TOP STORIES:

FOLLOW US

ರೂಬಿಕ್ಸ್ ಕ್ಯೂಬ್ ಮಾಯಾಗಾರ – ಮಹೇಶ್ ಮಲ್ಪೆ


ರೂಬಿಕ್ಸ್ ಕ್ಯೂಬ್ ಮಾಯಾಗಾರಮಹೇಶ್ ಮಲ್ಪೆ

ತನ್ನೊಳಗೆ ಹುದುಗಿರುವ ಕಲೆಯನ್ನು ಗುರುತಿಸಿ, ದೊರೆತ ಅವಕಾಶಗಳನ್ನು, ವೇದಿಕೆಗಳನ್ನು ಉಪಯೋಗಿಸಿಕೊಂಡು ಸಾಧನೆಯಹಾದಿಯಲಿ ಮಿಂಚುತ್ತಿರುವ ಬಹುಮುಖ ಪ್ರತಿಭೆಯ ಯುವ ಕಲಾವಿದ ಮಹೇಶ್ ಮಲ್ಪೆ.

    ಉಡುಪಿ ಜಿಲ್ಲೆಯ ಮಲ್ಪೆಯವರಾದ ಇವರು ಶೇಖರ್ ಪೂಜಾರಿ ಹಾಗು ಶ್ರೀಮತಿ ಮೀನಾಕ್ಷಿ ದಂಪತಿಗಳ ಮಗ. ಪ್ರಸ್ತುತಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಡಿಪಾರ್ಟ್ಮೆಂಟ್ನಲ್ಲಿ ಮಾರ್ಕೆಟಿಂಗ್ಹಾಗು ಫೀಲ್ಡ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಆದಿ ಉಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆಯಲ್ಲಿ ಪಡೆದರು. ಶ್ಯಾಮಿಲಿ ಕಾಲೇಜಿನಲ್ಲಿ ಪದವಿ ಪೂರ್ವಶಿಕ್ಷಣ ಹಾಗು ಉಪೇಂದ್ರ ಪೈ ಮೆಮೊರಿಯಲ್  ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು.

ನಟನೆಯಲ್ಲಿ ಅಪಾರ ಆಸಕ್ತಿಯುಳ್ಳ ಇವರು ರಂಗಭೂಮಿ (ರಿ.) ಉಡುಪಿ ಕಿರ್ದಾರ್ ಥಿಯೆಟರ್ ಗ್ರೂಪ್, ವಿ ಆರ್ ಫ್ರೆಂಡ್ಸ್ ಸಾಸ್ತಾನತಂಡದ ಅನೇಕ ನಾಟಕಗಳಲ್ಲಿ ಭಾಗವಹಿಸಿದ್ದಾರೆ. ನಾಟಕ ನಿರ್ದೇಶಕರು ಆಗಿದ್ದು ನಾಟಕ ತರಬೇತಿಯನ್ನು ನೀಡುತ್ತಿದ್ದಾರೆ. ರಾಜ್ಯಹಾಗು ರಾಷ್ಟ್ರ ಮಟ್ಟದ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದಾರೆ. ಕವನ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ ಬಹುಮಾನ ಪಡೆದಿದ್ದಾರೆ.

ಎಲ್ಲದಕ್ಕೂ ಒಂದು ಆರಂಭ ಇದ್ದೇ ಇರುತ್ತದೆ ಎಂಬಂತೆ ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು  ಪೆನ್, ಪೆನ್ಸಿಲ್ಬಳಕೆಯಿಲ್ಲದೆ ಉಪ್ಪು ಮತ್ತು ಬಣ್ಣಗಳನ್ನು ಬಳಸಿ ಮಾಡಿದ ಭಾರತ ನಕ್ಷೆಗೆ ದೊರೆತ ಪ್ರೋತ್ಸಾಹ ಮುಂದೆ ಇವರು ಇನ್ನಿತರ ಬೇರೆ ಬೇರೆವಸ್ತುಗಳನ್ನು ಉಪಯೋಗಿಸಿಕೊಂಡು ಚಿತ್ರ ನಿರ್ಮಾಣ ಮಾಡುವ  ಯೋಜನೆಗೆ ದಾರಿಯಾಯಿತು ಎನ್ನುತ್ತಾರೆ. ಪದವಿ ಪೂರ್ವಶಿಕ್ಷಣದ ಅವಧಿಯಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸಲು ಮೊದಲು ಪ್ರಯತ್ನಿಸಲು ಆರಂಭಿಸಿದ್ದು ಈಗ ಕೇವಲ 35 ರಿಂದ 45 ಸೆಕೆಂಡ್ಗಳಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸುತ್ತಾರೆ. ಫೋಟೋ ಶಾಪ್ ಕೆಲಸ ಮಾಡುತ್ತಿರುವಾಗ ಫೋಟೋದಲ್ಲಿರುವ ಸಣ್ಣ ಸಣ್ಣ ಫಿಕ್ಸೆಲ್ಗಳನ್ನು ಗಮನಿಸಿದ ಇವರು ಫಿಕ್ಸೆಲ್  ಆರ್ಟ್ ನಲ್ಲಿ ವಿಶೇಷ ಆಸಕ್ತಿ ಬೆಳೆಸಿದರು. ಈಗ ಫಿಕ್ಸೆಲ್ ಕಾರ್ನರ್ ಸಂಸ್ಥೆಯರೂವಾರಿಯಾಗಿದ್ದಾರೆ. ತನ್ನ ಕಲ್ಪನೆಯೊಳಗಿನ ಚಿತ್ರಗಳಿಗೆ ರೂಬಿಕ್ಸ್ , ಪುಸ್ತಕ, ಗ್ರಾಫ್ ಶೀಟ್ ಹೀಗೆ ಇನ್ನಿತರ ವಸ್ತುಗಳನ್ನು ಬಳಸಿಚಿತ್ರಿಸಿ ಅದಕ್ಕೆ ಕಲಾತ್ಮಕವಾಗಿ ಜೀವ ನೀಡುವ ವಿಶೇಷ ಕಲೆ ಇವರದ್ದಾಗಿದೆ. ಕೋಟಿ ಚೆನ್ನಯ ಹಾಗು ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಪ್ರತಿರೂಪವನ್ನು  1,500 ರೂಬಿಕ್ಸ್ ಕ್ಯೂಬ್ ನಿಂದ ರಚಿಸಿ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ. ನೆಸ್ಟ್ಲೆ ಕಂಪೆನಿಆಯೋಜಿಸಿದ್ದ ರಾಷ್ಟ್ರಮಟ್ಟದ 2020 ಮಂಚ್ ಸ್ಟಾರ್ ಪ್ರತಿಭಾ ಪ್ರದರ್ಶನದಲ್ಲಿ 1,300 ರೂಬಿಕ್ಸ್ ಕ್ಯೂಬ್ ನಲ್ಲಿ ಕಲಾಕೃತಿಯೊಂದನ್ನುರಚಿಸಿದರು. ವಿಶಿಷ್ಟ ಸಾಧನೆಗೆ ಪ್ರಥಮ ಬಹುಮಾನದೊಂದಿಗೆ 5ಲಕ್ಷ ಬಹುಮಾನವನ್ನು ಗೆದ್ದಿರುವ ಹೆಗ್ಗಳಿಕೆ ಇವರದ್ದಾಗಿದೆ. ಮಾರ್ಚ್ 2021ರಂದು ನಡೆದ ರೆಡ್ ಎಫ್ ಎಮ್ ಹಾಗು ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ನಡೆಸಿದ ಟ್ಯಾಲೆಂಟ್ ಅನ್ ಲಾಕ್ಡ್ಆನ್ಲೈನ್ ಸ್ಪರ್ಧೆಯಲ್ಲಿ ಭಾರತದಾದ್ಯಂತ 56,000 ಸ್ಪರ್ಧಿಗಳು ಭಾಗವಹಿಸಿದ್ದು ಇದರಲ್ಲಿ ಮಹೇಶ್ 1,300 ಕ್ಕೂ ಹೆಚ್ಚು ರೂಬಿಕ್ಸ್ಕ್ಯೂಬ್ ನಲ್ಲಿ ಇರ್ಫಾನ್ ಖಾನ್ ರವರ ಭಾವಚಿತ್ರ ರಚಿಸಿ ಪ್ರಥಮ ಬಹುಮಾನವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ತನ್ನ ವಿಶೇಷ ಪ್ರತಿಭೆಯನ್ನು ಕೇವಲ ತನಗೆ ಮಾತ್ರ ಸೀಮಿತಗೊಳಿಸದೆ ಅನೇಕ ಸಂಸ್ಥೆಗಳಲ್ಲಿ, ಶಾಲೆಗಳಲ್ಲಿ ರೂಬಿಕ್ಸ್ ಕ್ಯೂಬ್ತರಬೇತಿಯನ್ನು, ಕಾರ್ಯಗಾರವನ್ನು ಮಾಡುತ್ತಿದ್ದಾರೆ. ಇಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸುವ ಜೊತೆಗೆ ಜೀವನ ಪಾಠವನ್ನುಹೇಳುವುದು ಇವರ ವಿಶೇಷತೆಯಾಗಿದೆ.

ನಟನೆ, ಫೋಟೋಗ್ರಫಿ, ಹಾಡುಗಾರಿಕೆ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದು, ತಮ್ಮ ರೂಬಿಕ್ಸ್ ಕ್ಯೂಬ್ ಮತ್ತು ಮೊಸೈಕ್ ಆರ್ಟ್ಎರಡು ಕಲೆಯನ್ನು ಸೇರಿಸಿ ಗಿನ್ನಿಸ್ ರೆಕಾರ್ಡ್ ಮಾಡುವ ಕನಸನ್ನು ಹೊಂದಿದ್ದಾರೆ. ಸತತ ಪರಿಶ್ರಮ, ಪ್ರಯತ್ನದೊಂದಿಗಿನ ಇವರ ಉತ್ಸಾಹಿ ಹೆಜ್ಜೆಗಳು ಯಶಸ್ಸನ್ನು ಪಡೆಯಲಿ.

✍️ನಳಿನಿ ಎಸ್ ಸುವರ್ಣ

ಆಳ್ವಾಸ್ ಕಾಲೇಜು ಮೂಡುಬಿದಿರೆ.


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »