TOP STORIES:

ಪುಷ್ಪರಾಜ್ ಅಮಿನ್ ಮತ್ತು ತಂಡದಿಂದ ಮೈಕ್ರೋ ಲೈಟ್ ಸೀ ಪ್ಲೇನ್ ತಯಾರು – ಬೇಕಿದೆ ಸರಕಾರದ ಸಹಾಯ ಹಸ್ತ


ಉಡುಪಿ: ಒಂದೆಡೆ ಸರಕಾರಗಳು ದೇಶೀಯ ಉತ್ಪನ್ನ, ಸಂಶೋಧನೆಗಳಿಗೆ ಒತ್ತು ನೀಡಿ ಸ್ವದೇಶದಲ್ಲಿ ತಯಾರಾಗುವ ಅವಿಶ್ಕಾರಗಳಿಗೆ ವೇದಿಕೆ ಒಗದಿಸಲು ಚಿಂತನೆ ನಡೆಸುತ್ತಿದೆ. ಆದರೆ ಮತ್ತೊಂದೆಡೆ ಉಡುಪಿಯ ಹೆಜಮಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ದೇಶದಲ್ಲೇ ಮೊದಲು ಎನ್ನುವ ರೀತಿಯಲ್ಲಿ ಸಂಶೋಧನೆ ಒಂದು ನಡೆದಿದ್ದು ಸರಕಾರದ ಸಹಾಯ ಹಸ್ತದ ನಿರೀಕ್ಷೆಯಲ್ಲಿದೆ.

ಉಡುಪಿಯ ಗಡಿಭಾಗ ಹೆಜಮಾಡಿ ಎಂಬ ಪುಟ್ಟ ಗ್ರಾಮದಲ್ಲಿ ಉತ್ಸಾಹಿ ಯುವ ಪಡೆ ತಮ್ಮದೇ ಸ್ವಂತ ಬಂಡವಾಳದೊಂದಿಗೆ ದೇಶದಲ್ಲೇ ಮೊದಲು ಎಂಬಂತೆ ಮೈಕ್ರೋ ಲೈಟ್ ಸೀ ಪ್ಲೇನ್ ಒಂದನ್ನು ತಯಾರು ಮಾಡಿದ್ದಾರೆ. ಈ ಸೀ ಪ್ಲೇನ್ ದೇಶೀಯ ನಿರ್ಮಿತ ಪ್ರಥಮ ಸೀ ಪ್ಲೇನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಪುಷ್ಪರಾಜ್ ಅಮಿನ್ ಎಂಬವರು ಈ ಯೋಜನೆಯ ರೂವಾರಿ. 8 ಮಂದಿ ಯುವಕ ಯುವತಿಯರ ಜೊತೆ ಗೂಡಿ ಈ ಸೀ ಪ್ಲೇನ್ ಅನ್ನು ತಯಾರಿಸಿದ್ದು ಇಲ್ಲಿನ ಶಾಂಭವಿ ನದಿಯಲ್ಲಿ ಯಶಸ್ವಿ ಪ್ರಾಯೋಗಿಕ ಹಾರಾಟ ಕೂಡಾ ನಡೆದಿದೆ, 1 ವರ್ಷದ ಕಠಿಣ ಪರಿಶ್ರಮ ಮತ್ತು ಸಂಶೋಧನೆಯ ಫಲವಾಗಿ ಸೀ ಪ್ಲೇನ್ ನಿರ್ಮಾಣವಾಗಿದ್ದು ಸುಮಾರು 7 ರಿಂದ 8 ಲಕ್ಷ.ರೂ. ವೆಚ್ಚ ತಗುಲಿದೆ.

“ಸಣ್ಣದಿಂದಲೇ ನನಗೆ ವಿಮಾನ ಹಾರಿಸಬೇಕು ಎಂಬ ಆಸೆ ಇದ್ದಿತ್ತು. ಕಳೆದ ಕೆಲ ವರ್ಷಗಳಲ್ಲಿ ಸಣ್ಣ ಸಣ್ಣ ವಿಮಾನದ ಮಾಡೆಲ್‌‌ಗಳನ್ನು ಮಾಡಿದ್ದೇನೆ. ಹಲವಾರು ಮಕ್ಕಳಿಗೆ ತರಬೇತಿಯನ್ನು ಕೂಡಾ ನೀಡಿದ್ದೇನೆ. ಓರ್ವ ವ್ಯಕ್ತಿ ಕುಳಿತುಕೊಂಡು ಹೋಗುವಂತಹ ವಿಮಾನ ಮಾಡಬೇಕು ಎಂಬ ಆಸೆ ಇದ್ದಿತ್ತು. ಆದರೆ ವಿಮಾನ ಮಾಡುವುದು ತುಂಬಾ ಕಷ್ಟಕರ. ಆಕಾಶದಲ್ಲಿ ಹಾರುವ ವಿಮಾನ ತಯಾರಿಸಲು ಜಾಗದ ಕೊರತೆ ಮತ್ತು ಹಣದ ಅವಶ್ಯಕತೆ ಕೂಡಾ ಇತ್ತು ಹೀಗಾಗಿ ನೀರಿನಲ್ಲಿ ಹೋಗುವ ವಿಮಾನವನ್ನು ತಯಾರಿಸಿದೆವು. ನನ್ನ ಮನೆಯ ಹತ್ತಿರವೇ ನದಿ ಇರುವುದರಿಂದ ಇದರ ಪ್ರಾಯೋಗಿಕ ಪ್ರಯೋಗಕ್ಕೆ ಮತ್ತು ಇನ್ನಿತರ ಕೆಲಸಕ್ಕೆ ಕೂಡಾ ಸುಲಭವಾಗಿತ್ತು. ಈ ಯೋಜನೆಗೆ ಸಹಕಾರಿಯಾಗುವಂತೆ ಸರಕಾರ ನಮಗೆ ಒಂದು ಸಣ್ಣ ಮಟ್ಟದ ವರ್ಕ್ ಶಾಪ್ ಮತ್ತು ಅಗತ್ಯ ಸವಲತ್ತುಗಳನ್ನು ಒದಗಿಸಿ ಕೊಡಬೇಕು” ಎನ್ನುತ್ತಾರೆ ಈ ತಂಡದ ಮುಖ್ಯಸ್ಥರು ಮತ್ತು ಮಾರ್ಗದರ್ಶಕರು ಆದ ಪುಷ್ಪರಾಜ್ ಅಮಿನ್.

ಈ ಇಡೀ ಸೀ ಪ್ಲೇನ್ ತಯಾರಾದದ್ದು ಪುಷ್ಪರಾಜ್ ಅವರ ಮನೆಯ ಅಂಗಳ ಗದ್ದೆ, ಮತ್ತು ತೋಟದಲ್ಲಿ. ಯಾವುದೇ ದೊಡ್ಡ ವರ್ಕ್ ಶಾಪ್ ಇಲ್ಲದೇ, ಆಧುನಿಕ ಉಪಕಣಗಳು ಇಲ್ಲದೇ ತಮ್ಮಲ್ಲಿ ಲಭ್ಯವಿರುವ ಉಪಕರಣಗಳನ್ನು ಬಳಸಿ ಈ ಸೀ ಪ್ಲೇನ್ ಅನ್ನು ತಯಾರು ಮಾಡಿದ್ದಾರೆ, ತಂಡದಲ್ಲಿ ಪುಷ್ಪರಾಜ್ ಅಮೀನ್ ಸೇರಿದಂತೆ, ಟ್ರೈನಿ ಪೈಲಟ್ ವಿನಯಾ ಯು, ಯಾಚ್ ಕ್ಯಾಪ್ಟನ್ ವಸುರಾಜ್ ಅಮಿನ್, ವೃತ್ತಿಪರ ಡ್ರೋನ್‌‌ ಆಪರೇಟರ್ ಅಭಿಷೇಕ್ ಎಂ ಕೋಟ್ಯಾನ್, ಏರೋನಾಟಿಕಲ್ ವಿದ್ಯಾರ್ಥಿ ಉತ್ಸವ್ ಉಮೇಶ್, ಏರೋನಾಟಿಕಲ್ ಪ್ರಾಧ್ಯಾಪಕ ಶಯನಿ ರಾವ್, ರೇಶ್ಮಾ ಬಂಗೇರ, ಅಶ್ವಿನಿ ರಾವ್ ಸೇರಿದ್ದಾರೆ.

“ಈ ಸೀ ಪ್ಲೇನ್ 190 ಕೆಜಿ ಇದ್ದು, ಓರ್ವ ಪೈಲಟ್ ಕುಳಿತುಕೊಂಡು ಸಂಚರಿಸಲು ಸಾಧ್ಯವಿದೆ. ನಮ್ಮ ಪ್ರಥಮ ಪ್ರಯತ್ನದಲ್ಲೇ ನಾವು ಯಶಸನ್ನು ಕಂಡಿದ್ದೇವೆ. ನಮ್ಮ ದೇಶದಲ್ಲಿ ಇಷ್ಟು ಕಡಿಮೆ ವೆಚ್ಚ ಮತ್ತು ಸಮಯದಲ್ಲಿ ತಯಾರಾಗಿರುವ ಪ್ರಥಮ ವಿಮಾನ ಇದು. ಇದನ್ನು ದ್ವೀಪಗಳ ನಡುವೆ ಸಂಚಾರಕ್ಕೆ, ನೆರೆ ಸಂಧರ್ಭದಲ್ಲಿ ಪರಿಹಾರ ಕಾರ್ಯಕ್ಕೆ, ಪ್ರವಾಸೋದ್ಯಮಕ್ಕೆ, ಬಳಕೆ ಮಾಡಬಹುದು. ಆದರೆ ಸರಿಯಾದ ವರ್ಕ್ ಶಾಪ್, ಉಪಕರಣಗಳು ಇಲ್ಲದೇ ಈ ಪ್ರಯೋಗ ಯಶಸ್ವಿಯಾಗಿದೆ” ಎನ್ನುತ್ತಾರೆ ತಂಡದ ಸದಸ್ಯ ಶಯನಿ ರಾವ್.

ದೃತಿ ಮೈಕ್ರೋಲೈಟ್ ಸೀ ಪ್ಲೇನ್ ಎಂದು ಇದನ್ನು ಹೆಸರಿಸಲಾಗಿದ್ದು ಸುಮಾರು 120 ಕೆಜಿ ಭಾರವಿದೆ. 33 ಹೆಚ್.ಪಿ ಮೋಟಾರ್ ಅನ್ನು ಈ ಸೀ ಪ್ಲೇನ್‌‌ಗಾಗಿ ಬಳಸಲಾಗಿದೆ. ಗ್ರೇಡ್ ಅಲುಮಿನಿಯಂ, ಫೋಮ್, ಫೈಬರ್ ಬಟ್ಟೆ, ನೈಲಾನ್ ಬಟ್ಟೆ ಮತ್ತು ಇನ್ನಿತರ ಸಾಮಾಗ್ರಿಗಳನ್ನು ಈ ಸೀ ಪ್ಲೇನ್ ತಯಾರಿಯಲ್ಲಿ ಬಳಸಲಾಗಿದೆ. ತಂಡವು ಸೂಕ್ತ ಪರಿಕರ, ವ್ಯವಸ್ಥೆಗಳು ಲಭ್ಯವಾದಲ್ಲಿ ಮುಂದಿನ ದಿನಗಳಲ್ಲಿ 4,610 ಸೀಟರ್ ಸೀ ಪ್ಲೇನ್ ಗಳನ್ನು ತಯಾರಿಸಲು ಕೂಡಾ ಯೋಜನೆ ಹಾಕಿಕೊಳ್ಳುತ್ತಿದೆ.

ಈ ಪ್ರಯೋಗಕ್ಕೆ ಆಗಿರುವ ಖರ್ಚು ವೆಚ್ಚ ಎಲ್ಲವನ್ನೂ ತಂಡದ ಸದಸ್ಯರು, ಸ್ನೇಹಿತರು, ಮತ್ತು ಸಾಲ ಮಾಡುವ ಮೂಲಕ ನಿಭಾಯಿಸಿದ್ದಾರೆ.

ಈ ಮೊದಲು ಗುಜರಾತಿನ ಅಹಮದಾಬಾದ್‌ನಲ್ಲಿ ವಿದೇಶದಿಂದ ತರಿಸಿದ್ದ ಸೀ ಪ್ಲೇನ್ ಅನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿ ಅದರಲ್ಲಿ ಪ್ರಯಾಣವನ್ನು ಕೂಡಾ ಮಾಡಿದ್ದರು. ಆದರೆ ದೇಶೀಯ ನಿರ್ಮಿತ ಪ್ರಥಮ ಸೀ ಪ್ಲೇನ್‌ಗೆ ಇದೀಗ ಅಗತ್ಯ ಬೆಂಬಲ ಬೇಕಾಗಿದೆ. ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನಹರಿಸಿ ಈ ಯುವ ಅವಿಷ್ಕಾರಿಗಳಿಗೆ ನೆರವಾಗಬೇಕಿದೆ.


Related Posts

ಬಿಲ್ಲವರ ಉನ್ನತಿಯಲ್ಲಿ ನಾರಾಯಣ ಗುರುಗಳ ಪಾತ್ರ ಗುರುತರವಾದುದು ಡಾ.ಮುಕೇಶ್ ಕುಮಾರ್


Share        ಮುಂಬಯಿ ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು.


Read More »

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »