TOP STORIES:

FOLLOW US

ಫ್ರೆಂಡ್ಸ್ ಬಲ್ಲಾಳ್ ಬಾಗ್ “ಬಿರುವೆರ್ ಕುಡ್ಲದ ” ಉದಯಣ್ಣ ಓರ್ವ ವ್ಯಕ್ತಿಯಲ್ಲ ಸಮಾಜದ ಶಕ್ತಿ..


ಒಂದೇ ಜಾತಿ ಒಂದೇ ಮತ ಒಂದೇ ದೇವರುಎಂಬ ನೀತಿ ಸಂದೇಶವನ್ನು ವಿಶ್ವಕ್ಕೆ ಸಾರಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶವನ್ನು ಪಾಲಿಸಿಕೊಂಡು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಕರುಣೆ ಮಮತೆಯ ದೀವಿಗೆಯಾಗಿ ಸಮಾಜಸೇವೆಯನ್ನೇ ತನ್ನ ಉಸಿರಾಗಿಸಿಕೊಂಡು ಪರರ ನೋವು ನಲಿವುಗಳಿಗೆ ಧ್ವನಿಯಾಗಿ ಕಷ್ಟ ಎಂದು ಕಂಬನಿ ಮಿಡಿಯುವ ಮನಗಳಿಗೆಅವರ ಕಣ್ಣೀರೋರೆಸಿ ಮನ  ಮನೆಯಲ್ಲಿ ನಂದಾದೀಪ ಬೆಳಗಿಸಿದವೇ ನಮ್ಮ ಪ್ರೀತಿಯ ಬಿರುವೆರ್ ಕುಡ್ಲ ಸಂಘಟನೆಯ ರೂವಾರಿಉದಯ ಪೂಜಾರಿ ಬಲ್ಲಾಳ್ ಬಾಗ್.

ಆಡಡೆಲೆ ಮಾಡುವವನು ರೂಢಿಯೊಳಗುತ್ತಮಎನ್ನುವ ಸರ್ವಜ್ಞನ ಸಾರದಂತೆ ಯಾವುದೇ ಸದ್ದುಗದ್ದಲವಿಲ್ಲದೆ ಸಮಾಜದಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟವರು. ಮಾತ್ರವಲ್ಲದೆ ಸಮಾಜ ಒದಗಿಸಿರೋ ಅವಕಾಶವನ್ನು ಸಮಾಜದ ಸೇವೆಗಾಗಿಮೀಸಲಾಗಿಟ್ಟವರು.

ಬಿರುವೆರ್ ಕುಡ್ಲ ಸ್ಥಾಪನೆಯಾಗಿ 7ವರ್ಷ ಕಳೆದಿಲ್ಲ ಆದರೆ ಕಡಿಮೆ ಅವಧಿಯಲ್ಲಿ ಮಹತ್ತರವಾದ ಸೇವೆಯ ಮುಖೇನ ಸುಮಾರು20 ಘಟಕಗಳನ್ನು ಸ್ಥಾಪಿಸಿ  ಕೋಟ್ಯಾತರ ರೂಪಾಯಿ ಮೊತ್ತದ  ಸಹಾಯಹಸ್ತವನ್ನು ಸಮಾಜದ ಬಡ ಜನರಿಗಾಗಿ ನೀಡಿರುವುದುಮಾತ್ರವಲ್ಲದೆ ಕೊರೊನಾ ಮಹಾಮಾರಿಯಿಂದ ಜನತೆ ತತ್ತರಿಸುತ್ತಿರುವ ಸಂಧರ್ಭದಲ್ಲಿ ಲಕ್ಷಾಂತರ ರೂಪಾಯಿ ಮೊತ್ತದ ಆಂಬುಲೆನ್ಸ್ನ್ನು ಜನರ ಸೇವೆಗಾಗಿ ನೀಡಿದ್ದು ಒಂದು ದಾಖಲೆಯೇ ಸರಿ. ಇಂತಹ ಸಮಾಜಮುಖಿ ಚಿಂತನೆಯ ಫ್ರೆಂಡ್ಸ್ ಬಲ್ಲಾಳ್ ಬಾಗ್ಬಿರುವೆರ್ ಕುಡ್ಲ ಸಂಘಟನೆಯ  ಕೀರ್ತಿ,  ಶ್ರೇಯಸ್ಸನ್ನು ಕಂಡು ಕೆಲವರಿಗೆ ಸಹಿಸಲಾಗಲಿಲ್ಲವೋ ಏನೋ, ಅದಕ್ಕಾಗಿಯೇ ಸಂಚುರೂಪಿಸಿ ಸಂಘಟನೆಯ ಹೆಸರಿಗೆ ಕಪ್ಪು ಚುಕ್ಕಿ ತರುವ ಪ್ರಯತ್ನ ಮಾಡುತ್ತಿರುವುದು ಅವರ ಕೀಳು ಮನಸ್ಥಿತಿಯನ್ನು ಎತ್ತಿತೋರಿಸುತ್ತದೆ.

ನಿಟ್ಟಿನಲ್ಲಿ ಶರಣ್ ಪಂಪ್ ವೆಲ್ ಅವರು ಬಿರುವೆರ್ ಕುಡ್ಲದ ಸಾಧನೆ  ಸೇವೆ ಕಣ್ಣಿಗೆ ಬಿದ್ದರೂ ಅರಗಿಸಿಕೊಳ್ಳಲಾಗಲ್ಲಿವೇನೋಅನಿಸುತ್ತಿದೆ. ಶರಣ್ ಅಣ್ಣ ನಿಮ್ಮ ಹಿಂದೂಪರ ಹೋರಾಟದ ಬಗ್ಗೆ ನಮಗೆ ತುಂಬಾ ಅಭಿಮಾನ ಹೆಮ್ಮೆ ಇತ್ತು.. ಗೌರವ ಇತ್ತು.. ಆದರೆಈಗ ನೀವು ಬಿರುವೆರ್ ಕುಡ್ಲ ಸಂಘಟನೆಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಪ್ರತಿಭಟಿಸುದನ್ನು ಕಂಡು ಅದೆಲ್ಲವನ್ನೂಕಳೆದಕೊಂಡಿರಿ..

ಒಂದು ಜಾತಿ ಧರ್ಮ, ಸಮುದಾಯವನ್ನು ಮೀರಿ ಬೆಳೆದು ನಿಂತು ಎಲ್ಲಾ ಸಮಾಜದ ಪ್ರೀತಿಗೆ ಪಾತ್ರರಾದ ಬಿರುವೆರ್ ಕುಡ್ಲಸಂಘಟನೆಯ ಬಗ್ಗೆ ಅನವಶ್ಯಕವಾಗಿ ಆರೋಪ ಮಾಡಿದ ಹಿನ್ನಲೆಯಲ್ಲಿ  ಅದರ ಹಿಂದಿರುವ ಕಾಣದ ಕೈಗಳ ಕೈವಾಡಖಂಡಿತವಾಗಿಯೂ ಒಂದಲ್ಲ ಒಂದು ದಿನ ಜನರ ಮುಂದೆ ಬರುತ್ತದೆ.

ಪಂಪ್ ವೆಲ್ ರವರೆ ಒಮ್ಮೆ ಯೋಚಿಸಿ ಶುಭ ಮಂಗಳ ಕಾರ್ಯದ ಸಮಯದಲ್ಲಿಉದಯಣ್ಣ ಸ್ಥಾನದಲ್ಲಿ ನೀವಿರುತ್ತಿದ್ದರೆಹೇಗಾಗುತ್ತಿತ್ತು!!!!!!!! ಎಂದು. ಕನಿಷ್ಠ ಮಾನವೀಯತೆಯನ್ನೂ ಮರೆತು ನೀವು ರೀತಿ ಮಾಡುತ್ತಿರುವುದು ಬಿರುವೆರ್ ಕುಡ್ಲಸಂಘಟನೆ ಮಾತ್ರವಲ್ಲ ಲಕ್ಷಾಂತರ ತುಳು ಕನ್ನಡಿಗ ಉದಯಣ್ಣನ ಅಭಿಮಾನಿ ಬಳಗಕ್ಕೆ ಅತೀವ ನೋವಾಗಿದೆ.

ಶರಣ್ ರವರೆ,…. ಹಣ ಅಧಿಕಾರ ಅಂತಸ್ತು ಯಾವುದೂ ಶಾಶ್ವತವಲ್ಲ ಆದರೇ ಎಲ್ಲಕ್ಕಿಂತ ಮಿಗಿಲಾದುದು ಮಾನವೀಯತೆ, ಮಾನವೀಯ ಮೌಲ್ಯಗಳುಅದನ್ನು ತುಳಿದು ನಡೆಯಬೇಡಿ….

ನಮ್ಮಂತಹ ನೂರಾರು ಜನರಿಗೆ ನಿಮ್ಮ ಮೇಲೆ ಗೌರವ ಅಭಿಮಾನ ವಿತ್ತು ಆದರೆ ಅರ್ಹತೆಯನ್ನು ನಿಮ್ಮ ಕೀಳುಮಟ್ಟದರಾಜಕಾರಣದಿಂದ ಮಣ್ಣುಪಾಲು ಮಾಡಿದಿರಿ.. ಎಲ್ಲದಕ್ಕೂ ಭಗವಂತ ಹಾಗೂ ತುಳುನಾಡಿನ ಸತ್ಯಗಳು ನಿಮಗೆ ಒಳ್ಳೆಯ ಬುದ್ದಿನೀಡಲಿ ಎಂದು ಆಶಿಸುತ್ತೇವೆ.

ಉದಯಣ್ಣ ಸತ್ಯಕ್ಕೆ ಜಯವಿದೆ.

ನಿಮ್ಮೊಂದಿಗೆ ನಾವಿದ್ದೇವೆ

ಪ್ರೀತಿ ಅಭಿಮಾನ ಗೌರವ ಅನವರತ….

ಜೈ ಬಿರುವೆರ್ ಕುಡ್ಲ ಜೈ ಉದಯಣ್ಣ..

✒️ಪ್ರಭಾಕರ ಬೆಳುವಾಯಿ

(ನಮನ ಫ್ರೆಂಡ್ಸ್ ಮುಂಬಯಿ)


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »