TOP STORIES:

FOLLOW US

ರೂಬಿಕ್ಸ್ ಕ್ಯೂಬ್ ಮಾಯಾಗಾರ – ಮಹೇಶ್ ಮಲ್ಪೆ


ರೂಬಿಕ್ಸ್ ಕ್ಯೂಬ್ ಮಾಯಾಗಾರಮಹೇಶ್ ಮಲ್ಪೆ

ತನ್ನೊಳಗೆ ಹುದುಗಿರುವ ಕಲೆಯನ್ನು ಗುರುತಿಸಿ, ದೊರೆತ ಅವಕಾಶಗಳನ್ನು, ವೇದಿಕೆಗಳನ್ನು ಉಪಯೋಗಿಸಿಕೊಂಡು ಸಾಧನೆಯಹಾದಿಯಲಿ ಮಿಂಚುತ್ತಿರುವ ಬಹುಮುಖ ಪ್ರತಿಭೆಯ ಯುವ ಕಲಾವಿದ ಮಹೇಶ್ ಮಲ್ಪೆ.

    ಉಡುಪಿ ಜಿಲ್ಲೆಯ ಮಲ್ಪೆಯವರಾದ ಇವರು ಶೇಖರ್ ಪೂಜಾರಿ ಹಾಗು ಶ್ರೀಮತಿ ಮೀನಾಕ್ಷಿ ದಂಪತಿಗಳ ಮಗ. ಪ್ರಸ್ತುತಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಡಿಪಾರ್ಟ್ಮೆಂಟ್ನಲ್ಲಿ ಮಾರ್ಕೆಟಿಂಗ್ಹಾಗು ಫೀಲ್ಡ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಆದಿ ಉಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆಯಲ್ಲಿ ಪಡೆದರು. ಶ್ಯಾಮಿಲಿ ಕಾಲೇಜಿನಲ್ಲಿ ಪದವಿ ಪೂರ್ವಶಿಕ್ಷಣ ಹಾಗು ಉಪೇಂದ್ರ ಪೈ ಮೆಮೊರಿಯಲ್  ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು.

ನಟನೆಯಲ್ಲಿ ಅಪಾರ ಆಸಕ್ತಿಯುಳ್ಳ ಇವರು ರಂಗಭೂಮಿ (ರಿ.) ಉಡುಪಿ ಕಿರ್ದಾರ್ ಥಿಯೆಟರ್ ಗ್ರೂಪ್, ವಿ ಆರ್ ಫ್ರೆಂಡ್ಸ್ ಸಾಸ್ತಾನತಂಡದ ಅನೇಕ ನಾಟಕಗಳಲ್ಲಿ ಭಾಗವಹಿಸಿದ್ದಾರೆ. ನಾಟಕ ನಿರ್ದೇಶಕರು ಆಗಿದ್ದು ನಾಟಕ ತರಬೇತಿಯನ್ನು ನೀಡುತ್ತಿದ್ದಾರೆ. ರಾಜ್ಯಹಾಗು ರಾಷ್ಟ್ರ ಮಟ್ಟದ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದಾರೆ. ಕವನ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ ಬಹುಮಾನ ಪಡೆದಿದ್ದಾರೆ.

ಎಲ್ಲದಕ್ಕೂ ಒಂದು ಆರಂಭ ಇದ್ದೇ ಇರುತ್ತದೆ ಎಂಬಂತೆ ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು  ಪೆನ್, ಪೆನ್ಸಿಲ್ಬಳಕೆಯಿಲ್ಲದೆ ಉಪ್ಪು ಮತ್ತು ಬಣ್ಣಗಳನ್ನು ಬಳಸಿ ಮಾಡಿದ ಭಾರತ ನಕ್ಷೆಗೆ ದೊರೆತ ಪ್ರೋತ್ಸಾಹ ಮುಂದೆ ಇವರು ಇನ್ನಿತರ ಬೇರೆ ಬೇರೆವಸ್ತುಗಳನ್ನು ಉಪಯೋಗಿಸಿಕೊಂಡು ಚಿತ್ರ ನಿರ್ಮಾಣ ಮಾಡುವ  ಯೋಜನೆಗೆ ದಾರಿಯಾಯಿತು ಎನ್ನುತ್ತಾರೆ. ಪದವಿ ಪೂರ್ವಶಿಕ್ಷಣದ ಅವಧಿಯಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸಲು ಮೊದಲು ಪ್ರಯತ್ನಿಸಲು ಆರಂಭಿಸಿದ್ದು ಈಗ ಕೇವಲ 35 ರಿಂದ 45 ಸೆಕೆಂಡ್ಗಳಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸುತ್ತಾರೆ. ಫೋಟೋ ಶಾಪ್ ಕೆಲಸ ಮಾಡುತ್ತಿರುವಾಗ ಫೋಟೋದಲ್ಲಿರುವ ಸಣ್ಣ ಸಣ್ಣ ಫಿಕ್ಸೆಲ್ಗಳನ್ನು ಗಮನಿಸಿದ ಇವರು ಫಿಕ್ಸೆಲ್  ಆರ್ಟ್ ನಲ್ಲಿ ವಿಶೇಷ ಆಸಕ್ತಿ ಬೆಳೆಸಿದರು. ಈಗ ಫಿಕ್ಸೆಲ್ ಕಾರ್ನರ್ ಸಂಸ್ಥೆಯರೂವಾರಿಯಾಗಿದ್ದಾರೆ. ತನ್ನ ಕಲ್ಪನೆಯೊಳಗಿನ ಚಿತ್ರಗಳಿಗೆ ರೂಬಿಕ್ಸ್ , ಪುಸ್ತಕ, ಗ್ರಾಫ್ ಶೀಟ್ ಹೀಗೆ ಇನ್ನಿತರ ವಸ್ತುಗಳನ್ನು ಬಳಸಿಚಿತ್ರಿಸಿ ಅದಕ್ಕೆ ಕಲಾತ್ಮಕವಾಗಿ ಜೀವ ನೀಡುವ ವಿಶೇಷ ಕಲೆ ಇವರದ್ದಾಗಿದೆ. ಕೋಟಿ ಚೆನ್ನಯ ಹಾಗು ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಪ್ರತಿರೂಪವನ್ನು  1,500 ರೂಬಿಕ್ಸ್ ಕ್ಯೂಬ್ ನಿಂದ ರಚಿಸಿ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ. ನೆಸ್ಟ್ಲೆ ಕಂಪೆನಿಆಯೋಜಿಸಿದ್ದ ರಾಷ್ಟ್ರಮಟ್ಟದ 2020 ಮಂಚ್ ಸ್ಟಾರ್ ಪ್ರತಿಭಾ ಪ್ರದರ್ಶನದಲ್ಲಿ 1,300 ರೂಬಿಕ್ಸ್ ಕ್ಯೂಬ್ ನಲ್ಲಿ ಕಲಾಕೃತಿಯೊಂದನ್ನುರಚಿಸಿದರು. ವಿಶಿಷ್ಟ ಸಾಧನೆಗೆ ಪ್ರಥಮ ಬಹುಮಾನದೊಂದಿಗೆ 5ಲಕ್ಷ ಬಹುಮಾನವನ್ನು ಗೆದ್ದಿರುವ ಹೆಗ್ಗಳಿಕೆ ಇವರದ್ದಾಗಿದೆ. ಮಾರ್ಚ್ 2021ರಂದು ನಡೆದ ರೆಡ್ ಎಫ್ ಎಮ್ ಹಾಗು ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ನಡೆಸಿದ ಟ್ಯಾಲೆಂಟ್ ಅನ್ ಲಾಕ್ಡ್ಆನ್ಲೈನ್ ಸ್ಪರ್ಧೆಯಲ್ಲಿ ಭಾರತದಾದ್ಯಂತ 56,000 ಸ್ಪರ್ಧಿಗಳು ಭಾಗವಹಿಸಿದ್ದು ಇದರಲ್ಲಿ ಮಹೇಶ್ 1,300 ಕ್ಕೂ ಹೆಚ್ಚು ರೂಬಿಕ್ಸ್ಕ್ಯೂಬ್ ನಲ್ಲಿ ಇರ್ಫಾನ್ ಖಾನ್ ರವರ ಭಾವಚಿತ್ರ ರಚಿಸಿ ಪ್ರಥಮ ಬಹುಮಾನವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ತನ್ನ ವಿಶೇಷ ಪ್ರತಿಭೆಯನ್ನು ಕೇವಲ ತನಗೆ ಮಾತ್ರ ಸೀಮಿತಗೊಳಿಸದೆ ಅನೇಕ ಸಂಸ್ಥೆಗಳಲ್ಲಿ, ಶಾಲೆಗಳಲ್ಲಿ ರೂಬಿಕ್ಸ್ ಕ್ಯೂಬ್ತರಬೇತಿಯನ್ನು, ಕಾರ್ಯಗಾರವನ್ನು ಮಾಡುತ್ತಿದ್ದಾರೆ. ಇಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸುವ ಜೊತೆಗೆ ಜೀವನ ಪಾಠವನ್ನುಹೇಳುವುದು ಇವರ ವಿಶೇಷತೆಯಾಗಿದೆ.

ನಟನೆ, ಫೋಟೋಗ್ರಫಿ, ಹಾಡುಗಾರಿಕೆ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದು, ತಮ್ಮ ರೂಬಿಕ್ಸ್ ಕ್ಯೂಬ್ ಮತ್ತು ಮೊಸೈಕ್ ಆರ್ಟ್ಎರಡು ಕಲೆಯನ್ನು ಸೇರಿಸಿ ಗಿನ್ನಿಸ್ ರೆಕಾರ್ಡ್ ಮಾಡುವ ಕನಸನ್ನು ಹೊಂದಿದ್ದಾರೆ. ಸತತ ಪರಿಶ್ರಮ, ಪ್ರಯತ್ನದೊಂದಿಗಿನ ಇವರ ಉತ್ಸಾಹಿ ಹೆಜ್ಜೆಗಳು ಯಶಸ್ಸನ್ನು ಪಡೆಯಲಿ.

✍️ನಳಿನಿ ಎಸ್ ಸುವರ್ಣ

ಆಳ್ವಾಸ್ ಕಾಲೇಜು ಮೂಡುಬಿದಿರೆ.


Share:

More Posts

Category

Send Us A Message

Related Posts

ಶ್ರೀ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಕೂಟದ ವತಿಯಿಂದ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ಶ್ರೀ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಕೂಟದ ವತಿಯಿಂದ 14-02-2025 ರಂದು ಅಧ್ಯಕ್ಷರಾದ ಹರೀಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಹರೈನ್ ನಲ್ಲಿ ಬಿಡುಗಡೆ


Read More »

ಸರ್ಕಾರಿ ಆಸ್ಪತ್ರೆಗಳಲ್ಲಿದೆ ಗುಣಮಟ್ಟದ ಚಿಕಿತ್ಸೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಶ್ಲಾಘನೆ


Share       ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲೂ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವುದಕ್ಕೆ ವೆನ್ಲಾಕ್ ಆಸ್ಪತ್ರೆ ಉತ್ತಮ ನಿದರ್ಶನ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ತಾತ್ಸಾರ ಬೇಡ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.


Read More »

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »