TOP STORIES:

FOLLOW US

ರಂಜು ತುಳುರಂಗ ಪ್ರೇಮಿ‌ ರಂಜಿತ್ ಕಕ್ಕಿಂಜೆ


ತುಳುನಾಡಿನ ಕಲಾವಿದರ ಧ್ವನಿಯಾಗಿ,ಪ್ರೋತ್ಸಾಹದ ಗರಿಯಾಗಿ,ಕಲಾ‌ ಪೋಷಕನಾಗಿ ಎಲ್ಲರ ಬಾಯಲ್ಲೂ ನಲಿದಾಡುತ್ತಿರುವ ಆ ಒಂದು ಹೆಸರು ರಂಜು. ಓರ್ವ ಕಲಾವಿದನಿಗೆ ತಾನು ಬೆಳೆಯುತ್ತಾ ಇತರರನ್ನು ಬೆಳೆಸುವ ಗುಣವಿರಬೇಕಂತೆ.ಇನ್ನೊಬ್ಬರ ಪ್ರತಿಭೆಯಲ್ಲಿ ಮನೋಲ್ಲಾಸವನ್ನು ಪಡೆಯಬೇಕಂತೆ.

ಇಂತಹ ನೈಜ ಪಾರದರ್ಶಕ ಗುಣವಿರುವಂತಹ ವ್ಯಕ್ತಿಯೇ ರಂಜಿತ್ ಕಕ್ಕಿಂಜೆ.ಅದರಲ್ಲಿಯೂ ತಾನು ನಿಂತ ನೆಲೆಯಾದ ತುಳುನಾಡಿನ ಪ್ರತಿಭೆಗಳು ಎತ್ತರೆತ್ತರ ಬೆಳೆಯಬೇಕು ದೇಶದೆಲ್ಲೆಡೆ ಪಸರಿಸಬೇಕೆಂಬುದೇ ಇವರ ಮುಖ್ಯ ಉದ್ದೇಶವಾಗಿದೆ.ಈ ಅಸಮಾನ್ಯ ವ್ಯಕ್ತಿಯ ಬಗ್ಗೆ ತಿಳಿಯೋಣ.

ಬರಹ-ತೃಪ್ತಿ.ಜಿ.ಕುಂಪಲ.

ರಂಜಿತ್ ಕಕ್ಕಿಂಜೆ ಇವರು ವಸಂತ್ ಪೂಜಾರಿ ಹಾಗೂ ಉಷಾ ದಂಪತಿಯವರ ಸುಪುತ್ರ.ಇವರು ಗುರುದೇವ ಪದವಿಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ ಎಸ್.ಡಿ.ಎಂ.ಐಟಿಸಿ ವೇಣೂರಿನಲ್ಲಿ‌ ಐಟಿಐ ಮುಗಿಸಿ,ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಪ್ರಸ್ತುತ ಸೌದಿ ಅರೇಬಿಯಾದ ಅಬ್ಹಾ ಏರ್ಪೋರ್ಟಿನಲ್ಲಿ ಗ್ರೌಂಡ್ ಸಪೋರ್ಟ್ ಸರ್ವಿಸಸ್ ಮೈಂಟೇನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಕಲಾಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಲಾವಿದನಾಗಿ,ಭಜಕನಾಗಿ,ನಾಯಕನಾಗಿ ಮುಂದುವರಿಯುತ್ತಿರುವ ಇವರು ಯುವ ಸಾಹಿತಿಯೂ ಹೌದು.ಒಬ್ಬ ಕಲಾವಿದನ ಸಾಧನೆಯನ್ನು ಎಳೆ ಎಳೆಯಾಗಿ ತನ್ನ ಬರವಣಿಗಯಲ್ಲಿ ಅಲಂಕರಿಸಿ ಸಾಧಕನ ಸಾಧನೆಗೆ ತನ್ನ ಲೇಖನಿಯ ಮುಖಾಂತರ ಜೀವ ತುಂಬುವ ಕಲಾ ಪೋಷಕರು ಇವರು.

ಭಜನೆಯೆಂದರೆ ಇವರಿಗೆ ಅಪಾರ ಪ್ರೀತಿ.ಬಾಲ್ಯದಲ್ಲೇ ಭಜನೆ ಮಾಡುತ್ತಾ ಬೆಳೆದವರು ಇವರು.ತನ್ನ ಊರಿನವರಾದ ಕಮಲಾಕ್ಷ ಪೂಜಾರಿಯವರ ಪ್ರೋತ್ಸಾಹದಿಂದ “ಶ್ರೀ ಶಬರಿ ಭಜನಾ ಮಂಡಳಿ” ಯನ್ನು ತೋಟತ್ತಾಡಿಯಲ್ಲಿ ಕಟ್ಟಿದರು.ನಂತರ ವೃತ್ತಿಯನ್ನು ಹರಸಿ ಬೆಂಗಳೂರಿಗೆ ನಡೆದವರು ತನ್ನ ಕಲೆಯಲ್ಲಿನ ಉತ್ಸಾಹವನ್ನು ಬಿಡದೆ ಬೆಂಗಳೂರಿನಲ್ಲಿಯೂ “ಮಕರ ಶ್ರೀ ಭಜನಾ ಮಂಡಳಿ” ಯನ್ನು ಹೊಸಳ್ಳಿಯ ಬಾಲಗಂಗಾಧೇಶ್ವರ ದೇವಸ್ಥಾನದಲ್ಲಿ ರಚಿಸಿದರು.ಹೀಗೇ ಕಲಾ ಆಸಕ್ತಿಯಿಂದ ಕಲಾಮಾತೆಯ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಧು ಬಂಗೇರ ಕಲ್ಲಡ್ಕ ಹಾಗೂ ಕಿಶನ್ ಪೂಜಾರಿ ಯವರೊಂದಿಗೆ ಕೂಡಿ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ(ರಿ) ಬೆಂಗಳೂರು ಘಟಕವನ್ನು ಸ್ಥಾಪಿಸಲು ಶ್ರಮಿಸಿದರು.ಈ ಸಂಸ್ಥೆಯ ಮೊದಲ ವರ್ಷಾವಧಿಯಲ್ಲಿ ಸಾಂಸ್ಕೃತಿಕ ನಿರ್ದೇಶಕರಾಗಿ ಕಲಾ ಸೇವೆಯನ್ನು ಸಲ್ಲಿಸಿದರು.

ರಂಗದಲ್ಲಿ ಸಾಹಿತಿಯಾಗಿ ಬರವಣಿಗೆಯ ಮಾಲಾರ್ಪಣೆಯನ್ನು ಗೈಯುತ್ತಾ ಇವರು ಶಬರಿ ಭಜನಾ ತಂಡದ ಯುವಕರಿಗೆ ಅಭಿನಯವನ್ನು ಕಲಿಸಿ ಕಿರಣ್ ಕಕ್ಕಿಂಜೆಯವರ ಸಹಕಾರದಿಂದ “ಬುದ್ಧಿ ಬನ್ನಗ” ಎಂಬ ತುಳು ನಾಟಕದ ಸಾಹಿತ್ಯವನ್ನು ಸ್ವತಃ ತಾನೇ ಬರೆದು ನಿರ್ದೇಶಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು.ತದನಂತರ “ಗೌಜಿ ಗಮ್ಮತ್ತ್”, ” ಎನ್ನ ತಂಗಡಿ”, “ಮಲ್ಲಸ್ತಿಕೆದ ಮರ್ಮಾಲ್”,” ಒಂಜೆಕ್ ಒಂಜರೆ ಮಲ್ಪೊರ್ಚಿ” ಮೊದಲಾದ ನಾಟಕಗಳಿಗೆ ಸಾಹಿತ್ಯ ಬರೆದು ನಿರ್ದೇಶಿಸಿ ನಟಿಸಿರುವ ಹೆಗ್ಗಳಿಕೆ ಇವರದ್ದು.ಇವರು “ಗೋಲ್ಮಾಲ್” ಎಂಬ ತುಳು ಚಲನಚಿತ್ರದಲ್ಲಿಯೂ ನಟಿಸಿರುವರು. ತನ್ನ ವೃತ್ತಿಜೀವನದಲ್ಲೂ ತುಳುನಾಡಿನ ಯುವ ಪ್ರತಿಭೆಗಳಿಗೆ ನಿರಂತರ ನಿಸ್ವಾರ್ಥ ಸೇವೆಯಲ್ಲಿ ಇವರು “ಕಲಾವಿದೆರೆ ಕಡಲ್” ಎಂಬ ವಾಟ್ಸ್ ಆ್ಯಪ್ ಗ್ರೂಪ್ ನಿರ್ಮಿಸಿ ತುಳುನಾಡ ಪ್ರತಿಭೆಗಳಿಗೆ ತನ್ನ ಬರವಣಿಗೆಯ ಮೂಲಕ ಪ್ರೋತ್ಸಾಹವನ್ನು ನೀಡುತ್ತಾ,ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರ ನಿಸ್ವಾರ್ಥ ಕಲಾ ಸೇವೆಗೊಂದು ಗುರುತು ಎಂಬಂತೆ ಪ್ರಶಸ್ತಿ,ಪುರಸ್ಕಾರಗಳು ಇವರಿಗೆ ದೊರಕದೆ ಉಳಿದಿಲ್ಲ.ಯುವವಾಹಿನಿ(ರಿ).ಬೆಂಗಳೂರು ಘಟಕದ ವತಿಯಿಂದ ಸನ್ಮಾನ,ಮಡಿಲು ಸಂಸ್ಥೆಯಿಂದ “ಮಡಿಲು” ಪುರಸ್ಕಾರ,”ತೆಲಿಕೆದ ತೆನಾಲಿ” ಕಾರ್ಲ ತಂಡದಿಂದ “ಕಲಾವಿದರ ಕಣ್ಮಣಿ” ಎಂಬ ಬಿರುದು ನೀಡಿ ಗೌರವಿಸಲಾಗಿದೆ.ನಿಜವಾಗಿಯೂ ಇವರು ಕಲಾವಿದರ ಕಣ್ಮಣಿಯೆ ಹೌದು.ತೆರೆಮರೆಯಲ್ಲಿ ಅಡಗಿರುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ರಂಜುರವರಂತಹ ಕಲಾ ಪೋಷಕ ಹುಟ್ಟಲೇಬೇಕು.ಕಲಾವಿದನು ಅರಳಲು ಪ್ರಶಂಸೆಗಿಂತ ಇತರರ ಪ್ರೋತ್ಸಾಹದಲ್ಲಿ ಖುಷಿಪಟ್ಟು ತ‌ನಗೆ ತಾನು ಪ್ರಶಂಸೆಯನ್ನು ಪಡೆವ ನಿಸ್ವಾರ್ಥ ಕಲಾಸೇವಕನ ಅಡಿಯಲ್ಲಿ ಮತ್ತಷ್ಟು ಪ್ರತಿಭೆಗಳು ಚಿಗುರಲಿ.ನಾಟಕ ಪ್ರೇಮಿಗಳ ಮನರಂಜಿಸಲು “ರಂಜು” ರವರಿಗೆ ಕಲಾಮಾತೆಯ ಆಶೀರ್ವಾದ ಸದಾ ಇರಲಿ. ದೇವರು ಒಳಿತನ್ನು ಕರುಣಿಸಲಿ.


Share:

More Posts

Category

Send Us A Message

Related Posts

ಶ್ರೀ ಸತೀಶ್ ಕುಮಾರ್ ಬಜಾಲ್ ರಿಗೆ “ ಬಿಲ್ಲವ ಸಂಜೀವಿನಿ “ ಬಿರುದು ಗೌರವ ಪ್ರಧಾನ – ಬಿಲ್ಲವ ಸಂಘ ಪುಣೆ


Share       ವರ್ಲ್ಡ್ ಬಿಲ್ಲವಾಸ್ ಪ್ರೀಮಿಯರ್ ಲೀಗ್ 2025 ನ ಅದ್ಭುತ ಕಾರ್ಯಕ್ರಮದಲ್ಲಿ ಸೌಧಿ ಬಿಲ್ಲವಾಸ್ ದಮ್ಮಾಮ್ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ರಿಗೆ ಬಿಲ್ಲವ ಸಂಘ ಪುಣೆ ಯು ಅತಿಥಿ


Read More »

ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ


Share       ಮಂಗಳೂರು: ಸಾಧಕರ ಜೊತೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೇಮಕದ ಬಗ್ಗೆ ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಯುಗಾದಿ ಮಹೋತ್ಸವ, ವಿಷು


Read More »

ಪೊಲೀಸ್ ಸಬ್ ಇನ್ಸಸ್ಪೆಕ್ಟರ್ ಪ್ರದೀಪ್ ಪೂಜಾರಿಯವರಿಗೆ ಮುಖ್ಯಮಂತ್ರಿ ಚಿನ್ನದ ಪದಕ


Share       ಕೆಯ್ಯೂರು: ಕೆಯ್ಯೂರು ಗ್ರಾಮದ ಪಿ.ಎಸ್.ಐ ಪ್ರದೀಪ್ ಪೂಜಾರಿ 2023ನೇ ವರ್ಷದ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಮೂರನೇ ಬೆಟಾಲಿಯನ್ ಫೆರೆಡ್ ಗ್ರೌಂಡ್ ಕೆಎಸ್ಆರ್ಪಿ  ಕೊರಮಂಗಲ ಬೆಂಗಳೂರಿನಲ್ಲಿ ಎ.2ರಂದು ಪ್ರಶಸ್ತಿ ಪ್ರಧಾನ ನಡೆಯಲಿದೆ ಪ್ರದೀಪ್ ಪೂಜಾರಿ


Read More »

ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ರಾಜೇಂದ್ರ ಚಿಲಿಂಬಿ ಆಯ್ಕೆ


Share       ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿರುವ  ಸೇವೆಯನ್ನು ಪರಿಗಣಿಸಿ ಈ ಆಯ್ಕೆ ನಡೆದಿರುತ್ತದೆ. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ  ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಧ್ಯಮ ವಕ್ತಾರ, ಮಂಗಳೂರು ಚಿಲಿಂಬಿ ಸ್ವಾಮಿ


Read More »

ಜವಾಹರ್ ಬಾಲ್ ಮಂಚ್ ಇದರ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಸಂಯೋಜಕರಾಗಿ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಆಯ್ಕೆ


Share       ಬಂಟ್ವಾಳ : ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಇದರ ಸಂಸ್ಥಾಪಕರು, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ,


Read More »

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »