TOP STORIES:

*ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಲು ತುಳುನಾಡಿನ ಎಲ್ಲಾ ಗರೋಡಿಗಳು ಮತ್ತು ಸಂಘಸಂಸ್ಥೆಗಳು ಆಗ್ರಹ ಪೂರ್ವಕ ಮನವಿಯನ್ನು ಸಲ್ಲಿಸುವಂತೆ ಉಡುಪಿ ಜಿಲ್ಲಾ ಬಿಲ್ಲವ ಯುವವೇದಿಕೆ ( ರಿ) ವಿನಂತಿ.


ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಸತ್ಯಪುರುಷರಾದ ಕೋಟಿ ಚೆನ್ನಯರ ಹೆಸರಿಡಲು ತುಳುನಾಡಿನ ಎಲ್ಲಾ ಗರೋಡಿಗಳು ಮತ್ತು ಸಂಘಸಂಸ್ಥೆಗಳು ಆಗ್ರಹ ಪೂರ್ವಕ ಮನವಿಯನ್ನು ಸಲ್ಲಿಸುವಂತೆ ಉಡುಪಿ ಜಿಲ್ಲಾ ಬಿಲ್ಲವ ಯುವವೇದಿಕೆ ( ರಿ) ವಿನಂತಿ.

ಪಂಚವರ್ಣದ ಪುಣ್ಯಮಣ್ಣಿನಲ್ಲಿ ಸತ್ಯ,ಧರ್ಮ, ನ್ಯಾಯ, ನೀತಿಗೆ ಬದ್ದರಾಗಿ ಸತ್ಕಾರ್ಯದ ಸೇವೆಗಳನ್ನು ನಿರ್ವಹಿಸಿ ಅಮರೈಕ್ಯರಾದ ಕೋಟಿಚೆನ್ನಯರು ಸಮಸ್ತ ಜನಮಾನಸದಲ್ಲಿ ಪ್ರಾತಃಸ್ಮರಣೀಯರಾಗಿ ನೆಲೆಗೊಂಡಿದ್ದಾರೆ.ಅವಳಿ ಜಿಲ್ಲೆಯ ಸಮಗ್ರ ಉದ್ದಾರದಲ್ಲಿ ಜೋಡು ನಂದಾದೀಪವಾಗಿ ದಾರಿತೋರುತ್ತಿರುವ ಕೋಟಿಚೆನ್ನಯರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡಬೇಕೆನ್ನುವುದು ಬಹು ಸಮಯದ ಸರ್ವಸಮ್ಮತ ಬೇಡಿಕೆಯಾಗಿದೆ.ಅರಾಧನಾ ಅಂಶವಾಗಿ ಕೋಟಿಚೆನ್ನಯರು ಜಾತ್ಯಾತೀತವಾಗಿ ಸ್ವೀಕೃತಗೊಂಡಿದ್ದಾರೆ.ಅಧಿಕಾರಸ್ಥರು ಇಚ್ಛಾಶಕ್ತಿಯಿಂದ ಮಾಡಬೇಕಿದ್ದ ಕಾರ್ಯವೊಂದು ಇನ್ನಿಲ್ಲದ ನೆಪಗಳ ನಡುವೆ ಪ್ರಸ್ತುತ ಪದೇ ಪದೇ ಸುದ್ದಿಗ್ರಾಸವಾಗುತ್ತಿರುವುದು ವಿಷಾದನೀಯ. ಕೋಟಿಚೆನ್ನಯರ ಹೆಸರಿಡುವುದಕ್ಕೆ ಪ್ರಶ್ನಾತೀತವಾದ ಅಂಶಗಳಿದೆ ಮತ್ತು ಸೂಕ್ತವೂ, ಸಮರ್ಥನೀಯವೂ ಆಗಿದೆ.
ಈ ಕುರಿತಂತೆ ನಾವು ಜಾಗೃತಿಗೊಳ್ಳುವ ಸಮಯ ಬಂದಿದ್ದು ಸಮಸ್ತ ತುಳುನಾಡಿನಾದ್ಯಂತ ಕೋಟಿಚೆನ್ನಯರ ಪವಿತ್ರ ಆರಾಧ್ಯ ತಾಣಗಳಾದ *ಗರೋಡಿ ಸ್ಥಾನದವರು* ಒಮ್ಮತದಿಂದ ಈ ಅಭಿಯಾನದ ಕುರಿತು ಮನವಿಯನ್ನು ನೀಡುವಂತಹ ನಿರ್ಣಯವನ್ನು ತಕ್ಷಣವೇ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಬಿಲ್ಲವ ಯುವವೇದಿಕೆಯು ವಿನಮ್ರವಾಗಿ ವಿನಂತಿಸಿಕೊಳ್ಳುತ್ತದೆ. ಎಲ್ಲಾ ಗರೋಡಿಗಳಲ್ಲಿ ಜಾತ್ಯಾತೀತ ನೆಲೆಯಲ್ಲಿ ಸತ್ಯನಿಷ್ಠವಾಗಿ ನಿಮ್ಮ ಪ್ರಯತ್ನ ಜರಗಲಿ.ಮತ್ತು ಈ ಅಗತ್ಯ ಕಾರ್ಯದ ಕುರಿತು ಯಾವುದೇ ರಾಜಕೀಯವನ್ನು ಮತ್ತು ಪ್ರತಿಷ್ಠೆಯನ್ನು ಹೊರತು ಪಡಿಸಿ ಪಕ್ಷಾತೀತವಾಗಿ ನಾವೆಲ್ಲರೂ ಸಂಘಟಿತರಾಗಿ ಮುನ್ನಡೆಯಲು ನಿರ್ಧರಿಸೋಣ..ಸಹಕಾರವಿರಲಿ.

 

ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಹಾಗೂ ಸರ್ವಸದಸ್ಯರು,
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ),


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »