TOP STORIES:

FOLLOW US

ಬಿಲ್ಲವ ಭವನ ಮುಂಬಯಿಯಲ್ಲಿ ದಿವಂಗತ ಜಯ. ಸಿ ಸುವರ್ಣರ ಮೂರ್ತಿ (ಪ್ರತಿಮೆ) ಪ್ರತಿಷ್ಠಾಪನೆ ಬಗ್ಗೆ ಬಿರುವೆರ್ ಕುಡ್ಲ ಸಂಘಟನೆ ಖಂಡನೆ.


ಜೈ ಗುರುದೇವ

ಒಂದೇ ಜಾತಿ.. ಒಂದೇ ಧರ್ಮ.. ಒಂದೇ ದೇವರು..

ಎನ್ನುವ ನೀತಿ ಸಂದೇಶವನ್ನು ಜಗತ್ತಿಗೆ ಸಾರಿದ ಜಗದ್ಗುರು ಶ್ರೀ ನಾರಾಯಣ ಗುರುಗಳ ಚರಣ ಸ್ಪರ್ಶಿಸುತ್ತಾ

ಬಿಲ್ಲವ ಭವನ ಮುಂಬಯಿಯಲ್ಲಿ ದಿವಂಗತ ಜಯ. ಸಿ ಸುವರ್ಣರ ಮೂರ್ತಿ (ಪ್ರತಿಮೆ) ಪ್ರತಿಷ್ಠಾಪನೆ ಬಗ್ಗೆ ಬಿರುವೆರ್ ಕುಡ್ಲಸಂಘಟನೆ ಖಂಡನೆ.

ಬಿಲ್ಲವರ ಎಸೋಸಿಯೇಷನ್ ಮುಂಬಯಿ ಬಿಲ್ಲವ ಭವನದಲ್ಲಿ ಬಿಲ್ಲವ ಜನನಾಯಕ ದಿ. ಜಯ ಸುವರ್ಣರ ಪ್ರತಿಮೆಯನ್ನುಪ್ರತಿಷ್ಠಾಪನೆ ಮಾಡುವ ಬಗ್ಗೆ ಅವರ ಅನುಯಾಯಿಗಳ ಒಂದು ವರ್ಗ ಪಟ್ಟು ಹಿಡಿದು ಬಿಲ್ಲವರ ಎಸೋಸಿಯೇಷಷನ್ ಮುಂಬಯಿಸಂಸ್ಥೆಗೆ ಒತ್ತಾಯಿಸುತ್ತಿದೆ ಎಂಬ ವಿಷಯ ಸಾಮಾಜಿಕ ಜಾಲತಾಣದ ಮುಖೇನ ನಮ್ಮ ಸಂಘಟನೆಯ ಗಮನಕ್ಕೆ ಬಂದಿದೆ. ಇದನ್ನುಖಂಡಿಸಿ ಎಚ್ಚರಿಕೆಯ ಸೂಚನೆಯನ್ನು ಮೂಲಕ ನೀಡುತ್ತಿದ್ದೇವೆ.

ಬಿಲ್ಲವರ ಎಸೋಸಿಯೇಷನ್ ಮುಂಬಯಿ ಸಂಸ್ಥೆಯ ಹುಟ್ಟು ಬೆಳವಣಿಗೆಗೆ ನೂರಾರು ಜನನಾಯಕರ ನಿಸ್ವಾರ್ಥ ಸೇವೆ ಕೊಡುಗೆತ್ಯಾಗ ಅಪಾರ ಅವಿಸ್ಮರಣೀಯ ಎಂಬುದು ಅರಿವಿರಲಿ.

ದಿ. ಜಯ ಸಿ. ಸುವರ್ಣರು ನಮ್ಮ ಸಮಾಜದ ಧೀಮಂತ ನಾಯಕ ಮಾತ್ರವಲ್ಲದೆ ಬಿಲ್ಲವ ಸಮಾಜಕ್ಕೆ ಅವರ ಸೇವೆ ತ್ಯಾಗ ಕೊಡುಗೆಅಪಾರ.. ದೆಸೆಯಲ್ಲಿ ನಮಗೆಲ್ಲರಿಗೂ ಅಪಾರ ಹೆಮ್ಮೆ ಅಭಿಮಾನ ಗೌರವವಿದೆ.

ಆದರೇ

ಬಿಲ್ಲವ ಭವನ ಯಾರೊಬ್ಬರ ಖಾಸಗಿ ಆಸ್ತಿ.. ಸ್ವತ್ತು.. ಸಂಪತ್ತು ಅಲ್ಲವೇ ಅಲ್ಲ. ಅದು ಸರ್ವ ಬಿಲ್ಲವ ಸಮಾಜ ಬಾಂಧವರ ಸಂಪತ್ತುಆಸ್ತಿ..

ವ್ಯಕ್ತಿ ಪೂಜೆ.. ಮೂರ್ತಿ ಪೂಜೆಯಿಂದ ಸದಾ ದೂರ ಸರಿದು ಸರ್ವ ಸಮಾಜದ ಏಳಿಗೆಗೆ ಹೋರಾಡಿ ಜಗದ್ಗುರುವಾಗಿ ಕೀರ್ತಿಶೇಷರಾದ ಶ್ರೀ ನಾರಾಯಣ ಗುರುಗಳೇ ತಮ್ಮ ಮೂರ್ತಿಯನ್ನಿಟ್ಟು ಪೂಜಿಸಿ ಅಂದಿಲ್ಲ. ಆದರೂ ನಾವಿಂದು ಸಮಾಜದ ಸರ್ವಜನರ ಒಮ್ಮತದಿಂದ ಅವರ ಮೂರ್ತಿಯನ್ನಿಟ್ಟು ಎಲ್ಲೆಡೆ  ಅವರನ್ನು ಪೂಜಿಸಿ ಆರಾಧಿಸಿಕೊಂಡು ಗೌರವಿಸುತ್ತಾ  ಬಂದಿರುತ್ತೇವೆಅದು ಬಿಟ್ಟು ಅವರ ಪ್ರತಿಮೆಯ ಸಮ್ಮುಖದಲ್ಲಿ ಸಾಮಾನ್ಯ ಜನನಾಯಕನೊಬ್ಬನ ಪ್ರತಿಮೆ ಪ್ರತಿಷ್ಠಾಪಿಸಿ  ಪೂಜಿಸುವುದು ಎಷ್ಟುಸರಿ?????

ನಿಮಗೆ ಜಯ ಸುವರ್ಣರ ನಾಯಕತ್ವ ವ್ಯಕ್ತಿತ್ವ ಸ್ಫೂರ್ತಿ ಪ್ರೇರಣೆ ನೀಡಿದ್ದರೆ ನೀವೂ ಅವರ ಪ್ರತಿಮೆಯನ್ನು ನಿಮ್ಮ ಮನೆಯಲ್ಲಿಟ್ಟುಪೂಜಿಸಿ ಆರಾಧಿಸಿ..ಇದರಿಂದ ಯಾರಿಗೂ ಯಾವುದೇ ಅಭ್ಯಂತರವಿಲ್ಲ. ಆದರೇ ಸಮಾಜ ಭಾಂಧವರ ಬಿಲ್ಲವ ಭವನದಲ್ಲಿ ಖಂಡಿತಾಅಲ್ಲಾ.

ಪ್ರಸ್ತುತ ಬಡತನದಿ ಬಳಲುವ ಸೂರಿಲ್ಲದೆ ಒಂದು ಹೊತ್ತಿನ ತುತ್ತಿಗೂ ತತ್ತರಿಸಿ ಕಣ್ಣೀರಿಡುವ ಸಾವಿರಾರು ಬಡ ಪರಿವಾರಕುಟುಂಬಗಳು ನಮ್ಮ ಬಿಲ್ಲವ ಸಮಾಜದಲ್ಲಿದ್ದಾರೆ….

ಅವರ ನೋವಿಗೆ ಕಷ್ಟಕ್ಕೆ ಸ್ಪಂದಿಸಿ ಜನಸೇವೆ ಮಾಡಿ.. ಅದು ಬಿಟ್ಟು ಮೂರ್ತಿ ಪ್ರತಿಮೆ ಎಂದು ಕಿಚ್ಚಾಡಬೇಡಿ..

ಜಯ ಸುವರ್ಣರ ಸೇವೆ ಸಮಾಜ ಗುರುತಿಸಿದರೆ ಒಮ್ಮತದ ನಿರ್ಧಾರದಿಂದ ಅವರ ಪ್ರತಿಮೆ ಪ್ರತಿಷ್ಠಾಪನೆ ಎಲ್ಲಿಯೂ ಆಗಬಹುದು.

ಅದು ಬಿಟ್ಟು ಹಣ ಅಂತಸ್ತಿನ ಪ್ರಭಾವದಿಂದ ತಮ್ಮ ಮನೋ ಇಚ್ಚಿತದಂತೆ ಬಿಲ್ಲವ ಸಮಾಜದ ಆಸ್ತಿ ಸಮುದಾಯಭವನದಲ್ಲಿಯಲ್ಲಿಯಂತೂ ಆಗಲು ನಮ್ಮ ಸಂಘಟನೆ ಖಂಡಿಸಿ ವಿರೋಧಿಸುತ್ತಿದೆ.

ನಮ್ಮ ಸಂಘಟನೆಗೆ ಯಾರೊಂದಿಗೂ ವೈಯುಕ್ತಿಕ ದ್ವೇಷವಿಲ್ಲ..

ಜಯ ಸುವರ್ಣರಂತಹ ನೂರಾರು ನಾಯಕರು ಬೆಳೆದು ಬರಲಿಬೆಳೆದು ನಿಲ್ಲಲು ಯುವ ನಾಯಕರಿಗೆ ಅವಕಾಶ ಮಾಡಿ ಕೊಡಿಅದು ಬಿಟ್ಟು ಅವರನ್ನೇ ಮಹಾತ್ಮರನ್ನಾಗಿ ಪೂಜಿಸುವುದನ್ನು ಈಗಲಾದರೂ ಬಿಟ್ಟು ಬಿಡಿ.

ನಿಟ್ಟಿನಲ್ಲಿ ಬಿಲ್ಲವ ಭವನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಖಂಡಿಸುವಲ್ಲಿ ಬಿರುವೆರ್ ಕುಡ್ಲ ಸಂಘಟನೆಯೊಂದಿಗೆ ತವರೂರ ಇನ್ನೂಕೆಲವು ಸಮಾಜಪರ ಇನ್ನೂ ಹಲವು ಸಂಘ ಸಂಸ್ಥೆ ಸಂಘಟನೆಯು ನಮ್ಮೊಂದಿಗಿದ್ದು ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ

ಯಾವುದೇ ಪ್ರತಿಭಟನೆ ಹೋರಾಟಕ್ಕೂ ಸಿದ್ದರಿದ್ದೇವೆ ಎಂಬ ಸಾಂಕೇತಿಕ ಎಚ್ಚರಿಕೆಯ ಸೂಚನೆಯನ್ನು ಪ್ರತಿಮೆ ಪ್ರತಿಷ್ಠಾಪನೆಯಬೇಡಿಕೆಯಿತ್ತ ಚೇಲಾಗಳಿಗೆ ನೀಡುತ್ತಿದ್ದೇವೆ.

ಯಾವುದೇ ಆತುರದ ನಿರ್ಧಾರ ನಿರ್ಣಯ ಕೈಗೊಂಡು ಮುಂದೆ ಆಗುವ ಅನಾಹುತ ಮುಜುಗರಕ್ಕೆತಾವು ಒಳಗಾಗದಿರಿನೆನಪಿಡಿ.

ವ್ಯಕ್ತಿ ಪೂಜೆ.. ಮೂರ್ತಿ ಪೂಜೆಯನ್ನು ಬದಿಗಿರಿಸಿ ಸಮಾಜದ ಕಣ್ಣೀರೋರೆಸುವ ಕಾರ್ಯಕ್ಕೆ ಪಣ ತೊಡೋಣ..

ಬಿಲ್ಲವ ಭವನದಲ್ಲಿ ಜಗದ್ಗುರು ಶ್ರೀ ನಾರಾಯಣ ಗುರುಗಳ ಪ್ರತಿಮೆ ಒಂದೇ ಸಾಕು. ಅನ್ಯತಾ ಯಾವ ಜನನಾಯಕನ ಪ್ರತಿಮೆಪ್ರತಿಷ್ಠಾಪನೆಯ ಅಗತ್ಯವೇ ಇಲ್ಲ

ಜೈ ಗುರುದೇವ.. ಜೈ ಬಿಲ್ಲವ

ಸದಾ ನಿಮ್ಮೊಂದಿಗೆ,

ಉದಯ ಪೂಜಾರಿ ಬಳ್ಳಾಲ್ ಬಾಗ್

(ಬಿರುವೆರ್ ಕುಡ್ಲ )

ಜೈ ಬಿರುವೆರ್ ಕುಡ್ಲ


Share:

More Posts

Category

Send Us A Message

Related Posts

ಶ್ರೀ ಸತೀಶ್ ಕುಮಾರ್ ಬಜಾಲ್ ರಿಗೆ “ ಬಿಲ್ಲವ ಸಂಜೀವಿನಿ “ ಬಿರುದು ಗೌರವ ಪ್ರಧಾನ – ಬಿಲ್ಲವ ಸಂಘ ಪುಣೆ


Share       ವರ್ಲ್ಡ್ ಬಿಲ್ಲವಾಸ್ ಪ್ರೀಮಿಯರ್ ಲೀಗ್ 2025 ನ ಅದ್ಭುತ ಕಾರ್ಯಕ್ರಮದಲ್ಲಿ ಸೌಧಿ ಬಿಲ್ಲವಾಸ್ ದಮ್ಮಾಮ್ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ರಿಗೆ ಬಿಲ್ಲವ ಸಂಘ ಪುಣೆ ಯು ಅತಿಥಿ


Read More »

ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ


Share       ಮಂಗಳೂರು: ಸಾಧಕರ ಜೊತೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೇಮಕದ ಬಗ್ಗೆ ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಯುಗಾದಿ ಮಹೋತ್ಸವ, ವಿಷು


Read More »

ಪೊಲೀಸ್ ಸಬ್ ಇನ್ಸಸ್ಪೆಕ್ಟರ್ ಪ್ರದೀಪ್ ಪೂಜಾರಿಯವರಿಗೆ ಮುಖ್ಯಮಂತ್ರಿ ಚಿನ್ನದ ಪದಕ


Share       ಕೆಯ್ಯೂರು: ಕೆಯ್ಯೂರು ಗ್ರಾಮದ ಪಿ.ಎಸ್.ಐ ಪ್ರದೀಪ್ ಪೂಜಾರಿ 2023ನೇ ವರ್ಷದ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಮೂರನೇ ಬೆಟಾಲಿಯನ್ ಫೆರೆಡ್ ಗ್ರೌಂಡ್ ಕೆಎಸ್ಆರ್ಪಿ  ಕೊರಮಂಗಲ ಬೆಂಗಳೂರಿನಲ್ಲಿ ಎ.2ರಂದು ಪ್ರಶಸ್ತಿ ಪ್ರಧಾನ ನಡೆಯಲಿದೆ ಪ್ರದೀಪ್ ಪೂಜಾರಿ


Read More »

ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ರಾಜೇಂದ್ರ ಚಿಲಿಂಬಿ ಆಯ್ಕೆ


Share       ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿರುವ  ಸೇವೆಯನ್ನು ಪರಿಗಣಿಸಿ ಈ ಆಯ್ಕೆ ನಡೆದಿರುತ್ತದೆ. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ  ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಧ್ಯಮ ವಕ್ತಾರ, ಮಂಗಳೂರು ಚಿಲಿಂಬಿ ಸ್ವಾಮಿ


Read More »

ಜವಾಹರ್ ಬಾಲ್ ಮಂಚ್ ಇದರ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಸಂಯೋಜಕರಾಗಿ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಆಯ್ಕೆ


Share       ಬಂಟ್ವಾಳ : ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಇದರ ಸಂಸ್ಥಾಪಕರು, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ,


Read More »

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »