TOP STORIES:

ರಂಜು ತುಳುರಂಗ ಪ್ರೇಮಿ‌ ರಂಜಿತ್ ಕಕ್ಕಿಂಜೆ


ತುಳುನಾಡಿನ ಕಲಾವಿದರ ಧ್ವನಿಯಾಗಿ,ಪ್ರೋತ್ಸಾಹದ ಗರಿಯಾಗಿ,ಕಲಾ‌ ಪೋಷಕನಾಗಿ ಎಲ್ಲರ ಬಾಯಲ್ಲೂ ನಲಿದಾಡುತ್ತಿರುವ ಆ ಒಂದು ಹೆಸರು ರಂಜು. ಓರ್ವ ಕಲಾವಿದನಿಗೆ ತಾನು ಬೆಳೆಯುತ್ತಾ ಇತರರನ್ನು ಬೆಳೆಸುವ ಗುಣವಿರಬೇಕಂತೆ.ಇನ್ನೊಬ್ಬರ ಪ್ರತಿಭೆಯಲ್ಲಿ ಮನೋಲ್ಲಾಸವನ್ನು ಪಡೆಯಬೇಕಂತೆ.

ಇಂತಹ ನೈಜ ಪಾರದರ್ಶಕ ಗುಣವಿರುವಂತಹ ವ್ಯಕ್ತಿಯೇ ರಂಜಿತ್ ಕಕ್ಕಿಂಜೆ.ಅದರಲ್ಲಿಯೂ ತಾನು ನಿಂತ ನೆಲೆಯಾದ ತುಳುನಾಡಿನ ಪ್ರತಿಭೆಗಳು ಎತ್ತರೆತ್ತರ ಬೆಳೆಯಬೇಕು ದೇಶದೆಲ್ಲೆಡೆ ಪಸರಿಸಬೇಕೆಂಬುದೇ ಇವರ ಮುಖ್ಯ ಉದ್ದೇಶವಾಗಿದೆ.ಈ ಅಸಮಾನ್ಯ ವ್ಯಕ್ತಿಯ ಬಗ್ಗೆ ತಿಳಿಯೋಣ.

ಬರಹ-ತೃಪ್ತಿ.ಜಿ.ಕುಂಪಲ.

ರಂಜಿತ್ ಕಕ್ಕಿಂಜೆ ಇವರು ವಸಂತ್ ಪೂಜಾರಿ ಹಾಗೂ ಉಷಾ ದಂಪತಿಯವರ ಸುಪುತ್ರ.ಇವರು ಗುರುದೇವ ಪದವಿಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ ಎಸ್.ಡಿ.ಎಂ.ಐಟಿಸಿ ವೇಣೂರಿನಲ್ಲಿ‌ ಐಟಿಐ ಮುಗಿಸಿ,ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಪ್ರಸ್ತುತ ಸೌದಿ ಅರೇಬಿಯಾದ ಅಬ್ಹಾ ಏರ್ಪೋರ್ಟಿನಲ್ಲಿ ಗ್ರೌಂಡ್ ಸಪೋರ್ಟ್ ಸರ್ವಿಸಸ್ ಮೈಂಟೇನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಕಲಾಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಲಾವಿದನಾಗಿ,ಭಜಕನಾಗಿ,ನಾಯಕನಾಗಿ ಮುಂದುವರಿಯುತ್ತಿರುವ ಇವರು ಯುವ ಸಾಹಿತಿಯೂ ಹೌದು.ಒಬ್ಬ ಕಲಾವಿದನ ಸಾಧನೆಯನ್ನು ಎಳೆ ಎಳೆಯಾಗಿ ತನ್ನ ಬರವಣಿಗಯಲ್ಲಿ ಅಲಂಕರಿಸಿ ಸಾಧಕನ ಸಾಧನೆಗೆ ತನ್ನ ಲೇಖನಿಯ ಮುಖಾಂತರ ಜೀವ ತುಂಬುವ ಕಲಾ ಪೋಷಕರು ಇವರು.

ಭಜನೆಯೆಂದರೆ ಇವರಿಗೆ ಅಪಾರ ಪ್ರೀತಿ.ಬಾಲ್ಯದಲ್ಲೇ ಭಜನೆ ಮಾಡುತ್ತಾ ಬೆಳೆದವರು ಇವರು.ತನ್ನ ಊರಿನವರಾದ ಕಮಲಾಕ್ಷ ಪೂಜಾರಿಯವರ ಪ್ರೋತ್ಸಾಹದಿಂದ “ಶ್ರೀ ಶಬರಿ ಭಜನಾ ಮಂಡಳಿ” ಯನ್ನು ತೋಟತ್ತಾಡಿಯಲ್ಲಿ ಕಟ್ಟಿದರು.ನಂತರ ವೃತ್ತಿಯನ್ನು ಹರಸಿ ಬೆಂಗಳೂರಿಗೆ ನಡೆದವರು ತನ್ನ ಕಲೆಯಲ್ಲಿನ ಉತ್ಸಾಹವನ್ನು ಬಿಡದೆ ಬೆಂಗಳೂರಿನಲ್ಲಿಯೂ “ಮಕರ ಶ್ರೀ ಭಜನಾ ಮಂಡಳಿ” ಯನ್ನು ಹೊಸಳ್ಳಿಯ ಬಾಲಗಂಗಾಧೇಶ್ವರ ದೇವಸ್ಥಾನದಲ್ಲಿ ರಚಿಸಿದರು.ಹೀಗೇ ಕಲಾ ಆಸಕ್ತಿಯಿಂದ ಕಲಾಮಾತೆಯ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಧು ಬಂಗೇರ ಕಲ್ಲಡ್ಕ ಹಾಗೂ ಕಿಶನ್ ಪೂಜಾರಿ ಯವರೊಂದಿಗೆ ಕೂಡಿ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ(ರಿ) ಬೆಂಗಳೂರು ಘಟಕವನ್ನು ಸ್ಥಾಪಿಸಲು ಶ್ರಮಿಸಿದರು.ಈ ಸಂಸ್ಥೆಯ ಮೊದಲ ವರ್ಷಾವಧಿಯಲ್ಲಿ ಸಾಂಸ್ಕೃತಿಕ ನಿರ್ದೇಶಕರಾಗಿ ಕಲಾ ಸೇವೆಯನ್ನು ಸಲ್ಲಿಸಿದರು.

ರಂಗದಲ್ಲಿ ಸಾಹಿತಿಯಾಗಿ ಬರವಣಿಗೆಯ ಮಾಲಾರ್ಪಣೆಯನ್ನು ಗೈಯುತ್ತಾ ಇವರು ಶಬರಿ ಭಜನಾ ತಂಡದ ಯುವಕರಿಗೆ ಅಭಿನಯವನ್ನು ಕಲಿಸಿ ಕಿರಣ್ ಕಕ್ಕಿಂಜೆಯವರ ಸಹಕಾರದಿಂದ “ಬುದ್ಧಿ ಬನ್ನಗ” ಎಂಬ ತುಳು ನಾಟಕದ ಸಾಹಿತ್ಯವನ್ನು ಸ್ವತಃ ತಾನೇ ಬರೆದು ನಿರ್ದೇಶಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು.ತದನಂತರ “ಗೌಜಿ ಗಮ್ಮತ್ತ್”, ” ಎನ್ನ ತಂಗಡಿ”, “ಮಲ್ಲಸ್ತಿಕೆದ ಮರ್ಮಾಲ್”,” ಒಂಜೆಕ್ ಒಂಜರೆ ಮಲ್ಪೊರ್ಚಿ” ಮೊದಲಾದ ನಾಟಕಗಳಿಗೆ ಸಾಹಿತ್ಯ ಬರೆದು ನಿರ್ದೇಶಿಸಿ ನಟಿಸಿರುವ ಹೆಗ್ಗಳಿಕೆ ಇವರದ್ದು.ಇವರು “ಗೋಲ್ಮಾಲ್” ಎಂಬ ತುಳು ಚಲನಚಿತ್ರದಲ್ಲಿಯೂ ನಟಿಸಿರುವರು. ತನ್ನ ವೃತ್ತಿಜೀವನದಲ್ಲೂ ತುಳುನಾಡಿನ ಯುವ ಪ್ರತಿಭೆಗಳಿಗೆ ನಿರಂತರ ನಿಸ್ವಾರ್ಥ ಸೇವೆಯಲ್ಲಿ ಇವರು “ಕಲಾವಿದೆರೆ ಕಡಲ್” ಎಂಬ ವಾಟ್ಸ್ ಆ್ಯಪ್ ಗ್ರೂಪ್ ನಿರ್ಮಿಸಿ ತುಳುನಾಡ ಪ್ರತಿಭೆಗಳಿಗೆ ತನ್ನ ಬರವಣಿಗೆಯ ಮೂಲಕ ಪ್ರೋತ್ಸಾಹವನ್ನು ನೀಡುತ್ತಾ,ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರ ನಿಸ್ವಾರ್ಥ ಕಲಾ ಸೇವೆಗೊಂದು ಗುರುತು ಎಂಬಂತೆ ಪ್ರಶಸ್ತಿ,ಪುರಸ್ಕಾರಗಳು ಇವರಿಗೆ ದೊರಕದೆ ಉಳಿದಿಲ್ಲ.ಯುವವಾಹಿನಿ(ರಿ).ಬೆಂಗಳೂರು ಘಟಕದ ವತಿಯಿಂದ ಸನ್ಮಾನ,ಮಡಿಲು ಸಂಸ್ಥೆಯಿಂದ “ಮಡಿಲು” ಪುರಸ್ಕಾರ,”ತೆಲಿಕೆದ ತೆನಾಲಿ” ಕಾರ್ಲ ತಂಡದಿಂದ “ಕಲಾವಿದರ ಕಣ್ಮಣಿ” ಎಂಬ ಬಿರುದು ನೀಡಿ ಗೌರವಿಸಲಾಗಿದೆ.ನಿಜವಾಗಿಯೂ ಇವರು ಕಲಾವಿದರ ಕಣ್ಮಣಿಯೆ ಹೌದು.ತೆರೆಮರೆಯಲ್ಲಿ ಅಡಗಿರುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ರಂಜುರವರಂತಹ ಕಲಾ ಪೋಷಕ ಹುಟ್ಟಲೇಬೇಕು.ಕಲಾವಿದನು ಅರಳಲು ಪ್ರಶಂಸೆಗಿಂತ ಇತರರ ಪ್ರೋತ್ಸಾಹದಲ್ಲಿ ಖುಷಿಪಟ್ಟು ತ‌ನಗೆ ತಾನು ಪ್ರಶಂಸೆಯನ್ನು ಪಡೆವ ನಿಸ್ವಾರ್ಥ ಕಲಾಸೇವಕನ ಅಡಿಯಲ್ಲಿ ಮತ್ತಷ್ಟು ಪ್ರತಿಭೆಗಳು ಚಿಗುರಲಿ.ನಾಟಕ ಪ್ರೇಮಿಗಳ ಮನರಂಜಿಸಲು “ರಂಜು” ರವರಿಗೆ ಕಲಾಮಾತೆಯ ಆಶೀರ್ವಾದ ಸದಾ ಇರಲಿ. ದೇವರು ಒಳಿತನ್ನು ಕರುಣಿಸಲಿ.


Related Posts

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »