TOP STORIES:

FOLLOW US

ಪಾರ್ಲೆ ಜಿ ಪ್ಯಾಕೆಟ್​ನಲ್ಲಿರುವ ಮಗು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ


ಜೀವನದಲ್ಲಿ ಒಮ್ಮೆಯಾದರೂ ನೀವು ಪಾರ್ಲೆ ಜಿ ಬಿಸ್ಕತ್ತನ್ನು ತಿಂದೇ ಇರ್ತೀರಾ..! ಆದರೆ ಈ ಬಿಸ್ಕತ್ತಿಗೆ ಪಾರ್ಲೆ ಜಿ ಎಂಬ ಹೆಸರು ಹೇಗೆ ಬಂತು ಅಂತಾ ಎಂದಾದರೂ ಯೋಚನೆ ಮಾಡಿದ್ದೀರಾ..?‌ ಈ ಬಿಸ್ಕತ್ತು ತಯಾರಿಕೆಯ ಕಾರ್ಯವನ್ನು ಮುಂಬೈನ ವಿಲೇ ಪಾರ್ಲೆಯಲ್ಲಿ ಆರಂಭಿಸಲಾಯ್ತು.

ಇದೇ ಕಾರಣಕ್ಕೆ ಪಾರ್ಲೆ ಎಂಬ ಪದವನ್ನು ಬಳಕೆ ಮಾಡಲಾಯ್ತು. ಆದರೆ ಪಾರ್ಲೆ ಜಿ ಯಲ್ಲಿರುವ ‘ಜಿ’ ಅಂದರೆ ಏನು..? ಆ ಪ್ಯಾಕೆಟ್​ನಲ್ಲಿರುವ ಮಗು ಯಾರು..? ಎಂಬ ಪ್ರಶ್ನೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಪಾರ್ಲೆ ಉತ್ಪನ್ನಗಳು 1929ರಿಂದ ಆರಂಭವಾದವು. ಮೊದಲು ಈ ಕಾರ್ಖಾನೆಯಲ್ಲಿ ಕೆಲಸ ಮಾಡ್ತಾ ಇದ್ದದ್ದು ಕೇವಲ 12 ಮಂದಿ ಮಾತ್ರ. ಆಗ ಈ ಬಿಸ್ಕತ್ತಿನ ಹೆಸರು ಪಾರ್ಲೆ – ಗ್ಲುಕೋ ಎಂದಾಗಿತ್ತು. 80 ದಶಕದ ಆರಂಭದವರೆಗೂ ಅದೇ ಹೆಸರನ್ನು ಮುಂದುವರಿಸಲಾಗಿತ್ತು. ಆದರೆ 1981ರಲ್ಲಿ ಕಂಪನಿಯು ಗ್ಲುಕೋ ಎಂಬ ಪದವನ್ನು ಶಾರ್ಟ್ ಮಾಡಿ ಪಾರ್ಲೆ ಜಿ ಎಂದು ಬದಲಾಯಿಸಿದೆ. 80 ದಶಕದಲ್ಲಿ ಈ ಬಿಸ್ಕತ್ತು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರ ಫೇವರಿಟ್​ ಆಗಿ ಬದಲಾಗಿತ್ತು. ಮಕ್ಕಳಿಗೆ ಈ ಬಿಸ್ಕತ್ತು ಇಷ್ಟವಾದ ಬಳಿಕ ಪಾರ್ಲೆ ಜಿ ಯಲ್ಲಿದ್ದ ಜಿಯನ್ನು ಜೀನಿಯಸ್​ ಎಂದು ಬದಲಾಯಿಸಲಾಯ್ತು. ಆದರೂ ಪ್ಯಾಕೆಟ್​ ಮೇಲೆ ಜಿ ಎಂದೇ ಬರೆಯಲಾಗಿತ್ತು.

 

ಪಾರ್ಲೆ ಜಿ ಬಿಸ್ಕತ್ತಿನ ಪ್ಯಾಕೆಟ್​ನಲ್ಲಿರುವ ಮಗು ಯಾರು..?

 

ಪಾರ್ಲೆ ಜಿ ಬಿಸ್ಕತ್ತಿನ ಪ್ಯಾಕೆಟ್​ನಲ್ಲಿರುವ ಮಗು ಯಾರು ಎಂಬದು ಒಂದು ಮಿಲಿಯನ್​ ಡಾಲರ್ ಪ್ರಶ್ನೆಯಾಗಿದೆ. ಹಲವು ದಶಕಗಳೇ ಕಳೆದರೂ ಸಹ ಈ ಮಗು ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ.

ಆದರೆ ಮೂರು ಹೆಸರುಗಳನ್ನು ಸಾಮಾನ್ಯವಾಗಿ ಹೇಳಲಾಗುತ್ತೆ. ನೀರು ದೇಶಪಾಂಡೆ, ಸುಧಾ ಮೂರ್ತಿ ಹಾಗೂ ಗುಂಜನ್​ ಗುಂಡಾನಿಯಾ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಈ ಮೂವರಲ್ಲಿ ಒಬ್ಬರ ಬಾಲ್ಯದ ಪೋಟೋ ಇದು ಎಂದು ಅನೇಕರು ಹೇಳುತ್ತಾರೆ.ಅದರಲ್ಲೂ ನೀರೂ ದೇಶಪಾಂಡೆ ಹೆಸರು ಹೆಚ್ಚಾಗಿ ಕೇಳಲಾಗುತ್ತಿದೆ.

ಹಲವು ಪತ್ರಿಕೆಗಳಲ್ಲಿ ನೀರು ದೇಶಪಾಂಡೆ ಅವರ ಫೋಟೋ ಸಹಿತ ಸುದ್ದಿ ಪ್ರಕಟವಾಗಿತ್ತು. ಈ ಚಿತ್ರವು ನಾಗ್ಪುರದ ನಿವಾಸಿ 65 ವರ್ಷದ ನೀರು ಅವರ ಬಾಲ್ಯದ ಚಿತ್ರ ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿವೆ. ನೀರೂ ಅವರ ಈ ಚಿತ್ರವನ್ನು ಆಕೆ 4 ವರ್ಷದವಳಿದ್ದಾಗ ತೆಗೆದದ್ದು ಎಂದು ಸುದ್ದಿಯಲ್ಲಿ ಹೇಳಲಾಗಿತ್ತು. ಅವರ ತಂದೆ ವೃತ್ತಿಪರ ಛಾಯಾಗ್ರಾಹಕ ಅಲ್ಲ, ಆದ್ದರಿಂದ ಅವರು ಸುಮ್ಮನೇ ಒಂದು ಫೋಟೋ ತೆಗೆದಿದ್ದರು. ಆ ಫೋಟೊ ಎಷ್ಟು ಚೆನ್ನಾಗಿ ಬಂದಿತ್ತು ಅಂದರೆ ಅದೇ ಫೋಟೋವನ್ನು ಪಾರ್ಲೆ ಜಿ ಪ್ಯಾಕಿಂಗ್​​ಗೆ ಆಯ್ಕೆ ಮಾಡಿಕೊಂಡಿತು ಎಂದು ಹೇಳಲಾಗುತ್ತದೆ.

ಈ ಸುದ್ದಿ ವೈರಲ್​ ಆಗುತ್ತಿದ್ದಂತೆಯೇ ಪಾರ್ಲೆ ಪ್ರಾಡಕ್ಟ್​ನಿಂದ ಸ್ಪಷ್ಟನೆ ನೀಡಲಾಗಿದೆ. ಎಲ್ಲಾ ವದಂತಿಗಳಿಗೆ ಪೂರ್ಣವಿರಾಮ ಹಾಕಿದ ಗ್ರೂಪ್​​ನ ಪ್ರಾಡಕ್ಟ್​ ಮ್ಯಾನೇಜರ್​ ಮಯಂಕ್​ ಷಾ, ಪ್ಯಾಕೆಟ್​ನಲ್ಲಿ ಕಂಡುಬರುವ ಮಗು ಒಂದು ಇಲ್ಯೂಸ್ಟ್ರೇಷನ್​ ಆಗಿದೆ. ಇದನ್ನು 60ರ ದಶಕದಲ್ಲಿ ಮಾಡಲಾಗಿದೆ. ಇಲ್ಲಿ ಯಾವುದೇ ಮಗುವಿನ ಫೋಟೋವನ್ನು ಕಂಪನಿ ಬಳಕೆ ಮಾಡಿಲ್ಲ. ಈ ಚಿತ್ರವನ್ನು ಎವರೆಸ್ಟ್​​ ಕ್ರಿಯೇಟಿವ್​ ಏಜೆನ್ಸಿ ಸಿದ್ದಪಡಿಸಿದೆ ಎಂದು ಹೇಳಿದ್ದಾರೆ.


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »