TOP STORIES:

FOLLOW US

ಪ್ರಾತಃಸ್ಮರಣೀಯ ದೇಯಿಬೈದೆತಿ,ಕೋಟಿಚೆನ್ನಯರ ಕಾರ್ಣಿಕಕ್ಕೆ ಶರಣಾಗಿ .


ಅಗಣಿತ ಮಹಿಮಾನ್ವಿತರಾದ ಕೋಟಿ ಚೆನ್ನಯರು ಹಾಗೂ ಮಾತೆ ದೇಯಿ ಬೈದೆತಿಯ ಪುಣ್ಯ ನೆಲೆಯಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯು ಸಮಸ್ತ ಆಸ್ತಿಕ ಬಂಧುಗಳ ಭಕ್ತಿ,ಶ್ರದ್ದೆ,ಇಚ್ಚಾಶಕ್ತಿಯ ಕ್ಷೇತ್ರವೆನಿಸಿ ಅಭೂತಪೂರ್ವ ಜೀರ್ಣೊದ್ದಾರದೊಂದಿಗೆ ಕಂಗೊಳಿಸುತ್ತಿರುವುದು ಧನ್ಯ ಸಂಗತಿ.ವಿಶ್ವ ಬಿಲ್ಲವರ ಸ್ವಾಭಿಮಾನದ ಪ್ರತೀಕವೆಂಬಂತೆ ಈ ಸ್ಥಾನ ಬಿಂಬಿತಗೊಂಡಿದ್ದೂ ಹೆಮ್ಮೆಯ ಅಂಶ.ಸಮಸ್ತ ಭಕ್ತರ ಪವಿತ್ರ ತಾಣವಾಗಿ ದಿನದಿಂದ ದಿನಕ್ಕೆ ಉತ್ತುಂಗ ಸ್ಥಿತಿಯಲ್ಲಿದ್ದ ಇಲ್ಲಿ ಪ್ರಸಕ್ತ ಆಡಳಿತಾತ್ಮಕ ವಿಚಾರದಲ್ಲಿ ನ್ಯಾಯಾಲಯದವರೆಗೆ ಹೋಗಿರುವಂತದ್ದು ಖೇಧಕರ.
ಅಭಿಪ್ರಾಯ ವ್ಯತ್ಯಾಸ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಮತ್ತು ಎಲ್ಲರಲ್ಲಿ ಇರುವಂತದ್ದೆ.ಆದರೆ ಅದನ್ನೆ ಮುಖ್ಯವಾಗಿಸಿಕೊಂಡು ಹಠವಾದಿತನದ ಧೋರಣೆಯು ಸಮಸ್ತ ಭಕ್ತರಿಗೆ ಹಾಗೂ ಸಮಾಜಬಾಂಧವರಿಗೆ ನೋವಿನ ಸಂಗತಿ.ಇಡೀ ಸಮಾಜ ಹಲವಾರು ಒಳಿತಿನ ನಿರೀಕ್ಷೆಗಳನ್ನಿಟ್ಟುಕೊಂಡು ಮತ್ತು ಭಕ್ತಿಯ ನೆಲೆಯಲ್ಲಿ ತನುಮನಧನ ಸಹಕಾರ ನೀಡಿದ ಐತಿಹಾಸಿಕ ಸಂದರ್ಭಗಳನ್ನು ಮತ್ತು ಭವ್ಯ ಸಮಾರಂಭಗಳನ್ನು ಮರೆತು ಇದೀಗ ಪ್ರತಿಷ್ಠೆ ಮೆರೆಯಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ.ನ್ಯಾಯಾಲಯ ಎಂದಾಕ್ಷಣ ಅಲ್ಲಿ ನಿಯಮಾನುಸಾರವಾಗಿ ವಾದ ಪ್ರತಿವಾದದ ಬೆಳವಣಿಗೆಗಳು ಯಾವ ದಿನ ಕೊನೆಯಾಗುತ್ತದೆ ಎಂಬುದು ಸ್ಪಷ್ಟವಿಲ್ಲದ ವಿಚಾರ.ಆದುದರಿಂದ ನಮ್ಮ ಮುಖಂಡರುಗಳಾಗಲಿ,ಸ್ಥಳಕ್ಕೆ ಸಂಬಂಧ ಪಟ್ಟವರಾಗಲಿ ಎಲ್ಲಾ ಆತುರ, ಆಕ್ರೋಶಗಳನ್ನು ಕರಗಿಸಿಕೊಂಡು ಪ್ರಾತಃಸ್ಮರಣೀಯ ದೇಯಿಬೈದೆತಿ,ಕೋಟಿಚೆನ್ನಯರ ಕಾರ್ಣಿಕಕ್ಕೆ ಶರಣಾಗಿ ಎಲ್ಲ ಭಿನ್ನಮತಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಸಮಂಜಸವಾಗಿದೆ.ಒಂದಷ್ಟು ಗೊಂದಲ ಹಾಗೂ ತಪ್ಪು ಸಂದೇಶಗಳು ಸಾರ್ವತ್ರಿಕಗೊಳ್ಳುವ ಮುಂಚೆಯೆ ನಮ್ಮ ನಡುವಿನ,ಸಹಮತ, ಸಹೋದರತ್ವ ಸಾಬೀತಾಗಲಿ.ನಾವೆಲ್ಲರೂ ಒಗ್ಗೂಡಿಕೊಂಡು ಒಳ್ಳೆಯ ಬೆಳವಣಿಗೆಗೆ ಸಾಕ್ಷಿಯಾಗೋಣ

ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ).


Share:

More Posts

Category

Send Us A Message

Related Posts

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »