TOP STORIES:

FOLLOW US

ಮುಂಬೈಗರ ಮನಗೆದ್ದ ಗೋವಿಂದ ಬಾಬು ಪೂಜಾರಿ


ಕರುನಾಡ ಕರುಣೆಯ ಕಾಮಧೇನು ಹಾಗೂ ನನ್ನ ಆತ್ಮೀಯರಾದ ಶ್ರೀ ಗೋವಿಂದ ಬಾಬು ಪೂಜಾರಿಯವರೇ,ನಿನ್ನೆ ಮುಂಬೈ ಬಿಲ್ಲವಭವನದಲ್ಲಿ ನಿಮಗೆ ಆಯೋಜಿಸಿದ ಗೌರವ ಪೂರ್ಣ ಸನ್ಮಾನಕ್ಕೆ ನಾವೆಲ್ಲ ಸಂಭ್ರಮ ಪಟ್ಟಿದ್ದೇವೆ.

ಹೌದು,

ನಿನ್ನೆ ನಾನಲ್ಲಿರಬೇಕಿತ್ತು

ಆದರೆ ಇರಲಾಗಲಿಲ್ಲ.

ನಿಮ್ಮ ಜೊತೆಗೆ ಮಾತಾಡುವ,ನಿಮ್ಮ ಮಾತಿಗೆ ಕಿವಿಯಾಗುವ ಅವಕಾಶಕ್ಕೆ ಅನಾನುಕೂಲ ಅಡ್ಡಿ ಆಯಿತು.ಮುಂಬೈಯಿಂದ ದೂರದಗುಜರಾತ್ ಅಹಮದ್ ನಗರಕ್ಕೆ ಬಂದಿದ್ದೆ.ಇಲ್ಲಿ ಕೊರೆಯುವ ಹಿಮದ ಚಳಿ.ಅದರ ತೀವ್ರತೆಗೆ ಜ್ವರ ಬಿಟ್ಟು ಹೋಗಲಾರೆ ಅನ್ನುತ್ತಿದೆ.

ನಿಮಗೆ ಸಿಗದೆ ಇದ್ದುದಕ್ಕೆ ಬೇಸರವಿದೆ.

ಇಂತಹ ಕಾರ್ಯಕ್ರಮಗಳಿಗೆ ಕಾರಣ ಹೇಳಿ ತಪ್ಪಿಸಿಕೊಳ್ಳಬಾರದು.

ಗೋವಿಂದ್ ಅಣ್ಣ ನಿನ್ನೆ ನಿಮ್ಮ ಸನ್ಮಾನ ವಾಚನದ ವೇಳೆ ಜನರ ಕಿವಿಗಡಚಿಕ್ಕುವ ಚಪ್ಪಾಳೆಗೆ ಇಡೀಯ ಸಭಾಂಗಣ ಸಾಕ್ಷಿಆಯಿತು.ನೀವು ಬದುಕಿನ ಹಾದಿಯಲ್ಲಿ ನಡೆದು ಬಂದ ಗಳಿಗೆಗಳ ಒಂದೊಂದು ಹೆಜ್ಜೆಗಳು ಅಲ್ಲಿ ಅನಾವರಣವಾಯಿತು.

ಹೊತ್ತಿನಲ್ಲಿಯೂ

ನಿಮ್ಮ ಮುಖದಲ್ಲಿ ಇದ್ದದ್ದು  ಮಂದಹಾಸ ಬಿಟ್ಟರೇ,ಅಹಂಕಾರದ ಲವಲೇಶವೂ ಇರಲಿಲ್ಲ.

ನನ್ನ ಅನೇಕ ಸ್ನೇಹಿತರು ಇವತ್ತು ಕಾಲ್ ಮಾಡಿ ನಿಮ್ಮ ಸರಳತೆಯ ಬಗ್ಗೆ ಸೌಜನ್ಯತೆಯ ಬಗ್ಗೆ ಮಾತನಾಡಿದರು.

ಬದುಕಿದರೆ ನಿಮ್ಮಂತೆ ಬದುಕಬೇಕು ಅಂದರು.ಅವರೆಲ್ಲರಿಗೂ ನೀವು ಸ್ಫೂರ್ತಿ ಆದಿರಿ.ಅನೇಕರನ್ನು ಕರೆದು ನಿಮ್ಮೊಂದಿಗೆ ನಾನಿದ್ದೇನೆಅನ್ನುವ ದೈರ್ಯದ ಮಾತುಗಳನ್ನು ಆಡಿದ್ದು ತಿಳಿಯಿತು.ಅಂತಹ ಸಾಂತ್ವನ ನಿಮ್ಮಂತವರು ಮಾತ್ರ ಕೊಡಲು ಸಾಧ್ಯ ಗೋವಿಂದ ಅಣ್ಣ.

ಹಣ ಗಳಿಸುವುದು,ಅಂತಸ್ತನ್ನು ಸಂಪಾದಿಸುವುದು ಬಂಗ್ಲೆ ಕಾರುಗಳನ್ನು ಖರೀದಿಸುವುದು ವಿಶೇಷವಲ್ಲ.ಆದರೆ ಜನರ ಪ್ರೀತಿಯನ್ನುಗಳಿಸುವುದು ಅದರಲ್ಲೂ ಅನ್ಯ ರಾಜ್ಯದಲ್ಲಿ ಇಲ್ಲಿನವರ ಅಭಿಮಾನಕ್ಕೆ ಪಾತ್ರರಾಗುವುದಿದೆಯಲ್ಲಾ ಅದು ಸರ್ವಶ್ರೇಷ್ಠ.ಮಾನವೀಯತೆಮತ್ತು ಪ್ರಾಮಾಣಿಕತೆ ನಿಮ್ಮ ಮೂಲ ಗುಣಗಳು.

ಅದನ್ನು ನಿನ್ನೆ ಮುಂಬೈಯ ಜನ ಗುರುತಿಸಿದ್ದಾರೆ.

ನಿಮ್ಮನ್ನು ಬೇಟಿಯಾಗದೆ ಇದ್ದುದಕ್ಕೆ ಕ್ಷಮೆ ಕೋರುತ್ತಾ,ನಾನಿದ್ದಲ್ಲಿಗೆ ಬಂದಾಗ ನಾನು ನಿಮಗೆ ಸಿಗಲಿಲ್ಲ.ಆದರೆ ಕೆಲವೇ ಕೆಲವುದಿನಗಳಲ್ಲಿ ನಾನು ನೀವು ಇದ್ದಲ್ಲಿಗೆ ಅಂದರೇ ಬೆಂಗಳೂರಿಗೆ ಬಂದು ನಿಮ್ಮ ಜೊತೆಗೊಂದಿಷ್ಟು ಹೊತ್ತು ಇದ್ದು ಬರಲುತೀರ್ಮಾನಿಸಿದ್ದೇನೆ….

ನಿಮ್ಮನ್ನು ಸನ್ಮಾನಿಸಿದ ಬಿಲ್ಲವರ ಅಸೋಸಿಯೇಷನ್ ನನ್ನೆಲ್ಲ ಆತ್ಮೀಯ ಬಳಗಕ್ಕೆ ವಂದಿಸುತ್ತಾ,ನಿಮ್ಮ ಪ್ರೀತಿಗೆ ತಲೆಬಾಗುತ್ತಾ,

ನಿಮ್ಮ ಸಲಹೆ ಸಹಕಾರ ಯಾವತ್ತೂ ಹೀಗೆಯೇ ಇರಲಿ ಎಂದು ಆಶಿಸುವ

ಇಂತೀ ನಿಮ್ಮವ,

✍️ಉದಯ್ ಕುಂದಾಪುರ

             (ಮುಂಬೈ)


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »