ಸಾಲುಗಳಿಗೆ ಧ್ವನಿಯಾಗಲು ಮೊದಲ ಹೆಜ್ಜೆ ಇಟ್ಟರು.

2015-16 ರಲ್ಲಿಕರಾವಳಿ ಕನ್ನಡದಲ್ಲಿ ದುಡಿಯುತ್ತಾರೆ.

ನಂತರ ಮಂಗಳೂರಿನ “tv7” ಚಾನೆಲ್ನಲ್ಲಿ ಸಂದರ್ಶನಕ್ಕೆ ತೆರಳುತ್ತಾರೆ. ಕನ್ನಡ ಟೈಪಿಂಗ್ ಬರದ ಕಾರಣ ಅವರನ್ನು  ಮತ್ತೆನಿರಾಕರಿಸುತ್ತಾರೆ.

ಆದರೂ ಹಠಬಿಡದೆ ಧ್ವನಿ ನೀಡಲು ಅವಕಾಶ ಕೇಳಿದಾಗ ಸಿಕ್ಕ ಒಂದು ಅವಕಾಶ ಮತ್ತೆ ಅವರನ್ನು ಛಲಬಿಡದೆ ಸ್ವರಲೋಕದಲ್ಲಿಸಂಚರಿಸಲು ಸ್ಫೂರ್ತಿ ತುಂಬುತ್ತದೆ.

ತಾನು ಯಾವುದರಲ್ಲಿ ದುರ್ಬಲ ಎಂದೆನಿಸುತ್ತೋ ಎಲ್ಲವನ್ನು ಹಗಲಿರುಳೆನ್ನದೆ ವಿದ್ಯೆಯನ್ನಾಗಿ ಸ್ವೀಕರಿಸಿ ತನ್ನನ್ನು ತಾನುಹೊಸಬದುಕಿನ ಯುದ್ಧಕ್ಕೆ ಸಜ್ಜುಗೊಳಿಸುತ್ತಾರೆ.

ಹಳ್ಳಿಯ ಬದುಕನ್ನೇ ಸ್ವರ್ಗವೆನ್ನುತ್ತಾ ನೋವಲ್ಲು ನಲಿವನ್ನು ಕಾಣುತ್ತಾ,ತನ್ನವರು ತನಗಾಗಿ ಹೆಗಲುಕೊಡದಿದ್ದರೂಎಲ್ಲರೂ  ನನ್ನವರುಎಂಬ ಹೃದಯವಂತಿಕೆಯ ಹೊತ್ತು ಕನಸಿನ ಬೆನ್ನೇರಿಬೆಂಗಳೂರು ತಲುಪಿ  2017-18 ರಲ್ಲಿಸುದ್ದಿ ಟಿವಿ ಬೆಂಗಳೂರುಇಲ್ಲಿ ಜರ್ನಲಿಸ್ಟ್ ಆಗಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಾರೆ.

ಕೈಗೆಟುಕದ ಸಂಭಾವನೆಯಿಂದ ಒಂದು ಹೊತ್ತಿನ ಊಟಕ್ಕೂ ಹಣವಿಲ್ಲದಿದ್ದಾಗ ತನ್ನ ಕಷ್ಟ ಸಹೋದ್ಯೋಗಿಗಳಿಗೆ ತಿಳಿಯಬಾರದೆಂದುಊಟದ ಸಮಯದಲ್ಲಿ ಬಸ್ಸ್ಟ್ಯಾಂಡ್ ನಲ್ಲಿ ಕುಳಿತು ಹಸಿವನ್ನು ಸಾಧನೆಯ ಬುತ್ತಿಗಾಗಿ ಕಾದಿರಿಸಿ ಮೌನವಾಗಿ ಮತ್ತೆ ಕೆಲಸಮುಂದುವರೆಸಿದ ಕ್ಷಣ ಎಂತವರನ್ನು ಒಂದು ಕ್ಷಣ ಭಾವುಕರರನ್ನಾಗಿ ಮಾಡುತ್ತದೆ.

ಸಾಧನೆ ಮಾಡಲು ಅಡಿಯಿಟ್ಟವನಿಗೆ ಬಡತನ, ಕಷ್ಟ, ಹಣ ಎಂದಿಗೂ ಅಡ್ಡಿಪಡಿಸಲಿಲ್ಲ . ಬದಲಾಗಿ ಕಠಿಣ ಶ್ರಮ, ಸತತ ಪ್ರಯತ್ನ, ನಿರಂತರ ಶ್ರದ್ಧೆಯ ಮೂಲಕವೇ ಜೀವನದಲ್ಲಿ ಯಶಸ್ಸಿನ ಬೆನ್ನತ್ತಿದರು.ಹೀಗಾಗಿ ಜೀವನದಲ್ಲಿ ಎದುರಾಗುವ ಸವಾಲು, ಸಮಸ್ಯೆಗಳನ್ನುಧೈರ‍್ಯವಾಗಿ ಎದುರಿಸಿ, ಅವುಗಳನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಸಾಧನೆಯ ಕಡೆಗೆ ಮುಖಮಾಡಿದರು ನಮ್ಮ ನಿತಿನ್ ಪೂಜಾರಿಅವರು.

ಮುಂದೆಪವರ್ ಟಿವಿಯಲ್ಲಿ  ದುಡಿಯುವ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಯಲ್ಲಿ ಕಾರ್ಯನಿರ್ವಹಿಸುತಿದ್ದವಿನೋದ್ಅವರಪರಿಚಯವಾಗುತ್ತೆ.

ಇಬ್ಬರು ಅಕ್ಕಪಕ್ಕದ ರೂಮ್ನಲ್ಲಿ ಇದ್ದುದ್ದರಿಂದ ಒಮ್ಮೆವಿನೋದ್ರವರು ನಿತಿನ್ ಅವರ ಧ್ವನಿಯನ್ನು ಮೆಚ್ಚಿ ನಾವು ಯಾಕೆ ಒಂದುಯುಟ್ಯೂಬ್ ಚಾನೆಲ್ ಮಾಡಬಾರದು? ಎನ್ನುತ ಹೊಸಹೆಜ್ಜೆಗೆ ನಾಂದಿ ಹಾಡುತ್ತಾರೆ.

2020 ರಲ್ಲಿ ಗೆಳೆಯರಿಬ್ಬರೂ ಸೇರಿಚರಿತ್ರೆಎಂಬ ಚಾನೆಲ್ ಮಾಡಿ ಅದರ ಮೂಲಕ ಕನ್ನಡದ ಇತಿಹಾಸದಲ್ಲೇ ಮೊಟ್ಟಮೊದಲಬಾರಿಗೆ ಜಗತ್ತು ನಿಬ್ಬೆರಗಾಗುವ ಅದೆಷ್ಟೋ ವಿಚಾರಗಳನ್ನು ಪ್ರಸ್ತುತ ಪಡಿಸುತ್ತಾರೆ.

ನಿತಿನ್ ತನ್ನೆಲ್ಲ ವಿಚಾರಧಾರೆಗೆ ಅಕ್ಷರಗಳನ್ನು ಪೋಣಿಸಿ ತಾನೇ ಧ್ವನಿಯಾದರೆ ವಿನೋದ್ ರವರು ವಿಭಿನ್ನ ಶೈಲಿಯಲ್ಲಿ ಸಂಕಲನ ನೀಡಿಜೀವ ತುಂಬುತ್ತಾರೆ.

ಇವರಿಬ್ಬರ ಪರಿಶ್ರಮಕ್ಕೆ ಅದೇ ವರ್ಷದಲ್ಲಿ 2ಲಕ್ಷ ಚಂದಾದಾರರನ್ನು ಪಡೆಯುತ್ತಾರೆ.

2021 ರಲ್ಲಿಚರಿತ್ರೆಗೆ ದೇಶದ ಮೂಲೆಮೂಲೆಯಲ್ಲಿರುವ ಕನ್ನಡಿಗರು ಜಯಭೇರಿ ಕೂಗುತ್ತಾ ಆಗಲೇ ಮಿಲಿಯನ್ ಗಡಿದಾಟಿಸಿಯಶಸ್ಸುಎಂಬ ಮರೀಚಿಕೆಯನ್ನು ಕೊನೆಗೂ ಅನುಭವಿಸಲು ಅನುವುಮಾಡಿದ್ದರು.

ಅದನ್ನೇ ಉದ್ಯೋಗವನ್ನಾಗಿ ಮುಂದುವರೆಸುತ್ತ ತಮ್ಮ ಊರುಗಳಲ್ಲೆಚರಿತ್ರೆ ಕಛೇರಿಯನ್ನು ಸ್ಥಾಪಿಸಿ ಹಗಲಿರುಳೆನ್ನದೆ   ಕಾರ್ಯಪ್ರವೃತರಾದರು ಛಲಬಿಡದ ಯುವಕರು.

ಮುಂದೆ ನಿತಿನ್ ಹೊಸ ಹೊಸ ಪ್ರಯತ್ನ ಮುಂದುವರೆಸುತ್ತಇನ್ಸ್ಟಾಗ್ರಾಮ್ನಲ್ಲಿ ಕನ್ನಡ ಭಾಷೆಯಲ್ಲಿ ಮೊದಲ ಬಾರಿಗೆಸ್ಫೂರ್ತಿದಾಯಕ ನುಡಿಗಳನ್ನು ಆಡುವ ವಿಡಿಯೋ ಮಾಡಿ ಹೊಸಭಾಷ್ಯ ಬರೆಯುತ್ತಾರೆ.

ಅಲ್ಲೂ ಅವರು ತನ್ನ ಧ್ವನಿ ಜನರಿಗೆ ಇಷ್ಟವಾಗುತ್ತಿಲ್ಲವೊ ಎಂದು ಒಮ್ಮೆಯೂ ಕುಗ್ಗಲಿಲ್ಲ.ದಿನನಿತ್ಯ ತನ್ನ ಪಾಲಿನ ಕೆಲಸವನ್ನು ತೃಪ್ತಿಯಿಂದ ಮಾಡುತ್ತ ಹೋದರು.

ಅವರ ಸ್ಫೂರ್ತಿದಾಯಕ ಮಾತುಗಳಿಂದ ಬದುಕನ್ನು ಬದಲಾಯಿಸಿದವರೆಷ್ಟೋ, ಅವರನ್ನೇ ಆದರ್ಶವಾಗಿಟ್ಟುಕೊಂಡು  ತಾವೇಧ್ವನಿಯಾಗುತ್ತ ಅಂತದ್ದೇ ಚಾನೆಲ್ ಗಳನ್ನು ಆರಂಭಿಸಿ ಯಶಸ್ಸಿನ ದಾರಿಹಿಡಿದವರೆಷ್ಟೋ..!

ಏನೇ ಇರಲಿ.

ಆಕಾಶದೆಡೆಗೆ ನೋಡಿ, ಯಾರೂ ಒಂಟಿಯಾಗಿಲ್ಲ.

ಇಡೀ ವಿಶ್ವವು ನಮಗೆ ಸ್ನೇಹಪರವಾಗಿದೆ.

ಕನಸು ಕಂಡು ಕೆಲಸ ಮಾಡುವವರಿಗೆ ಬಯಸಿದ್ದೆಲ್ಲವೂ ಸಿಕ್ಕೇ ಸಿಗುತ್ತೆ  ಎಂಬುದಕ್ಕೆ ನಿತಿನ್ ಪೂಜಾರಿ ಅವರ ಯಶೋಗಾಥೆ ಸತ್ಯನಿದರ್ಶನ!

ಚರಿತ್ರೆಯೂಟ್ಯೂಬ್ನಲ್ಲಿ ಇಂದು 1.07ಮಿಲಿಯನ್ ಚಂದಾದಾರರು, ಇನ್ಸ್ಟಾಗ್ರಾಮ್ ನಲ್ಲಿ 2.23 ಲಕ್ಷ ಅಭಿಮಾನಿಗಳು, ಮೋಜ್ಆಪ್ ನಲ್ಲಿ 1.2 ಮಿಲಿಯನ್ ಅಭಿಮಾನಿಗಳಿದ್ದಾರೆ.

ಇದೆಲ್ಲವೂ ಸಾಧ್ಯವಾಗಿದ್ದುಪ್ರಯತ್ನಎಂಬಪಯಣದಿಂದ ಅಷ್ಟೇ..

ಯಾನ ಬದುಕಿನುದ್ದಕ್ಕೂ ಸಾಗಲಿ.

ಬದುಕು ಕಡಲ ನಾವೆಯಲ್ಲಿ ಸಾಯುವವರೆಗೂ ಸಾಧಿಸಬೇಕೆನ್ನುವ ಹಂಬಲದ ನಿತಿನ್ ಪೂಜಾರಿ ಇವರಿಗೆ ಇನ್ನಷ್ಟು ಯಶಸ್ಸು ಸಿಗಲಿ.

ಅದೆಷ್ಟೋ ದೊಡ್ಡ ವೇದಿಕೆಗಳು ಇವರ ಸಾಧನೆಯನ್ನು ಗೌರವಿಸಿ ಲೋಕಕ್ಕೆ ಸ್ಫೂರ್ತಿಯಾಗಲು ಅವಕಾಶ ನೀಡಲಿ.

ಬರಹಃ ಚೈತ್ರ ಕಬ್ಬಿನಾಲೆ


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »