TOP STORIES:

ಪಣಂಬೂರು-ಕುಳಾಯಿ ಘಟಕ ನೊಂದವರ ಬಾಳಿಗೆ ಆಶಾ ಕಿರಣ


ಬಡತನ ಶಾಪವಲ್ಲ, ಆದರೆ ಅದನ್ನು ಸವಲಾಗಿ ಸ್ವೀಕರಿಸಬೇಕು ಎನ್ನುತ್ತಾರೆ. ಇಲ್ಲೊಬ್ಬಳು ಅಂತಹ ಮಹಾತಾಯಿ ತನ್ನಮಗುವನ್ನು ಕಳೆದ 14 ವರ್ಷಗಳಿಂದ ಕಷ್ಟಪಟ್ಟು ಸಾಕುತ್ತಿದ್ದಾರೆ.  ಹೌದು ಮಿತ್ರರೇ ಇದಕ್ಕೆ ಸಾಕ್ಷಿ ಸುರತ್ಕಲ್ ಇಡ್ಯಾ ಗ್ರಾಮದ ಜನತಾಕಾಲೋನಿ ನಿವಾಸಿ ಉಮೇಶ್ ಮತ್ತು ಮೀರಾ ದಂಪತಿಗಳು. ಇವರಿಗೆ ಇಬ್ಬರು ಮಕ್ಕಳು. ಪವನ್ ಹುಟ್ಟಿನಿಂದಲೇ ಅಂಗವಿಕಲ. ಇದೀಗ ಅವನಿಗೆ 14 ವರ್ಷ ಪ್ರಾಯ. ಶರೀರದಲ್ಲಿ ಬಲವಿಲ್ಲದೆ ತಾಯಿಯನ್ನೇ ಆಶ್ರಯಿಸಿದ್ದು .ತಂದೆ ಹೃದಯ ಸಂಬಂದಿಸಿದಕಾಯಿಲೆಯಿಂದ ಬಳಲು ತ್ತಿದ್ದರೂ ಜೀವನೋಪಾಯಕ್ಕೆ ಹೋಟೆಲ್ ನಲ್ಲಿ  ಕೆಲಸ ಮಾಡುತ್ತಿದ್ದಾರೆ. ಇವರ ಕಷ್ಟದ ದಿನಗಳಲ್ಲಿ ಸದಾಭಾಗಿಯಾಗುತ್ತಾ.. ಯುವವಾಹಿನಿ ಪಣಂಬೂರುಕುಳಾಯಿ ಘಟಕ ಗುರುತಿಸಿ ಘಟಕದ ಮಾಜಿ ಅಧ್ಯಕ್ಷರಾದ ಸಂಜೀವ ಸುವರ್ಣರವರ ಮುಂದಾಳತ್ವದಲ್ಲಿ, ಘಟಕದ ಸದಸ್ಯರುಗಳಿಂದ, ಹಾಗೂ ಕೊಡುಗೈ ದಾನಿಗಳ ನೆರವಿನಿಂದ  ಅಂಗವಿಕಲನಾಗಿರುವ ಪವನ್ ಗೆಎರಡು ಕಾಲುಗಳಿಗೆ ಬಲ ಬರಲು 32,500/- ಬೆಲೆಯ ” Ankle boot ” ಮಾಡಿಸಿ ಕೊಡಲಾಯಿತು. ಅಲ್ಲದೆ ಹೆಣ್ಣು ಮಗಳವಿದ್ಯಾಭ್ಯಾಸಕ್ಕೆ ನೆರ ವಾಗಲೆಂದು,ನಮ್ಮ ಘಟಕದ ಸದಸ್ಯರಾದ   ಶಶಾಂಕ್ ಕೋಟ್ಸ್ಯೆಯ್ಯಾಡಿ, ಮಂಗಳೂರಿನ ಮಾಲಕರಾದಶ್ರೀ ಬಾಲಕೃಷ್ಣ N.ರವರ ನೆರವಿನೊಂದಿಗೆ  5000/-ರೂಪಾಯಿಯನ್ನು ದಿನಾಂಕ 13.7.2021ರಂದು ಘಟಕದ ಅಧ್ಯಕ್ಷರಾದ ಹರೀಶ್  ಪೂಜಾರಿ ಯವರು ಹಸ್ತಾoತರಿಸಿದರು. ಇದೇ  ಬಡ ಕುಟುಂಬಕ್ಕೆ  ನಮ್ಮ ಘಟಕವು ಮಾಜಿ ಅಧ್ಯಕ್ಷರಾದ ಸಂಜೀವ ಸುವರ್ಣರವರನೇತೃತ್ವದಲ್ಲಿ 2014-15 ರಲ್ಲಿ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗಿತ್ತು. ಕಾರ್ಯಕ್ರಮದಲ್ಲಿ ಘಟಕದಅಧ್ಯಕ್ಷರಾದ ಹರೀಶ್ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷರಾದ ಸುರೇಶ್ ಪೂಜಾರಿ, ಮಾಜಿ ಅಧ್ಯಕ್ಷರಾದ ಸಂಜೀವಸುವರ್ಣ,ಸದಾನಂದ ಪೂಜಾರಿ ಕುಳಾಯಿ.. ಮತ್ತಿತರರು ಉಪಸ್ಥಿತರಿದ್ದರು.


Related Posts

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »