TOP STORIES:

FOLLOW US

ಬಿಲ್ಲವರಿಂದಲೇ ಬಿಲ್ಲವರಿಗಾಗಿಯೇ ಬಿಲ್ಲವರಿಗೋಸ್ಕರವೇ ಸಿದ್ದವಾಗಿದೆ ಬಿಲ್ಲವಾಸ್ ವಾರಿಯರ್ಸ್..


ಬಿಲ್ಲವ ಸಮಾಜ ಬಂಧುಗಳೇ,

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬಿಲ್ಲವರು ಸಾಧನೆ ಮಾಡಿರದ ಕ್ಷೇತ್ರಗಳೇ ಇಲ್ಲ ಎಂದರೆ ತಪ್ಪಗಲಾರದು. ನಮ್ಮ ಸಮಾಜ ಬಂಧುಗಳ ಸಾಧನೆ, ಸಂಭ್ರಮಗಳು ಕೇವಲ ತುಳುನಾಡಷ್ಟೇ ಅಲ್ಲದೇ ಜಗತ್ತಿನ ಉದ್ದಗಲಕ್ಕೂ ಹಬ್ಬಿ ನಿಂತಿರುವಂಥದ್ದು. ಆದರೆ ಕೆಲ ಸಾಧಕರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದ ಕಾರಣ ಅಂಥವರನ್ನು ಗುರುತಿಸುವ ಜವಾಬ್ದಾರಿ ನಮ್ಮದು. ಸಾಧಕರ ಜೊತೆಗೆ ಸಂಕಷ್ಟದಲ್ಲಿರೋ ಸಮಾಜದ ಬಂಧುಗಳ ಬದುಕಿನ ಮೇಲೂ ಬೆಳಕು ಚೆಲ್ಲಬೇಕಾದ ಮತ್ತೊಂದು ಕಾರ್ಯವೂ ಅಗಬೇಕಿದೆ. ಕಷ್ಟದಲ್ಲಿರೋ ಬಿಲ್ಲವ ಬಂಧುಗಳಿಗೆ ನೆರವಿನ ಹಸ್ತ ಚಾಚುವ ಸಮಾಜಮುಖಿ ಉದ್ದೇಶವೂ ಇದೆ. ಅಂಥವರನ್ನು ಗುರುತಿಸಿ ಸಮಾಜದ ಮುಂದಿಟ್ಟರೆ ಅವರ ಬದುಕು ಹೊಸ ಬೆಳಕು ಕಾಣಬಹುದು ಅನ್ನೋ ನಂಬಿಕೆ ನಮ್ಮದು. ಹೀಗೆ ಬಿಲ್ಲವ ಸಮಾಜದ ಸಮಗ್ರ ವಸ್ತು-ವಿಚಾರಗಳ ಅನಾವರಣಕ್ಕೆ ನಾವು ಹೊಸ ವೇದಿಕೆಯೊಂದನ್ನು ಕಲ್ಪಿಸುತ್ತಿದ್ದೇವೆ. ..’ ಸದ್ಯದ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ನಮ್ಮವರನ್ನು ತಲುಪಲು ಮತ್ತು ನಮ್ಮವರ ಸಾಧನೆಯ ಜೊತೆಗೆ ಸಮಗ್ರ ಮಾಹಿತಿಗಳನ್ನು ಅನಾವರಣಗೊಳಿಸಲು ಬಿಲ್ಲವಾಸ್ ವಾರಿಯರ್ಸ್ ತಂಡ ನಿಮ್ಮೆದುರು ಬರುತ್ತಿದೆ. ಫೇಸ್ ಬುಕ್, ಇನ್ಸ್ಟಾಗ್ರಾಂ, ವೆಬ್ ಸೈಟ್ ಮೂಲಕ ನಮ್ಮ ಸಮಾಜ ಬಂಧುಗಳನ್ನು ತಲುಪುವ ಉದ್ದೇಶ ನಮ್ಮದು. ನಮ್ಮವರ ಸಾಧನೆ, ಅಭಿವೃದ್ಧಿ, ಸಂಕಷ್ಟ, ನೆರವು, ಗೆಲುವು, ಜವಾಬ್ದಾರಿ, ಪ್ರತಿಭೆ…ಹೀಗೆ ಎಲ್ಲವಕ್ಕೂ ಒಂದೇ ವೇದಿಕೆಯಾಗಲಿದೆ ‘ಬಿಲ್ಲವಾಸ್ ವಾರಿಯರ್ಸ್‌’ …ನಮ್ಮೊಳಗಿನ ಯಾವುದೇ ಕ್ಷೇತ್ರದ ವಾರಿಯರ್ಸ್‌ಗಳನ್ನೂ ಸಮಾಜದ ಮುಂದೆ ಪರಿಚಯಿಸುವ ಜೊತೆಗೆ ಅಧ್ಯಯನ, ಕಾರ್ಯ, ಕಲ್ಪನೆಗಳನ್ನು ಒಂದುಗೂಡಿಸಿ ಸಾಮಾಜಿಕ ತಾಣಗಳ ಮೂಲಕ ಸಮಾಜದ ಮುಂದಿಟ್ಟು ಫಲಿತಾಂಶ ಪಡೆಯುವ ಹಂಬಲ ನಮ್ಮದು..ಬಿಲ್ಲವ ಬಂಧುಗಳೇ ಕೈ ಜೋಡಿಸಿ, ನೀವೂ ಬರೆಯಿರಿ, ಮಾಹಿತಿ ಹಂಚಿಕೊಳ್ಳಿ…ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ,ಲೈಕ್ ಮಾಡಿ…

ಧನ್ಯವಾದಗಳು
ಟೀಂ ಬಿಲ್ಲವಾಸ್ ವಾರಿಯರ್ಸ್‌

ಫೇಸ್ ಬುಕ್, ಇನ್ಸ್ಟಾಗ್ರಾಂ, ವೆಬ್ ಸೈಟ್ ಲಿಂಕ್

Follow us on Instagram

Username: billavaswarriors
https://www.instagram.com/billavaswarriors

Follow Facebook Page:
https://m.facebook.com/billavawarriors/

www.billavasworriors.com


Share:

More Posts

Category

Send Us A Message

Related Posts

ಬಹರೈನ್ ನಲ್ಲಿ ನಡೆದ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಅಧ್ಯಕ್ಷರಾಗಿ ರಾಜ್ ಕುಮಾರ್ ಆಯ್ಕೆ


Share       ಮುಂಬಯಿ, (ಆರ್‌ಬಿಐ) ಜ.೧೧ : ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಸಮಿತಿಯ ಪದಗ್ರಹನ ಹಾಗೂ ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಬಹರೈನ್ ನ ದಿ ಇಂಡಿಯಾನ್ ಕ್ಲಬ್ ಸಭಾಂಗಣದಲ್ಲಿ


Read More »

ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಬಿಡುಗಡೆ


Share       ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ  ಆಮಂತ್ರಣ ಬಿಡುಗಡೆ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಯುವವಾಹಿನಿ ಪದಗ್ರಹಣ ಕಾರ್ಯಕ್ರಮದಲ್ಲಿ ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್


Read More »

26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಪಾಲ್ಗೊಳ್ಳಲು ಕೇಂದ್ರ ಸರಕಾರದಿಂದ ಕೇಶವ ಕೋಟ್ಯಾನ್ ಅವರಿಗೆ ಆಹ್ವಾನ


Share       ಎಲ್ಲರ ಸಹಕಾರದಿಂದ ಸಾಧ್ಯವಾದ ಸಾಧನೆ. 80ನೇ ಬಡಗಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೊರೈಸುವ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡುವಲ್ಲಿ ಉಡುಪಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು, ನಮ್ಮಗ್ರಾಮ


Read More »

ಭರತನಾಟ್ಯದಲ್ಲಿ ವಿಧುಷಿ ಎಂಬ ಗೌರವ ಪಡೆದ ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು


Share       ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು  ನಿತ್ಯಾನಂದ ಮತ್ತು ತುಳಸಿಯವರ ಪುತ್ರಿ ಗುರು ವಿಧುಷಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಧರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಭರತಾಂಜಲಿ (ಆರ್) ಕೊಟ್ಟಾರದಲ್ಲಿ ಕಲಿಕೆ ಅದಿತಿ ಅವರು


Read More »

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”


Share       ಮುಂಬಯಿ:- ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ವಿಕಾಸ’ ಪುಸ್ತಕ ಬಹುಮಾನಕ್ಕೆ,


Read More »

ಒಮಾನ್ ಬಿಲ್ಲವಾಸ್ ಕೂಟದ ನೂತನ ಅಧ್ಯಕ್ಷರಾಗಿ ಶ್ರೀಯುತ ಉಮೇಶ್ ಬಂಟ್ವಾಳ್ ಆಯ್ಕೆ


Share       ಬಂಟ್ವಾಳದವರಾಗಿರುವ ಉಮೇಶ್ ಬಂಟ್ವಾಳ್ ಅವರು ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ.   ಮಸ್ಕತ್ ನ ಒಮಾನ್ ದೇಶದಲ್ಲಿ ಸುಮಾರು 36 ವರ್ಷದಿಂದ ಅಲ್ ರ‌‌ವಾಸ್ ಹೋಲ್ಡಿಂಗ್ ಬಿಸಿನೆಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ


Read More »