TOP STORIES:

ರಂಜು ತುಳುರಂಗ ಪ್ರೇಮಿ‌ ರಂಜಿತ್ ಕಕ್ಕಿಂಜೆ


ತುಳುನಾಡಿನ ಕಲಾವಿದರ ಧ್ವನಿಯಾಗಿ,ಪ್ರೋತ್ಸಾಹದ ಗರಿಯಾಗಿ,ಕಲಾ‌ ಪೋಷಕನಾಗಿ ಎಲ್ಲರ ಬಾಯಲ್ಲೂ ನಲಿದಾಡುತ್ತಿರುವ ಆ ಒಂದು ಹೆಸರು ರಂಜು. ಓರ್ವ ಕಲಾವಿದನಿಗೆ ತಾನು ಬೆಳೆಯುತ್ತಾ ಇತರರನ್ನು ಬೆಳೆಸುವ ಗುಣವಿರಬೇಕಂತೆ.ಇನ್ನೊಬ್ಬರ ಪ್ರತಿಭೆಯಲ್ಲಿ ಮನೋಲ್ಲಾಸವನ್ನು ಪಡೆಯಬೇಕಂತೆ.

ಇಂತಹ ನೈಜ ಪಾರದರ್ಶಕ ಗುಣವಿರುವಂತಹ ವ್ಯಕ್ತಿಯೇ ರಂಜಿತ್ ಕಕ್ಕಿಂಜೆ.ಅದರಲ್ಲಿಯೂ ತಾನು ನಿಂತ ನೆಲೆಯಾದ ತುಳುನಾಡಿನ ಪ್ರತಿಭೆಗಳು ಎತ್ತರೆತ್ತರ ಬೆಳೆಯಬೇಕು ದೇಶದೆಲ್ಲೆಡೆ ಪಸರಿಸಬೇಕೆಂಬುದೇ ಇವರ ಮುಖ್ಯ ಉದ್ದೇಶವಾಗಿದೆ.ಈ ಅಸಮಾನ್ಯ ವ್ಯಕ್ತಿಯ ಬಗ್ಗೆ ತಿಳಿಯೋಣ.

ಬರಹ-ತೃಪ್ತಿ.ಜಿ.ಕುಂಪಲ.

ರಂಜಿತ್ ಕಕ್ಕಿಂಜೆ ಇವರು ವಸಂತ್ ಪೂಜಾರಿ ಹಾಗೂ ಉಷಾ ದಂಪತಿಯವರ ಸುಪುತ್ರ.ಇವರು ಗುರುದೇವ ಪದವಿಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ ಎಸ್.ಡಿ.ಎಂ.ಐಟಿಸಿ ವೇಣೂರಿನಲ್ಲಿ‌ ಐಟಿಐ ಮುಗಿಸಿ,ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಪ್ರಸ್ತುತ ಸೌದಿ ಅರೇಬಿಯಾದ ಅಬ್ಹಾ ಏರ್ಪೋರ್ಟಿನಲ್ಲಿ ಗ್ರೌಂಡ್ ಸಪೋರ್ಟ್ ಸರ್ವಿಸಸ್ ಮೈಂಟೇನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಕಲಾಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಲಾವಿದನಾಗಿ,ಭಜಕನಾಗಿ,ನಾಯಕನಾಗಿ ಮುಂದುವರಿಯುತ್ತಿರುವ ಇವರು ಯುವ ಸಾಹಿತಿಯೂ ಹೌದು.ಒಬ್ಬ ಕಲಾವಿದನ ಸಾಧನೆಯನ್ನು ಎಳೆ ಎಳೆಯಾಗಿ ತನ್ನ ಬರವಣಿಗಯಲ್ಲಿ ಅಲಂಕರಿಸಿ ಸಾಧಕನ ಸಾಧನೆಗೆ ತನ್ನ ಲೇಖನಿಯ ಮುಖಾಂತರ ಜೀವ ತುಂಬುವ ಕಲಾ ಪೋಷಕರು ಇವರು.

ಭಜನೆಯೆಂದರೆ ಇವರಿಗೆ ಅಪಾರ ಪ್ರೀತಿ.ಬಾಲ್ಯದಲ್ಲೇ ಭಜನೆ ಮಾಡುತ್ತಾ ಬೆಳೆದವರು ಇವರು.ತನ್ನ ಊರಿನವರಾದ ಕಮಲಾಕ್ಷ ಪೂಜಾರಿಯವರ ಪ್ರೋತ್ಸಾಹದಿಂದ “ಶ್ರೀ ಶಬರಿ ಭಜನಾ ಮಂಡಳಿ” ಯನ್ನು ತೋಟತ್ತಾಡಿಯಲ್ಲಿ ಕಟ್ಟಿದರು.ನಂತರ ವೃತ್ತಿಯನ್ನು ಹರಸಿ ಬೆಂಗಳೂರಿಗೆ ನಡೆದವರು ತನ್ನ ಕಲೆಯಲ್ಲಿನ ಉತ್ಸಾಹವನ್ನು ಬಿಡದೆ ಬೆಂಗಳೂರಿನಲ್ಲಿಯೂ “ಮಕರ ಶ್ರೀ ಭಜನಾ ಮಂಡಳಿ” ಯನ್ನು ಹೊಸಳ್ಳಿಯ ಬಾಲಗಂಗಾಧೇಶ್ವರ ದೇವಸ್ಥಾನದಲ್ಲಿ ರಚಿಸಿದರು.ಹೀಗೇ ಕಲಾ ಆಸಕ್ತಿಯಿಂದ ಕಲಾಮಾತೆಯ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಧು ಬಂಗೇರ ಕಲ್ಲಡ್ಕ ಹಾಗೂ ಕಿಶನ್ ಪೂಜಾರಿ ಯವರೊಂದಿಗೆ ಕೂಡಿ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ(ರಿ) ಬೆಂಗಳೂರು ಘಟಕವನ್ನು ಸ್ಥಾಪಿಸಲು ಶ್ರಮಿಸಿದರು.ಈ ಸಂಸ್ಥೆಯ ಮೊದಲ ವರ್ಷಾವಧಿಯಲ್ಲಿ ಸಾಂಸ್ಕೃತಿಕ ನಿರ್ದೇಶಕರಾಗಿ ಕಲಾ ಸೇವೆಯನ್ನು ಸಲ್ಲಿಸಿದರು.

ರಂಗದಲ್ಲಿ ಸಾಹಿತಿಯಾಗಿ ಬರವಣಿಗೆಯ ಮಾಲಾರ್ಪಣೆಯನ್ನು ಗೈಯುತ್ತಾ ಇವರು ಶಬರಿ ಭಜನಾ ತಂಡದ ಯುವಕರಿಗೆ ಅಭಿನಯವನ್ನು ಕಲಿಸಿ ಕಿರಣ್ ಕಕ್ಕಿಂಜೆಯವರ ಸಹಕಾರದಿಂದ “ಬುದ್ಧಿ ಬನ್ನಗ” ಎಂಬ ತುಳು ನಾಟಕದ ಸಾಹಿತ್ಯವನ್ನು ಸ್ವತಃ ತಾನೇ ಬರೆದು ನಿರ್ದೇಶಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು.ತದನಂತರ “ಗೌಜಿ ಗಮ್ಮತ್ತ್”, ” ಎನ್ನ ತಂಗಡಿ”, “ಮಲ್ಲಸ್ತಿಕೆದ ಮರ್ಮಾಲ್”,” ಒಂಜೆಕ್ ಒಂಜರೆ ಮಲ್ಪೊರ್ಚಿ” ಮೊದಲಾದ ನಾಟಕಗಳಿಗೆ ಸಾಹಿತ್ಯ ಬರೆದು ನಿರ್ದೇಶಿಸಿ ನಟಿಸಿರುವ ಹೆಗ್ಗಳಿಕೆ ಇವರದ್ದು.ಇವರು “ಗೋಲ್ಮಾಲ್” ಎಂಬ ತುಳು ಚಲನಚಿತ್ರದಲ್ಲಿಯೂ ನಟಿಸಿರುವರು. ತನ್ನ ವೃತ್ತಿಜೀವನದಲ್ಲೂ ತುಳುನಾಡಿನ ಯುವ ಪ್ರತಿಭೆಗಳಿಗೆ ನಿರಂತರ ನಿಸ್ವಾರ್ಥ ಸೇವೆಯಲ್ಲಿ ಇವರು “ಕಲಾವಿದೆರೆ ಕಡಲ್” ಎಂಬ ವಾಟ್ಸ್ ಆ್ಯಪ್ ಗ್ರೂಪ್ ನಿರ್ಮಿಸಿ ತುಳುನಾಡ ಪ್ರತಿಭೆಗಳಿಗೆ ತನ್ನ ಬರವಣಿಗೆಯ ಮೂಲಕ ಪ್ರೋತ್ಸಾಹವನ್ನು ನೀಡುತ್ತಾ,ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರ ನಿಸ್ವಾರ್ಥ ಕಲಾ ಸೇವೆಗೊಂದು ಗುರುತು ಎಂಬಂತೆ ಪ್ರಶಸ್ತಿ,ಪುರಸ್ಕಾರಗಳು ಇವರಿಗೆ ದೊರಕದೆ ಉಳಿದಿಲ್ಲ.ಯುವವಾಹಿನಿ(ರಿ).ಬೆಂಗಳೂರು ಘಟಕದ ವತಿಯಿಂದ ಸನ್ಮಾನ,ಮಡಿಲು ಸಂಸ್ಥೆಯಿಂದ “ಮಡಿಲು” ಪುರಸ್ಕಾರ,”ತೆಲಿಕೆದ ತೆನಾಲಿ” ಕಾರ್ಲ ತಂಡದಿಂದ “ಕಲಾವಿದರ ಕಣ್ಮಣಿ” ಎಂಬ ಬಿರುದು ನೀಡಿ ಗೌರವಿಸಲಾಗಿದೆ.ನಿಜವಾಗಿಯೂ ಇವರು ಕಲಾವಿದರ ಕಣ್ಮಣಿಯೆ ಹೌದು.ತೆರೆಮರೆಯಲ್ಲಿ ಅಡಗಿರುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ರಂಜುರವರಂತಹ ಕಲಾ ಪೋಷಕ ಹುಟ್ಟಲೇಬೇಕು.ಕಲಾವಿದನು ಅರಳಲು ಪ್ರಶಂಸೆಗಿಂತ ಇತರರ ಪ್ರೋತ್ಸಾಹದಲ್ಲಿ ಖುಷಿಪಟ್ಟು ತ‌ನಗೆ ತಾನು ಪ್ರಶಂಸೆಯನ್ನು ಪಡೆವ ನಿಸ್ವಾರ್ಥ ಕಲಾಸೇವಕನ ಅಡಿಯಲ್ಲಿ ಮತ್ತಷ್ಟು ಪ್ರತಿಭೆಗಳು ಚಿಗುರಲಿ.ನಾಟಕ ಪ್ರೇಮಿಗಳ ಮನರಂಜಿಸಲು “ರಂಜು” ರವರಿಗೆ ಕಲಾಮಾತೆಯ ಆಶೀರ್ವಾದ ಸದಾ ಇರಲಿ. ದೇವರು ಒಳಿತನ್ನು ಕರುಣಿಸಲಿ.


Related Posts

ಬಿಲ್ಲವರ ಉನ್ನತಿಯಲ್ಲಿ ನಾರಾಯಣ ಗುರುಗಳ ಪಾತ್ರ ಗುರುತರವಾದುದು ಡಾ.ಮುಕೇಶ್ ಕುಮಾರ್


Share        ಮುಂಬಯಿ ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು.


Read More »

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »