TOP STORIES:

FOLLOW US

ಮಂಗಳೂರಿನ ಅದ್ಭುತ ಕಲೆಗಾರ ಬಿ.ಎಸ್.ಎನ್.ಎಲ್ ಕಛೇರಿ ಕಾವಲುಗಾರ – ದಯಾನಂದ ಪಿ. ಅಂಚನ್


ಪ್ರತಿಭೆಗೆ ವಯಸ್ಸಿನ ಮೀತಿಯಾಗಲಿ ಮಾಡುವ ಕೆಲಸವಾಗಲಿ ಅಡ್ಡಿಯಾಗುವುದಿಲ್ಲ. ಆಸಕ್ತಿ ಇದ್ದರೆ ಸಾಕು ಸಮಯ ವ್ಯರ್ಥ ಮಾಡದೆಸಿಕ್ಕ ಬಿಡುವಿನ ಸಮಯದಲ್ಲಿ ಪ್ರತಿಭೆಯ ಅನಾವರಣ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ನಮ್ಮ ನಡುವೆಮಂಗಳೂರಿನ ಬಿ.ಎಸ್.ಎನ್. ಎಲ್ ಕಛೇರಿಯಲ್ಲಿ ಕಾವಲುಗಾರರಾಗಿ ಬಿಡುವಿನ ವೇಳೆಯಲ್ಲಿ ಅಲ್ಲೇ ಮೂಲೆಯಲ್ಲಿ ಖುರ್ಚಿಯಲ್ಲಿಕುಳಿತು ಬಿಳಿ ಹಾಳೆಯಲ್ಲಿ ಚಿತ್ರ ಬಿಡಿಸುತ್ತ, ಗೋಡೆಯಲ್ಲಿ ತಮ್ಮ ಮೊಬೈಲ್ ಮೂಲಕ ಶೇಡೋ ಪ್ಲೇ ಮಾಡುವ ವಿಶಿಷ್ಟ ಕಲಾವಿದಹಾಗೇ ಎಲ್ಲಾರಲ್ಲೂ ಪ್ರೀತಿಯಿಂದ ಮಾತನಾಡುವ ಅಪರೂಪದ ವ್ಯಕ್ತಿ ದಯಾನಂದ ಪಿ. ಅಂಚನ್. ಚಿಕ್ಕದಿರುವಾಗ ತಮ್ಮ ಮನೆಯ ಸಮೀಪದಲ್ಲಿದ್ದ ಗೋವಿಂದ ಪೈ ಅನ್ನುವವರು ಶೇಡೋ ಪ್ಲೇ ಮೂಲಕ ಗೋಡೆಯಲ್ಲಿ ಕೈಚಲನೆ ಬಳಸಿಬೆಳಕಿನ ನೆರಳಿನಲ್ಲಿ ಮೂಡಿಸುತ್ತಿದ್ದ ಹಕ್ಕಿಗಳು,ಪ್ರಾಣಿಗಳ, ಮನುಷ್ಯನನ್ನು ನೋಡುತ್ತಾ ನೋಡುತ್ತಾ ತಾವು ನಿಧಾನವಾಗಿಆಸಕ್ತಿಯಿಂದ ಸತತ ಪ್ರಯತ್ನ ಪಟ್ಟು ಶೇಡೋ ಪ್ಲೇ ಮೂಲಕ ಗಿಳಿ, ಬಾತುಕೋಳಿ, ಕೊಕ್ಕರೆ, ಮನುಷ್ಯ,ಸಿಂಹ ಹೀಗೆ ಕಲಿತರು ಹಾಗೂಮನಸ್ಸಿದ್ದರೆ ಹೇಗೆದರೂ ಕಲಿಯಬಹುದು ತಾವು ಮೊದಲು ಕೆಲಸ ಮಾಡುತ್ತಿದ್ದ ರೈಸ್ ಮಿಲ್ ನಲ್ಲಿ ಬರುತ್ತಿದ್ದ ಧೂಳಿನಲ್ಲೇ ಚಿತ್ರಬಿಡಿಸುತ್ತಾ ನಂತರ ಕಾಗದದ ಮೇಲೆ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದರು. ಅನೇಕ ವ್ಯಕ್ತಿಗಳ ಮುಖದ ಚಿತ್ರಗಳನ್ನು ಬಿಡಿಸಿದ್ದಾರೆ.

ಮಾಡುವ ಕಾಯಕದೊಂದಿಗೆ ಹವ್ಯಾಸವನ್ನು ಬಿಡದೆ ಅನೇಕ ವರ್ಷಗಳಿಂದ ಮುಂದುವರಿಸಿಕೊಂಡು ಹೋಗುತ್ತಿರುವ ದಯಾನಂದಪಿ.ಅಂಚನ್.ವೃತ್ತಿಯಲ್ಲಿ ತಾವು ಮಂಗಳೂರಿನಲ್ಲಿರುವ ಬಿ.ಎಸ್.ಎನ್.ಎಲ್ ಕಛೇರಿಯಲ್ಲಿ ಬೆಳಗ್ಗೆ ಕಾವಲುಗಾರರು ಆದರೆಹವ್ಯಾಸವಾಗಿ ಅಧ್ಬುತವಾಗಿ ಚಿತ್ರಗಳನ್ನು ಬಿಡಿಸುವ ಕಲಾ ಆರಾಧಕರು.ಯಾರು ಆಶ್ಚರ್ಯವೆಂದರೆ ಚಿತ್ರಕಲೆ,ಶೇಡೋ ಪ್ಲೇಯಾರಲ್ಲೂ ಕಲಿಯದೆ ತಾವೇ ಸ್ವತಃ ಆಸಕ್ತಿಯಿಂದ ಅನೇಕ ವರ್ಷಗಳ ಪರಿಶ್ರಮದಿಂದ ಕಲಿತುಕೊಂಡು ತಮ್ಮ ಹವ್ಯಾಸವನ್ನುಉದ್ಯೋಗದ ಜೊತೆಗೆ ಬೆಳೆಸುತ್ತಾ ಅಧ್ಬುತವಾಗಿ ವಿವಿಧ ವ್ಯಕ್ತಿಗಳ,ಹಲವು ಸಾಧಕರ ಮುಖಗಳ ಚಿತ್ರಗಳನ್ನು ಬಿಡಿಸುತ್ತಾ, ಮೊಬೈಲ್ಬೆಳಕಿನಲ್ಲೇ ಗೋಡೆಗಳ ಮೇಲೆ ಹಕ್ಕಿ,ಹುಲಿ, ಮನುಷ್ಯ ಮಾತಾನಾಡುವುದು ರೀತಿ ಶೇಡೋ ಪ್ಲೇ ಮಾಡಿ ತೋರಿಸುವ ಸರಳ ವ್ಯಕ್ತಿದಯಾನಂದ ಪಿ. ಅಂಚನ್

ಯಾರೇ ಅವರನ್ನು ಮಾತನಾಡಿಸಿ ಅವರ ಕಲೆಯ ಬಗ್ಗೆ ಕೇಳಿದಾಗ ಪ್ರೀತಿಯಿಂದ ಬಿಡಿಸಿದ ಚಿತ್ರಗಳನ್ನು ,ಶೇಡೋ ಪ್ಲೇ ತೋರಿಸಿಅಚ್ಚರಿ ಪಡಿಸುತ್ತಾರೆ. ಸಾಧಿಸಲು ಛಲ ಹಾಗೂ ಶ್ರದ್ಧೆ ಇದ್ದರೆ ಸಾಕು. ಸ್ವಂತ ತಾವೇ ಆಸಕ್ತಿಯಿಂದ ಕಲಿತು ಇಂದಿಗೂ ಉಳಿಸಿಕೊಂಡುಬಂದಿರುವ ಅವರ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಪ್ರೇರಣೆ ನೀಡುವಂತದ್ದು ಹಾಗೂ ಇಂತಹ ಎಲೆಮರೆಯ ಕಾಯಿಯಂತಿರುವಅನೇಕರನ್ನು ಗುರುತಿಸಿ ಅವರಿಗೆ ಇನ್ನಷ್ಟು ಪ್ರೋತ್ಸಾಹಿಸೋಣ. ಯಾವಾಗಲಾದರೂ ಬಿ.ಎಸ್.ಎನ್.ಎಲ್ ಮಂಗಳೂರಿನ ಕಛೇರಿಗೆಹೋದಾಗ ಅಲ್ಲೇ ಹೊರಗೆ ಕುಳಿತು ಸಮಯ ಸಿಕ್ಕಾಗ ಎಳೆಎಳೆಯಾಗಿ ಚಿತ್ರವನ್ನು ಬಿಡಿಸುತ್ತಾ ಅದರಲ್ಲೇ ಖುಷಿ ಪಡುವ ದಯಾನಂದಪಿ. ಅಂಚನ್ ಅವರನ್ನು ಮಾತನಾಡಿಸಲು ಮರೆಯದಿರಿ.


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »