TOP STORIES:

FOLLOW US

ಬ್ರಹ್ಮ ಶ್ರೀ ನಾರಾಯಣ ಗುರುಗಳ ಮಹಾಸಮಾಧಿ ದಿನ ಸೆಪ್ಟೆಂಬರ್21 ಇಂದು


ಮ. ವ.1104 ರ ಕನ್ನಿ 5ನೇ ದಿನ ಬೆಳಗಿನಿಂದಲೇ ಆಕಾಶವು ತೆಳುವಾದ ಮೊಡದಿಂದ ಕೂಡಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ತುಂತುರು ಹನಿಗಳು ಬೀಳಲಾರಂಭಿಸಿದವು. ಗುರುಗಳು ಮಹಾನಿರ್ವಾಣಕ್ಕೆ ಪ್ರಾಪ್ತಿಯಾಗುವುದನ್ನು ಪ್ರಕೃತಿ ಸೂಚಿಸುವಂತೆ ತೋರುತ್ತಿತ್ತು. ಗುರುಗಳು ಪ್ರಸನ್ನರಾಗಿಯೇ ಇದ್ದರು. ಗುರುದೇವರು ಮೊದಲೇ ಸೂಚಿಸಿದ್ದಂತೆ ಆಶ್ರಮದಲ್ಲಿದ್ದ ಎಲ್ಲರಿಗೂ ಊಟವನ್ನು ಬಡಿಸಿದರು. ಪ್ರತಿಯೊಬ್ಬರ ಊಟವೂ ಆಯಿತು. ಕೆಲವು ದಿನಗಳಿಂದ ಹೆಚ್ಚಾಗಿ ಮೌನದಲ್ಲಿದ ಅವರು ಮಧ್ಯಾಹ್ನ ಶಿಷ್ಯರೊಂದಿಗೆ ಸ್ವಲ್ಪ ಮಾತನಾಡಿದರು. 3 ಗಂಟೆಯ ಸಮಯ ಆಗುತ್ತಿದ್ದಂತೆ ಶಿಷ್ಯರೊಂದಿಗೆ ತನಗೆ ಸಂಪೂರ್ಣ ಶಾಂತಿಯ ಅನುಭವ ವಾಗುತ್ತಿದೆ ಎಂದರು. ಅನೇಕ ಶಿಷ್ಯರು ಮಂತ್ರ ಪಠಣ ಮತ್ತು ಪ್ರಾರ್ಥನೆಗಳಲ್ಲಿ ನಿರತರಾಗಿದ್ದರು. 3.15 ಕ್ಕೆ ಗುರುಗಳು ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೆ ಬಳಿಯಲಿದ್ದವರ ಸಹಾಯದಿಂದ ಪದ್ಮಾಸನದಲ್ಲಿ ಕುಳಿತರು. ಶಿಷ್ಯರೆಲ್ಲರಿಗೂ ದೈವದಶಕವನ್ನು ಹಾಡಲು ಹೇಳಿದರು ದೈವದಶಕವನ್ನು ಹಾಡುತ್ತಿದ್ದಂತೆಯೇ ಹಾಗೆಯೇ ಧ್ಯಾನಸ್ಥರಾಗಿ ಕಣ್ಣುಗಳನ್ನು ನಿಧಾನವಾಗಿ ಮುಚ್ಚಿದರು. ಪದ್ಮಾಸನದಲ್ಲಿ ಧ್ಯಾನಸ್ಥರಾಗಿ ಯೋಗದಲ್ಲಿದ್ದ ಗುರುದೇವರು ಶಾಂತ ಚಿತ್ತದಿಂದ ಮಹಾಸಮಾಧಿಗೆ ಪ್ರಾಪ್ತರಾದರು.

ಮಹಾ ಸಮಾಧಿಯ ಈ ದಿನ ಕೇರಳದಲ್ಲಿ ಸಾರ್ವತ್ರಿಕ ರಜಾದಿನ. ವಿಶ್ವಾದ್ಯಂತ ಇಂದು ಸಾತ್ವಿಕ ಆಹಾರವನ್ನು ಸೇವಿಸಿ ಪೂಜೆ ಪ್ರಾರ್ಥನೆಯ ಮೂಲಕ ಗುರುಸ್ಮರಣೆ ಮಾಡುತ್ತಾರೆ ನಾವೂ ಕೂಡ ಈ ಪುಣ್ಯ ಕಾರ್ಯವನ್ನು ಮಾಡುವ.

ಥಿಯೋಸೊಫಿಕಲ್ ಸೊಸೈಟಿಯ ಎನ್ನಿಬೆಸಂಟ್ ತಮ್ಮ ಅಧಿಕೃತ ವರ್ತಮಾನ ಪತ್ರಿಕೆಯಾದ ಸನಾತನ ಧರ್ಮದಲ್ಲಿ ನಾರಾಯಣ ಗುರುಗಳು ಸಮಾಧಿಯಾದಾಗ ಹೀಗೆ ಬರೆಯುತ್ತಾರೆ. ” ಅವರೊಬ್ಬರು ಪ್ರಕಾಶಮಯ ಪೂರ್ಣ ಸೂರ್ಯನೇ ಆಗಿದ್ದರೆ… ಅವರು ಯೋಗದಲ್ಲಿ ಪತಂಜಲಿ. ಜ್ಞಾನದಲ್ಲಿ ಶಂಕರ, ತ್ಯಾಗದಲ್ಲಿ ಬುದ್ಧ, ಸ್ಥಿರತೆಯಲ್ಲಿ ನಭಿ, ಮಾನವ ಸೇವೆಯಲ್ಲಿ ಜೀಸಸ್,… ಅವರು ದೇವರು. ಮನುಷ್ಯ ರೂಪಧಾರಣೆ ಮಾಡಿದ ಅವತಾರ ಪುರುಷರಾದ ಅವರು ಮಹಿಮಾಯುಕ್ತ ತೇಜಸ್ಸಿನ ತನ್ನ ಜೀವನೊದ್ಧೇಶಗಳನ್ನು ಪೂರೈಸಿ, ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು. ….ನಿಜವಾಗಿಯೂ ಅವರೊಬ್ಬ ಅವತಾರಿ. ಮನುಷ್ಯರಲ್ಲಿ ದೇವರು. ಭವಿಷತ್ತಿನ ಭಾರತ ಅವರನ್ನು ದೇವರಾಗಿ ಪೂಜಿಸುವುದು.”

(ಆಧಾರ ಶ್ರೀ ನಾರಾಯಣ ಗುರು ವಿಜಯ ದರ್ಶನ: ಬಾಬು ಶಿವಪೂಜಾರಿ)

✍ ರಾಜೇಂದ್ರ ಚಿಲಿಂಬಿ


Share:

More Posts

Category

Send Us A Message

Related Posts

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »

“ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ” ಪ್ರತಿಭಾ ಕುಳಾಯಿ ಆಯ್ಕೆ 


Share       ಮಂಗಳೂರು: ಸಮಾಜ ಸೇವೆಗಾಗಿ ಕುಳಾಯಿ ಫೌಂಡೇಶನ್ ರಚಿಸಿ ೫೦೦ಕ್ಕೂ ಹೆಚ್ಚು ಮಹಿಳೆ ಮತ್ತು ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಿರುವ, ಯುವ ರಾಜಕಾರಣಿ ಪ್ರತಿಭಾ ಕುಳಾಯಿ, ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ಸ್ ಗೆ ಆಯ್ಕೆಯಾಗಿದ್ದಾರೆ. ರಷ್ಯಾದ


Read More »

ವಿದೇಶದ ಇಸ್ರೇಲ್ ನಲ್ಲಿದ್ದು ತುಳುನಾಡಿನ ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ ವ್ಯಕ್ತಿ ದಿನಕರ ಪೂಜಾರಿ


Share       ನಾನು ನನ್ನವರು ಎಂಬ ಈ ಕಾಲ ಘಟ್ಟದಲ್ಲಿ ಸಮಾನ ಮನಸ್ಕರ ಜೊತೆ  ಸೇರಿ ದುಡಿದದ್ದರಲ್ಲಿ ಸ್ವಲ್ಪ ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವ ಮಹೋನ್ನತ ಕಾರ್ಯಗೈಯುತ್ತಿರುವ ವ್ಯಕ್ತಿ ದಿನಕರ ಪೂಜಾರಿ. ವಿದೇಶದಲ್ಲಿದ್ದು ಸಂಕಷ್ಟದ ಕುಟುಂಬಕ್ಕೆ ಆರ್ಥಿಕ


Read More »

ಬಿಲ್ಲವ ಸಮಾಜಕ್ಕಾಗಿ ಪಂದ್ಯಾಟದ ಜೊತೆಗೆ ಆರ್ಥಿಕ ಯೋಜನೆಯನ್ನು ರೂಪಿಸಿದ ರುವಾರಿ ವಿಶ್ವನಾಥ ಪೂಜಾರಿ ಕಡ್ತಲ


Share       ಆದರಣೀಯ ಕ್ಷಣಗಳನ್ನು ‌ಮತ್ತೊಮ್ಮೆ ಮರಳಿಸಿ ವಿದೇಶದ  ಮಣ್ಣಲ್ಲೂ ಬಿಲ್ಲವರನ್ನು ಒಗ್ಗೂಡಿಸಿಕೊಂಡು ಒಂದು ಪಂದ್ಯಾಟ ನಡೆಸುವುದು ಕಷ್ಟ ಎಂಬ ಸನ್ನಿವೇಶದಲ್ಲಿ ಮಾಡಿಯೇ ಸಿದ್ಧ ಎಂಬ ಸ್ಪಷ್ಟ ನಿಲುವಿನೊಂದಿಗೆ ಎಲ್ಲರಿಗೂ ಇಷ್ಟವಾಗಿಸಿದ ಕ್ರಿಕೆಟ್ ಪಂದ್ಯಾಟ ಮಾಡಿ


Read More »