TOP STORIES:

FOLLOW US

ಮನ್ಸೂನ್​ನಲ್ಲಿ ಕಾಡುತ್ತಿದ್ಯಾ ಕೀಲು ನೋವು; ಇಲ್ಲಿದೆ ಇದಕ್ಕೆ ಪರಿಹಾರ


ಬೆಂಗಳೂರು: ಮಳೆಗಾಲದಲ್ಲಿ ಕೆಲವು ಮಂದಿಗೆ ಕೀಲು ನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ಅವಧಿಯಲ್ಲಿ ನೋವು ಉಲ್ಬಣಗೊಳ್ಳಲು ನಿಖರವಾದ ಕಾರಣ ತಿಳಿದಿಲ್ಲ.

ಸಂಶೋಧನೆಗಳು ಕೂಡ ಈ ಬಗ್ಗೆ ಹೆಚ್ಚು ಸ್ಪಷ್ಟವಾಗಿ ತಿಳಿಸಿಲ್ಲ. ಮಳೆಗಾಲದಲ್ಲಿ ಈ ನೋವು ಹೆಚ್ಚು ಎಂದು ಕೆಲವು ಅಧ್ಯಯನಗಳು ವಾದಿಸಿದರೆ, ಮತ್ತೆ ಕೆಲವು ಅಧ್ಯಯನಗಳು ಈ ಆರೋಪವನ್ನು ತಳ್ಳಿಹಾಕುತ್ತದೆ. ಆದರೆ, ತಜ್ಞರ ಪ್ರಕಾರ, ಪರಿಸರದಲ್ಲಿನ ಬದಲಾವಣೆಗಳು ಕೀಲು ನೋವಿಗೆ ಪ್ರಮುಖ ಕಾರಣವಾಗಿದೆ.

ಮಳೆಗಾಲದಲ್ಲಿ ಪರಿಸರದಲ್ಲಿನ ವಾಯುವಿನ ಒತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿನ ಗಾಳಿಯ ಒತ್ತಡವೂ ಈ ಋತುಮಾನದಲ್ಲಿ ಕಡಿಮೆಯಾಗುತ್ತದೆ. ಫಲಿತಾಂಶವಾಗಿ ಕೀಲುಗಳ ಸುತ್ತಲು ಇರುವ ಸ್ನಾಯು, ಅಸ್ಥಿರಜ್ಜು ಮತ್ತು ಇನ್ನಿತರೆ ಟಿಶ್ಯೂಗಳ ಮೇಲೆ ಒತ್ತಡ ಬೀಳುತ್ತದೆ. ಇದು ಕೀಲು ನೋವಿಗೆ ಕಾರಣವಾಗುತ್ತದೆ. ಸಂಧಿವಾತದೊಂದಿಗೆ ಬಳಲುತ್ತಿರುವ ಮಂದಿ ಅಥವಾ ಇತರೆ ದೀರ್ಘ ನೋವಿನ ಅನುಭವ ಹೊಂದಿರುವವರು ಇದರಿಂದ ಕಿರಿಕಿರಿ ಅನುಭವಿಸುತ್ತಾರೆ. ವಾತಾವರಣ ಸರಿ ಹೋದಂತೆ ಗಾಳಿಯ ಒತ್ತಡವೂ ಹೊಂದಾಣಿಕೆಯಾಗುತ್ತದೆ. ಇದರಿಂದ ನೋವು ಕೂಡ ಕಡಿಮೆಯಾಗುತ್ತದೆ. ಕೀಲು ನೋವಿಗೆ ಇದು ಮಾತ್ರವಲ್ಲದೇ, ಇನ್ನಿತರೆ ಕಾರಣಗಳು ಸಹ ಇವೆ.

ಮಳೆ ವಾತಾವರಣದಿಂದ ಮನೆಯಿಂದ ಹೊರ ಹೋಗಲು ಸಾಧ್ಯವಾಗುವುದಿಲ್ಲ. ಇದರಿಂದ ಮನೆಯಲ್ಲಿಯೇ ದೀರ್ಘಕಾಲ ಇರಬೇಕಾಗುತ್ತದೆ. ಮನೆಯಲ್ಲೇ ದೀರ್ಘಕಾಲ ಕುಳಿತಿರುವ ಕಾರಣ ಸ್ನಾಯು ಮತ್ತು ಕೀಲುಗಳು ಜಡತ್ವಗೊಂಡು ನೋವು ಹೆಚ್ಚುತ್ತದೆ.

ಮೋಡ ಕವಿದ ವಾತಾವರಣದಿಂದ ನಿಮ್ಮ ಮನಸ್ಥಿತಿ ಕೂಡ ಬದಲಾಗಬಹುದು. ಇದರಿಂದ ನಿಮ್ಮ ಗಮನ ನೋವಿನಂತಹ ನಕಾರಾತ್ಮಕ ಅಂಶಗಳಿಗೆ ಹೆಚ್ಚು ಹೋಗುತ್ತದೆ. ನೋವಿನ ಬಗ್ಗೆ ಹೆಚ್ಚು ಯೋಚಿಸಿದಂತೆ ಅದು ಮತ್ತಷ್ಟು ಕೆಟ್ಟದಾಗಬಹುದು.

ಅನೇಕ ಮಂದಿಗೆ ಮಳೆ ಬಂದರೆ ನೋವು ಹೆಚ್ಚಿದಂತೆ ಎಂಬ ಅಂಶ ತಲೆಯಲ್ಲಿ ಹೊಕ್ಕಿರುತ್ತದೆ. ಅವರ ಮನಸ್ಥಿತಿ ಅನುಸಾರವಾಗಿ ಕೂಡ ಅನೇಕ ಬಾರಿ ನೋವು ಹೆಚ್ಚುತ್ತದೆ.

ನೋವು ಕಡಿಮೆ ಮಾಡುವುದು ಹೇಗೆ? ಸಂಶೋಧನೆಗಳು ಮಳೆಗಾಲದಲ್ಲಿ ಕೀಲು ನೋವು ಹೆಚ್ಚಿಸುತ್ತದೆ ಎಂಬುದನ್ನು ಸಾಬೀತು ಮಾಡಲಿ, ಬಿಡಲಿ, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಮುಖ್ಯವಾಗುತ್ತದೆ. ಹವಾಮಾನ ಬದಲಾಗುತ್ತಿದ್ದಂತೆ ಈ ಬಗ್ಗೆ ಕ್ರಮವಹಿಸಿ.

ಸ್ನಾಯು ಮತ್ತು ಮೂಳೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನಿಯಮಿತವಾಗಿ ವ್ಯಾಯಾಮದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

ನಡೆದಾಡುವುದಕ್ಕಿಂತ ಒಟ್ಟಿಗೆ ಕುಳಿತುಕೊಳ್ಳುವುದು ಉತ್ತಮ. ನೀವು ಹೊರಗೆ ಹೋಗಲು ಸಾಧ್ಯವಾಗದೇ ಇದ್ದರೆ, ಮನೆಯ ಒಳಗಡೆಯೇ ಓಡಾಡಿ. ಟ್ರೆಡ್​ ಮಿಲ್​ನಲ್ಲಿ ವಾಕಿಂಗ್​ ಮಾಡುವುದು ಉತ್ತಮವಾಗಿರಲಿದೆ.

ತೂಕ ಹೆಚ್ಚಳ ಕೂಡ ಕೀಲು, ಸಂಧಿಗಳ ಮೇಲೆ ಒತ್ತಡ ಹೆಚ್ಚಾಗಿ ನೋವಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆ ತೂಕವನ್ನು ಕಡಿಮೆ ಮಾಡಿ. ಸಾಮಾನ್ಯ ತೂಕವನ್ನು ನೀವು ಹೊಂದಿದ್ದರೆ, ಅದನ್ನು ಹೆಚ್ಚಿಸಿ.

ಶಾಖ ಕೂಡ ಅನೇಕ ಬಾರಿ ನೋವಿನ ಉಪಶಮನ ಮಾಡುತ್ತದೆ. ಈ ಹಿನ್ನೆಲೆ ನೋವು ಇರುವ ಪ್ರದೇಶದಲ್ಲಿ ಬಿಸಿ ನೀರನ್ನು ಹಾಕಿಕೊಳ್ಳುವುದು ಉತ್ತಮ ಮಾರ್ಗವಾಗಿರಲಿದೆ. ಅಥವಾ ಆ ಪ್ರದೇಶದಲ್ಲಿ ಬಿಸಿ ನೀರಿನಲ್ಲಿ ಮುಳುಗಿ ಏಳಿಸಿದ ಟವೆಲ್​ ಅನ್ನು ಅನ್ನು ಇಡುವುದು ಆರಾಮದಾಯವಾಗಬಹುದು. ಸಾಧ್ಯವಾದರೆ, ಹೀಟಿಂಗ್​ ಪಾಡ್ಸ್​ ಅನ್ನು ಬಳಸಬಹುದು. ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ನೋವು ಕಡಿಮೆ ಮಾಡಲಿದೆ.

ಹೊಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ, ಕೀಲುಗಳು ಸರಿಯಾಗಿ ಚಲಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಮಳೆಗಾಲದಲ್ಲೂ ಸಾಕಷ್ಟು ಪ್ರಮಾಣದ ನೀರು ಸೇವಿಸುವುದು ಉತ್ತಮ.


Share:

More Posts

Category

Send Us A Message

Related Posts

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »