TOP STORIES:

FOLLOW US

ಬಿಲ್ಲವ ಭವನ ಮುಂಬಯಿಯಲ್ಲಿ ದಿವಂಗತ ಜಯ. ಸಿ ಸುವರ್ಣರ ಮೂರ್ತಿ (ಪ್ರತಿಮೆ) ಪ್ರತಿಷ್ಠಾಪನೆ ಬಗ್ಗೆ ಬಿರುವೆರ್ ಕುಡ್ಲ ಸಂಘಟನೆ ಖಂಡನೆ.


ಜೈ ಗುರುದೇವ

ಒಂದೇ ಜಾತಿ.. ಒಂದೇ ಧರ್ಮ.. ಒಂದೇ ದೇವರು..

ಎನ್ನುವ ನೀತಿ ಸಂದೇಶವನ್ನು ಜಗತ್ತಿಗೆ ಸಾರಿದ ಜಗದ್ಗುರು ಶ್ರೀ ನಾರಾಯಣ ಗುರುಗಳ ಚರಣ ಸ್ಪರ್ಶಿಸುತ್ತಾ

ಬಿಲ್ಲವ ಭವನ ಮುಂಬಯಿಯಲ್ಲಿ ದಿವಂಗತ ಜಯ. ಸಿ ಸುವರ್ಣರ ಮೂರ್ತಿ (ಪ್ರತಿಮೆ) ಪ್ರತಿಷ್ಠಾಪನೆ ಬಗ್ಗೆ ಬಿರುವೆರ್ ಕುಡ್ಲಸಂಘಟನೆ ಖಂಡನೆ.

ಬಿಲ್ಲವರ ಎಸೋಸಿಯೇಷನ್ ಮುಂಬಯಿ ಬಿಲ್ಲವ ಭವನದಲ್ಲಿ ಬಿಲ್ಲವ ಜನನಾಯಕ ದಿ. ಜಯ ಸುವರ್ಣರ ಪ್ರತಿಮೆಯನ್ನುಪ್ರತಿಷ್ಠಾಪನೆ ಮಾಡುವ ಬಗ್ಗೆ ಅವರ ಅನುಯಾಯಿಗಳ ಒಂದು ವರ್ಗ ಪಟ್ಟು ಹಿಡಿದು ಬಿಲ್ಲವರ ಎಸೋಸಿಯೇಷಷನ್ ಮುಂಬಯಿಸಂಸ್ಥೆಗೆ ಒತ್ತಾಯಿಸುತ್ತಿದೆ ಎಂಬ ವಿಷಯ ಸಾಮಾಜಿಕ ಜಾಲತಾಣದ ಮುಖೇನ ನಮ್ಮ ಸಂಘಟನೆಯ ಗಮನಕ್ಕೆ ಬಂದಿದೆ. ಇದನ್ನುಖಂಡಿಸಿ ಎಚ್ಚರಿಕೆಯ ಸೂಚನೆಯನ್ನು ಮೂಲಕ ನೀಡುತ್ತಿದ್ದೇವೆ.

ಬಿಲ್ಲವರ ಎಸೋಸಿಯೇಷನ್ ಮುಂಬಯಿ ಸಂಸ್ಥೆಯ ಹುಟ್ಟು ಬೆಳವಣಿಗೆಗೆ ನೂರಾರು ಜನನಾಯಕರ ನಿಸ್ವಾರ್ಥ ಸೇವೆ ಕೊಡುಗೆತ್ಯಾಗ ಅಪಾರ ಅವಿಸ್ಮರಣೀಯ ಎಂಬುದು ಅರಿವಿರಲಿ.

ದಿ. ಜಯ ಸಿ. ಸುವರ್ಣರು ನಮ್ಮ ಸಮಾಜದ ಧೀಮಂತ ನಾಯಕ ಮಾತ್ರವಲ್ಲದೆ ಬಿಲ್ಲವ ಸಮಾಜಕ್ಕೆ ಅವರ ಸೇವೆ ತ್ಯಾಗ ಕೊಡುಗೆಅಪಾರ.. ದೆಸೆಯಲ್ಲಿ ನಮಗೆಲ್ಲರಿಗೂ ಅಪಾರ ಹೆಮ್ಮೆ ಅಭಿಮಾನ ಗೌರವವಿದೆ.

ಆದರೇ

ಬಿಲ್ಲವ ಭವನ ಯಾರೊಬ್ಬರ ಖಾಸಗಿ ಆಸ್ತಿ.. ಸ್ವತ್ತು.. ಸಂಪತ್ತು ಅಲ್ಲವೇ ಅಲ್ಲ. ಅದು ಸರ್ವ ಬಿಲ್ಲವ ಸಮಾಜ ಬಾಂಧವರ ಸಂಪತ್ತುಆಸ್ತಿ..

ವ್ಯಕ್ತಿ ಪೂಜೆ.. ಮೂರ್ತಿ ಪೂಜೆಯಿಂದ ಸದಾ ದೂರ ಸರಿದು ಸರ್ವ ಸಮಾಜದ ಏಳಿಗೆಗೆ ಹೋರಾಡಿ ಜಗದ್ಗುರುವಾಗಿ ಕೀರ್ತಿಶೇಷರಾದ ಶ್ರೀ ನಾರಾಯಣ ಗುರುಗಳೇ ತಮ್ಮ ಮೂರ್ತಿಯನ್ನಿಟ್ಟು ಪೂಜಿಸಿ ಅಂದಿಲ್ಲ. ಆದರೂ ನಾವಿಂದು ಸಮಾಜದ ಸರ್ವಜನರ ಒಮ್ಮತದಿಂದ ಅವರ ಮೂರ್ತಿಯನ್ನಿಟ್ಟು ಎಲ್ಲೆಡೆ  ಅವರನ್ನು ಪೂಜಿಸಿ ಆರಾಧಿಸಿಕೊಂಡು ಗೌರವಿಸುತ್ತಾ  ಬಂದಿರುತ್ತೇವೆಅದು ಬಿಟ್ಟು ಅವರ ಪ್ರತಿಮೆಯ ಸಮ್ಮುಖದಲ್ಲಿ ಸಾಮಾನ್ಯ ಜನನಾಯಕನೊಬ್ಬನ ಪ್ರತಿಮೆ ಪ್ರತಿಷ್ಠಾಪಿಸಿ  ಪೂಜಿಸುವುದು ಎಷ್ಟುಸರಿ?????

ನಿಮಗೆ ಜಯ ಸುವರ್ಣರ ನಾಯಕತ್ವ ವ್ಯಕ್ತಿತ್ವ ಸ್ಫೂರ್ತಿ ಪ್ರೇರಣೆ ನೀಡಿದ್ದರೆ ನೀವೂ ಅವರ ಪ್ರತಿಮೆಯನ್ನು ನಿಮ್ಮ ಮನೆಯಲ್ಲಿಟ್ಟುಪೂಜಿಸಿ ಆರಾಧಿಸಿ..ಇದರಿಂದ ಯಾರಿಗೂ ಯಾವುದೇ ಅಭ್ಯಂತರವಿಲ್ಲ. ಆದರೇ ಸಮಾಜ ಭಾಂಧವರ ಬಿಲ್ಲವ ಭವನದಲ್ಲಿ ಖಂಡಿತಾಅಲ್ಲಾ.

ಪ್ರಸ್ತುತ ಬಡತನದಿ ಬಳಲುವ ಸೂರಿಲ್ಲದೆ ಒಂದು ಹೊತ್ತಿನ ತುತ್ತಿಗೂ ತತ್ತರಿಸಿ ಕಣ್ಣೀರಿಡುವ ಸಾವಿರಾರು ಬಡ ಪರಿವಾರಕುಟುಂಬಗಳು ನಮ್ಮ ಬಿಲ್ಲವ ಸಮಾಜದಲ್ಲಿದ್ದಾರೆ….

ಅವರ ನೋವಿಗೆ ಕಷ್ಟಕ್ಕೆ ಸ್ಪಂದಿಸಿ ಜನಸೇವೆ ಮಾಡಿ.. ಅದು ಬಿಟ್ಟು ಮೂರ್ತಿ ಪ್ರತಿಮೆ ಎಂದು ಕಿಚ್ಚಾಡಬೇಡಿ..

ಜಯ ಸುವರ್ಣರ ಸೇವೆ ಸಮಾಜ ಗುರುತಿಸಿದರೆ ಒಮ್ಮತದ ನಿರ್ಧಾರದಿಂದ ಅವರ ಪ್ರತಿಮೆ ಪ್ರತಿಷ್ಠಾಪನೆ ಎಲ್ಲಿಯೂ ಆಗಬಹುದು.

ಅದು ಬಿಟ್ಟು ಹಣ ಅಂತಸ್ತಿನ ಪ್ರಭಾವದಿಂದ ತಮ್ಮ ಮನೋ ಇಚ್ಚಿತದಂತೆ ಬಿಲ್ಲವ ಸಮಾಜದ ಆಸ್ತಿ ಸಮುದಾಯಭವನದಲ್ಲಿಯಲ್ಲಿಯಂತೂ ಆಗಲು ನಮ್ಮ ಸಂಘಟನೆ ಖಂಡಿಸಿ ವಿರೋಧಿಸುತ್ತಿದೆ.

ನಮ್ಮ ಸಂಘಟನೆಗೆ ಯಾರೊಂದಿಗೂ ವೈಯುಕ್ತಿಕ ದ್ವೇಷವಿಲ್ಲ..

ಜಯ ಸುವರ್ಣರಂತಹ ನೂರಾರು ನಾಯಕರು ಬೆಳೆದು ಬರಲಿಬೆಳೆದು ನಿಲ್ಲಲು ಯುವ ನಾಯಕರಿಗೆ ಅವಕಾಶ ಮಾಡಿ ಕೊಡಿಅದು ಬಿಟ್ಟು ಅವರನ್ನೇ ಮಹಾತ್ಮರನ್ನಾಗಿ ಪೂಜಿಸುವುದನ್ನು ಈಗಲಾದರೂ ಬಿಟ್ಟು ಬಿಡಿ.

ನಿಟ್ಟಿನಲ್ಲಿ ಬಿಲ್ಲವ ಭವನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಖಂಡಿಸುವಲ್ಲಿ ಬಿರುವೆರ್ ಕುಡ್ಲ ಸಂಘಟನೆಯೊಂದಿಗೆ ತವರೂರ ಇನ್ನೂಕೆಲವು ಸಮಾಜಪರ ಇನ್ನೂ ಹಲವು ಸಂಘ ಸಂಸ್ಥೆ ಸಂಘಟನೆಯು ನಮ್ಮೊಂದಿಗಿದ್ದು ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ

ಯಾವುದೇ ಪ್ರತಿಭಟನೆ ಹೋರಾಟಕ್ಕೂ ಸಿದ್ದರಿದ್ದೇವೆ ಎಂಬ ಸಾಂಕೇತಿಕ ಎಚ್ಚರಿಕೆಯ ಸೂಚನೆಯನ್ನು ಪ್ರತಿಮೆ ಪ್ರತಿಷ್ಠಾಪನೆಯಬೇಡಿಕೆಯಿತ್ತ ಚೇಲಾಗಳಿಗೆ ನೀಡುತ್ತಿದ್ದೇವೆ.

ಯಾವುದೇ ಆತುರದ ನಿರ್ಧಾರ ನಿರ್ಣಯ ಕೈಗೊಂಡು ಮುಂದೆ ಆಗುವ ಅನಾಹುತ ಮುಜುಗರಕ್ಕೆತಾವು ಒಳಗಾಗದಿರಿನೆನಪಿಡಿ.

ವ್ಯಕ್ತಿ ಪೂಜೆ.. ಮೂರ್ತಿ ಪೂಜೆಯನ್ನು ಬದಿಗಿರಿಸಿ ಸಮಾಜದ ಕಣ್ಣೀರೋರೆಸುವ ಕಾರ್ಯಕ್ಕೆ ಪಣ ತೊಡೋಣ..

ಬಿಲ್ಲವ ಭವನದಲ್ಲಿ ಜಗದ್ಗುರು ಶ್ರೀ ನಾರಾಯಣ ಗುರುಗಳ ಪ್ರತಿಮೆ ಒಂದೇ ಸಾಕು. ಅನ್ಯತಾ ಯಾವ ಜನನಾಯಕನ ಪ್ರತಿಮೆಪ್ರತಿಷ್ಠಾಪನೆಯ ಅಗತ್ಯವೇ ಇಲ್ಲ

ಜೈ ಗುರುದೇವ.. ಜೈ ಬಿಲ್ಲವ

ಸದಾ ನಿಮ್ಮೊಂದಿಗೆ,

ಉದಯ ಪೂಜಾರಿ ಬಳ್ಳಾಲ್ ಬಾಗ್

(ಬಿರುವೆರ್ ಕುಡ್ಲ )

ಜೈ ಬಿರುವೆರ್ ಕುಡ್ಲ


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »