TOP STORIES:

FOLLOW US

ಬಿಲ್ಲವ ಸಭೆ-ಸಮಾರಂಭಗಳಿಗೆ ಜಗದೀಶ್ ಅಧಿಕಾರಿಗೆ ಆಹ್ವಾನವಿಲ್ಲ: ಮೂಲ್ಕಿ ಬಿಲ್ಲವ ಸಂಘ ನಿರ್ಧಾರ…!


ಮೂಲ್ಕಿ:
ಬಿಲ್ಲವ ಆರಾಧ್ಯ ಶಕ್ತಿಗಳಾದ ಕೋಟಿ ಚೆನ್ನಯ್ಯ ಹಾಗೂ ಬಿಲ್ಲವ ಸಮುದಾಯದ ನಾಯಕರುಗಳ ಬಗ್ಗೆ ತುಚ್ಚವಾಗಿ ನಿಂದಿಸಿರುವ ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿಯನ್ನು ಪ್ರತಿಯೊಬ್ಬ ಬಿಲ್ಲವ ಸಮುದಾಯದವರು ಹಾಗೂ ಬಿಲ್ಲವ ಸಂಘಟನೆಗಳು ಯಾವುದೇ ವೈಯಕ್ತಿಕ ಹಾಗೂ ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಇನ್ನು ಮುಂದೆ ಆಹ್ವಾನ ನೀಡದಿರಲು ನಿರ್ಧರಿಸಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಮಹತ್ವದ ನಿರ್ಣಯವನ್ನು ಕೈಗೊಂಡಿದೆ.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಭಾನುವಾರ ಸಂಘದ ಅಧ್ಯಕ್ಷರಾದ ರಮೇಶ್ ಅಮೀನ್ ಕೊಕ್ಕರ್‌ಕಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಂಡಿದೆ.
ಬಿಲ್ಲವ ಸಮುದಾಯ ಸಹಿತ ತುಳುನಾಡಿನ ಸರ್ವಧರ್ಮದವರು ಸಹ ಆರಾಧ್ಯ ದೈವ-ದೇವರುಗಳಾಗಿ ನಂಬಿಕೊಂಡು ಬಂದಿರುವ ಕೋಟಿ ಚೆನ್ನಯ್ಯ ಅವಳಿ ವೀರರಿಗೆ ಸಮಸ್ತ ಜನರು ಗರಡಿಯ ಇನ್ನಿತರ ದೈವ ಸಾನ್ನಿಧ್ಯದ ಮೂಲಕ ವಿಶೇಷ ಸ್ಥಾನಮಾನವನ್ನು ನೀಡಿರುವುದನ್ನು ತನ್ನ ಹೀನ ಬುದ್ದಿಯಿಂದ ಜಗದೀಶ್ ಅಧಿಕಾರಿ ಸಾರ್ವಜನಿಕವಾಗಿ ಹೇಳಿರುವುದರ ಬಗ್ಗೆ ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಅವರ ಮನಸ್ಥಿತಿಯನ್ನು ಅರಿತು ಅವರು ಕೇಳಿರುವ ಕ್ಷಮೆಯು ಆಧಾರ ರಹಿತವಾಗಿ ಕೇವಲ ಕಾಲ್ಪನಿಕವಾಗಿದೆ. ಮನಸ್ಸಿನಲ್ಲಿ ದುಷ್ಟ ಬುದ್ದಿಯನ್ನಿಟ್ಟುಕೊಂಡು ಯಾರದೋ ಒತ್ತಡಕ್ಕೆ ಮಣಿದು ಕ್ಷಮೆ ಕೇಳಿದ್ದರೂ ಸಹ ಬಿಲ್ಲವ ಸಮಾಜ ಅವರನ್ನು ಕ್ಷಮಿಸೋಲ್ಲ ಎಂದು ನಿರ್ಧರಿಸಲಾಗಿದೆ.

ಸಭೆಯಲ್ಲಿ ನಿರ್ಧರಿಸಿದಂತೆ ಜಗದೀಶ್ ಅಧಿಕಾರಿಯನ್ನು ಮೂಲ್ಕಿಯ ಬಿಲ್ಲವ ಸಮಾಜದವರು ತಮ್ಮ ವೈಯಕ್ತಿಕ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂಬ ನಿರ್ಣಯಕ್ಕೆ ಗೌರವ ನೀಡಬೇಕು, ಇಂತಹ ಸಮಾಜ ವಿಘಟನೆ ಮಾಡುವ ವ್ಯಕ್ತಿಗಳಾಗಲಿ, ಶಕ್ತಿಗಳು ಬಿಲ್ಲವ ಸಮಾಜವನ್ನು ಒಡೆದು ಆಳುವ ನೀತಿಯ ವಿರುದ್ಧವಾಗಿ ಈ ಮಹತ್ವದ ನಿರ್ಧಾರವಾಗಿದೆ. ವಿಶ್ವದಲ್ಲಿರುವ ಎಲ್ಲಾ ಬಿಲ್ಲವ ಸಂಘಟನೆಗಳು ಸಹ ಜಗದೀಶ್ ಅಧಿಕಾರಿಯನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಹ್ವಾನಿಸದೇ ತಿರಸ್ಕರಿಸಬೇಕು ಎಂದು ಬಿಲ್ಲವ ಸಂಘಗಳ ಒಕ್ಕೂಟವಾದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲಕ್ಕೆ ಮನವಿ ಮಾಡುವುದು ಎಂದು ನಿರ್ಣಯಿಸಿಕೊಂಡು,
ರಾಜಕೀಯವಾಗಿ ಇಂತಹ ವ್ಯಕ್ತಿಗಳು ಸಮಾಜದಲ್ಲಿ ತಪ್ಪು ಸಂದೇಶವನ್ನು ನೀಡುವ ಹಾಗೂ ತನ್ನ ಬೇಜವಬ್ದಾರಿಯ ಉದ್ಧಟತನ ತೋರಿರುವುದರಿಂದ ಇವರನ್ನು ಕೂಡಲೆ ರಾಜಕೀಯ ಪಕ್ಷದಿಂದ ಶಾಶ್ವತವಾಗಿ ನಿವೃತ್ತಿಗೊಳಿಸಬೇಕು ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹಾಗೂ ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರಲ್ಲಿ ಮನವಿ ಮಾಡಿ ಹಕ್ಕೊತ್ತಾಯ ನಡೆಸುವುದೆಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರುಗಳಾದ ರಾಘು ಸುವರ್ಣ ಕೊಳಚಿಕಂಬಳ, ಯದೀಶ್ ಅಮೀನ್ ಕೊಕ್ಕರ್‌ಕಲ್, ಡಾ.ಹರಿಶ್ಚಂದ್ರ ಪಿ. ಸಾಲಿಯಾನ್, ಮೂಲ್ಕಿ ನಗರ ಪಂಚಾಯತ್‌ನ ಉಪಾಧ್ಯಕ್ಷ ಸತೀಶ್ ಅಂಚನ್ ಬಾಳೆಹಿತ್ಲು, ಬಿರುವೆರ್ ಕುಡ್ಲದ ಮೂಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಶ್ರೀ ನಾರಾಯಣಗುರು ಸೇವಾದಳದ ಪರವಾಗಿ ಉಮೇಶ್ ಮಾನಂಪಾಡಿ, ಶ್ರೀ ನಾರಾಯಣಗುರು ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಸರೋಜಿನಿ ಸುವರ್ಣ, ಸಾಮಾಜಿಕ ಚಿಂತಕ ದಿನೇಶ್ ಬಪ್ಪನಾಡು ಮತ್ತಿತರ ಸಂಘದ ಸದಸ್ಯರು ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಬಡುಗುಹಿತ್ಲು ನಿರ್ಣಯವನ್ನು ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು.

“ಇಂತಹ ನಿರ್ಣಯ ಪ್ರತೀ ಬಿಲ್ಲವ ಸಂಘದಲ್ಲಿ ನಡೆಯಲಿ ಎಂಬ ಆಶಯ ನಮ್ಮದು…. ಇದು ಬಿಲ್ಲವರ ಸ್ವಾಭಿಮಾನದ ಪ್ರಶ್ನೆ” ….-ರಮೇಶ್ ಅಮೀನ್
ಅಧ್ಯಕ್ಷರು
ಬಿಲ್ಲವ ಸಮಾಜ ಸೇವಾ ಸಂಘ ( ರಿ) ಮೂಲ್ಕಿ.


Share:

More Posts

Category

Send Us A Message

Related Posts

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »