TOP STORIES:

FOLLOW US

ಪುಷ್ಪರಾಜ್ ಅಮಿನ್ ಮತ್ತು ತಂಡದಿಂದ ಮೈಕ್ರೋ ಲೈಟ್ ಸೀ ಪ್ಲೇನ್ ತಯಾರು – ಬೇಕಿದೆ ಸರಕಾರದ ಸಹಾಯ ಹಸ್ತ


ಉಡುಪಿ: ಒಂದೆಡೆ ಸರಕಾರಗಳು ದೇಶೀಯ ಉತ್ಪನ್ನ, ಸಂಶೋಧನೆಗಳಿಗೆ ಒತ್ತು ನೀಡಿ ಸ್ವದೇಶದಲ್ಲಿ ತಯಾರಾಗುವ ಅವಿಶ್ಕಾರಗಳಿಗೆ ವೇದಿಕೆ ಒಗದಿಸಲು ಚಿಂತನೆ ನಡೆಸುತ್ತಿದೆ. ಆದರೆ ಮತ್ತೊಂದೆಡೆ ಉಡುಪಿಯ ಹೆಜಮಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ದೇಶದಲ್ಲೇ ಮೊದಲು ಎನ್ನುವ ರೀತಿಯಲ್ಲಿ ಸಂಶೋಧನೆ ಒಂದು ನಡೆದಿದ್ದು ಸರಕಾರದ ಸಹಾಯ ಹಸ್ತದ ನಿರೀಕ್ಷೆಯಲ್ಲಿದೆ.

ಉಡುಪಿಯ ಗಡಿಭಾಗ ಹೆಜಮಾಡಿ ಎಂಬ ಪುಟ್ಟ ಗ್ರಾಮದಲ್ಲಿ ಉತ್ಸಾಹಿ ಯುವ ಪಡೆ ತಮ್ಮದೇ ಸ್ವಂತ ಬಂಡವಾಳದೊಂದಿಗೆ ದೇಶದಲ್ಲೇ ಮೊದಲು ಎಂಬಂತೆ ಮೈಕ್ರೋ ಲೈಟ್ ಸೀ ಪ್ಲೇನ್ ಒಂದನ್ನು ತಯಾರು ಮಾಡಿದ್ದಾರೆ. ಈ ಸೀ ಪ್ಲೇನ್ ದೇಶೀಯ ನಿರ್ಮಿತ ಪ್ರಥಮ ಸೀ ಪ್ಲೇನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಪುಷ್ಪರಾಜ್ ಅಮಿನ್ ಎಂಬವರು ಈ ಯೋಜನೆಯ ರೂವಾರಿ. 8 ಮಂದಿ ಯುವಕ ಯುವತಿಯರ ಜೊತೆ ಗೂಡಿ ಈ ಸೀ ಪ್ಲೇನ್ ಅನ್ನು ತಯಾರಿಸಿದ್ದು ಇಲ್ಲಿನ ಶಾಂಭವಿ ನದಿಯಲ್ಲಿ ಯಶಸ್ವಿ ಪ್ರಾಯೋಗಿಕ ಹಾರಾಟ ಕೂಡಾ ನಡೆದಿದೆ, 1 ವರ್ಷದ ಕಠಿಣ ಪರಿಶ್ರಮ ಮತ್ತು ಸಂಶೋಧನೆಯ ಫಲವಾಗಿ ಸೀ ಪ್ಲೇನ್ ನಿರ್ಮಾಣವಾಗಿದ್ದು ಸುಮಾರು 7 ರಿಂದ 8 ಲಕ್ಷ.ರೂ. ವೆಚ್ಚ ತಗುಲಿದೆ.

“ಸಣ್ಣದಿಂದಲೇ ನನಗೆ ವಿಮಾನ ಹಾರಿಸಬೇಕು ಎಂಬ ಆಸೆ ಇದ್ದಿತ್ತು. ಕಳೆದ ಕೆಲ ವರ್ಷಗಳಲ್ಲಿ ಸಣ್ಣ ಸಣ್ಣ ವಿಮಾನದ ಮಾಡೆಲ್‌‌ಗಳನ್ನು ಮಾಡಿದ್ದೇನೆ. ಹಲವಾರು ಮಕ್ಕಳಿಗೆ ತರಬೇತಿಯನ್ನು ಕೂಡಾ ನೀಡಿದ್ದೇನೆ. ಓರ್ವ ವ್ಯಕ್ತಿ ಕುಳಿತುಕೊಂಡು ಹೋಗುವಂತಹ ವಿಮಾನ ಮಾಡಬೇಕು ಎಂಬ ಆಸೆ ಇದ್ದಿತ್ತು. ಆದರೆ ವಿಮಾನ ಮಾಡುವುದು ತುಂಬಾ ಕಷ್ಟಕರ. ಆಕಾಶದಲ್ಲಿ ಹಾರುವ ವಿಮಾನ ತಯಾರಿಸಲು ಜಾಗದ ಕೊರತೆ ಮತ್ತು ಹಣದ ಅವಶ್ಯಕತೆ ಕೂಡಾ ಇತ್ತು ಹೀಗಾಗಿ ನೀರಿನಲ್ಲಿ ಹೋಗುವ ವಿಮಾನವನ್ನು ತಯಾರಿಸಿದೆವು. ನನ್ನ ಮನೆಯ ಹತ್ತಿರವೇ ನದಿ ಇರುವುದರಿಂದ ಇದರ ಪ್ರಾಯೋಗಿಕ ಪ್ರಯೋಗಕ್ಕೆ ಮತ್ತು ಇನ್ನಿತರ ಕೆಲಸಕ್ಕೆ ಕೂಡಾ ಸುಲಭವಾಗಿತ್ತು. ಈ ಯೋಜನೆಗೆ ಸಹಕಾರಿಯಾಗುವಂತೆ ಸರಕಾರ ನಮಗೆ ಒಂದು ಸಣ್ಣ ಮಟ್ಟದ ವರ್ಕ್ ಶಾಪ್ ಮತ್ತು ಅಗತ್ಯ ಸವಲತ್ತುಗಳನ್ನು ಒದಗಿಸಿ ಕೊಡಬೇಕು” ಎನ್ನುತ್ತಾರೆ ಈ ತಂಡದ ಮುಖ್ಯಸ್ಥರು ಮತ್ತು ಮಾರ್ಗದರ್ಶಕರು ಆದ ಪುಷ್ಪರಾಜ್ ಅಮಿನ್.

ಈ ಇಡೀ ಸೀ ಪ್ಲೇನ್ ತಯಾರಾದದ್ದು ಪುಷ್ಪರಾಜ್ ಅವರ ಮನೆಯ ಅಂಗಳ ಗದ್ದೆ, ಮತ್ತು ತೋಟದಲ್ಲಿ. ಯಾವುದೇ ದೊಡ್ಡ ವರ್ಕ್ ಶಾಪ್ ಇಲ್ಲದೇ, ಆಧುನಿಕ ಉಪಕಣಗಳು ಇಲ್ಲದೇ ತಮ್ಮಲ್ಲಿ ಲಭ್ಯವಿರುವ ಉಪಕರಣಗಳನ್ನು ಬಳಸಿ ಈ ಸೀ ಪ್ಲೇನ್ ಅನ್ನು ತಯಾರು ಮಾಡಿದ್ದಾರೆ, ತಂಡದಲ್ಲಿ ಪುಷ್ಪರಾಜ್ ಅಮೀನ್ ಸೇರಿದಂತೆ, ಟ್ರೈನಿ ಪೈಲಟ್ ವಿನಯಾ ಯು, ಯಾಚ್ ಕ್ಯಾಪ್ಟನ್ ವಸುರಾಜ್ ಅಮಿನ್, ವೃತ್ತಿಪರ ಡ್ರೋನ್‌‌ ಆಪರೇಟರ್ ಅಭಿಷೇಕ್ ಎಂ ಕೋಟ್ಯಾನ್, ಏರೋನಾಟಿಕಲ್ ವಿದ್ಯಾರ್ಥಿ ಉತ್ಸವ್ ಉಮೇಶ್, ಏರೋನಾಟಿಕಲ್ ಪ್ರಾಧ್ಯಾಪಕ ಶಯನಿ ರಾವ್, ರೇಶ್ಮಾ ಬಂಗೇರ, ಅಶ್ವಿನಿ ರಾವ್ ಸೇರಿದ್ದಾರೆ.

“ಈ ಸೀ ಪ್ಲೇನ್ 190 ಕೆಜಿ ಇದ್ದು, ಓರ್ವ ಪೈಲಟ್ ಕುಳಿತುಕೊಂಡು ಸಂಚರಿಸಲು ಸಾಧ್ಯವಿದೆ. ನಮ್ಮ ಪ್ರಥಮ ಪ್ರಯತ್ನದಲ್ಲೇ ನಾವು ಯಶಸನ್ನು ಕಂಡಿದ್ದೇವೆ. ನಮ್ಮ ದೇಶದಲ್ಲಿ ಇಷ್ಟು ಕಡಿಮೆ ವೆಚ್ಚ ಮತ್ತು ಸಮಯದಲ್ಲಿ ತಯಾರಾಗಿರುವ ಪ್ರಥಮ ವಿಮಾನ ಇದು. ಇದನ್ನು ದ್ವೀಪಗಳ ನಡುವೆ ಸಂಚಾರಕ್ಕೆ, ನೆರೆ ಸಂಧರ್ಭದಲ್ಲಿ ಪರಿಹಾರ ಕಾರ್ಯಕ್ಕೆ, ಪ್ರವಾಸೋದ್ಯಮಕ್ಕೆ, ಬಳಕೆ ಮಾಡಬಹುದು. ಆದರೆ ಸರಿಯಾದ ವರ್ಕ್ ಶಾಪ್, ಉಪಕರಣಗಳು ಇಲ್ಲದೇ ಈ ಪ್ರಯೋಗ ಯಶಸ್ವಿಯಾಗಿದೆ” ಎನ್ನುತ್ತಾರೆ ತಂಡದ ಸದಸ್ಯ ಶಯನಿ ರಾವ್.

ದೃತಿ ಮೈಕ್ರೋಲೈಟ್ ಸೀ ಪ್ಲೇನ್ ಎಂದು ಇದನ್ನು ಹೆಸರಿಸಲಾಗಿದ್ದು ಸುಮಾರು 120 ಕೆಜಿ ಭಾರವಿದೆ. 33 ಹೆಚ್.ಪಿ ಮೋಟಾರ್ ಅನ್ನು ಈ ಸೀ ಪ್ಲೇನ್‌‌ಗಾಗಿ ಬಳಸಲಾಗಿದೆ. ಗ್ರೇಡ್ ಅಲುಮಿನಿಯಂ, ಫೋಮ್, ಫೈಬರ್ ಬಟ್ಟೆ, ನೈಲಾನ್ ಬಟ್ಟೆ ಮತ್ತು ಇನ್ನಿತರ ಸಾಮಾಗ್ರಿಗಳನ್ನು ಈ ಸೀ ಪ್ಲೇನ್ ತಯಾರಿಯಲ್ಲಿ ಬಳಸಲಾಗಿದೆ. ತಂಡವು ಸೂಕ್ತ ಪರಿಕರ, ವ್ಯವಸ್ಥೆಗಳು ಲಭ್ಯವಾದಲ್ಲಿ ಮುಂದಿನ ದಿನಗಳಲ್ಲಿ 4,610 ಸೀಟರ್ ಸೀ ಪ್ಲೇನ್ ಗಳನ್ನು ತಯಾರಿಸಲು ಕೂಡಾ ಯೋಜನೆ ಹಾಕಿಕೊಳ್ಳುತ್ತಿದೆ.

ಈ ಪ್ರಯೋಗಕ್ಕೆ ಆಗಿರುವ ಖರ್ಚು ವೆಚ್ಚ ಎಲ್ಲವನ್ನೂ ತಂಡದ ಸದಸ್ಯರು, ಸ್ನೇಹಿತರು, ಮತ್ತು ಸಾಲ ಮಾಡುವ ಮೂಲಕ ನಿಭಾಯಿಸಿದ್ದಾರೆ.

ಈ ಮೊದಲು ಗುಜರಾತಿನ ಅಹಮದಾಬಾದ್‌ನಲ್ಲಿ ವಿದೇಶದಿಂದ ತರಿಸಿದ್ದ ಸೀ ಪ್ಲೇನ್ ಅನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿ ಅದರಲ್ಲಿ ಪ್ರಯಾಣವನ್ನು ಕೂಡಾ ಮಾಡಿದ್ದರು. ಆದರೆ ದೇಶೀಯ ನಿರ್ಮಿತ ಪ್ರಥಮ ಸೀ ಪ್ಲೇನ್‌ಗೆ ಇದೀಗ ಅಗತ್ಯ ಬೆಂಬಲ ಬೇಕಾಗಿದೆ. ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನಹರಿಸಿ ಈ ಯುವ ಅವಿಷ್ಕಾರಿಗಳಿಗೆ ನೆರವಾಗಬೇಕಿದೆ.


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »