TOP STORIES:

ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಸಾದಿಸಬಹುದು ಅನ್ನುದಕ್ಕೆ ಉದಾಹರಣೆ ” ಆರ್ ಜೆ ರಶ್ಮಿ ಉಳ್ಳಾಲ್ ”


ತೆರೆ ಮರೆಯ ಹಿಂದೆ ಮನಸ್ಸಿಗೆ ಹಿತ ನೀಡುವ ಮಾತುಗಳು, ಮತ್ತೊಂದು ಕಡೆ ಪಟ ಪಟ ಮಾತನಾಡುವ ಕಲೆ, ಮಾತಿನಿಂದಲೇ ಜನರ ಮನಸ್ಸನ್ನು ಗೆದ್ದಿರುವ ತುಳುನಾಡಿನ ಪ್ರತಿಭೆ ಆರ್ ಜೆ ರಶ್ಮಿ ಉಳ್ಳಾಲ್. ಪರಿಸರ ಕಾಳಜಿ ಹಾಗು ಸಾಮಾಜಿಕ ಕಾರ್ಯಕರ್ತರಾಗಿ ಅವರದೇ ಆದ ಅಭಿಮಾನಿ ಬಳಗವೇ ಇದೆ.

ಮಂಗಳೂರಿನ ಉಳ್ಳಾಲದ ಯು ಎ ಪ್ರೇಮನಾಥ್ ಮತ್ತು ಶ್ರೀಮತಿ ಪ್ರಮೀಳಾ ದಂಪತಿಗಳ ಮುದ್ದಿನ ಮಗಳು.

ಬಾಲ್ಯದಿಂದಲೂ ರೇಡಿಯೋ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ . ವಿದ್ಯಾಭ್ಯಾಸ ಮಾಡುತ್ತಿರುವಾಗಲೆ ಸಾರಂಗ್ 107.8 ಎಫ್. ಎಮ್ ಆರ್.ಜೆ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಮಂಗಳೂರಿನ ಆಕಾಶವಾಣಿಯಲ್ಲಿ “ಯುವವಾಣಿ” ಶೀರ್ಷಿಕೆಯಡಿ ಜನರಿಗೆ ಸ್ಫೂರ್ತಿ ನೀಡಿದ ಇವರು ಅನೇಕ ರೇಡಿಯೋ ಕಾರ್ಯ ಕ್ರಮ ನಡೆಸಿಕೊಟ್ಟಿದ್ದಾರೆ.


ಪದವಿಯಲ್ಲಿ ಉತ್ತಮ ದರ್ಜೆಯ ಅಂಕ ಪಡೆದು ಎಮ್. ಎನ್. ಸಿ ಕಂಪನಿಯಲ್ಲಿ ಎಕ್ಸಿಕ್ಯೂಟರ್ ಮತ್ತು ಕೋಟಕ್ ಮಹೇಂದ್ರ ಬ್ಯಾಂಕ್ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ,ರೆಡ್ ಎಫ್. ಎಮ್ ಅಲ್ಲಿ ಆರ್.ಜೆ ಆಗಿ ಕಾರ್ಯನಿರ್ವಹಿಸಿದ್ದಾರೆ

ಮಕ್ಕಳ ಮೌಲ್ಯದ ಬಗ್ಗೆ ಅರಿವು ಮೂಡಿಸಲು ದಿವ್ಯಾಸ್ ಯುವ ಸೇವಾ ಆರ್ಗನೈಜೇಷನ್ ಎನ್ .ಜಿ .ಒ ದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಕಾರ್ಯಕ್ರಮ ನಡೆಸಿಕೊಟ್ಟು ಪ್ರಶಂಸೆ ಪಡೆದವರು .ಇವರು ಸಮಾಜ ಸೇವೆ ಮಾಡುವ ಸೇವಾ ಸೇನಾನಿಯೂ ಹೌದು. ವೃದ್ಧರ ಮತ್ತು ಅನಾಥ ಆಶ್ರಮದ ಮಕ್ಕಳಿಗೆ ಮೌಲ್ಯ ಶಿಕ್ಷಣದ ಅರಿವು ಮೂಡಿಸುದು ಮತ್ತು ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿರುವ ಕರುಣಾಮಯಿ.

ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಸಾದಿಸಬಹುದು ಅನ್ನುದಕ್ಕೆ ಉದಾಹರಣೆ ರಶ್ಮಿ ಉಳ್ಳಾಲ್.

ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಸಂಘಸಂಸ್ಥೆಯಿಂದ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಉದಯ ಟಿವಿ ಸವಾಲಿಗೆ ಸೈ ಕಾರ್ಯಕ್ರಮದಲ್ಲಿ ಮಂಗಳೂರನ್ನು ಪ್ರತಿನಿಧಿಸಿ ಮಾತನಾಡಿದ ಇವರಿಗೆ ತುಳುಚಿತ್ರದ ವಾಯ್ಸ್ ಡಬ್ಬಿಂಗ್ ಮತ್ತು ಜಾಹಿರಾತಿಗೆ ವಾಯ್ಸ್ ನೀಡಿದ ಶ್ರೇಯ ಲಭಿಸುತ್ತದೆ . ಬಹಳಷ್ಟು ಸಿನಿಮಾ ಹಾಗು ಸಂಗೀತ ಕ್ಷೇತ್ರದ ದಿಗಜ್ಜರ ಸಂದರ್ಶನ ನಡೆಸಿದ್ದು ಪ್ರಕೃತಿ ಪ್ರೇಮಿಯಾಗಿ 1000 ಕ್ಕೂ ಸೀಡ್ಬೂಲ್ ತಯಾರಿಸಿ, ಸೀಡ್ಬೂಲ್ ಬೀಜವನ್ನು ಹಾಕಿ ಹಸಿರು ಉತ್ಪತ್ತಿ ಮಾಡುವ ಅಭಿಯಾನವನ್ನು ನಡೆಸಿದ ಇವರು ,ಮದುವೆಗೆ ಬಂದ ಎಲ್ಲಾ ಅತಿಥಿಗಳಿಗೆ ಗಿಡವನ್ನು ಉಡುಗೊರೆಯಾಗಿ ನೀಡಿದ್ದು ಜನ ಮೆಚ್ಚುಗೆ ಗಳಿಸಿದ್ದಾರೆ. ತನ್ನದೇ ಆದ ಯೌಟ್ಯೂಬ್ ಚಾನೆಲ್ “ಆರ್ ಜೆ ರಶ್ಮಿ ಉಳ್ಳಾಲ್” ಆರಂಭಿಸಿದ್ದು ಜನರಿಗೆ ಪ್ರೇರಣೆ ನೀಡುವ ಕಾರ್ಯವನ್ನು ನಡೆಸುತ್ತಿದ್ದಾರೆ.

ಈದೀಗ “ದಿವ್ಯಾಸ್ ಅನ್ನಪೂರ್ಣ ” ಯೋಜನೆಯ ಪ್ರಕಾರ ಮಂಗಳೂರಿನ,ಫಳ್ನೀರ್,ಕಂಕನಾಡಿ ,ಸ್ಟೇಟ್ ಬ್ಯಾಂಕ್,ಹಂಪನ್ಕಟ್ಟ ಸೇರಿದಂತೆ ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಮೂಕ ಪ್ರಾಣಿ ಹಾಗು ಬಡ ಜನರಿಗೆ ರಾತ್ರಿ ಊಟ ನೀಡುವ ಯೋಜನೆ ಮಾಡಿದ್ದು ಬಹುತೇಕ ಯುವ ಜನರಿಗೆ, ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವ ಪ್ರೇರಣೆ ನೀಡುತ್ತಾ ಇದ್ದಾರೆ ದಿವ್ಯಾಸ್ ತಂಡ.

ಮಂಗಳೂರು ಉಳ್ಳಾಲ ಸೇರಿದಂತೆ ಬಹಳಸ್ಟು ಮುಕಪ್ರಾಣಿ ಹಾಗು ಜನರಿಗೆ ಲಾಕ್ ಡೌನ್ ಸಂದರ್ಭ ದಲ್ಲಿ ಊಟದ ಕಿಟ್ ಹಾಗು ಸರಕಾರಿ ಶಾಲೆಗೆ ಪುಸ್ತಕ , ಕೋವಿಡ್ ಥರ್ಮೋಮೀಟರ್ ಸಿಗುವಂತೆ ಆರ್ಥಿಕ ಸಹಾಯ ಮಾಡಿರುತ್ತಾರೆ.


ಜನರು ಇಂತಹ ಕಾರ್ಯದಿಂದ ಪ್ರೇರಣೆ ಪಡೆದು ತಾನು ಕೂಡ ಇಂತಹ ಕೆಲಸಗಳನ್ನು ಮಾಡಿ ಇನ್ನೊಬ್ಬರಿಗೆ ಉಪಕಾರಿಯಾಗಬೇಕೆಂಬ ಅರಿವನ್ನು ಮೂಡಿಸಲು ಇಂತಹ ಸಮಾಜಮುಖಿ ಸೇವೆಗಳನ್ನು ಮುಂದುವರಿಸಬೇಕು ಎನ್ನುವುದು ರಶ್ಮಿಯ ಉದ್ದೇಶ.

ಇವರು ಪ್ರಸ್ತುತ ಮ್ಯಾನೇಜರ್ ಹುದ್ದೆಯಲ್ಲಿ ಇದ್ದು. ಇವರಿಗೆ ಇನ್ನಷ್ಟು ಅನೇಕ ಅವಕಾಶಗಳು ಒದಗಿ ಬರಲಿ,ಇನ್ನಷ್ಟು ಸಮಾಜ ಸೇವೆಮಾಡಲು ಆ ಭಗವಂತ ಶಕ್ತಿ, ಆರೋಗ್ಯ ಕೊಡಲಿ ಇನ್ನಷ್ಟು ಮಿಂಚಲಿ ಎಂದು ಹಾರೈಸುವ.

ಬರಹ: ✒️ ಪ್ರಶಾಂತ್ ಅಂಚನ್ ಮಸ್ಕತ್ತ್


Related Posts

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »